Showing posts with label ವಿಡಿಯೋ. Show all posts
Showing posts with label ವಿಡಿಯೋ. Show all posts

Friday, September 18, 2026

ಗಣೇಶೋತ್ಸವ ೨೦೨೬

 ಗಣೇಶೋತ್ಸವ ೨೦೨೬

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ೨೦೨೬ ಸೆಪ್ಟೆಂಬರ್‌ ೧೮ರ ಶುಕ್ರವಾರ ಬೆಳಗ್ಗೆ ಬಡಾವಣೆಯ ೨೬ನೇ ಹಾಗೂ ದೇವಸ್ಥಾನದ ಮೂರನೇ ಗಣೇಶೋತ್ಸವ ವಿಧಿವತ್ತಾಗಿ ಆರಂಭವಾಯಿತು.

ಮೂರು ದಿನಗಳ ನಡೆಯುವ ಈ ಗಣೇಶೋತ್ಸವದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳು, ಮಹಿಳೆಯರು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ ಮಹಿಳೆಯರು ಮತ್ತು ಪುರುಷರಿಗೆ ಬಡಾವಣೆಯ ನಿವಾಸಿಗಳು ಹಾಗೂ ಮಹಿಳಾ ತಂಡದ ಸದಸ್ಯೆಯರಾದ ಹೇಮಾ ಮತ್ತು ದೇವಕಿ ಅವರು ಆಟೋಟಗಳನ್ನು ನಡೆಸಿಕೊಡಲಿದ್ದು, ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ನಾಯಕ ಉಮೇಶ ಕೆ ಬಹುಮಾನ ಪ್ರಾಯೋಜನೆ ಮಾಡಿದ್ದಾರೆ.

ಸಂಜೆ ೬ ಗಂಟೆಗೆ ವಿದುಷಿ ಶ್ರೀಮತಿ ಸುಮಾ ಶ್ರೀಧರ್‌ ನೇತೃತ್ವದಲ್ಲಿ ನೂಪುರ ಕಲಾನಿಕೇತನ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಪ್ರದೀಪ ಶಾಸ್ತ್ರಿ ಮತ್ತು ಕುಟುಂಬದವರು ಪ್ರಾಯೋಜಿಸಿದ್ದಾರೆ.

ಸೆಪ್ಟೆಂಬರ್‌ ೧೯ರ ಶನಿವಾರ ಬೆಳಗ್ಗೆ ೧೦ ಗಂಟೆಗೆ ದೇವಸ್ಥಾನದ ಅರ್ಚಕ ನಾಗೇಂದ್ರ ಭಟ್‌ ನೇತೃತ್ವದಲ್ಲಿ ಗಣಹವನ ಕಾರ್ಯಕ್ರಮ, ಮಧ್ಯಾಹ್ನ ೨ ಗಂಟೆಗೆ ಶಬನಮ್‌ ನೇತೃತ್ವದಲ್ಲಿ ಬಡಾವಣೆಯ ಮಹಿಳಾ ತಂಡದಿಂದ ಮಕ್ಕಳು, ಮಹಿಳೆಯರು, ಪುರುಷರಿಗೆ ಆಟೋಟ ಸ್ಪರ್ಧೆ ನಡೆಯಲಿದ್ದು ಯುವ ಮುಖಂಡ ಶಿವಕುಮಾರ್‌ ಬಹುಮಾನ ಪ್ರಾಯೋಜನೆ ಮಾಡಿದ್ದಾರೆ. ಸಾಯಂಕಾಲ ೬.೩೦ ಗಂಟೆಗೆ ದೇವಸ್ಥಾನದಲ್ಲೇ ಯಕ್ಷಗಾನ ಕಲಿಯುತ್ತಿರುವ ಮಕ್ಕಳು, ಮಹಿಳೆಯರಿಂದ ʼಲವ-ಕುಶ ಕಾಳಗʼ ಯಕ್ಷಗಾನ. ಯಕ್ಷಗುರು ಉಮೇಶರಾಜ್‌ ಮಂದಾರ್ತಿ ನೇತೃತ್ವದ ಯಕ್ಷ ಕಲಾ ಕೌಸ್ತುಭ ತಂಡ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದೆ.

ಸೆಪ್ಟೆಂಬರ್‌ ೨೦ರ ಭಾನುವಾರ ಬೆಳಗ್ಗೆ ೯.೩೦ಗಂಟೆಗೆ ಗಣಪತಿ ಉಪನಿಷತ್‌ ಸಹಿತ ಪೂಜೆ, ಸಂಜೆ ೪ ಗಂಟೆಗೆ ಎಂಸಿಎಚ್‌ ಬಡಾವಣೆಯ ಭಕ್ತಿ ಸಂಗಮ ಭಜನಾ ಮಂಡಳಿಯಿಂದ ಭಜನೆ, ಸಂಜೆ ೬ಕ್ಕೆ ಬಾಣಸವಾಡಿಯ ಶ್ರೀ ಧರ್ಮ ಶಾಸ್ತಾ ವಾದ್ಯ ಕಲಾಕೇಂದ್ರ ತಂಡದಿಂದ ಕೇರಳ ಚೆಂಡೆವಾದನ ನಡೆಯಲಿದೆ. ಬಳಿಕ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಗಣಪನ ಶೋಭಾಯಾತ್ರೆಯೊಂದಿಗೆ ಗಣಪತಿ ವಿಸರ್ಜನೆ ನಡೆಯಲಿದೆ. ಶ್ರೀ ಸುಗುಣನ್‌ ಮತ್ತು ಬಡಾವಣೆಯ ಮಲಯಾಳಿ ಮಿತ್ರರು ಕೇರಳ ಚೆಂಡೆಯನ್ನು ಪ್ರಾಯೋಜಿಸಿದ್ದಾರೆ.

