ಗಣೇಶೋತ್ಸವ ೨೦೨೬
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ೨೦೨೬ ಸೆಪ್ಟೆಂಬರ್ ೧೮ರ ಶುಕ್ರವಾರ ಬೆಳಗ್ಗೆ ಬಡಾವಣೆಯ ೨೬ನೇ ಹಾಗೂ ದೇವಸ್ಥಾನದ ಮೂರನೇ ಗಣೇಶೋತ್ಸವ ವಿಧಿವತ್ತಾಗಿ ಆರಂಭವಾಯಿತು.
ಮೂರು ದಿನಗಳ ನಡೆಯುವ ಈ ಗಣೇಶೋತ್ಸವದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳು, ಮಹಿಳೆಯರು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ ಮಹಿಳೆಯರು ಮತ್ತು ಪುರುಷರಿಗೆ ಬಡಾವಣೆಯ ನಿವಾಸಿಗಳು ಹಾಗೂ ಮಹಿಳಾ ತಂಡದ ಸದಸ್ಯೆಯರಾದ ಹೇಮಾ ಮತ್ತು ದೇವಕಿ ಅವರು ಆಟೋಟಗಳನ್ನು ನಡೆಸಿಕೊಡಲಿದ್ದು, ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ನಾಯಕ ಉಮೇಶ ಕೆ ಬಹುಮಾನ ಪ್ರಾಯೋಜನೆ ಮಾಡಿದ್ದಾರೆ.
ಸಂಜೆ ೬ ಗಂಟೆಗೆ ವಿದುಷಿ ಶ್ರೀಮತಿ ಸುಮಾ ಶ್ರೀಧರ್ ನೇತೃತ್ವದಲ್ಲಿ ನೂಪುರ ಕಲಾನಿಕೇತನ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಪ್ರದೀಪ ಶಾಸ್ತ್ರಿ ಮತ್ತು ಕುಟುಂಬದವರು ಪ್ರಾಯೋಜಿಸಿದ್ದಾರೆ.
ಸೆಪ್ಟೆಂಬರ್ ೧೯ರ ಶನಿವಾರ ಬೆಳಗ್ಗೆ ೧೦ ಗಂಟೆಗೆ ದೇವಸ್ಥಾನದ ಅರ್ಚಕ ನಾಗೇಂದ್ರ ಭಟ್ ನೇತೃತ್ವದಲ್ಲಿ ಗಣಹವನ ಕಾರ್ಯಕ್ರಮ, ಮಧ್ಯಾಹ್ನ ೨ ಗಂಟೆಗೆ ಶಬನಮ್ ನೇತೃತ್ವದಲ್ಲಿ ಬಡಾವಣೆಯ ಮಹಿಳಾ ತಂಡದಿಂದ ಮಕ್ಕಳು, ಮಹಿಳೆಯರು, ಪುರುಷರಿಗೆ ಆಟೋಟ ಸ್ಪರ್ಧೆ ನಡೆಯಲಿದ್ದು ಯುವ ಮುಖಂಡ ಶಿವಕುಮಾರ್ ಬಹುಮಾನ ಪ್ರಾಯೋಜನೆ ಮಾಡಿದ್ದಾರೆ. ಸಾಯಂಕಾಲ ೬.೩೦ ಗಂಟೆಗೆ ದೇವಸ್ಥಾನದಲ್ಲೇ ಯಕ್ಷಗಾನ ಕಲಿಯುತ್ತಿರುವ ಮಕ್ಕಳು, ಮಹಿಳೆಯರಿಂದ ʼಲವ-ಕುಶ ಕಾಳಗʼ ಯಕ್ಷಗಾನ. ಯಕ್ಷಗುರು ಉಮೇಶರಾಜ್ ಮಂದಾರ್ತಿ ನೇತೃತ್ವದ ಯಕ್ಷ ಕಲಾ ಕೌಸ್ತುಭ ತಂಡ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದೆ.
