Showing posts with label Uttara Pradesh. Show all posts
Showing posts with label Uttara Pradesh. Show all posts

Wednesday, May 20, 2026

ಇದು ಭಾರತದ ಅತಿ ತಾಪದ ಜಿಲ್ಲೆ: ಬೆಂಕಿಯ ಉಂಡೆಯಾದ ಬಂದಾ

 ಇದು ಭಾರತದ ಅತಿ ತಾಪದ ಜಿಲ್ಲೆ:  ಬೆಂಕಿಯ ಉಂಡೆಯಾದ ಬಂದಾ

ಮಾನವನ ದುರಾಸೆಗೆ ಬಲಿಯಾದ ಹಸಿರು

ಭಾರತದ ಅತ್ಯಂತ ಬಿಸಿಲಿನ ಜಿಲ್ಲೆ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಉತ್ತರ ಪ್ರದೇಶದ 'ಬಂದಾ' ಜಿಲ್ಲೆ ಈಗ ಅಕ್ಷರಶಃ ಕೆಂಡದಂತಾಗಿದೆ. ಬೆಳಿಗ್ಗೆ 10 ಗಂಟೆಯಾಗುತ್ತಿದ್ದಂತೆ ಇಡೀ ಜಿಲ್ಲೆ ಸ್ಮಶಾನ ಮೌನಕ್ಕೆ ಜಾರುತ್ತದೆ. ರಸ್ತೆಗಳು ಬಿಕೋ ಎನ್ನುತ್ತವೆ, ಅಂಗಡಿ ಮುಂಗಟ್ಟುಗಳು ಮುಚ್ಚುತ್ತವೆ. ಅತ್ತಾರಾ ಪಟ್ಟಣದ ಒಡವೆ ವ್ಯಾಪಾರಿ ಲಖನ್ ಗುಪ್ತಾ, ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಬೆಳಿಗ್ಗೆ 6 ಗಂಟೆಗೇ ಕೆಲಸಕ್ಕೆ ಹೊರಟು, 9 ಗಂಟೆಗೆಲ್ಲ ಮನೆ ಸೇರುತ್ತಾರೆ. "ಏಪ್ರಿಲ್‌ನಿಂದ ವ್ಯಾಪಾರ ಪೂರ್ತಿ ತಣ್ಣಗಾಗಿದೆ. 10 ಗಂಟೆಯ ನಂತರ ಇಡೀ ಬಂದಾ ನಗರ ನಿರ್ಜನ ಪ್ರದೇಶವಾಗುತ್ತದೆ" ಎನ್ನುತ್ತಾರೆ ಅವರು.

2026 ಮೇ 20ರ ಮಂಗಳವಾರ ಇಲ್ಲಿನ ತಾಪಮಾನ ಬರೋಬ್ಬರಿ 48.2°C ದಾಖಲಾಗುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ರಾಜಸ್ಥಾನದ ಚುರು, ಜೈಸಲ್ಮೇರ್ ನಗರಗಳನ್ನು ಮೀರಿಸುವಂತೆ ಬಂದಾ ಬೆಂದು ಹೋಗುತ್ತಿದೆ. ಆದರೆ, ಈ ವಿನಾಶಕ್ಕೆ ಕೇವಲ ಜಾಗತಿಕ ಹವಾಮಾನ ಬದಲಾವಣೆ ಮಾತ್ರ ಕಾರಣವಲ್ಲ; ಬದಲಿಗೆ ಸ್ಥಳೀಯವಾಗಿ ನಡೆದ ಪರಿಸರ ಮಾರಣಹೋಮ ಮತ್ತು ಅರಣ್ಯ ನಾಶವೇ ಇದಕ್ಕೆ ಮುಖ್ಯ ಕಾರಣ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.

