Friday, April 18, 2025

ವಿಪತ್ತು, ಸಂಘರ್ಷಗಳ ಬೆದರಿಕೆಯಲ್ಲಿ ಪರಂಪರೆ

 ವಿಪತ್ತು, ಸಂಘರ್ಷಗಳ ಬೆದರಿಕೆಯಲ್ಲಿ ಪರಂಪರೆ

ಏಪ್ರಿಲ್‌ ೧೮ ವಿಶ್ವ ಪರಂಪರೆ ದಿನ: ಇದು ಸುವರ್ಣ ನೋಟ

ಪ್ರಿಲ್‌ ೧೮ರ ಈ ದಿನವನ್ನು ʼವಿಶ್ವ ಪರಂಪರೆಯ ದಿನʼವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಇದನ್ನು ಅಂತಾರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ದಿನ ಎಂದೂ ಕರೆಯಲಾಗುತ್ತದೆ. ʼವಿಪತ್ತು ಮತ್ತು ಸಂಘರ್ಷಗಳ ಬೆದರಿಕೆಯಲ್ಲಿ ಪರಂಪರೆʼ ಎಂಬುದು ಈ ವರ್ಷದ ವಿಶ್ವ ಪರಂಪರೆ ದಿನದ ʼಥೀಮ್‌ʼ ಅಥವಾ ʼಕೇಂದ್ರ ವಿಷಯʼವಾಗಿದೆ.

ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯನ್ನು ಗೌರವಿಸಲು ಮತ್ತು ರಕ್ಷಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

ವ್ಯಕ್ತಿಗಳು ಮತ್ತು ಸ್ಥಳೀಯ ಸಮುದಾಯಗಳು ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪಾಲಿಸುವಂತೆ ಮತ್ತು ರಕ್ಷಿಸುವಂತೆ ಪ್ರೋತ್ಸಾಹ ನೀಡುವುದು ಈ ವಿಶ್ವಪರಂಪರೆ ದಿನ ಆಚರಣೆಯ ಪ್ರಮುಖ ಗುರಿ. ಸ್ಮಾರಕಗಳ ಸಂರಕ್ಷಣೆಯ ಜೊತೆಗೆ, ಸಾಂಸ್ಕೃತಿಕ ಸ್ವತ್ತುಗಳ ವೈವಿಧ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲೂ ಈ ದಿನಾಚರಣೆ ಯತ್ನಿಸುತ್ತದೆ.


ಅಂತಾರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ಮಂಡಳಿಯು (ICOMOS) 1983ರಿಂದ  ಏಪ್ರಿಲ್‌ ೧೮ರ ಈ ದಿನವನ್ನು ಆಚರಿಸಲು ಒಂದು ಕೇಂದ್ರ ವಿಷಯವನ್ನು ನಿರ್ಧರಿಸುತ್ತದೆ. 2025 ರ ವಿಶ್ವ ಪರಂಪರೆಯ ದಿನದ ವಿಷಯವು "ವಿಪತ್ತುಗಳು ಮತ್ತು ಸಂಘರ್ಷಗಳಿಂದ ಬೆದರಿಕೆಯಲ್ಲಿರುವ ಪರಂಪರೆ: ಮಂಡಳಿಯ 60 ವರ್ಷಗಳ ಅನುಭವ, ಕ್ರಮಗಳಿಂದ ಸಿದ್ಧತೆ ಮತ್ತು ಕಲಿಕೆ" ಎಂಬುದಾಗಿದೆ.

