Showing posts with label ಸುಪ್ರೀಂಕೋರ್ಟ್. Show all posts
Showing posts with label ಸುಪ್ರೀಂಕೋರ್ಟ್. Show all posts

Wednesday, July 27, 2022

ಹಣ ವರ್ಗಾವಣೆ ತಡೆ ಕಾನೂನು: ಬಂಧನ ಅಧಿಕಾರಕ್ಕೆ ಸುಪ್ರೀಂ ಅಸ್ತು

 ಹಣ ವರ್ಗಾವಣೆ ತಡೆ ಕಾನೂನು: ಬಂಧನ ಅಧಿಕಾರಕ್ಕೆ ಸುಪ್ರೀಂ ಅಸ್ತು

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ (ಪ್ರಿವೆಂಷನ್‌ ಆಫ್‌ ಮನಿ ಲಾಂಡರಿಂಗ್‌ ಆಕ್ಟ್‌/ ಪಿಎಂಎಲ್‌ ಎ)  ಬಂಧಿಸಲು ಜಾರಿ ನಿರ್ದೇಶನಾಲಯಕ್ಕೆ ಇರುವ ಅಧಿಕಾರವನ್ನು ಸುಪ್ರೀಂ ಕೋರ್ಟ್ 2022 ಜುಲೈ 27ರ ಬುಧವಾರ ಎತ್ತಿ ಹಿಡಿಯಿತು.

ಕಾಂಗ್ರೆಸ್ ಸಂಸತ್‌ ಸದಸ್ಯ ಕಾರ್ತಿ ಚಿದಂಬರಂ ಅವರು ಸೇರಿದಂತೆ ಪಿಎಂಎಲ್‌ಎ ಅಡಿಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಎದುರಿಸುತ್ತಿರುವ ಹಲವಾರು ವ್ಯಕ್ತಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ತೀರ್ಪು ನೀಡಿತು.

ಸಂವಿಧಾನವು 20 ಮತ್ತು 21ನೇ ವಿಧಿಗಳ ಅಡಿಯಲ್ಲಿ ಒದಗಿಸಿರುವ ಸ್ವಾತಂತ್ರ್ಯದ ಹಕ್ಕು ಮತ್ತು ಸ್ವಯಂ-ಅಪರಾಧದ ವಿರುದ್ಧದ ಹಕ್ಕುಗಳನ್ನು ಖಾತರಿಯನ್ನು ಹಣ ವರ್ಗಾವಣೆ ತಡೆ ಕಾಯ್ದೆಯು ಉಲ್ಲಂಘಿಸಿತ್ತದೆ ಎಂದು ಕಾರ್ತಿ ಚಿದಂಬರಂ ಮತ್ತು ಇತರರ ಅರ್ಜಿಗಳು ಆಪಾದಿಸಿದ್ದವು.

ಯಾವುದೇ ಅಪರಾಧವನ್ನು ಹಣ ವರ್ಗಾವಣೆ ಅಪರಾಧವನ್ನಾಗಿ ಪರಿವರ್ತಿಸಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ನೀಡಲಾದ ಅನಿಯಂತ್ರಿತ ಅಧಿಕಾರವನ್ನೂ ಅವರು ಪ್ರಶ್ನಿಸಿದ್ದರು.

Tuesday, December 14, 2021

ಚಾರ್ ಧಾಮ್ ಯೋಜನೆ: ರಸ್ತೆಗಳ ವಿಸ್ತರಣೆಗೆ ಸುಪ್ರೀಂ ಅಸ್ತು

 ಚಾರ್ ಧಾಮ್ ಯೋಜನೆ: ರಸ್ತೆಗಳ ವಿಸ್ತರಣೆಗೆ ಸುಪ್ರೀಂ ಅಸ್ತು

ನವದೆಹಲಿ: ಕೇದಾರನಾಥ, ಬದರಿನಾಥ, ಯಮುನೋತ್ರಿ ಮತ್ತು ಗಂಗೋತ್ರಿಗಳನ್ನು ಸಂಪರ್ಕಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯಡಿ ರಸ್ತೆಗಳ ವಿಸ್ತರಣೆಗೆ 2021 ಡಿಸೆಂಬರ್ 14ರ ಮಂಗಳವಾರ ಸುಪ್ರೀಂ ಕೋರ್ಟ್  ಒಪ್ಪಿಗೆ ನೀಡಿತು.

ನ್ಯಾಯಾಲಯವು ಸೇನೆಯ ಅವಶ್ಯಕತೆಗಳ ಬಗ್ಗೆ ಮರುಊಹೆ ಮಾಡಲು ಎಂದು  ನ್ಯಾಯಮೂರ್ತಿ ಗಳಾದ ಡಿವೈ ಚಂದ್ರಚೂಡ್, ಸೂರ್ಯಕಾಂತ್ ಮತ್ತು ವಿಕ್ರಮ್ ನಾಥ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಹೇಳಿತು.