ಹಸಿರು ಕಸಿದುಕೊಂಡ ಕಾಂಕ್ರೀಟ್ ಕಾಡು: ಅರಣ್ಯ ನಾಶದ ಕರಾಳ ಮುಖ

ಬಂದಾ ಕೃಷಿ ವಿಶ್ವವಿದ್ಯಾಲಯದ ಅರ್ಜುನ್ ಪಿ. ವರ್ಮಾ ಅವರ ಸಂಶೋಧನೆಯ ಪ್ರಕಾರ, ಕಳೆದ ಮೂರು ದಶಕಗಳಲ್ಲಿ (1991 ರಿಂದ 2022) ಬಂದಾ ಜಿಲ್ಲೆಯು ತನ್ನ ಶೇ. 16ರಷ್ಟು ದಟ್ಟ ಅರಣ್ಯ ಪ್ರದೇಶವನ್ನು ಕಳೆದುಕೊಂಡಿದೆ. ಇತ್ತೀಚಿನ ಮತ್ತೊಂದು ವರದಿಯ ಪ್ರಕಾರ, ಕೇವಲ 20 ವರ್ಷಗಳಲ್ಲಿ ಹಸಿರು ಹೊದಿಕೆ 120 ಚದರ ಕಿಲೋಮೀಟರ್‌ನಿಂದ 95 ಚದರ ಕಿಲೋಮೀಟರ್‌ಗೆ ಕುಸಿದಿದೆ.

ಅರಣ್ಯ ನಾಶಕ್ಕೆ ಮುಖ್ಯ ಕಾರಣಗಳು:

  • ಬೃಹತ್ ಪ್ರಮಾಣದ ಗಣಿಗಾರಿಕೆ: ಗಣಿಗಾರಿಕೆಗಾಗಿ ಕಾಡುಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಲಾಗುತ್ತಿದೆ.
  • ಕೃಷಿ ಒತ್ತುವರಿ: ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುತ್ತಿರುವುದು ಹಸಿರು ವಲಯವನ್ನು ನುಂಗಿ ಹಾಕಿದೆ.
  • ಧೂಳಿನ ಕವಚ: ಕಲ್ಲು ಪುಡಿ ಮಾಡುವ ಕ್ರಷರ್ ಘಟಕಗಳಿಂದ ಏಳುವ ಧೂಳು ಇಡೀ ಮಣ್ಣು ಮತ್ತು ಸಸ್ಯ ಸಂಕುಲದ ಮೇಲೆ ಆವರಿಸಿ, ಗಿಡಮರಗಳು ಉಸಿರುಗಟ್ಟುವಂತೆ ಮಾಡಿದೆ.

ಹಸಿರು ನಾಶವಾಗಿರುವುದರಿಂದ ಮಣ್ಣಿನಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಸಂಪೂರ್ಣ ಉಡುಗಿಹೋಗಿದೆ.

ಬೆಟ್ಟಗಳ ಬಲಿ ಮತ್ತು ನದಿಗಳ ಲೂಟಿ: ನೈಸರ್ಗಿಕ ರಕ್ಷಾಕವಚ ಧ್ವಂಸ

ಒಂದು ಕಾಲದಲ್ಲಿ ಇಲ್ಲಿನ ಹವಾಮಾನವನ್ನು ಸಮತೋಲನದಲ್ಲಿಡುತ್ತಿದ್ದ ವಿಂಧ್ಯ ಪರ್ವತ ಶ್ರೇಣಿಯ ಶೇ. 25ರಷ್ಟು ಭಾಗ ಇಂದು ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಗಳಿಂದಾಗಿ ಕಣ್ಮರೆಯಾಗಿದೆ! ಈ ಬೆಟ್ಟಗಳಲ್ಲಿದ್ದ ಮರಳುಗಲ್ಲುಗಳು ಮಳೆನೀರನ್ನು ಇಂಗಿಸಿ, ಅಂತರ್ಜಲವನ್ನು ವೃದ್ಧಿಸುತ್ತಿದ್ದವು. ಆದರೆ ಅತಿಯಾದ ಸ್ಫೋಟಗಳಿಂದಾಗಿ ಈ ನೈಸರ್ಗಿಕ ಜಲ ಮರುಪೂರಣ ವ್ಯವಸ್ಥೆಯೇ ಧ್ವಂಸಗೊಂಡಿದೆ.

