Showing posts with label Books/ Literature. Show all posts
Showing posts with label Books/ Literature. Show all posts

Thursday, October 15, 2020

ಮಲಯಾಳಂ ’ಮಹಾಕವಿ’ ಅಕ್ಕಿಥಂ ಅಚ್ಯುತನ್ ನಿಧನ

 ಮಲಯಾಳಂ "ಮಹಾಕವಿ ಅಕ್ಕಿಥಂ ಅಚ್ಯುತನ್ ನಿಧನ

ತ್ರಿಶ್ಶೂರ್: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಕವಿ ಅಕ್ಕಿಥಂ ಅಚ್ಯುತನ್ ನಂಬೂದಿರಿ (೯೪) ಅವರು ತ್ರಿಶ್ಶೂರಿನ ಖಾಸಗಿ ಆಸ್ಪತ್ರೆಯಲ್ಲಿ 2020 ಅಕ್ಟೋಬರ್ 15ರ ಗುರುವಾರ ನಿಧನರಾದರು.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಕಳೆದ ವಾರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇಬ್ಬರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಮಹಾಕವಿ ಬಿರುದಿನ ಅಕ್ಕಿಥಂ ಅಗಲಿದ್ದಾರೆ. ಹಳೆಯ ಬೇರುಗಳ ಜೊತೆ ಆಧುನಿಕಯ ಸೊಗಡನ್ನು ಜೋಡಿಸಿ ಬರೆದ ಅಕ್ಕಿಥಂ, ಸಹಜ ಕವಿ ಎನಿಸಿದ್ದರು. ಬಾಲ್ಯದಿಂದಲೇ ಕವಿತೆ ಬರೆಯುವ ವ್ಯಾಮೋಹಕ್ಕೆ ಸಿಲುಕಿದ್ದ ಅವರು, ಇರುಪತಾಂ ನೂಟ್ಟಾಂಡಿಂಟೆ ಇತಿಹಾಸಂ ಸಂಕಲನದ ಮೂಲಕ ಮಲಯಾಳಂ ಕಾವ್ಯ ಜಗತ್ತಿನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದರು.

 ದುಃಖವನ್ನು ತಮ್ಮ ಕಾವ್ಯದ ಆಪ್ತ ವಸ್ತುವನ್ನಾಗಿ ಪರಿಗಣಿಸಿದ್ದ ಅಕ್ಕಿಥಂ, ಬೆಳಕು ದುಃಖವನ್ನು, ಕತ್ತಲೆ ಆನಂದವನ್ನು ತರುತ್ತದೆ ಎಂದು ಗ್ರಹಿಸಿ ಬರೆದ ಕಾವ್ಯ ಕೇರಳದಲ್ಲಿ ಮನೆಮಾತಾಗಿತ್ತು.

ಕವನ ಸಂಕಲನ, ನಾಟಕ ಮತ್ತು ಸಣ್ಣ ಕಥೆಗಳು ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೪೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು.

೨೦೧೯ರಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು. ಶ್ರೇಷ್ಠ ಪ್ರಶಸ್ತಿ ಪಡೆದ ಮಲಯಾಳಂನ ಆರನೇ ಸಾಹಿತಿ ಎನ್ನುವ ಕೀರ್ತಿಗೆ ಅವರು ಭಾಜನರಾಗಿದ್ದರು. ಪದ್ಮಶ್ರೀ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿದ್ದವು.

Thursday, October 8, 2020

ನೊಬೆಲ್ ಸಾಹಿತ್ಯ ಪ್ರಶಸ್ತಿ ಅಮೆರಿಕದ ಕವಿ ಲೂಯಿ ಗ್ಲಕ್‌ಗೆ

 ನೊಬೆಲ್ ಸಾಹಿತ್ಯ ಪ್ರಶಸ್ತಿ ಅಮೆರಿಕದ ಕವಿ ಲೂಯಿ ಗ್ಲಕ್ಗೆ

ನವದೆಹಲಿ: ಅಮೆರಿಕದ ಕವಿ ಲೂಯಿ ಎಲಿಸಬೆತ್ ಗ್ಲಕ್ ಅವರು 2020 ಅಕ್ಟೋಬರ್ 08ರ ಗುರುವಾರ ೨೦೨೦ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದುಕೊಂಡರು.