ಗಣೇಶೋತ್ಸವಕ್ಕೆ ಭಕ್ತರು ದೇಣಿಗೆಯೊಂದಿಗೆ ಸಹಕರಿಸಿದ್ದಲ್ಲದೆ, ಶ್ರೀ ಮುನಿರಾಜು ಮತ್ತು ಕುಟುಂಬ, ಶ್ರೀ ರಾಜೇಶ್‌ ಮತ್ತು ಕುಟುಂಬ, ಹೇಮಾವತಿ, ಶಾರದಮ್ಮ, ದೇವಕಿ, ಶಬನಮ್ ಮತ್ತು ಲತಾ  ನೇತೃತ್ವದ ಮಹಿಳಾ ತಂಡ, ಶ್ರೀ ಗುಣವರ್ಧನ್‌ ಶೆಟ್ಟಿ, ಲಂಡನ್ನಿನಲ್ಲಿ ಇರುವ ಅನೂಪ್‌ ಶೆಟ್ಟಿ, ಶೋಭನಾ ಶೆಟ್ಟಿ, ವಿಹಾ ಶೆಟ್ಟಿ ಮತ್ತು ಕುಟುಂಬ, ಶ್ರೀಮತಿ ಪ್ರಮೀಳಾನಾಥನ್‌, ಶ್ರೀಮತಿ ಪ್ರಭಾವತಿ, ಪ್ರಶಾಂತ್‌, ಚರಣ್‌ - ಶ್ವೇತಾ ನೇತೃತ್ವದಲ್ಲಿ ಬಡಾವಣೆಯ ೮ನೇ ಅಡ್ಡರಸ್ತೆಯ ಭಕ್ತರು, ಶ್ರೀ ನಾಗೇಶ್‌ ಮತ್ತು ಸರಸ್ವತಿ ಕುಟುಂಬ, ಮತ್ತಿತರರು ವಿವಿಧ ದಿನಗಳಂದು ಅನ್ನದಾನ, ಪ್ರಸಾದ, ಗಣಹವನ, ಟ್ರ್ಯಾಕ್ಟರ್‌ ಇತ್ಯಾದಿಗಳ ವ್ಯವಸ್ಥೆ ಮಾಡಿದ್ದರು. ಶ್ರೀ ಸಿರಾಜ್‌ ಸಾಗರ್‌  ಅವರು ವೇದಿಕೆ ಮತ್ತು ಪೆಂಡಾಲ್‌ ವ್ಯವಸ್ಥೆಯನ್ನು ಪ್ರಾಯೋಜಿಸಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಚಿತ್ರಗಳ ಸಮೀಪ ನೋಟಕ್ಕಾಗಿ ಅವುಗಳನ್ನು ಕ್ಲಿಕ್‌ ಮಾಡಿರಿ.





Monday, September 7, 2026

ಹಳೆಯ ಡೀಸೆಲ್ ಲಾರಿಗಳಿಗೆ ಹೊಸ ಜೀವ: ಐಐಟಿ-ದೆಹಲಿಯ ಕ್ರಾಂತಿಕಾರಿ ಸಂಶೋಧನೆ

 ಹಳೆಯ ಡೀಸೆಲ್ ಲಾರಿಗಳಿಗೆ ಹೊಸ ಜೀವ..

 ಐಐಟಿ-ದೆಹಲಿಯ ಕ್ರಾಂತಿಕಾರಿ ಸಂಶೋಧನೆ
ರಾಮಣ್ಣನಿಗೆ ತನ್ನ ಹಳೆಯ ಟ್ರಕ್ ಎಂದರೆ ಪ್ರಾಣಕ್ಕಿಂತ ಹೆಚ್ಚು. ಕಳೆದ ಹದಿನೈದು ವರ್ಷಗಳಿಂದ ಈ ಲಾರಿಯೇ ಆತನ ಕುಟುಂಬದ ಏಕೈಕ ಆಧಾರ. ದೇಶದ ಮೂಲೆ ಮೂಲೆಗೆ ಸರಕು ಸಾಗಿಸಿ ಬರುವ ಈ ವಾಹನವೇ ಆತನ ಬದುಕಿನ ಗಾಲಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಮಗಳು ಮತ್ತು ಬಿಎಸ್-ವಿಐ (BS-VI) ಕಟ್ಟುನಿಟ್ಟಿನ ಮಾನದಂಡಗಳು ರಾಮಣ್ಣನಿಗೆ ಕಣ್ಣೀರನ್ನು ತಂದಿದ್ದವು.

ಹಳೆಯ ಲಾರಿಯನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸಲು ಲಕ್ಷಾಂತರ ರೂಪಾಯಿ ಬೇಕು; ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸುವುದು ಬಡ ಲಾರಿ ಮಾಲೀಕನಾದ ಆತನಿಗೆ ಅಸಾಧ್ಯದ ಮಾತು. ಹಳೆಯ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸುವ ಸರ್ಕಾರದ ನಿಯಮಗಳು ರಾಮಣ್ಣನಂತಹ ಸಣ್ಣ ಮಾಲೀಕರ ನಿದ್ದೆಗೆಡಿಸಿದ್ದವು.

ಭಾರತದ ರಸ್ತೆಗಳಲ್ಲಿ 15 ವರ್ಷಗಳಿಗಿಂತ ಹಳೆಯದಾದ 4 ಕೋಟಿಗೂ ಅಧಿಕ ವಾಹನಗಳು ಸಂಚರಿಸುತ್ತಿದ್ದು, ಇದರಲ್ಲಿ ಲಕ್ಷಾಂತರ ಹಳೆಯ ಡೀಸೆಲ್ ಲಾರಿಗಳು ಮತ್ತು ಬಸ್‌ಗಳು ಸೇರಿವೆ. ಇಷ್ಟೊಂದು ದೈತ್ಯ ಸಂಖ್ಯೆಯ ವಾಹನಗಳನ್ನು ಏಕಾಏಕಿ ರಸ್ತೆಯಿಂದ ತೆಗೆದುಹಾಕುವುದು ಆರ್ಥಿಕವಾಗಿ ಹಾಗೂ ವ್ಯವಸ್ಥಾತ್ಮಕವಾಗಿ ಅಸಾಧ್ಯವಾದ ಸಂಗತಿ. ಈ ದೈತ್ಯ ಸಮಸ್ಯೆಗೆ ಐಐಟಿ-ದೆಹಲಿಯ ತಜ್ಞರು ಮ್ಯಾಜಿಕ್‌ನಂತೆ ಕೆಲಸ ಮಾಡುವ ಕಡಿಮೆ ವೆಚ್ಚದ ಪರಿಹಾರವನ್ನು ಈಗ ಕಂಡುಹಿಡಿದಿದ್ದಾರೆ.