ಮತ್ತೊಂದೆಡೆ, ಇಲ್ಲಿನ ಜೀವನಾಡಿಯಾದ 'ಕೇನ್' ನದಿಯಿಂದ ಪ್ರತಿದಿನ ಬರೋಬ್ಬರಿ 55,000 ಟನ್ ಕೆಂಪು ಮರಳನ್ನು ಬೃಹತ್ ಯಂತ್ರಗಳ ಮೂಲಕ ಅಕ್ರಮವಾಗಿ ಲೂಟಿ ಮಾಡಲಾಗುತ್ತಿದೆ. ಎನ್‌ಜಿಟಿ (ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ) ನಿಯಮಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ಈ ಮರಳು ದಂಧೆಯಿಂದಾಗಿ ನದಿ ಪಾತ್ರಗಳು ಬರಿದಾಗಿವೆ. ಮರಳು ನಾಶವಾಗಿ ಬಂಡೆಗಳು ಹೊರಬಿದ್ದಿರುವುದರಿಂದ, ಸೂರ್ಯನ ಶಾಖಕ್ಕೆ ಇಡೀ ನದಿ ಪಾತ್ರ ಕಾದ ಹೆಂಚಿನಂತಾಗುತ್ತಿದೆ. ಪರಿಣಾಮವಾಗಿ ಬಾವಿಗಳು ಬೇಗನೇ ಬತ್ತುತ್ತಿವೆ, ಬೋರ್‌ವೆಲ್‌ಗಳು ಪಾತಾಳ ಮುಟ್ಟುತ್ತಿವೆ.

"ಹೀಗೇ ಮುಂದುವರಿದರೆ ಮುಂದಿನ 20 ವರ್ಷಗಳಲ್ಲಿ ಬಂದಾ ಮರುಭೂಮಿಯಾಗಲಿದೆ"

ಲಕ್ನೋ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಪ್ರೊ. ಧ್ರುವ ಸೇನ್ ಸಿಂಗ್ ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ:

"ಬಂದಾ ಇಂದು ಒಂದು 'ಹೀಟ್ ಐಲ್ಯಾಂಡ್' (ಉಷ್ಣದ ದ್ವೀಪ) ಆಗಿ ಮಾರ್ಪಟ್ಟಿದೆ. ಹಸಿರು ಇಲ್ಲ, ತೇವಾಂಶ ಇಲ್ಲ, ಜಲಮೂಲಗಳೂ ಇಲ್ಲ. ಹಗಲಿಡೀ ಕಾಯುವ ಭೂಮಿ, ರಾತ್ರಿಯಿಡೀ ಆ ಶಾಖವನ್ನು ಹೊರಹಾಕುತ್ತದೆ. ಆ ಶಾಖ ತಣ್ಣಗಾಗುವ ಮುನ್ನವೇ ಮತ್ತೆ ಸೂರ್ಯ ಉದಯಿಸುತ್ತಾನೆ. ಇದೊಂದು ಕರಗಲಾರದ ವಿಷವರ್ತುಲ."

ಬದಲಾದ ಜನರ ಬದುಕು:

  • ರಾತ್ರಿ ಕೃಷಿ: ಮಧ್ಯಾಹ್ನದ ಬಿಸಿಲು ತಡೆಯಲಾಗದೆ ರೈತರು ರಾತ್ರಿ ವೇಳೆ ಎಲ್‌ಇಡಿ ಲೈಟ್ ಹಾಕಿಕೊಂಡು ಹೊಲ ಉಳುವ ಪರಿಸ್ಥಿತಿ ಬಂದಿದೆ.
  • ಕೂಲಿ ನಷ್ಟ: ಕಾರ್ಮಿಕರು ಮಧ್ಯಾಹ್ನ ಕೆಲಸ ಮಾಡಲು ಸಾಧ್ಯವಾಗದೆ ತಮ್ಮ ಶೇ. 40ರಷ್ಟು ಕೂಲಿಯನ್ನು ಕಳೆದುಕೊಳ್ಳುತ್ತಿದ್ದಾರೆ.
  • ಅವಧಿಗೂ ಮುನ್ನ ವಲಸೆ: ಬದುಕಲು ದಾರಿಯಿಲ್ಲದೆ ಜನ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.
  • ಟ್ರಾನ್ಸ್‌ಫಾರ್ಮರ್‌ಗಳಿಗೂ ನೀರು: ಅತಿಯಾದ ಶಾಖದಿಂದಾಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಸ್ಫೋಟಗೊಳ್ಳುತ್ತಿದ್ದು, ಅವುಗಳನ್ನು ತಂಪಾಗಿಸಲು ಇಲಾಖೆಯ ಸಿಬ್ಬಂದಿ ದಿನವಿಡೀ ನೀರು ಸುರಿಯುತ್ತಿದ್ದಾರೆ.