೧೯೪೩ರ ಏಪ್ರಿಲ್ ೨೨ರಂದು ಜನಿಸಿದ ಗ್ಲಕ್ ಒಬ್ಬ ಅಮೇರಿಕನ್ ಕವಿ ಮತ್ತು ಪ್ರಬಂಧಕಾರ್ತಿಯಾಗಿದ್ದು, "ಸ್ನಿಗ್ಧ್ಧ ಸೌಂದರ್ಯದೊಂದಿಗೆ ವೈಯಕ್ತಿಕ ಅಸ್ತಿತ್ವವನ್ನು ಸಾರ್ವತ್ರಿಕವಾಗಿಸುವ ಸ್ಪಷ್ಟವಾದ ಕಾವ್ಯಾತ್ಮಕ ಧ್ವನಿಗಾಗಿ ೨೦೨೦ರ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಅವರಿಗೆ ಪ್ರಕಟಿಸಲಾಯಿತು.

ಅಮೆರಿಕದಲ್ಲಿ ರಾಷ್ಟ್ರೀಯ ಮಾನವಿಕ ಪದಕ, ಪುಲಿಟ್ಜರ್ ಪ್ರಶಸ್ತಿ, ರಾಷ್ಟ್ರೀಯ ಪುಸ್ತಕ ಪ್ರಶಸ್ತಿ, ರಾಷ್ಟ್ರೀಯ ಪುಸ್ತಕ ವಿಮರ್ಶಕರ ವಲಯ ಪ್ರಶಸ್ತಿ, ಮತ್ತು ಬೊಲ್ಲಿಂಗನ್ ಪ್ರಶಸ್ತಿ ಸೇದಂತೆ ಅನೇಕ ಪ್ರಮುಖ ಸಾಹಿತ್ಯ ಪ್ರಶಸ್ತಿಗಳನ್ನು ಗ್ಲಕ್ ಅವರು ಗೆದ್ದಿದ್ದಾರೆ.

ಅಮೆರಿಕದ ಕವಿ ಪ್ರಶಸ್ತಿ ವಿಜೇತರಾದ ಗ್ಲಕ್ ಅವರನ್ನಆತ್ಮಚರಿತ್ರೆಯ ಕವಿ ಎಂದು ಬಣ್ಣಿಸಲಾಗುತ್ತದೆ. ಪುರಾಣ, ಇತಿಹಾಸ ಅಥವಾ ಪ್ರಕೃತಿಯನ್ನು ಮತ್ತು ವೈಯಕ್ತಿಕ ಅನುಭವಗಳನ್ನು ನೀಡುವ ಅವರ ಕೃತಿಗಳು ಭಾವನಾತ್ಮಕ ತೀವ್ರತೆಗೆ ಹೆಸರುವಾಸಿಯಾಗಿವೆ.

ಗ್ಲಕ್ ನ್ಯೂಯಾರ್ಕ್ ನಗರದಲ್ಲಿ ಜನಿಸಿ, ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡಿನಲ್ಲಿ ಬೆಳೆದರು. ಪ್ರೌಢಶಾಲೆಯಲ್ಲಿದ್ದಾಗ ಅವರು ಅನೋರೆಕ್ಸಿಯಾ ನರ್ವೋಸಾದಿಂದ ಬಳಲುತ್ತಿದ್ದರು. ಮುಂದೆ ಸಾರಾ ಲಾರೆನ್ಸ್ ಕಾಲೇಜು ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ತರಗತಿಗಳನ್ನು ತೆಗೆದುಕೊಂಡರು ಆದರೆ ಪದವಿ ಪಡೆಯಲಿಲ್ಲ. ಲೇಖಕಿಯಾಗಿ ಅವರ ವೃತ್ತಿಜೀವನದ ಜೊತೆಗೆ, ಅವರು ಹಲವಾರು ಸಂಸ್ಥೆಗಳಲ್ಲಿ ಕವನ ಶಿಕ್ಷಕರಾಗಿ ಅಕಾಡೆಮಿಕ್ ವೃತ್ತಿಜೀವನವನ್ನು ನಡೆಸಿದ್ದಾರೆ.