ಐಐಟಿ-ದೆಹಲಿಯ ರಿಟ್ರೋಫಿಟ್ ತಂತ್ರಜ್ಞಾನ ಮತ್ತು ಅದರ ಕಾರ್ಯವಿಧಾನ

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪ್ರಕಟಿಸಿರುವಂತೆ, ಐಐಟಿ-ದೆಹಲಿ ಅಭಿವೃದ್ಧಿಪಡಿಸಿರುವ ಕೇವಲ ₹4,000 ರಿಂದ ₹5,000 ವೆಚ್ಚದ ರಿಟ್ರೋಫಿಟ್ ಎಮಿಷನ್ ಕಂಟ್ರೋಲ್ ಡಿವೈಸ್ (RECD) ಎಂಬ ನೂತನ ಸಾಧನವು ಹಳೆಯ ಡೀಸೆಲ್ ವಾಹನಗಳ ಕಥೆಯನ್ನೇ ಬದಲಾಯಿಸಲು ಸಜ್ಜಾಗಿದೆ.

ಇದು ವಾಹನದ ಒಳಭಾಗದ ಎಂಜಿನನ್ನು ಬದಲಾಯಿಸುವ ದೊಡ್ಡ ಪ್ರಕ್ರಿಯೆಯಲ್ಲ, ಬದಲಿಗೆ ಹೊರಸೂಸುವಿಕೆಯನ್ನು ನಿಯಂತ್ರಿಸುವ ಒಂದು ಸುಲಭ ಉಪಾಯ. ವಾಹನದ ಸೈಲೆನ್ಸರ್ ಅಥವಾ ನಿರ್ಗಮನ ವ್ಯವಸ್ಥೆಗೆ (ಎಕ್ಸಾಸ್ಟ್ ಸಿಸ್ಟಮ್‌) ಈ ವಿಶೇಷ ಸಾಧನವನ್ನು ಅಳವಡಿಸಲಾಗುತ್ತದೆ. ಇದರೊಳಗೆ ಇಂಧನ ಆಕ್ಸಿಡೀಕರಣ ವೇಗವರ್ಧಕಗಳು ಮತ್ತು ಅತ್ಯಾಧುನಿಕ ಫಿಲ್ಟರುಗಳಿರುತ್ತವೆ. ಎಂಜಿನ್ನಿನಿಂದ ಹೊರಬರುವ ವಿಷಪೂರಿತ ಹೊಗೆಯು ಈ ಸಾಧನದ ಮೂಲಕ ಹಾಯ್ದುಹೋಗುವಾಗ, ಅಲ್ಲಿರುವ ಕಣಗಳು ಮತ್ತು ಅನಿಲಗಳು ಶುದ್ಧೀಕರಿಸಲ್ಪಡುತ್ತವೆ. ಇದರಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಹೊಗೆಯು ಅತ್ಯಂತ ನುಣ್ಣಗೆ ಮತ್ತು ಮಾಲಿನ್ಯರಹಿತವಾಗಿರುತ್ತದೆ.

ವಾಹನಗಳ ರಂಗಕ್ಕೆ ಇದು ಹೊಸದು. ಆದರೆ, ಇದರ ಮೂಲ ತತ್ವವು ಭಾರತದಲ್ಲಿ ಈಗಾಗಲೇ ಡೀಸೆಲ್ ಜನರೇಟರ್‌ಗಳಲ್ಲಿ (DG Sets) ವಾಯುಮಾಲಿನ್ಯ ನಿಯಂತ್ರಿಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಅನುಮೋದನೆಯೊಂದಿಗೆ ಯಶಸ್ವಿಯಾಗಿ ಬಳಕೆಯಲ್ಲಿದೆ. ಈಗ ಇದೇ ತಂತ್ರಜ್ಞಾನವನ್ನು ಪರಿಷ್ಕರಿಸಿ ವಾಹನಗಳಿಗೂ ವಿಸ್ತರಿಸಲಾಗುತ್ತಿದೆ.

ವೆಚ್ಚದ ಅಂದಾಜು ತುಲನೆ: ಹೊಸ ವಾಹನ vs ರಿಟ್ರೋಫಿಟ್

  • ಹೊಸ ವಾಹನ ಖರೀದಿ ಮತ್ತು ಗುಜರಿ ಪ್ರಕ್ರಿಯೆ: ಒಂದು ಹಳೆಯ ವಾಣಿಜ್ಯ ಲಾರಿ ಅಥವಾ ಬಸ್ಸನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸ ವಾಹನ ಖರೀದಿಸಲು ಕನಿಷ್ಠ ₹15 ರಿಂದ ₹30 ಲಕ್ಷಕ್ಕೂ ಹೆಚ್ಚು ಬೇಕಾಗುತ್ತದೆ. ಸಾಲ ಮಾಡಿ ಬದುಕು ನಡೆಸುವ ಲಾರಿ ಮಾಲೀಕರಿಗೆ ಇದು ಅಸಾಧ್ಯವಾದ ಹೊರೆ.
  • ರಿಟ್ರೋಫಿಟ್ ತಂತ್ರಜ್ಞಾನದ ವೆಚ್ಚ: ಇದಕ್ಕೆ ತದ್ವಿರುದ್ಧವಾಗಿ, ಎಂಜಿನ್ ಬದಲಾಯಿಸದೆ ಕೇವಲ ₹4,000 ರಿಂದ ₹5,000 ವೆಚ್ಚದಲ್ಲಿ ಸೈಲೆನ್ಸರಿಗೆ ಈ ಸಾಧನವನ್ನು ಅಳವಡಿಸುವುದರಿಂದ ವಾಹನವನ್ನು ಪರಿಸರಸ್ನೇಹಿಯಾಗಿ ನವೀಕರಿಸಬಹುದು.