ಸಂಜೆ ಸೂರ್ಯ ಮುಳುಗಿದ ಮೇಲಷ್ಟೇ ಇಲ್ಲಿ ಮತ್ತೆ ಜೀವಕಳೆ ಮರುಕಳಿಸುತ್ತದೆ. "ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬಂದಾ ಜಿಲ್ಲೆ ಮನುಷ್ಯರು ವಾಸಿಸಲು ಯೋಗ್ಯವಲ್ಲದ ಜಾಗವಾಗಲಿದೆ" ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಹಸಿರು ನಾಶ ಮತ್ತು ಮರಳು ದಂಧೆಗೆ ಬ್ರೇಕ್ ಬೀಳದಿದ್ದರೆ ಬಂದಾ ಮಾತ್ರವಲ್ಲ, ನಮ್ಮ ಮುಂದಿನ ನಗರಗಳ ಕಥೆಯೂ ಇದೇ ಆಗಲಿದೆ ಎಂಬುದಕ್ಕೆ ಇದೊಂದು ಎಚ್ಚರಿಕೆಯ ಗಂಟೆ.

ಮಾಹಿತಿ ಸೌಜನ್ಯ: ಹಿಂದುಸ್ಥಾನ್‌ ಟೈಮ್ಸ್

Thursday, May 14, 2026

ಭೀಕರ ಬಿರುಗಾಳಿಗೆ ಹಾರಿ ಹೋದ ಯುವಕ!

 ಭೀಕರ ಬಿರುಗಾಳಿಗೆ ಹಾರಿ ಹೋದ ಯುವಕ!

ಉತ್ತರ ಪ್ರದೇಶ ವರುಣ ಅಟ್ಟಹಾಸ: 89 ಬಲಿ

ರೇಲಿ: ಪ್ರಕೃತಿಯ ವಿಕೋಪಕ್ಕೆ ಉತ್ತರ ಪ್ರದೇಶ ತತ್ತರಿಸಿ ಹೋಗಿದೆ. 2026 ಮೇ 13ರ ಬುಧವಾರ ರಾಜ್ಯದಾದ್ಯಂತ ಸಂಭವಿಸಿದ ಭೀಕರ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿಗೆ ಬರೋಬ್ಬರಿ 89 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಭೀಕರತೆಯ ನಡುವೆ, ಬರೇಲಿಯಲ್ಲಿ ವ್ಯಕ್ತಿಯೊಬ್ಬ ಗಾಳಿಯಲ್ಲಿ ಹಾರಿ ಹೋದ ಎದೆನಡುಗಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

300 ಮೀಟರ್ ದೂರಕ್ಕೆ ಹಾರಿ ಬಿದ್ದ ವ್ಯಕ್ತಿ!