"2025ರ ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ದಿನಾಚರಣೆಯು ವಿಪತ್ತುಗಳು ಮತ್ತು ಸಂಘರ್ಷಗಳ ಬೆದರಿಕೆಯ ಅಡಿಯಲ್ಲಿ ಪರಂಪರೆಯನ್ನು ರಕ್ಷಿಸುವ ಸಂಬಂಧ 60 ವರ್ಷಗಳ ಕ್ರಮಗಳ ಮೇಲೆ ಹಾಗೂ ಬಿಕ್ಕಟ್ಟಿನ ಸಮಯದಲ್ಲಿ ಪರಂಪರೆಯನ್ನು ರಕ್ಷಿಸಲು ನಾವು ತೆಗೆದುಕೊಳ್ಳಬಹುದಾದ ಮುಂಜಾಗರೂಕತೆ, ಸಿದ್ಧತೆ, ತುರ್ತು ಪ್ರತಿಕ್ರಿಯೆ ಮತ್ತು ಚೇತರಿಕೆಗಾಗಿ ಅದರ ಭವಿಷ್ಯದ ಉದ್ದೇಶಗಳ ಮೇಲೆ ಕೇಂದ್ರೀಕರಿಸುತ್ತದೆ" ಎಂದು ಸಂಸ್ಥೆ ತಿಳಿಸಿದೆ.

ಹಂಪಿಯಲ್ಲಿರುವ ಸ್ಮಾರಕಗಳು

ಕರ್ನಾಟಕದ ಹಂಪಿಯು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಇರುವ ಒಂದು ಭವ್ಯ ಸ್ಥಳ. ಇದು ವಿಜಯನಗರದ ಮಹಾನ್ ಹಿಂದೂ ಸಾಮ್ರಾಜ್ಯದ ಕೊನೆಯ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ಆಡಳಿತ ಕಾಲದಲ್ಲಿ ದ್ರಾವಿಡ ಶೈಲಿಯ ದೇವಾಲಯಗಳು ಮತ್ತು ಅರಮನೆಗಳನ್ನು ನಿರ್ಮಿಸಿದ್ದರು. ಇದು 14 ನೇ ಮತ್ತು 16 ನೇ ಶತಮಾನಗಳ ನಡುವೆ ಪ್ರವಾಸಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ನಗರದ ರಸ್ತೆಗಳಲ್ಲಿ ಮುತ್ತು ರತ್ನಗಳನ್ನು ಮಾರಲಾಗುತ್ತಿತ್ತು ಎಂದು ಈ ಪ್ರವಾಸಿಗರು ಬಣ್ಣಿಸಿದ್ದರು. 1565ರಲ್ಲಿ ದಕ್ಕಣದ ಮುಸ್ಲಿಂ ಪಡೆಗಳು ಈ ನಗರವನ್ನು ವಶಪಡಿಸಿಕೊಂಡವು. ಆ ಬಳಿಕ ಆರು ತಿಂಗಳ ಅವಧಿಯಲ್ಲಿ ಈ ನಗರವನ್ನು ಲೂಟಿ ಮಾಡಿ ಹಾಳು ಗೆಡವಲಾಯಿತು. ಆ ಬಳಿಕ ಇದಕ್ಕೆ ʼಹಾಳು ಹಂಪೆʼ ಎಂಬ ಹೆಸರು ಬಂದು ಬಿಟ್ಟಿತು.

ವಿಜಯನಗರ ಸಾಮ್ರಾಜ್ಯದ  ರಾಜಧಾನಿ ನಗರ 14 ನೇ-16 ನೇ ಶತಮಾನ ಅವಶೇಷಗಳನ್ನು ಒಳಗೊಂಡಿದೆ. ಈ ಆಸ್ತಿಯು 4187,24 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದ್ದು, ಮಧ್ಯ ಕರ್ನಾಟಕದ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿದೆ.

ತುಂಗಭದ್ರಾ ನದಿ, ಕಡಿದಾದ ಬೆಟ್ಟಗಳ ಶ್ರೇಣಿಗಳು ಮತ್ತು ತೆರೆದ ಬಯಲು ಪ್ರದೇಶಗಳ ಮಧ್ಯೆ ಇರುವ ಈ ಹಂಪಿಯು ಇಂದಿಗೂ ಅದ್ಭುತವಾದ ಪರಿಸರವನ್ನು ಹೊಂದಿದೆ. ಭೌತಿಕ ಅವಶೇಷಗಳು, ಕೋಟೆಗಳು, ನದಿ ತೀರದ ವೈಶಿಷ್ಟ್ಯಗಳು, ರಾಜರಿಗೆ ಸಂಬಂಧಿಸಿದ ಹಾಗೂ ಪವಿತ್ರ ದೇವಾಲಯಗಳ ಸಂಕೀರ್ಣಗಳು,  ಈ ದೇವಾಲಯಗಳ ಕಂಬಗಳ ಸಭಾಂಗಣಗಳು, ಮಂಟಪಗಳು, ಸ್ಮಾರಕ ರಚನೆಗಳು, ದ್ವಾರಗಳು, ರಕ್ಷಣಾ ತಾಣಗಳು, ಅಶ್ವಶಾಲೆಗಳು, ಕಲ್ಯಾಣಿಗಳ ರಚನೆಗಳು, ಕಲ್ಲಿನ ರಥ ಇತ್ಯಾದಿಗಳನ್ನು ಒಳಗೊಂಡಂತೆ 1600ಕ್ಕೂ ಹೆಚ್ಚು ಅವಶೇಷಗಳು ಇಲ್ಲಿವೆ.