ಯೋಜನಾ ಪ್ರದೇಶದಲ್ಲಿ ವಿಶಾಲವಾದ ರಸ್ತೆಗಳು  ಆಯಕಟ್ಟಿನ ಪ್ರಾಮುಖ್ಯತೆಯನ್ನು ಹೊಂದಿವೆ ಎಂಬ ಕೇಂದ್ರದ ವಾದಗಳನ್ನು ಪೀಠವು ಒಪ್ಪಿತು..

'ಚಾರ್ ಧಾಮ್' ಹೆದ್ದಾರಿ ಯೋಜನೆಯು ಉತ್ತರಾಖಂಡದ ನಾಲ್ಕು ಪವಿತ್ರ ಸ್ಥಳಗಳನ್ನು 900-ಕಿಮೀ ಸರ್ವಋತು ರಸ್ತೆಗಳ ಮೂಲಕ ಸಂಪರ್ಕಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಹಂತಗಳಲ್ಲಿ ಮುಖಾಮುಖಿಯಾಗುತ್ತಿರುವ ಭಾರತ-ಚೀನಾ ಗಡಿಯಲ್ಲಿ ಸಶಸ್ತ್ರ ಪಡೆಗಳ ಕ್ಷಿಪ್ರ ನಿಯೋಜನೆ/ಚಲನೆಗೆ ಇದು ಅನುಕೂಲವಾಗಲಿದೆ ಎಂದು ಕೇಂದ್ರವು ಪ್ರತಿಪಾದಿಸಿದೆ.

 ಅಂದಾಜು 12,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಡಿಯಲ್ಲಿ ಉತ್ತರಖಂಡದಲ್ಲಿ ನಿರ್ಮಿಸಲಾಗುವ 1384 ಕೋಟಿ ರೂಪಾಯಿಗಳ ಸುಸಜ್ಜಿತ ಸುರಂಗ ಮಾರ್ಗವೂ ಬರುತ್ತದೆ.  ಈ ಸುರಂಗವು ಧರಸು ಮತ್ತು ಯಮುನೋತ್ರಿ ನಡುವಣ ಪಯಣವನ್ನು ಸುಮಾರು 20 ಕಿಮೀಗಳಷ್ಟು ಇಳಿಸುತ್ತದೆ ಮತ್ತು ಪಯಣದ ಅವಧಿಯನ್ನು ಸುಮಾರು 1 ಗಂಟೆಯಷ್ಟು ಕಡಿತಗೊಳಿಸುತ್ತದೆ.

ಗಡಿ ಭದ್ರತಾ ಕಾಳಜಿಗಳನ್ನು ಪೂರೈಸುವ ಅಗತ್ಯವಿದೆ ಮತ್ತು ಇತ್ತೀಚಿನ ದಿನಗಳಲ್ಲಿ "ರಾಷ್ಟ್ರೀಯ ಭದ್ರತೆಗೆ ಗಂಭೀರ ಸವಾಲುಗಳು” ಎದುರಾಗುತ್ತಿದ್ದು, ಸೈನ್ಯ ಮತ್ತು ಸಲಕರಣೆಗಳ ಚಲನೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್  ಹೇಳಿತು.

ರಕ್ಷಣಾ ಸಚಿವಾಲಯವು ವಿಶೇಷ ಸಂಸ್ಥೆಯಾಗಿದ್ದು, ಅದರ ಕಾರ್ಯಾಚರಣೆಯ ಅಗತ್ಯತೆಗಳನ್ನು ನಿರ್ಧರಿಸಬಹುದು ಎಂದು ಪೀಠ ಹೇಳಿತು.

ಗಡಿಗಳನ್ನು ರಕ್ಷಿಸಲು ಸಶಸ್ತ್ರ ಪಡೆಗಳ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸಬೇಕು ಮತ್ತು ಆಯಕಟ್ಟಿನ ಪ್ರಾಮುಖ್ಯತೆಯನ್ನು ಹೊಂದಿರುವ ಹೆದ್ದಾರಿಗಳನ್ನು ಇತರ ಗುಡ್ಡಗಾಡು ಪ್ರದೇಶಗಳಲ್ಲಿರುವಂತೆ ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿತು.

ಆದಾಗ್ಯೂ, ನ್ಯಾಯಾಲಯವು ಅರ್ಜಿದಾರರ ಪರಿಸರ ಕಾಳಜಿಯನ್ನು ಒಪ್ಪಿಕೊಂಡಿತು ಮತ್ತು ಉನ್ನತ ನ್ಯಾಯಾಲಯದ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಉಸ್ತುವಾರಿ ಸಮಿತಿಯನ್ನು ರಚಿಸುತ್ತಿದೆ ಎಂದು ತಿಳಿಸಿತು..