ಬರೇಲಿಯ ಭಮೋರಾ ಭಾಗದ ಬಾಬಿಯಾನಾ ಗ್ರಾಮದ ನಿವಾಸಿ ನನ್ಹೆ-ಮಿಯಾನ್ ಎಂಬುವವರು ಈ ಘೋರ ಘಟನೆಗೆ ಸಾಕ್ಷಿಯಾದವರು. ಬಿರುಗಾಳಿ ಶುರುವಾದಾಗ ರಕ್ಷಣೆಗಾಗಿ ಅವರು ಸಮೀಪದ ಕಲ್ಯಾಣ ಮಂಟಪವೊಂದರ ಒಳಗೆ ಆಶ್ರಯ ಪಡೆದಿದ್ದರು. ಗಾಳಿಯ ವೇಗ ಹೆಚ್ಚಾದಂತೆ, ಅಲ್ಲಿನ ಟಿನ್ ಶೆಡ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಕೆಳಗೆ ಕ್ಲಿಕ್‌ ಮಾಡಿ ವಿಡಿಯೋ ನೋಡಿ:

 ಗಾಳಿಯ ರಭಸ ಎಷ್ಟಿತ್ತೆಂದರೆ:

  • ಬೃಹತ್ ಟಿನ್ ಶೆಡ್ ಅನ್ನೇ ಕಿತ್ತೆಸೆದ ಬಿರುಗಾಳಿ.
  • ಶೆಡ್ ಹಿಡಿದಿದ್ದ ನನ್ಹೆ-ಮಿಯಾನ್ ಅವರು ಸುಮಾರು 300 ಮೀಟರ್‌ಗಳಷ್ಟು ದೂರ ಗಾಳಿಯಲ್ಲೇ ತೇಲುತ್ತಾ ಹೋಗಿದ್ದಾರೆ.
  • ಅಂತಿಮವಾಗಿ ಸಮೀಪದ ಹೊಲವೊಂದಕ್ಕೆ ಅಪ್ಪಳಿಸಿದ್ದು, ಅವರ ಕೈಕಾಲುಗಳು ಮುರಿದಿವೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಹಾನಿಯ ಅಂಕಿ-ಅಂಶಗಳು

ಕೇವಲ ಜೀವಹಾನಿಯಲ್ಲದೆ, ಆಸ್ತಿಪಾಸ್ತಿಗೂ ಭಾರೀ ನಷ್ಟ ಉಂಟಾಗಿದೆ. ಸರ್ಕಾರದ ಅಧಿಕೃತ ವರದಿಯ ಪ್ರಕಾರ:

ವಿವರ

ಹಾನಿಯ ಪ್ರಮಾಣ

ಮೃತಪಟ್ಟವರು

89 ಜನರು

ಗಾಯಗೊಂಡವರು

53 ಜನರು

ಮೃತಪಟ್ಟ ಪ್ರಾಣಿಗಳು

114

ಕಾರಣಗಳು

ಗೋಡೆ ಕುಸಿತ, ಮರಗಳ ಉರುಳುವಿಕೆ, ಸಿಡಿಲು

 "ರಸ್ತೆಯೇ ಕಾಣಿಸುತ್ತಿರಲಿಲ್ಲ!"  ಪ್ರತ್ಯಕ್ಷದರ್ಶಿಗಳ ಹೇಳಿಕೆ

ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ. "ನಾನು ಕಾರಿನಲ್ಲಿದ್ದಾಗ ಮರಗಳು ಬೀಳುತ್ತಿದ್ದವು, ಧೂಳಿನಿಂದಾಗಿ ರಸ್ತೆಯೇ ಕಾಣಿಸುತ್ತಿರಲಿಲ್ಲ. ಜೀವ ಭಯದಿಂದ ಕಾರನ್ನು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿದೆ," ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ಹವಾಮಾನ ಇಲಾಖೆ ಎಚ್ಚರಿಕೆ: ಪಶ್ಚಿಮದ ಮಾರುತಗಳ ಪ್ರಭಾವದಿಂದಾಗಿ ಉತ್ತರ ಭಾರತದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮೊದಲೇ ಮುನ್ಸೂಚನೆ ನೀಡಿತ್ತು.

ಈ ಭೀಕರ ಬಿರುಗಾಳಿಯು ಉತ್ತರ ಪ್ರದೇಶದ ಮೂಲಸೌಕರ್ಯ ಹಾಗೂ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಲು ಇನ್ನೂ ಕೆಲವು ದಿನಗಳು ಬೇಕಾಗಬಹುದು.