ಈ ತಂತ್ರಜ್ಞಾನ ತರುವ ಕ್ರಾಂತಿಕಾರಿ ಬದಲಾವಣೆಗಳು

  • ಮಾಲಿನ್ಯಕ್ಕೆ ನೇರ ಕಡಿವಾಣ: ಹಳೆಯ ಬಿಎಸ್- ಮತ್ತು ಬಿಎಸ್- ವಾಹನಗಳಿಂದ ಹೊರಹೊಮ್ಮುವ ಹಾನಿಕಾರಕ ಕಣಗಳನ್ನು (PM) ಶೇಕಡಾ 90ರಷ್ಟು ಹಾಗೂ ಸಾರಜನಕ ಆಕ್ಸೈಡನ್ನು (NOx) ಶೇಕಡಾ 60ರಷ್ಟು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ.
  • ಬಿಎಸ್-VI (BS-VI) ಮಟ್ಟದ ಗುಣಮಟ್ಟ: ಲಕ್ಷಾಂತರ ರೂಪಾಯಿ ಖರ್ಚು ಮಾಡದೆಯೇ, ಪರೀಕ್ಷೆಗಳಿಂದ ಸಾಬೀತಾದಂತೆ ಹಳೆಯ ವಾಹನಗಳ ಹೊಗೆಯ ಗುಣಮಟ್ಟವನ್ನು ಅತ್ಯಾಧುನಿಕ ಬಿಎಸ್-VI ಮಟ್ಟಕ್ಕೆ ತರಬಹುದು.
  • ಸಣ್ಣ ಮಾಲೀಕರಿಗೆ ರಕ್ಷಣೆ: ಬಡ ಮತ್ತು ಮಧ್ಯಮ ವರ್ಗದ ಸಾರಿಗೆ ಉದ್ಯಮಿಗಳನ್ನು ಆರ್ಥಿಕ ದಿವಾಳಿತನದಿಂದ ಪಾರು ಮಾಡಿ, ರಾಮಣ್ಣನಂತಹ ಅಸಂಖ್ಯಾತ ಚಾಲಕರ ಬದುಕಿನ ಗಾಲಿಗಳು ನಿಲ್ಲದಂತೆ ಕಾಪಾಡುತ್ತದೆ.
  • ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆ: ಹಳೆಯ ವಾಹನಗಳು ಗುಜರಿಗೆ ಸೇರುವವರೆಗೆ ಕಾಯದೆ, ಇರುವ ವಾಹನಗಳನ್ನೇ ಕೆಲವೇ ಗಂಟೆಗಳಲ್ಲಿ ಪರಿಸರಸ್ನೇಹಿಯಾಗಿ ಪರಿವರ್ತಿಸುವ ಇದು ವಾಯುಮಾಲಿನ್ಯ ನಿಯಂತ್ರಣ ಕ್ಷೇತ್ರದಲ್ಲಿ ಒಂದು ದೊಡ್ಡ ಆಶಾಕಿರಣ ಎಂದರೆ ತಪ್ಪಲ್ಲ.

-ನೆತ್ರಕೆರೆ ಉದಯಶಂಕರ

(ವಿವಿಧ ಮೂಲಗಳಿಂದ)

Saturday, September 5, 2026

ಶ್ರೀ ಕೃಷ್ಣ ಜನ್ಮಾಷ್ಟಮಿ

 ಶ್ರೀ ಕೃಷ್ಣ ಜನ್ಮಾಷ್ಟಮಿ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಸೆಪ್ಟೆಂಬರ್‌ ೪ರ ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.

ಕಥಾ ಶ್ರವಣ, ಪೂಜೆ, ಕುಂಕುಮಾರ್ಚನೆಯನ್ನೂ ನೆರವೇರಿಸಲಾಯಿತು. ಶ್ರೀ ಕೃಷ್ಣೋಜಿರಾವ್‌ ಮತ್ತು ಕುಟುಂಬ ಸದಸ್ಯರು ಅಲಂಕಾರ, ಪ್ರಸಾದ ಸೇವೆಯ ವ್ಯವಸ್ಥೆ ಮಾಡಿದ್ದರು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ, ಭಜನೆ, ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡರು. ಪುಟಾಣಿ ಮಕ್ಕಳು ಬಾಲಕೃಷ್ಣ, ರಾಧೆ ವೇಷಗಳನ್ನು ಧರಿಸಿ ಆಗಮಿಸಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.








Friday, August 28, 2026

ಶ್ರಾವಣ ಮಾಸದ ಸತ್ಯ ನಾರಾಯಣ ಪೂಜೆ

 ಶ್ರಾವಣ ಮಾಸದ ಸತ್ಯ ನಾರಾಯಣ ಪೂಜೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಆಗಸ್ಟ್‌ ೨೭ರ ಗುರುವಾರ ಶ್ರಾವಣ ಮಾಸದ ಸತ್ಯನಾರಾಯಣ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಶ್ರೀ ಕೃಷ್ಣೋಜಿ ರಾವ್‌ ಕುಟುಂಬದವರು ಅಲಂಕಾರ ಹಾಗೂ ಶ್ರೀ ಮಹೇಶ್‌ ಕುಟುಂಬದವರು ಪ್ರಸಾದ ಸೇವಾ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.






Tuesday, August 25, 2026

ಪತಂಜಲಿ ಯೋಗ ತರಗತಿ ಆರಂಭ

 ಪತಂಜಲಿ ಯೋಗ ತರಗತಿ ಆರಂಭ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ., ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಚಟುವಟಿಕೆಗಳಿಗೆ, 2026 ಆಗಸ್ಟ್‌ 24ರ ಸೋಮವಾರ ಯೋಗ ತರಗತಿಗಳ ಆರಂಭದೊಂದಿಗೆ ಹೊಸ ಮಜಲು ಸೇರ್ಪಡೆಯಾಯಿತು.