ಒಟ್ಟು  12,000 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 27 ಡಿಸೆಂಬರ್ 2016 ರಂದು ಡೆಹ್ರಾಡೂನ್ ಪರೇಡ್ ಮೈದಾನದಲ್ಲಿ ನೆರವೇರಿಸಿದ್ದರು.

ಸುದ್ದಿಯ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್  ಮಾಡಿರಿ:


Thursday, August 27, 2020

ಪತಂಜಲಿಯ ಕೊರೊನಿಲ್ ಟ್ರೇಡ್ ಮಾರ್ಕ್ ನಿರ್ಬಂಧಕ್ಕೆ ಸುಪ್ರೀಂ ನಕಾರ

 ಪತಂಜಲಿಯ ಕೊರೊನಿಲ್ ಟ್ರೇಡ್ ಮಾರ್ಕ್
ನಿರ್ಬಂಧಕ್ಕೆ ಸುಪ್ರೀಂ ನಕಾರ


ನವದೆಹಲಿ: ಕೋವಿಡ್ -೧೯ ಸಾಂಕ್ರಾಮಿಕ ಸಮಯದಲ್ಲಿ ಬಿಡುಗಡೆ ಮಾಡಲಾದ ಮತ್ತು ಮಾರಾಟವಾಗುತ್ತಿರುವ ಯೋಗಿ ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಆಯುರ್ವೇದ ಸಂಸ್ಥೆಯ ರೋಗ ನಿರೋಧಕ ಶಕ್ತಿ ವರ್ಧಕಕೊರೋನಿಲ್ಕುರಿತ ಟ್ರೇಡ್ ಮಾರ್ಕ್ ವಿವಾದವನ್ನು ಸುಪ್ರೀಂಕೋರ್ಟ್ 2020 ಆಗಸ್ಟ್ 27ರ ಗುರುವಾರ ಬಗೆ ಹರಿಸಿದ್ದು, ಟ್ರೇಡ್ ಮಾರ್ಕ್ (ಮಾರಾಟ ಗುರುತು) ಬಳಸದಂತೆ ಸಂಸ್ಥೆಯನ್ನು ನಿರ್ಬಂಧಿಸಲು ನಿರಾಕರಿಸಿದೆ.

ಟ್ರೇಡ್ಮಾರ್ಕ್ ವಿವಾದಕ್ಕೆ ಸಂಬಂಧಿಸಿದ ಪ್ರಕರಣವು ಬ್ರ್ಯಾಂಡಿಂಗ್ ಅರ್ಹತೆಗಳಿಗೆ ಅಥವಾಕೊರೊನಿಲ್ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಉತ್ಪನ್ನಗಳ ಸೂತ್ರೀಕರಣದ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಬೋಬ್ಡೆ ನೇತೃತ್ವದ ನ್ಯಾಯಪೀಠವು ಮದ್ರಾಸ್ ಹೈಕೋರ್ಟಿನ  ವಿಭಾಗೀಯ ಪೀಠವು ನೀಡಿದ ಮಧ್ಯಂತರ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.

ಮದ್ರಾಸ್ ಹೈಕೋರ್ಟಿನ ವಿಭಾಗೀಯ ಪೀಠವು ಆಗಸ್ಟ್ ೧೪ರಂದು ಏಕಸದಸ್ಯ ಪೀಠವು ನೀಡಿದ್ದ ಹಿಂದಿನ ಆದೇಶವನ್ನು ತಡೆ ಹಿಡಿಯುವ ಮೂಲಕ ಪತಂಜಲಿ ಸಂಸ್ಥೆಗೆ ಮಧ್ಯಂತರ ಪರಿಹಾರವನ್ನು ಒದಗಿಸಿತ್ತು.

ಏಕ ಸದಸ್ಯ ಪೀಠವು ಆಗಸ್ಟ್ ರಂದುಕೊರೊನಿಲ್ಎಂಬ ಟ್ರೇಡ್ಮಾರ್ಕ್ ಬಳಸದಂತೆ ಪತಂಜಲಿ ಸಂಸ್ಥೆಯನ್ನು ನಿರ್ಬಂಧಿಸಿತ್ತು. ಮತ್ತು ಅರುದ್ರ ಎಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆ ದಾಖಲಿಸಿದ್ದ ಟ್ರೇಡ್ಮಾರ್ಕ್ ಉಲ್ಲಂಘನೆ ಖಟ್ಲೆಯಲ್ಲಿ ಪತಂಜಲಿ ಸಂಸ್ಥೆಯ ಮೇಲೆ ೧೦ ಲಕ್ಷ ರೂಪಾಯಿಗಳ ದಂಡವನ್ನೂ ವಿಧಿಸಿತ್ತು.