ಇವುಗಳಲ್ಲಿ, ಕೃಷ್ಣ ದೇವಾಲಯ ಸಮುಚ್ಚಯ, ನರಸಿಂಹ, ಗಣೇಶ, ಹೇಮಕೂಟ ದೇವಾಲಯಗಳ ಗುಂಪು, ಅಚ್ಯುತರಾಯ ದೇವಾಲಯ ಸಂಕೀರ್ಣ, ವಿಠ್ಠಲ ದೇವಾಲಯ ಸಂಕೀರ್ಣ, ಪಟ್ಟಾಭಿರಾಮ ದೇವಾಲಯ ಸಂಕೀರ್ಣ, ಕಮಲ ಮಹಲ್ ಸಂಕೀರ್ಣವನ್ನು ಮುಖ್ಯವೆಂದು ಹೇಳಬಹುದು.

ದೊಡ್ಡ ದ್ರಾವಿಡ ದೇವಾಲಯ ಸಂಕೀರ್ಣಗಳನ್ನು ಸಣ್ಣ ಪರಿವಾರ ದೇವರ ದೇವಾಲಯಗಳು, ಬಜಾರುಗಳು, ವಸತಿ ಪ್ರದೇಶಗಳು ಮತ್ತು ಕಲ್ಯಾಣಿಗಳನ್ನು ಉಪನಗರ ಪಟ್ಟಣಗಳು ​​(ಪುರಗಳು) ಸುತ್ತುವರೆದಿವೆ. ಸುತ್ತಮುತ್ತಲಿನ ಭೂದೃಶ್ಯವು ಪಟ್ಟಣ ಮತ್ತು ರಕ್ಷಣಾ ವಾಸ್ತುಶಿಲ್ಪವನ್ನು ಕೌಶಲ್ಯದಿಂದ ಮತ್ತು ಸಾಮರಸ್ಯದಿಂದ ಸಂಯೋಜಿಸುತ್ತದೆ. ಈ ಸ್ಥಳದಲ್ಲಿ ಪತ್ತೆಯಾಗಿರುವ ಅವಶೇಷಗಳು ಒಂದು ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಆರ್ಥಿಕ ಸಮೃದ್ಧಿ ಮತ್ತು ರಾಜಕೀಯ ಸ್ಥಾನಮಾನದ ವ್ಯಾಪ್ತಿಯನ್ನು ವಿವರಿಸುತ್ತವೆ. ಹೆಚ್ಚು ಅಭಿವೃದ್ಧಿ ಹೊಂದಿದ ಶ್ರೀಮಂತ ಸಮಾಜ ಇದಾಗಿತ್ತು ಎಂಬುದನ್ನು ಇದು ಸೂಚಿಸುತ್ತದೆ.

ʼಮಳೆ ಬಂದ ಹೊತ್ತಿನಲ್ಲಿ ಈ ಹಂಪಿʼ ಹೇಗಿರುತ್ತದೆ ಎಂಬ ಸಜೀವ ದೃಶ್ಯವನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ತಮ್ಮ ಕ್ಯಾಮರಾ ಮೂಲಕ ಇಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಇಂತಹ ಅದ್ಭುತ ಪಾರಂಪರಿಕ ತಾಣಗಳನ್ನು ರಕ್ಷಿಸಿಕೊಳ್ಳಬೇಕಾದ್ದು ನಮ್ಮೆಲ್ಲರ ಕರ್ತವ್ಯವೂ ಹೌದು ಎಂಬುದನ್ನು ಈದಿನ ನಾವು ನೆನಪಿಸಿಕೊಳ್ಳಬೇಕಾಗಿದೆ.