Saturday, November 28, 2020

‘ಅಕ್ರಮ’ ಮತಾಂತರ ನಿಷೇಧ: ಉ.ಪ್ರ.ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

 ‘ಅಕ್ರಮ’ ಮತಾಂತರ ನಿಷೇಧ: ಉ.ಪ್ರ.ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಲಕ್ನೋ: ಬಲವಂತದ ಅಥವಾ "ಅಪ್ರಾಮಾಣಿಕ" ಧಾರ್ಮಿಕ ಮತಾಂತರ ನಿಗ್ರಹ ಸುಗ್ರೀವಾಜ್ಞೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್  2020  ನವೆಂಬರ್ 28ರ ಶನಿವಾರ ಒಪ್ಪಿಗೆ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರಪ್ರದೇಶದ ಕಾನೂನುಬಾಹಿರ ಧಾರ್ಮಿಕ ಮತಾಂತರದ ನಿಷೇಧ, ೨೦೨೦ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ ಎಂದು ಅಧಿಕಾರಿ ನುಡಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯ ರಾಜ್ಯ ಸಚಿವ ಸಂಪುಟವು ವಾರದ ಆರಂಭದಲ್ಲಿ ವಿವಾಹದ ಸಲುವಾಗಿ ಸೇರಿದಂತೆ ಬಲವಂತದ ಅಥವಾ "ಅಪ್ರಾಮಾಣಿಕ" ಧಾರ್ಮಿಕ ಮತಾಂತರಗಳನ್ನು ತಡೆಯುವ ಕರಡು ಸುಗ್ರೀವಾಜ್ಞೆಗೆ ಅನುಮೋದನೆ ನೀಡಿತ್ತು,

ಸುಗ್ರೀವಾಜ್ಞೆಯ ಪ್ರಕಾರ ಇದನ್ನು ಉಲ್ಲಂಘಿಸುವವರನ್ನು ೧೦ ವರ್ಷಗಳವರೆಗೆ ಜೈಲಿನಲ್ಲಿ ಇರಿಸಬಹುದು., ಕೇವಲ ಮದುವೆಯ ಉದ್ದೇಶಕ್ಕಾಗಿ ಮಹಿಳೆಯ ಮತಾಂತರವಾಗಿದ್ದರೆ, ಅಂತಹ ಮದುವೆಯನ್ನು ನಿಷ್ಫಲ ಮತ್ತು ಅನೂರ್ಜಿತವೆಂದು ಘೋಷಿಸಲಾಗುತ್ತದೆ ಮತ್ತು ಮದುವೆಯ ನಂತರ ತಮ್ಮ ಧರ್ಮವನ್ನು ಬದಲಾಯಿಸಲು ಬಯಸುವವರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಅಲಹಾಬಾದ್ ಹೈಕೋರ್ಟ್ ಪ್ರಮುಖ ತೀರ್ಪಿನಲ್ಲಿ ಇಬ್ಬರು ವಯಸ್ಕರಿಗೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ ಎಂದು ಹೇಳಿದ ನಂತರ ಕ್ರಮ ಕೈಗೊಳ್ಳಲಾಗಿದೆ. ಇಬ್ಬರು ವಯಸ್ಕರು ಒಂದೇ ಅಥವಾ ವಿರುದ್ಧ ಲಿಂಗದವರಾಗಿದ್ದರೂ ಒಟ್ಟಿಗೆ ವಾಸಿಸಲು ಕಾನೂನು ಅನುಮತಿ ನೀಡುತ್ತದೆ ಎಂದು ನ್ಯಾಯಾಲಯ ಹೇಳಿದೆ. ಯಾವುದೇ ವ್ಯಕ್ತಿ ಅಥವಾ ಕುಟುಂಬ ಅವರ ಶಾಂತಿಯುತ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇಬ್ಬರು ವಯಸ್ಕರ ಸಂಬಂಧವನ್ನು ರಾಜ್ಯವು ಆಕ್ಷೇಪಿಸಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