ಸೆಪ್ಟೆಂಬರ್ ೨೦ರ ಭಾನುವಾರ ಬೆಳಗ್ಗೆ ೯.೩೦ಗಂಟೆಗೆ ಗಣಪತಿ ಉಪನಿಷತ್ ಸಹಿತ ಪೂಜೆ, ಸಂಜೆ ೪ ಗಂಟೆಗೆ ಎಂಸಿಎಚ್ ಬಡಾವಣೆಯ ಭಕ್ತಿ ಸಂಗಮ ಭಜನಾ ಮಂಡಳಿಯಿಂದ ಭಜನೆ, ಸಂಜೆ ೬ಕ್ಕೆ ಬಾಣಸವಾಡಿಯ ಶ್ರೀ ಧರ್ಮ ಶಾಸ್ತಾ ವಾದ್ಯ ಕಲಾಕೇಂದ್ರ ತಂಡದಿಂದ ಕೇರಳ ಚೆಂಡೆವಾದನ ನಡೆಯಲಿದೆ. ಬಳಿಕ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಗಣಪನ ಶೋಭಾಯಾತ್ರೆಯೊಂದಿಗೆ ಗಣಪತಿ ವಿಸರ್ಜನೆ ನಡೆಯಲಿದೆ. ಶ್ರೀ ಸುಗುಣನ್ ಮತ್ತು ಬಡಾವಣೆಯ ಮಲಯಾಳಿ ಮಿತ್ರರು ಕೇರಳ ಚೆಂಡೆಯನ್ನು ಪ್ರಾಯೋಜಿಸಿದ್ದಾರೆ.
ಗಣೇಶೋತ್ಸವಕ್ಕೆ ಭಕ್ತರು ದೇಣಿಗೆಯೊಂದಿಗೆ ಸಹಕರಿಸಿದ್ದಲ್ಲದೆ, ಶ್ರೀ ಮುನಿರಾಜು ಮತ್ತು ಕುಟುಂಬ, ಶ್ರೀ ರಾಜೇಶ್ ಮತ್ತು ಕುಟುಂಬ, ಹೇಮಾವತಿ, ಶಾರದಮ್ಮ, ದೇವಕಿ, ಶಬನಮ್ ಮತ್ತು ಲತಾ ನೇತೃತ್ವದ ಮಹಿಳಾ ತಂಡ, ಶ್ರೀ ಗುಣವರ್ಧನ್ ಶೆಟ್ಟಿ, ಲಂಡನ್ನಿನಲ್ಲಿ ಇರುವ ಅನೂಪ್ ಶೆಟ್ಟಿ, ಶೋಭನಾ ಶೆಟ್ಟಿ, ವಿಹಾ ಶೆಟ್ಟಿ ಮತ್ತು ಕುಟುಂಬ, ಶ್ರೀಮತಿ ಪ್ರಮೀಳಾನಾಥನ್, ಶ್ರೀಮತಿ ಪ್ರಭಾವತಿ, ಪ್ರಶಾಂತ್, ಚರಣ್ - ಶ್ವೇತಾ ನೇತೃತ್ವದಲ್ಲಿ ಬಡಾವಣೆಯ ೮ನೇ ಅಡ್ಡರಸ್ತೆಯ ಭಕ್ತರು, ಶ್ರೀ ನಾಗೇಶ್ ಮತ್ತು ಸರಸ್ವತಿ ಕುಟುಂಬ, ಮತ್ತಿತರರು ವಿವಿಧ ದಿನಗಳಂದು ಅನ್ನದಾನ, ಪ್ರಸಾದ, ಗಣಹವನ, ಟ್ರ್ಯಾಕ್ಟರ್ ಇತ್ಯಾದಿಗಳ ವ್ಯವಸ್ಥೆ ಮಾಡಿದ್ದರು. ಶ್ರೀ ಸಿರಾಜ್ ಸಾಗರ್ ಅವರು ವೇದಿಕೆ ಮತ್ತು ಪೆಂಡಾಲ್ ವ್ಯವಸ್ಥೆಯನ್ನು ಪ್ರಾಯೋಜಿಸಿದ್ದರು.
ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಚಿತ್ರಗಳ ಸಮೀಪ ನೋಟಕ್ಕಾಗಿ ಅವುಗಳನ್ನು ಕ್ಲಿಕ್ ಮಾಡಿರಿ.