ಆಗಸ್ಟ್‌ 24ರಂದು ಪತಂಜಲಿ ಯೋಗ ಸಮಿತಿಯು ದೇವಸ್ಥಾನದ ಆವರಣದಲ್ಲಿ  ಉಚಿತ ಯೋಗ ತರಗತಿಗಳನ್ನು ಆರಂಭಿಸಿತು.

ಪತಂಜಲಿ ಯೋಗ ಸಮಿತಿಯು ಬೆಂಗಳೂರಿನ ಉತ್ತರ ಭಾಗದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಉಚಿತ ಯೋಗ ತರಗತಿಗಳನ್ನು ಆರಂಭಿಸಿತ್ತು. ಪ್ರಸ್ತುತ ಸಮಿತಿಯು ಈ ಭಾಗದಲ್ಲಿ ಸುಮಾರು 30 ಉಚಿತ ಯೋಗ ತರಗತಿಗಳನ್ನು ನಡೆಸುತ್ತಿದೆ.

ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯು ನಡೆಸುತ್ತಿರುವ ಈ ದೇವಸ್ಥಾನದಲ್ಲಿ ಭಾನುವಾರ ನಡೆದ ಯೋಗ ತರಗತಿ ಆರಂಭ ಕಾರ್ಯಕ್ರಮದಲ್ಲಿ ಯೋಗ ಸಮಿತಿಯ ಸುಧಾಮ, ಆನಂದ್‌ ಮತ್ತಿತರರು ಯೋಗದ ಬಗ್ಗೆ ವಿವರಗಳನ್ನು ನೀಡಿದರು.

ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿಗೆ ಪೂಜೆ ನೆರವೇರಿಸುವ ಮೂಲಕ ಯೋಗ ತರಗತಿಯ ಶುಭಾರಂಭವನ್ನು ಮಾಡಲಾಯಿತು.

ದೇವಸ್ಥಾನ ಸೇವಾ ಸಮಿತಿ ಟ್ರಸ್ಟಿನ ಅಧ್ಯಕ್ಷ ಚೌಡರೆಡ್ಡಿ, ಟ್ರಸ್ಟಿಗಳಾದ ಸುಗುಣನ್‌, ನೆತ್ರಕೆರೆ ಉದಯಶಂಕರ, ಯೋಗಸಮಿತಿಯ ತರಬೇತಿದಾರರಾದ ಉಮಾ ಜಯಶಂಕರ್‌ ಮತ್ತಿತರರೂ ಈ ಸಂದರ್ಭದಲ್ಲಿ ಹಾಜರಿದ್ದರು.ಯೋಗ ತರಗತಿ ಆರಂಭ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ. ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ.

ದೇವಸ್ಥಾನದ ಆವರಣದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನವೂ ಸಂಜೆ 5.30ರಿಂದ 6.30ರವರೆಗೆ ಉಚಿತ ಯೋಗ ತರಗತಿಗಳು ನಡೆಯಲಿವೆ.

ದೇವಸ್ಥಾನದ ಆವರಣದಲ್ಲಿ ಈಗಾಗಲೇ ಯಕ್ಷ ಕಲಾ ಕೌಸ್ತುಭ, ಬೆಂಗಳೂರು ತಂಡದ ವತಿಯಿಂದ ಯಕ್ಷಗುರು ಉಮೇಶರಾಜ್‌ ಮಂದಾರ್ತಿ ಅವರ ನೇತೃತ್ವದಲ್ಲಿ ಯಕ್ಷಗಾನ ತರಗತಿಗಳು ನಡೆಯುತ್ತಿವೆ.

Friday, August 21, 2026

ವರ ಮಹಾಲಕ್ಷ್ಮಿ ಪೂಜಾ

 ವರ ಮಹಾಲಕ್ಷ್ಮಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಆಗಸ್ಟ್‌ ೨೧ ಶುಕ್ರವಾರ ಶ್ರೀ ವರ ಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ವರಲಕ್ಷ್ಮಿ ವ್ರತದ ಮಹತ್ವವನ್ನು ಅರುಹುವ ಕಥಾ ಶ್ರವಣ, ವರ ಮಹಾಲಕ್ಷ್ಮಿಗೆ ಮಹಿಳೆಯರಿಂದ ಕುಂಕುಮಾರ್ಚನೆ, ಸಂಗೀತ ಸೇವೆ  ನಡೆಯಿತು. ಶ್ರೀ ಮುನಿರಾಜು, ಶ್ರೀ ಕೃಷ್ಣೋಜಿರಾವ್‌, ಶ್ರೀ ಕಾರಿಯಪ್ಪ ಕುಟುಂಬದವರು ಅಲಂಕಾರ, ತಾಂಬೂಲ, ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.

Monday, August 17, 2026

ಫ್ರೀಡಂ ಹಬ್ಬ: ಇದು ʼಸುವರ್ಣ ನೋಟʼ

 ಫ್ರೀಡಂ ಹಬ್ಬ: ಇದು ʼಸುವರ್ಣ ನೋಟʼ

೨೦೨೬ರ ಆಗಸ್ಟ್‌ ೧೫ರಂದು ನಡೆದ ೮೦ನೇ ಸ್ವಾತಂತ್ರ್ಯೋತ್ಸವವನ್ನು ವಿಧಾನ ಸೌಧದ ಮುಂಭಾಗದಲ್ಲಿ ʼಫ್ರೀಡಂ ಹಬ್ಬʼ ಆಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಣ್ಮನ ಸೆಳೆದ ದೃಶ್ಯಗಳನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಸೆರೆ ಹಿಡಿದದ್ದು ಹೀಗೆ.

ವಿಡಿಯೋ ನೋಡಿ.

ಯೂಟ್ಯೂಬ್‌ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ.


Saturday, August 15, 2026

ಸ್ವಾತಂತ್ರ್ಯೋತ್ಸವ ಸಡಗರ ೨೦೨೬

 ಸ್ವಾತಂತ್ರ್ಯೋತ್ಸವ ಸಡಗರ ೨೦೨೬

ದೇಶದ ಇತರೆಡೆಗಳಂತೆ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿಯೂ ೨೦೨೬ ಆಗಸ್ಟ್‌ ೧೬ರ ಶನಿವಾರ ಭಾರತದ ೮೦ನೇ ಸ್ವಾತಂತ್ರ್ಯೋತ್ಸವವನ್ನು ಸಡಗರದೊಂದಿಗೆ ಆಚರಿಸಲಾಯಿತು.