ಚಿತ್ರಗಳ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ. ಯೂ ಟ್ಯೂಬ್‌ ವಿಡಿಯೋ ನೋಡಲು 
ಕೆಳಗಿನ ಚಿತ್ರ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ.



ಕೆಳಗಿನವುಗಳನ್ನೂ ಓದಿರಿ: 

ವಿಧಾನಸೌಧಕ್ಕೆ ವರ್ಣಾಲಂಕಾರ
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ
೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!
ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ
ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!
ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ
ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)
ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ
ಬದುಕಿನ ಹೋರಾಟ….!
ಬದ್ಧ ವೈರಿಗಳ ಅಪರೂಪದ ಮೈತ್ರಿ.!
ಡಾ. ರಾಜಕುಮಾರ್ ಆರೋಗ್ಯ ಸೂತ್ರ…!
ಕಥೆ ಹೇಳುವೆ… ನನ್ನ ಕಥೆ ಹೇಳುವೆ..!
‘ಸ್ನೇಕ್ ಬರ್ಡ್’ ಭೋಜನ ಚಮತ್ಕಾರ..!

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಕೇವಲ ಅರ್ಧ ಬೆಲೆ ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

Wednesday, April 16, 2025

೧೩ನೇ ಸಂಕಷ್ಟಿ ಪೂಜಾ

೧೩ನೇ  ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಏಪ್ರಿಲ್‌ ೧೬ರ ಬುಧವಾರ ವಿಶ್ವಾವಸು ನಾಮ ಸಂವತ್ಸರದ ಮೊದಲ ಹಾಗೂ ದೇವಸ್ಥಾನದ ೧೩ನೇ ಸಂಕಷ್ಟಿ ಪೂಜೆಯು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿತು.

ಈ ಸಂದರ್ಭದ ಕೆಲವು ಚಿತ್ರಗಳು, ವಿಡಿಯೋ ಇಲ್ಲಿವೆ.
ವಿಡಿಯೋ ನೋಡಲು ಯೂಟ್ಯೂಬ್‌ ಲಿಂಕ್‌

ಅಥವಾ
ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.👇👇👇

ಇವುಗಳನ್ನೂ ಓದಿರಿ:

ಹೊಸ ವರ್ಷದ ಮೊದಲ ಸತ್ಯನಾರಾಯಣ ಪೂಜೆ

ಶ್ರೀ ರಾಮ ನವಮಿ ಆಚರಣೆ

ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ

ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?
10ನೇ ಸತ್ಯನಾರಾಯಣ ಪೂಜೆ

ವೈಕುಂಠ ಏಕಾದಶಿ ಮಹೋತ್ಸವ

೨೦೨೫ಕ್ಕೆ ಸ್ವಾಗತವಿಶೇಷ ಪೂಜೆ Welcome to 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

ಮಾಘ ಸತ್ಯನಾರಾಯಣ ಪೂಜೆ

ವರ್ಷದ ಕೊನೆಯ ಸಂಕಷ್ಟಿ ಪೂಜಾ

Monday, April 14, 2025

ಪ್ರಧಾನಿ ಹೀಗೆ ಬೂಟು ಹಿಡಿದು ಗದರಿದ್ದೇಕೆ?

ಪ್ರಧಾನಿ ಹೀಗೆ ಬೂಟು ಹಿಡಿದು ಗದರಿದ್ದೇಕೆ?

ಪ್ರಧಾನಿ ನರೇಂದ್ರ ಮೋದಿ ಅವರು ಈದಿನ (೨೦೨೫ ಏಪ್ರಿಲ್‌ ೧೪) ಯಮುನಾ ನಗರದಲ್ಲಿ ರಾಮ್‌ ಪಾಲ್‌ ಕಶ್ಯಪ್‌ ಎಂಬವರಿಗೆ ತಮ್ಮ ಕೈಯಾರೆ ಬೂಟುಗಳನ್ನು ನೀಡಿ ಅವುಗಳನ್ನು ಧರಿಸುವಂತೆ ವಿನಂತಿಸಿದರು.