ಗ್ಲಕ್ ಅವರು ತಮ್ಮ ಕೃತಿಯಲ್ಲಿ, ಆಘಾತ, ಬಯಕೆ ಮತ್ತು ಪ್ರಕೃತಿಯ ಪ್ರಕಾಶಿಸುವ ಅಂಶಗಳನ್ನು ಕೇಂದ್ರೀಕರಿಸಿದ್ದಾರೆ. ವಿಶಾಲ ವಿಷಯಗಳನ್ನು ಅನ್ವೇಷಿಸುವಲ್ಲಿ, ಅವರ ಕಾವ್ಯವು ದುಃಖ ಮತ್ತು ಪ್ರತ್ಯೇಕತೆಯ ಸ್ಪಷ್ಟ ಅಭಿವ್ಯಕ್ತಿಗಳಿಗೆ ಹೆಸರುವಾಸಿಯಾಗಿದೆ. ಅವರ ಕವಿತೆಗಳಲ್ಲಿ, ಆತ್ಮಚರಿತ್ರೆ ಮತ್ತು ಶಾಸ್ತ್ರೀಯ ಪುರಾಣಗಳ ನಡುವಿನ ಕಾವ್ಯಾತ್ಮಕ ವ್ಯಕ್ತಿತ್ವ ಮತ್ತು ಸಂಬಂಧವನ್ನು ವಿದ್ವಾಂಸರು ಗುರುತಿಸಿದ್ದಾರೆ.

ಪ್ರಸ್ತುತ, ಗ್ಲಕ್ ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದು, ಮೆಸಾಚ್ಯುಸೆಟ್ಸ್ ಕೇಂಬ್ರಿಜ್ನಲ್ಲಿ ವಾಸವಾಗಿದ್ದಾರೆ.

ಹಲವು ವರ್ಷಗಳ ವಿವಾದ ಮತ್ತು ಹಗರಣದ ನಂತರ ವರ್ಷ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಲೈಂಗಿಕ ದೌರ್ಜನ್ಯ ಆರೋಪಗಳು ವಿಜೇತರನ್ನು ಆಯ್ಕೆ ಮಾಡುವ ರಹಸ್ಯ ಸಂಸ್ಥೆಯಾದ ಸ್ವೀಡಿಷ್ ಅಕಾಡೆಮಿಯನ್ನು ಬೆಚ್ಚಿಬೀಳಿಸಿದ ನಂತರ ೨೦೧೮ ರಲ್ಲಿ ಪ್ರಶಸ್ತಿಯನ್ನು ಮುಂದೂಡಲಾಗಿತ್ತು. ಮತ್ತು ಇದು ಸದಸ್ಯರ ಸಾಮೂಹಿಕ ನಿರ್ಗಮನಕ್ಕೆ ನಾಂದಿ ಹಾಡಿತ್ತು.

ಕಳೆದ ವರ್ಷದ ಆಸ್ಟ್ರಿಯಾದ ಕಾದಂಬರಿಕಾರ ಪೀಟರ್ ಹ್ಯಾಂಡ್ಕೆ ಅವರ ಟೀಕೆಗಳ ಮಹಾಪೂರವನ್ನೇ ಹರಿಯಬಿಟ್ಟಿದ್ದರು. ಬಾಲ್ಕನ್ ಯುದ್ಧಗಳಲ್ಲಿ ಸರ್ಬಿಯಾದ ನಾಯಕ ಸ್ಲೊಬೊಡಾನ್ ಮಿಲೋಸೆವಿಕ್ ಅವರನ್ನು ಬೆಂಬಲಿಸಿದ ಮತ್ತು ಮತ್ತು ಆತನ ಸೇನೆಯ ದೌರ್ಜನ್ಯವನ್ನು ಗೌಣಗೊಳಿಸುವಲ್ಲಿ ಹೆಸರುವಾಸಿಯಾದ ಬರಹಗಾರನಿಗೆ ಹೇಗೆ ಪ್ರಶಸ್ತಿ ನೀಡಲಾಯಿತು ಎಂದು ಹಲವರು ಅಚ್ಚರಿ ಪಟ್ಟಿದ್ದರು.