ನಿವೃತ್ತ ಯೋಧ, ಬಡಾವಣೆಯ ನಿವಾಸಿ ಕೆ. ಥೋಮಸ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತ್ರಿವರ್ಣ ಧ್ವಜವನ್ನು ಅರಳಿಸಿದರು. ಈ ಸಂದರ್ಭದಲ್ಲಿ ಶ್ರೀ ಥೋಮಸ್‌ ಮತ್ತು ಅವರ ಪತ್ನಿಯನ್ನು ಸನ್ಮಾನಿಸಲಾಯಿತು.

ಬಡಾವಣೆಯ ಹಿರಿಯ ಸದಸ್ಯ, ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ ಮತ್ತು ಶ್ರೀ ಬಾಲಾಜಿ ಕೃಪಾ ನಿವಾಸಿಗಳ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀ ರಾಜೇಶ ಹೆಗಡೆ ಅವರು ಮಹಾತ್ಮ ಗಾಂಧಿ ಮತ್ತು ಡಾ. ಅಂಬೇಡ್ಕರ್‌ ಭಾವಚಿತ್ರಗಳಿಗೆ ಪುಷ್ಟಾರ್ಚನೆ ಮಾಡಿದರು.

ಬಡಾವಣೆಯ ಹಿರಿಯ ನಿವಾಸಿ ಶ್ರೀ ಶಿವಪ್ಪ ಶಾಂತಪ್ಪನವರ ಸ್ವಾತಂತ್ರ್ಯದ ಮಹತ್ವ ಕುರಿತು ಮಾತನಾಡಿದರು. ಶ್ರೀ ರಾಜೇಶ ಹೆಗಡೆ ಅಧ್ಯಕ್ಷ ಭಾಷಣ ಮಾಡಿದರು. ಶ್ರೀ ನೆತ್ರಕೆರೆ ಉದಯಶಂಕರ ಕಾರ್ಯಕ್ರಮ ನಿರ್ವಹಿಸಿದರು.

ಬಡಾವಣೆಯ ಹಿರಿಯ ಸದಸ್ಯ ವಕೀಲ ಮುನಿರಾಜು ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದರು. ಶ್ರೀ ಎಚ್.ವಿ. ಉದಯಶಂಕರ್‌, ಶ್ರೀ ರಾಘವೇಂದ್ರ ಕಾಮತ್‌, ಹಂಪಣ್ಣ, ರಶ್ಮಿ, ಸ್ವಾತಿ ಮತ್ತಿತರರು ಕಾರ್ಯಕ್ರಮ ಸಂಘಟಿಸುವಲ್ಲಿ ನೆರವಾಗಿದ್ದರು. ಬಡಾವಣೆಯ ಮತ್ತು ಆಸುಪಾಸಿನ ಪ್ರದೇಶಗಳ ನಿವಾಸಿಗಳು ಕಾರ್ಯಕ್ರಮದಲ್ಲಿ ಸಡಗರದೊಂದಿಗೆ ಪಾಲ್ಗೊಂಡರು. 
ಈ ಸಂದರ್ಭದ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ.


Sunday, August 9, 2026

ಕಾರು ಹಾರುತಿದೆ ನೋಡಿದಿರಾ?

 ಕಾರು ಹಾರುತಿದೆ ನೋಡಿದಿರಾ?

ಹೊಸತನವನ್ನು ಸೃಷ್ಟಿಸಲು ಹಂಬಲಿಸುವ ಮನಸ್ಸುಗಳಿಗೆ ಎಂದಿಗೂ ಸಾವಿಲ್ಲ. ಜನಸಾಮಾನ್ಯರ ಜೀವನವನ್ನು ಸರಳಗೊಳಿಸುವ, ಸಮಾಜಕ್ಕೆ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಇಂಥದ್ದೊಂದು ಅದ್ಭುತ ಸಾಧನೆಯನ್ನು ಉತ್ತರಾಖಂಡದ ಯುವ ನಾವೀನ್ಯಕಾರರೊಬ್ಬರು ಸಾಧಿಸಿ ತೋರಿಸಿದ್ದಾರೆ. ಈಗ ಆಕಾಶದಲ್ಲಿ ಕಾರು ಹಾರಾಡುವ ದಿನಗಳು ದೂರವಿಲ್ಲ!

ಹ್ಯಾಪಿಡಾ ಸ್ಕೈನೆಕ್ಸ್ (Hapida Skynex): ಕನಸಿನ ಹಾರುವ ವಾಹನ

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಜಾಗೇಶ್ವರ ಧಾಮದ ಬಳಿಯ ಕಾಫ್ಲಿಕಾನ್ ಗ್ರಾಮದ ಯುವಕ ರವಿ ತಮ್ಟಾ ಇಂಥದ್ದೊಂದು ವಿಸ್ಮಯಕಾರಿ ಸಾಧನೆ ಮಾಡಿದವರು. ಇವರು ತಮ್ಮ ʼಹ್ಯಾಪಿ ಸ್ಕೈ ಪ್ರೈವೇಟ್‌ ಲಿಮಿಟೆಡ್‌ʼ (Hapida Sky Private Limited) ಸ್ಟಾರ್ಟ್‌ಅಪ್ ಮೂಲಕ ʼಹ್ಯಾಪಿಡಾ ಸ್ಕೈನೆಕ್ಸ್‌ʼ (Hapida Skynex) ಎಂಬ ಎಲೆಕ್ಟ್ರಿಕ್ ವೈಯಕ್ತಿಕ ಹಾರುವ ವಾಹನವನ್ನು (Personal Flying Vehicle) ಅಭಿವೃದ್ಧಿಪಡಿಸಿದ್ದಾರೆ.