ಏಕೆ ಗೊತ್ತೇ?

ಈ ವ್ಯಕ್ತಿ ೧೪ ವರ್ಷಗಳ ಹಿಂದೆ ಪ್ರತಿಜ್ಞೆಯೊಂದನ್ನು ಮಾಡಿ ಪಾದರಕ್ಷೆ ಧರಿಸುವುದನ್ನು ಬಿಟ್ಟು ಬಿಟ್ಟಿದ್ದರು. ಪಾದರಕ್ಷೆ ಧಾರಣೆಯನ್ನು ಬಿಟ್ಟ ಈ ಸಂದರ್ಭದಲ್ಲಿ ಅವರು ಮಾಡಿದ್ದ ಪ್ರತಿಜ್ಞೆ ಏನೆಂದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ತನಗೆ ಅವರ ಭೇಟಿಯ ಅವಕಾಶ ಲಭಿಸಿದ ಬಳಿಕ ಮಾತ್ರವೇ ಪಾದರಕ್ಷೆ ಧರಿಸುವೆ ಅಂತ.

ಈ ವಿಷಯ ನರೇಂದ್ರ ಮೋದಿ ಅವರಿಗೆ ಈದಿನ ಗೊತ್ತಾಯಿತು. ಯಮುನಾ ನಗರದಲ್ಲಿ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಕರೆಸಿಕೊಂಡು ತಮ್ಮ ಕೈಗಳಿಂದಲೇ ಅವರಿಗೆ ಪಾದರಕ್ಷೆಗಳನ್ನು ನೀಡಿದ ಮೋದಿ ಹೀಗೆ ಮಾಡಿದ್ದು ಏಕೆ ಎಂದು ಗದರಿದರು. ಮುಂದೆಂದೂ ಹೀಗೆಲ್ಲ ಮಾಡಬಾರದು. ಸಾಮಾಜಿಕ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.

ಈ ವಿಡಿಯೋವನ್ನು ಎಕ್ಸ್‌ ನಲ್ಲಿ (ಹಿಂದಿನ ಟ್ವಿಟ್ಟರ್)‌ ಹಂಚಿಕೊಂಡ ಪ್ರಧಾನಿಯವರು ʼಅಭಿಮಾನಿಗಳ ಇಂತಹ ಪ್ರೀತಿಯನ್ನು ಗೌರವಿಸುತ್ತೇನೆ. ಆದರೆ ಇಂತಹ ಪ್ರತಿಜ್ಞೆಗಳನ್ನೆಲ್ಲ ಮಾಡುವ ಬದಲಿಗೆ ಸಾಮಾಜಿಕ ಕೆಲಸ ಮಾಡಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದಾದರೂ ಕೆಲಸ ಮಾಡಿʼ ಎಂದು ಮನವಿ ಮಾಡಿದ್ದಾರೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸೌರ ಯುಗಾದಿ ʼವಿಶು-ಕಣಿʼ ಆಚರಣೆ

 ಸೌರ ಯುಗಾದಿ ʼವಿಶು-ಕಣಿʼ ಆಚರಣೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಈದಿನ ೨೦೨೬ ಏಪ್ರಿಲ್‌ ೧೪ರಂದು ವಿಶ್ವಾವಸು ನಾಮ ಸಂವತ್ಸರದ ಸೌರ ಯುಗಾದಿ ʼವಿಶು-ಕಣಿʼಯನ್ನು ಆಚರಿಸಲಾಯಿತು.

ದೇವಸ್ಥಾನದಲ್ಲಿ ದೇವರ ಮುಂದೆ ಸಕಲ ಸಮೃದ್ಧಿಯ ಸಂಕೇತವಾದ ಹಲ-ಫಲ, ಹೂವು-ಹಣ್ಣು ಹಾಗೂ ನಾಣ್ಯಗಳನ್ನು ಒಳಗೊಂಡ ʼಕಣಿʼಯನ್ನು ಇರಿಸಲಾಗಿತ್ತು.