ಇದಕ್ಕೆ ಮುನ್ನ ಉತ್ತರಪ್ರದೇಶ ಸರ್ಕಾರವು ವಿವಾಹದ ಸಲುವಾಗಿ ಧಾರ್ಮಿಕ ಮತಾಂತರವನ್ನು ನಿಭಾಯಿಸಲು ಕಠಿಣ ಕಾನೂನಿನ ಕರಡನ್ನು ಅಂಗೀಕರಿಸಿತ್ತು. ಮತಾಂತರಕ್ಕಾಗಿ ನಡೆಯುವ ಮದುವೆಗಳನ್ನು ಬಿಜೆಪಿ ನಾಯಕರು "ಲವ್ ಜಿಹಾದ್" ಎಂದು ಬಣ್ಣಿಸುತ್ತಾರೆ.

ಇತ್ತೀಚಿನ ವಾರಗಳಲ್ಲಿ, ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶಗಳು ಕೂಡಾ ವಿವಾಹದ ಸೋಗಿನಲ್ಲಿ ಹಿಂದೂ ಮಹಿಳೆಯರನ್ನು ಇಸ್ಲಾಮಿಗೆ ಪರಿವರ್ತಿಸುವ ಆಪಾದಿತ ಪ್ರಯತ್ನಗಳೊಂದಿಗೆ ವ್ಯವಹರಿಸಲು ಕಾನೂನುಗಳನ್ನು ರೂಪಿಸುವ ಯೋಜನೆಗಳನ್ನು ಬಹಿರಂಗಪಡಿಸಿವೆ.

"ಉತ್ತರ ಪ್ರದೇಶ ಸಚಿವ ಸಂಪುಟವು ಕಾನೂನುಬಾಹಿರ ಧಾರ್ಮಿಕ ಮತಾಂತರಗಳ ವಿರುದ್ಧ ಸುಗ್ರೀವಾಜ್ಞೆಯನ್ನು ತರಲು ನಿರ್ಧರಿಸಿದೆ" ಎಂದು ರಾಜ್ಯ ಸಂಪುಟ ಸಚಿವ ಸಿದ್ಧಾರ್ಥನಾಥ್ ನಾಥ್ ಸಿಂಗ್ ಹೇಳಿದ್ದರು.

"ವಂಚನೆ, ಸುಳ್ಳು, ಬಲ ಮತ್ತು ಅಪ್ರಾಮಾಣಿಕತೆಯನ್ನು ಬಳಸಿಕೊಂಡು ಧಾರ್ಮಿಕ ಮತಾಂತರಗಳನ್ನು ಮಾಡುವ ವಿಧಾನವು ಹೃದ್ರಾವಕವಾಗಿದೆ, ಮತ್ತು ಇದನ್ನು ತಡೆಯುವ ನಿಟ್ಟಿನಲ್ಲಿ ಕಾನೂನನ್ನು ಹೊಂದಿರುವುದು ಅಗತ್ಯವಾಗಿತ್ತುಎಂದು ಅವರು ಹೇಳಿದ್ದರು.

ಲಕ್ನೋದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿತ್ತು.

Tuesday, November 24, 2020

ಲವ್ ಜಿಹಾದ್‌ಗಾಗಿ ಮತಾಂತರ ನಿಷೇಧ: ಸುಗ್ರೀವಾಜ್ಞೆಗೆ ಉ.ಪ್ರ.ಅಸ್ತು

 ಲವ್ ಜಿಹಾದ್ಗಾಗಿ ಮತಾಂತರ ನಿಷೇಧ: ಸುಗ್ರೀವಾಜ್ಞೆಗೆ .ಪ್ರ.ಅಸ್ತು

ಲಕ್ನೋ:  ಬಿಜೆಪಿ ನಾಯಕರು "ಲವ್ ಜಿಹಾದ್" ಎಂದು ಕರೆಯುವ ವಿವಾಹದ ಸಲುವಾಗಿ ನಡೆಸುವ ಧಾರ್ಮಿಕ ಮತಾಂತರವನ್ನು ನಿಭಾಯಿಸಲು ಕಠಿಣ ಕಾನೂನಿನ ಕರಡನ್ನು ಉತ್ತರ ಪ್ರದೇಶ ಸರ್ಕಾರ 2020 ನವೆಂಬರ್  24ರ ಮಂಗಳವಾರ ಅಂಗೀಕರಿಸಿತು.