ಆದರೆ, ಅಕಾಡೆಮಿ ಹ್ಯಾಂಡ್ಕೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ತನ್ನ ಕ್ರಮವನ್ನು ಸಮರ್ಥಿಸಿ, ಕೇವಲ ಸಾಹಿತ್ಯಿಕ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಪಾದಿಸಿತ್ತು.

ಶಾಂತಿ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿನ ಮಹೋನ್ನತ ಕೆಲಸಕ್ಕಾಗಿ ವರ್ಷದ ನೊಬೆಲ್ ಪ್ರಶಸ್ತಿಗಳು ಇನ್ನೂ ಬರಬೇಕಾಗಿವೆ.

Saturday, December 21, 2019

ಹಿರಿಯ ಸಾಹಿತಿ, ಚಿಂತಕ ಎಲ್.ಎಸ್. ಶೇಷಗಿರಿ ರಾವ್ ನಿಧನ

ಹಿರಿಯ ಸಾಹಿತಿ, ಚಿಂತಕ ಎಲ್.ಎಸ್. ಶೇಷಗಿರಿ ರಾವ್ ನಿಧನ
ಬೆಂಗಳೂರು:  ಹಿರಿಯ ಸಾಹಿತಿ ಎಲ್.ಎಸ್. ಶೇಷಗಿರಿರಾವ್ ಅವರು 2019 ಡಿಸೆಂಬರ್ 20ರ ಶುಕ್ರವಾರ ನಿಧನರಾದರು. ಅವರಿಗೆ ೯೫ ವರ್ಷ ವಯಸ್ಸಾಗಿತ್ತು.

ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಹೊಂದಿದ್ದ ವಾಮನರೂಪಿ ತ್ರಿವಿಕ್ರಮ ಸಾಹಿತಿ ಎಲ್.ಎಸ್.ಶೇಷಗಿರಿ ರಾವ್ ಎಲ್ಲೆಸೆಸ್ ಎಂದೇ ಖ್ಯಾತರಾಗಿದ್ದರು.

ತಂದೆ ಲಕ್ಷ್ಮೇಶ್ವರ ಸ್ವಾಮಿರಾವ್- ತಾಯಿ ಕಮಲಾಬಾಯಿ. ೧೯೨೫ರ ಫೆಬ್ರುವರಿ ೧೬ರಂದು ಜನಿಸಿದ ಎಲ್ಲೆಸೆಸ್ ಬೆಂಗಳೂರು, ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ನಾಗಪುರ ವಿ.ವಿಯ ಇಂಗ್ಲಿಷ್ ಎಂ.ಎ. ಪದವೀಧರರಾಗಿದ್ದರು.

ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ, ಬೆಂಗಳೂರು ವಿವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ ಎಲ್ಲೆಸ್ಸೆಸ್ ೧೯೪೭-೫೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ನ್ಯಾಷನಲ್ ಬುಕ್ ಟ್ರಸ್ಟ್ ಸೇರಿದಂತೆ ಹಲವು ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದರು..

೨೦೦೭ರಲ್ಲಿ ಉಡುಪಿಯಲ್ಲಿ ನಡೆದ ೭೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ,  ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಬಿಎಂಶ್ರೀ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.