ಭಕ್ತರು ʼಕಣಿʼ ದರ್ಶನ ಪಡೆದು, ಮಹಾ ಪೂಜೆಯ ಬಳಿಕ ʼಕಣಿʼಯ ತರಕಾರಿ, ಹಣ್ಣು ಹಾಗೂ ನಾಣ್ಯಗಳನ್ನು ಪಡೆದರು. ವಿಶೇಷವಾಗಿ ʼಉಣ್ಣಿ ಅಪ್ಪಂʼ, ಖಾರ ಪೊಂಗಲ್‌ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಇವುಗಳನ್ನೂ ಓದಿ:

'ಯುಗಾವತಾರ': ಇದು ಹೊಸ ವರ್ಷದ ಆರಂಭ..!

This is Tulunadu Panchanga

ವಾರೇ ವಾಹ್ ಕೇರಳದ ಓಣಂ ಮತ್ತು ತುಳುವರ ದೀಪಾವಳಿ..!




Sunday, April 13, 2025

ಹೊಸ ವರ್ಷದ ಮೊದಲ ಸತ್ಯನಾರಾಯಣ ಪೂಜೆ

 ಹೊಸ ವರ್ಷದ ಮೊದಲ ಸತ್ಯನಾರಾಯಣ ಪೂಜೆ 

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶ್ವಾವಸು ನಾಮ ಸಂವತ್ಸರದ ಮೊದಲ ಸತ್ಯನಾರಾಯಣ ಪೂಜೆಯನ್ನು ಚಿತ್ರಾ ಪೂರ್ಣಿಮಾ ದಿನವಾದ ೨೦೨೫ ಏಪ್ರಿಲ್‌ ೧೨ರ ಶನಿವಾರ ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಅಪಾರ ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದ ವಿಡಿಯೋ ಮತ್ತು ಕೆಲವು ಚಿತ್ರಗಳು ಇಲ್ಲಿವೆ.

ವಿಡಿಯೋ ನೋಡಲು ಯು ಟ್ಯೂಬ್‌ ಲಿಂಕ್‌  - https://youtu.be/QET2JtezdEo

ಅಥವಾ  ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿರಿ.

👇👇👇




ಇವುಗಳನ್ನೂ ಓದಿರಿ:

ಶ್ರೀ ರಾಮ ನವಮಿ ಆಚರಣೆ

ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ

ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?
10ನೇ ಸತ್ಯನಾರಾಯಣ ಪೂಜೆ

ವೈಕುಂಠ ಏಕಾದಶಿ ಮಹೋತ್ಸವ

೨೦೨೫ಕ್ಕೆ ಸ್ವಾಗತವಿಶೇಷ ಪೂಜೆ Welcome to 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

ಮಾಘ ಸತ್ಯನಾರಾಯಣ ಪೂಜೆ

ವರ್ಷದ ಕೊನೆಯ ಸಂಕಷ್ಟಿ ಪೂಜಾ

Monday, April 7, 2025

ವಿಧಾನಸೌಧಕ್ಕೆ ವರ್ಣಾಲಂಕಾರ

 ವಿಧಾನಸೌಧಕ್ಕೆ ವರ್ಣಾಲಂಕಾರ

ಇದು ಸುವರ್ಣ ನೋಟ

ನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ – ಹೀಗೆ ವಿಶೇಷ ಸಂದರ್ಭಗಳಲ್ಲಿ ವರ್ಣಾಲಂಕಾರದಿಂದ ಜಗಮಗಿಸುತ್ತಿದ್ದ ಕರ್ನಾಟಕದ ವಿಧಾನಸೌಧ ಇದೀಗ ನಿತ್ಯವೂ ವರ್ಣಾಲಂಕಾರದಿಂದ ಸಂಭ್ರಮಿಸುತ್ತಿದೆ.

ವಿಧಾನಸೌಧದ ನಿತ್ಯ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೫ ಏಪ್ರಿಲ್‌ ೦೬ರ ಶ್ರೀರಾಮ ನವಮಿಯಂದು ಉದ್ಘಾಟಿಸಿದ್ದಾರೆ.