ಲಕ್ನೋದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದರು.

"ಕಾನೂನುಬಾಹಿರ ಧಾರ್ಮಿಕ ಮತಾಂತರಗಳ ವಿರುದ್ಧ ಸುಗ್ರೀವಾಜ್ಞೆಯನ್ನು ತರಲು ಉತ್ತರ ಪ್ರದೇಶ ಸಚಿವ ಸಂಪುಟವು ನಿರ್ಧರಿಸಿದೆ" ಎಂದು ರಾಜ್ಯ ಸಂಪುಟ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದರು.

"ವಂಚನೆ, ಸುಳ್ಳು, ಬಲ ಮತ್ತು ಅಪ್ರಾಮಾಣಿಕತೆಯನ್ನು ಬಳಸಿಕೊಂಡು ಧಾರ್ಮಿಕ ಮತಾಂತರಗಳನ್ನು ಮಾಡುವ ವಿಧಾನವು ಹೃದಯ ವಿದ್ರಾವಕವಾಗಿದೆ ಮತ್ತು ನಿಟ್ಟಿನಲ್ಲಿ ಕಾನೂನನ್ನು ಹೊಂದಿರುವುದು ಅಗತ್ಯವಾಗಿತ್ತು." ಎಂದು ಸಿಂಗ್ ನುಡಿದರು.

ಹೊಸ ಕಾನೂನಿನಡಿಯಲ್ಲಿ ಅಪರಾಧಕ್ಕೆ ಶಿಕ್ಷೆ ಒಂದರಿಂದ ಮತ್ತು ಐದು ವರ್ಷಗಳ ಜೈಲು ಶಿಕ್ಷೆ ಮತ್ತು ೧೫ ಸಾವಿರ ರೂ.ದಂಡ. ಆದರೆ ಭಾಗಿಯಾಗಿರುವ ಮಹಿಳೆ ಅಪ್ರಾಪ್ತ ವಯಸ್ಕ ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ, ಜೈಲು ಶಿಕ್ಷೆ ಮೂರರಿಂದ ರಿಂದ ೧೦ ವರ್ಷಗಳವರೆಗೆ ಇರುತ್ತದೆ ಮತ್ತು ೨೫,೦೦೦ ರೂ.ಗಳಿಗೆ ಏರುತ್ತದೆ  ಎಂದು ಅವರು ಹೇಳಿದರು.

"ಸಾಮೂಹಿಕ ಮತಾಂತರದ ಸಂದರ್ಭದಲ್ಲಿ, ಮೂರು ವರ್ಷದಿಂದ ೧೦ ವರ್ಷಗಳವರೆಗೆ ಶಿಕ್ಷೆ ಮತ್ತು ಅದರಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳಿಗೆ ೫೦,೦೦೦ ರೂ.ಗಳ ದಂಡ" ಎಂದು ಅವರು ಹೇಳಿದರು.

ಮದುವೆಯ ನಂತರ ಯಾರಾದರೂ ತಮ್ಮ ಧರ್ಮವನ್ನು ಬದಲಾಯಿಸಲು ಬಯಸಿದರೆ, ಅವರು ಹಾಗೆ ಮಾಡಬಹುದು . ಆದರೆ ಜಿಲ್ಲಾಧಿಕಾರಿಗೆ ಎರಡು ತಿಂಗಳು ಮುಂಚಿತವಾಗಿ ನಿಗದಿತ ರೂಪದಲ್ಲಿ ತಿಳಿಸಬೇಕಾಗಿದ್ದು, ಅನುಮತಿ ದೊರೆತ ನಂತರ ವ್ಯಕ್ತಿಯು ಮತಾಂತರಗೊಳ್ಳಬಹುದು. ಇದು ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದು ಸಿಂಗ್ ಹೇಳಿದ್ದಾರೆ.

Advertisement