ಸಂಪೂರ್ಣ ವಿದ್ಯುತ್ ಚಾಲಿತ - ಪರಿಸರಸ್ನೇಹಿ ತಂತ್ರಜ್ಞಾನ

ನೋಡಲು ಅತಿ ಭವಿಷ್ಯದ (Futuristic) ಶೈಲಿಯಲ್ಲಿರುವ ಈ ಹಾರುವ ವಾಹನದ ಪ್ರೊಟೋಟೈಪ್ ಅನ್ನು ರವಿ ತಮ್ಟಾ ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ. ಇದನ್ನು ಅವರು 2026 ಆಗಸ್ಟ್‌ 08ರ ಶನಿವಾರ ಸ್ವತಃ ಹಾರಿಸಿ ತೋರಿಸಿದರು.

ಇದರ ವಿಶೇಷತೆಗಳೇನು?

  • ಶೂನ್ಯ ಇಂಗಾಲದ ಹೊರಸೂಸುವಿಕೆ (Zero Emissions): ಪೆಟ್ರೋಲ್, ಡೀಸೆಲ್ ಅಥವಾ ಸಿಎನ್‌ಜಿಯಂತಹ ಸಾಂಪ್ರದಾಯಿಕ ಇಂಧನಗಳ ಅವಶ್ಯಕತೆ ಇಲ್ಲಿಲ್ಲ. ಸಂಪೂರ್ಣವಾಗಿ ವಿದ್ಯುತ್ ಶಕ್ತಿಯಿಂದಲೇ ಇದು ಕಾರ್ಯಾಚರಣೆ ನಡೆಸುತ್ತದೆ.
  • ಭಾರತೀಯ ಸ್ಟಾರ್ಟ್‌ಅಪ್‌ಗಳ ಹೆಮ್ಮೆಯ ಪ್ರತೀಕ: ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಬಳಿಕ ಸಿಕ್ಕಿರುವ ಈ ಯಶಸ್ಸು, ಭಾರತೀಯರ ತಾಂತ್ರಿಕ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸುರಕ್ಷಿತ, ಕೈಗೆಟುಕುವ ಮತ್ತು ಸುಸ್ಥಿರ ವೈಯಕ್ತಿಕ ಸಾರಿಗೆ

ಭಾರತದಲ್ಲಿ ಸುರಕ್ಷಿತ, ಕಡಿಮೆ ವೆಚ್ಚದ ಮತ್ತು ಪರಿಸರಸ್ನೇಹಿ ವೈಯಕ್ತಿಕ ವೈಮಾನಿಕ ಸಾರಿಗೆಯನ್ನು ಲಭ್ಯವಾಗಿಸುವುದೇ ತಮ್ಮ ಮುಖ್ಯ ಗುರಿ ಎನ್ನುತ್ತಾರೆ ರವಿ ತಮ್ಟಾ. ಉತ್ತರಾಖಂಡದ ಸವಾಲಿನ ಹಿಮಾಲಯ ಭೂಪ್ರದೇಶವು ಇಂತಹ ಮುಂದಿನ ಪೀಳಿಗೆಯ ವೈಮಾನಿಕ ಸಂಚಾರ ಪರಿಹಾರಗಳಿಗೆ ಅತ್ಯುತ್ತಮ ಪರೀಕ್ಷಾ ತಾಣವಾಗಿದೆ.

ಭವಿಷ್ಯದ ಸವಾಲುಗಳಿಗೆ ದಿಟ್ಟ ಉತ್ತರ

ರಸ್ತೆ ಸಂಪರ್ಕವಿಲ್ಲದ ದುರ್ಗಮ ಪ್ರದೇಶಗಳಿಗೆ ಈ ತಂತ್ರಜ್ಞಾನವು ವರದಾನವಾಗಲಿದೆ:

  • ತುರ್ತು ಸೇವೆಗಳು: ಭೂಕುಸಿತ ಮತ್ತು ಪ್ರವಾಹದಂತಹ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ತುರ್ತು ನೆರವು ಹಾಗೂ ಪರಿಹಾರ ಸಾಮಾಗ್ರಿಗಳನ್ನು ತಲುಪಿಸಲು ಇದು ಸಹಕಾರಿ.
  • ಗ್ರಾಮೀಣ ಸಂಪರ್ಕ: ಹಿಮಾಲಯದ ದೂರ-ದೂರದ ಗ್ರಾಮಗಳಿಗೆ ಸುಲಭ ಸಂಪರ್ಕ ಕಲ್ಪಿಸಬಹುದು.
  • ಪ್ರವಾಸೋದ್ಯಮಕ್ಕೆ ಉತ್ತೇಜನ: ಪರ್ವತ ಪ್ರದೇಶಗಳಲ್ಲಿ ಹೊಸ ರೀತಿಯ ಪ್ರಯಾಣದ ಅನುಭವ ನೀಡುವುದರ ಮೂಲಕ ಪ್ರವಾಸೋದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು.

ಪ್ರತಿಭೆಗೆ ಎಲ್ಲೂ ಮಿತಿಯಿಲ್ಲ; ಛಲವಿದ್ದರೆ ಆಕಾಶವೇ ಗಡಿ ಎಂಬುದನ್ನು ರವಿ ತಮ್ಟಾ ಸಾಬೀತುಪಡಿಸಿದ್ದಾರೆ. ಭಾರತದ ಹೆಮ್ಮೆಯ ಈ ನಾವೀನ್ಯತೆ ಭವಿಷ್ಯದ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು ತೋರಿಸುವುದರಲ್ಲಿ ಯಾವುದೇ ಸಂಶಯವಿಲ್ಲ!

Saturday, August 1, 2026

ಜಂತರ್ ಮಂತರ್ ಪ್ರತಿಭಟನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ

 ಜಂತರ್ ಮಂತರ್ ಪ್ರತಿಭಟನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ

ವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆದರೆ, ಈ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಈ ವಿಡಿಯೋ ಡಿಜಿಟಲ್ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ 'ಡೀಪ್ ಫೇಕ್' (Deepfake) ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB), 2026 ಆಗಸ್ಟ್‌ 01ರ ಶನಿವಾರ ಸ್ಪಷ್ಟಪಡಿಸಿದೆ.