ಕೃತಿಗಳು: ಇಂಗ್ಲಿಷ್ ಸಾಹಿತ್ಯದ ಮೇರು ಕೃತಿಗಳನ್ನು ತಿಳಿಕನ್ನಡಕ್ಕೆ ಅನುವಾದಿಸಿದ್ದು ಶೇಷಗಿರಿರಾವ್ ಅವರ ಹೆಗ್ಗಳಿಕೆ. ಆಲಿವರ್ ಗೋಲ್ಡ್ಸ್ಮಿತ್, ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ, ಪಾಶ್ಚಾತ್ಯ ಸಾಹಿತ್ಯ ವಿಹಾರ, ಸಾಹಿತ್ಯ ವಿಶ್ಲೇಷಣೆ, ಇಂಗ್ಲಿಷ್ ಸಾಹಿತ್ಯ ಚರಿತ್ರೆ ಇತ್ಯಾದಿ ಕೃತಿಗಳು ಅವರ ಹೆಸರನ್ನು ಸಾಹಿತ್ಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನೆಲೆಗೊಳಿಸಿದವು.ಸಾಮಾನ್ಯ ಮನುಷ್ಯ (ಕಾದಂಬರಿ), ಇದು ಜೀವನ, ಜಗದ ಜಾತ್ರೆಯಲ್ಲಿ, ಮುಟ್ಟಿದ ಗುರಿ ಮತ್ತು ಇತರ ಕಥೆಗಳು, ಮುಯ್ಯಿ ಎಂಬ ಕಥಾಸಂಕಲನಗಳನ್ನು ರಚಿಸಿದ್ದರು.. ಹಂಪಿ ವಿಶ್ವವಿದ್ಯಾಲಯಕ್ಕೆ ಇಂಗ್ಲಿಷ್-ಕನ್ನಡ, ಕನ್ನಡ- ಕನ್ನಡ ನಿಘಂಟನ್ನು ರಚಿಸಿಕೊಟ್ಟಿದ್ದರು.

ಎಲ್.ಎಸ್.ಶೇಷಗಿರಿರಾವ್ ಅವರ ‘ಮುಯ್ಯಿ ಕಥೆ ಆಧರಿಸಿದ ಚಲನಚಿತ್ರ ೧೯೭೮ರಲ್ಲಿ ತೆರೆ ಕಂಡಿತ್ತು. ನಟ ಲೋಕೇಶ್ ನಾಯಕರಾಗಿ ಅಭಿನಯಿಸಿದ್ದರು.

Friday, July 29, 2016

Literary giant, crusader for tribal rights Mahasweta Devi dead

Literary giant, crusader for tribal rights Mahasweta Devi dead

Kolkata: Eminent activist-writer, honoured with Padma Vibhushan and Magsaysay Award for her decades of crusade for the rights of tribals and the marginalised, Mahasweta Devi died at a city nursing home on Thursday, 28th July 2016 following prolonged old-age complications. She was 90.
"She passed away at 3.16 p.m. following a cardiac arrest and multi-organ failure," a doctor attending on her confirmed. Mahasweta Devi is survived by her daughter-in-law and grandchild. Her son pre-deceased her two years back.
In a six-decade long literary career, she authored over 120 books, comprising 20 collections of short stories and around 100 novels, and contributed innumerable articles and columns to newspapers and magazines, a large number of them woven around tribal life.
Adopting a simple style laced with colloquial words and expressions, Mahasweta blended oral histories with contemporary events to portray the sufferings of the tribals in the hands of upper-caste landlords, money lenders and government servants.
The novel "Aranyer Adhikar" (The Occupation of the Forest), dwelling on Birsa Munda's revolt against the British, fetched Mahasweta Devi the Sahitya Akademi Award in 1979. "Choti Munda evam Tar Tir" (Choti Munda and His Arrow), "Bashai Tudu", "Titu Mir", are among other masterpieces.
Another famous novel published in 1975 -- "Hajar Churashir Maa" (Mother of 1,084), inspired by Maxim Gorky's "Mother" -- has the backdrop of the Maoist movement.
From the late '70s, she began to intervene directly and championed the cause of two tribal groups -- the Lodhas of erstwhile Midnapur district and the Kheria Sabars of Purulia -- who were among those notified by the British in 1871 as "criminal tribes".
Mahasweta Devi later came to be revered as "The Mother of the Sabars". Simultaneously, she lent her weight to the tribal struggles in various other states.
People from across the fields of art, culture, cinema and politics paid tribute to her.
Prime Minister Narendra Modi described her as "a voice of compassion, equality and justice", while Congress President Sonia Gandhi described Mahasweta Devi as "India's conscience keeper, whose words echoed her inner voice, representing the voiceless and faceless countrymen".

 West Bengal Chief Minister Mamata Banerjee announced that the Jnanpith winner would be given a state funeral on Friday.

Advertisement