ಅಧಿಕಾರಿಗಳ ಪ್ರಕಾರ ವಿಧಾನಸೌಧ ಇನ್ನು ಮುಂದೆ ಪ್ರತಿದಿನವೂ ಬಣ್ಣ ಬಣ್ಣದ ವಿದ್ಯುತ್‌ ದೀಪಾಲಂಕಾರದೊಂದಿಗೆ ಜಗಮಗಿಸಲಿದೆ.

ವಿಧಾನಸೌಧ ಬಣ್ಣದ ದೀಪಗಳ ಬೆಳಕಿನಲ್ಲಿ ಕಣ್ಸೆಳೆದ ಚಿತ್ರಗಳನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಆ ಚಿತ್ರಗಳು ಇಲ್ಲಿವೆ. ಜೊತೆಗೆ ಈ ಚಿತ್ರಗಳನ್ನಾಧರಿಸಿ ʼಪರ್ಯಾಯʼ ನಿರ್ಮಿಸಿದ ಒಂದು ವಿಡಿಯೋ ಕೂಡಾ ಇಲ್ಲಿದೆ.

ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ


ಶಕ್ತಿ ಸೌಧದ ಹೊಳಪು,

ಬಣ್ಣಗಳ ಚಿತ್ತಾರ!
ವಿಶೇಷ ದಿನದ ಸಂಭ್ರಮ,
ನಿತ್ಯವೂ ಬೆಳಗುವ ಸಿಂಗಾರ!
ಕತ್ತಲೆಗೆ ಬೆಳಕು,
ಮನಗಳಿಗೆ ಹರ್ಷ!
ನಾಡಿನ ಹೆಮ್ಮೆಯ ಪ್ರತೀಕ,
ಸದಾ ಬೆಳಗಲಿ ಈ ಸ್ಪರ್ಶ!

ಕಟ್ಟಿದರು ಕನಸನು ಹೊತ್ತು,
ನಾಡಿನ ಭವ್ಯತೆಯ ನೆಲೆ.
ಶಿಲ್ಪಿಗಳ ಕೈಚಳಕದ ಕಲೆ,
 
ಕಲ್ಲಿನಲಿ ಮೂಡಿದ ಬೆಲೆ.

ಸ್ವಾತಂತ್ರ್ಯದ ಉಸಿರು ಸೇರಿ,
ಪ್ರಜಾಪ್ರಭುತ್ವದ ಗುಡಿ.
ಕಾಲದ ಪುಟಗಳಲಿ ಮೆರೆದಿಹುದು,
ಕರುನಾಡಿನ ಕೀರ್ತಿ ನುಡಿ.

ಕನಸುಗಾರರ ದೃಷ್ಟಿಯ ಫಲ,
ಕೆಂಗಲ್ ಹನುಮಂತಯ್ಯನವರ ಶ್ರಮ.
ನಾಡಿನ ಆಡಳಿತದ ತಾಣವಿದು,
ಕನ್ನಡಿಗರ ಹೆಮ್ಮೆಯ ಧ್ವಜ ಸ್ತಂಭ.


ವಿಡಿಯೋ ನೋಡಲು ಯುಟ್ಯೂಬ್‌ ವಿಡಿಯೋ ಕೊಂಡಿ ಅಥವಾ ಅದರ ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿ.

ಕೆಳಗಿನವುಗಳನ್ನೂ ಓದಿರಿ: 
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ
೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!
ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ
ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!
ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ
ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)
ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ
ಬದುಕಿನ ಹೋರಾಟ….!
ಬದ್ಧ ವೈರಿಗಳ ಅಪರೂಪದ ಮೈತ್ರಿ.!
ಡಾ. ರಾಜಕುಮಾರ್ ಆರೋಗ್ಯ ಸೂತ್ರ…!
ಕಥೆ ಹೇಳುವೆ… ನನ್ನ ಕಥೆ ಹೇಳುವೆ..!
‘ಸ್ನೇಕ್ ಬರ್ಡ್’ ಭೋಜನ ಚಮತ್ಕಾರ..!

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಕೇವಲ ಅರ್ಧ ಬೆಲೆ ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

Advertisement