" ಕೋವಿಡ್ ಕಾಲದಲ್ಲಿ, ನಾವು ಕೊರೊನಿಲ್ ಪದದ ಬಳಕೆಯನ್ನು ತಡೆದರೆ, ಅದು (ಪತಂಜಲಿಯ) ಉತ್ಪನ್ನಕ್ಕೆ ಭಯಾನಕವಾಗಿರುತ್ತದೆಎಂದು ಸಿಜೆಐ ಬಾಬ್ಡೆ ಅವರು ವಿಭಾಗೀಯ ಪೀಠದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಅರುದ್ರ ಸಲ್ಲಿಸಿದ್ದ ಮೇಲ್ಮನವಿ ಗುರುವಾರ ವಿಚಾರಣೆಗೆ ಬಂದಾಗ ಹೇಳಿದರು.

ಸುಪ್ರೀಂಕೋರ್ಟ್ ಪೀಠವು ಅರುದ್ರ  ಅರ್ಜಿಯನ್ನು ತಳ್ಳಿಹಾಕಿತು ಮತ್ತು ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ವಿಷಯವನ್ನು ಮುಂದುವರೆಸಲು ಸಂಸ್ಥೆಗೆ ನಿರ್ದೇಶಿಸಿತು. ಮದ್ರಾಸ್ ಹೈಕೋರ್ಟಿನ ವಿಭಾಗೀಯ ಪೀಠವು ಸೆಪ್ಟೆಂಬರಿನಲ್ಲಿ ವಿಷಯವನ್ನು ಆಲಿಸಲಿದೆ.

ಕೈಗಾರಿಕಾ ಶುಚಿಗೊಳಿಸುವಿಕೆ ಮತ್ತು ರಾಸಾಯನಿಕ ಸಿದ್ಧತೆಗಳಿಗಾಗಿ ಬಳಸುವ ಉತ್ಪನ್ನಕ್ಕಾಗಿ ೧೯೯೩ ರಿಂದ ಟ್ರೇಡ್ಮಾರ್ಕ್ಕೊರೊನಿಲ್ತಮ್ಮ ಒಡೆತನದಲ್ಲಿದೆ ಎಂದು ಅರುದ್ರಾ ಎಂಜಿನಿಯರ್ಸ್ ಪ್ರತಿಪಾದಿಸಿದೆ.

ಕೋವಿಡ್- ೧೯ ಸಾಂಕ್ರಾಮಿಕವನ್ನು ಗುಣಪಡಿಸುತ್ತದೆ ಎಂಬುದಾಗಿ ಹೇಳುವ ಮೂಲಕ ರೋಗದ ಬಗೆಗೆ ಸಾರ್ವಜನಿಕರಲ್ಲಿ ಇದ್ದ ಭೀತಿಯನ್ನು ಸಂಸ್ಥೆಯು ತನ್ನ ಲಾಭಕ್ಕೆ ಬಳಸಿಕೊಂಡಿದೆ ಎಂದು ಏಕ ಸದಸ್ಯ ಪೀಠವು ಹೇಳಿತ್ತು.

ಪ್ರತಿವಾದಿಗಳು (ಪತಂಜಲಿ) ೧೦,೦೦೦ ಕೋಟಿ ಕಂಪನಿ ಎಂದು ಪದೇ ಪದೇ ಪ್ರತಿಪಾದಿಸಿದ್ದಾರೆ. ಆದಾಗ್ಯೂ, ವಾಸ್ತವವಾಗಿ ಕೆಮ್ಮು, ಶೀತ ಮತ್ತು ಜ್ವರದ ವಿರುದ್ಧ ರೋಗ ನಿರೋಧಕ ಶಕ್ತಿ ನೀಡುವ ಕೊರೋನಿಲ್ ಮಾತ್ರೆಯನ್ನು ಕೊರೋನಾವೈರಸ್ಸಿಗೆ ಮದ್ದು ಎಂಬುದಾಗಿ ಪ್ರತಿಪಾದಿಸುವ ಮೂಲಕ ಸಾಂಕ್ರಾಮಿಕದ ಬಗೆಗೆ ಸಾರ್ವಜನಿಕರಲ್ಲಿದ್ದ ಭಯವನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡಿದ್ದಾರೆಎಂದು ಹೇಳಿದ ಏಕ ಸದಸ್ಯ ಪೀಠವು ಸಂಸ್ಥೆಗೆ ೧೦ ಲಕ್ಷ ರೂಪಾಯಿಗಳ ದಂಡ ವಿಧಿಸಿತ್ತು.

Advertisement