1. ಪ್ರಧಾನಿ ಮೋದಿಯವರ ಹೆಸರಿನಲ್ಲಿದ್ದ ವಿಡಿಯೋ ಸಂಪೂರ್ಣ ನಕಲಿ

PIB ಫ್ಯಾಕ್ಟ್-ಚೆಕ್ ಘಟಕವು ಶನಿವಾರ ಈ ಕುರಿತು ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣ X (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ತಿರುಚಲಾಗಿದೆ ಎಂದು ತಿಳಿಸಿದೆ.

  • ವಿದ್ಯಾರ್ಥಿ ಪ್ರತಿಭಟನಾಕಾರರ ಕುರಿತು ಪ್ರಧಾನಿಯವರು ಇಂತಹ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.
  • ಈ ನಕಲಿ ವಿಡಿಯೋವನ್ನು ಪಾಕಿಸ್ತಾನ ಮೂಲದ ಪ್ರೊಪಗಾಂಡಾ (ಪ್ರಚಾರ) ಖಾತೆಗಳ ಮೂಲಕ ಭಾರತದಲ್ಲಿ ಗೊಂದಲ ಸೃಷ್ಟಿಸಲು ಹರಡಲಾಗುತ್ತಿದೆ ಎಂದು PIB ಬಹಿರಂಗಪಡಿಸಿದೆ.

ಸಾರ್ವಜನಿಕರು ಅಸಲಿ ಮತ್ತು ನಕಲಿ ವಿಡಿಯೋದ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಲು PIB ಅಸಲಿ ವಿಡಿಯೋದ ಲಿಂಕ್ ಅನ್ನು (PIB Fact Check (@PIBFactCheck) / X ) ಸಹ ಹಂಚಿಕೊಂಡಿದೆ.

ಪಿಐಬಿ ಪ್ರಕಟಿಸಿರುವ ವಿಡಿಯೋ ಕೆಳಗಿದೆ.

2. ದೆಹಲಿ ಡಿಸಿಪಿ ರಾಜೀನಾಮೆ ನೀಡಿದರೆಂಬ ಸುದ್ದಿಯೂ ಸುಳ್ಳು!

ಇಷ್ಟೇ ಅಲ್ಲದೆ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ CJP ಬೆಂಬಲಿತ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಒತ್ತಡ ಹೇರುತ್ತಿದ್ದರಿಂದ ದೆಹಲಿ ಪೊಲೀಸ್ ಡಿಸಿಪಿ ಸುಮಿತ್ ಝಾ ರಾಜೀನಾಮೆ ನೀಡಿದ್ದಾರೆ ಎಂಬ ಮತ್ತೊಂದು ವಿಡಿಯೋ ವೈರಲ್ ಆಗಿತ್ತು.

ಆದರೆ 'ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ' (PTI) ನಡೆಸಿದ ತನಿಖೆಯಲ್ಲಿ, ಡಿಸಿಪಿ ಸುಮಿತ್ ಝಾ ಅವರ ಹಳೆಯ ವಿಡಿಯೋ ಒಂದಕ್ಕೆ AI ಮೂಲಕ ಬೇರೆ ಧ್ವನಿಯನ್ನು (Audio) ಸೇರಿಸಿ ನಕಲಿ ವಿಡಿಯೋ ಸೃಷ್ಟಿಸಲಾಗಿದೆ ಎಂದು ತಿಳಿದುಬಂದಿದೆ. ವಾಸ್ತವವಾಗಿ, ದೆಹಲಿ ಪೊಲೀಸರ ಅಧಿಕೃತ ಖಾತೆಯಲ್ಲಿದ್ದ ಈ ಅಸಲಿ ವಿಡಿಯೋದಲ್ಲಿ ಡಿಸಿಪಿ ಅವರು ಪಾಕಿಸ್ತಾನ ಮೂಲದ ಖಾತೆಗಳು ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದರು.

3. ಪಾಕಿಸ್ತಾನ ಮೂಲದ 480ಕ್ಕೂ ಹೆಚ್ಚು ನಕಲಿ ಖಾತೆಗಳ ಗುರುತು

ದೆಹಲಿ ಪೊಲೀಸರ ಪ್ರಕಾರ, ಜಂತರ್ ಮಂತರ್ ಪ್ರತಿಭಟನೆಯ ಸಂದರ್ಭದಲ್ಲಿ ಸುಳ್ಳು ಸುದ್ದಿ ಹಾಗೂ ದ್ವೇಷಪೂರಿತ ವಿಷಯಗಳನ್ನು ಹರಡಲು ಪಾಕಿಸ್ತಾನ ಮೂಲದ 480ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣದ ಖಾತೆಗಳು ಸಕ್ರಿಯವಾಗಿದ್ದವು. ಈ ಹಿಂದೆ 'ಆಪರೇಷನ್ ಸಿಂಧೂರ್' ಸಮಯದಲ್ಲೂ ಇದೇ ಖಾತೆಗಳು ಸುಳ್ಳು ಸುದ್ದಿ ಹರಡಲು ಬಳಕೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದು, ಪ್ರಸ್ತುತ ಆ ಎಲ್ಲ ಖಾತೆಗಳನ್ನು ಬ್ಲಾಕ್ (Block) ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ: ಸರ್ಕಾರದ ಮನವಿ

ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಪರಿಶೀಲಿಸದ ಯಾವುದೇ ವಿಡಿಯೋ ಅಥವಾ ಸುದ್ದಿಗಳನ್ನು ತಕ್ಷಣವೇ ನಂಬಬೇಡಿ ಮತ್ತು ಇಂತಹ ವಿಷಯಗಳಿಗೆ ಅಧಿಕೃತ ಸರ್ಕಾರಿ ಮೂಲಗಳನ್ನೇ ಆಶ್ರಯಿಸಿ ಎಂದು PIB ನಾಗರಿಕರಲ್ಲಿ ವಿನಂತಿ ಮಾಡಿದೆ.

ಸಂದೇಹಾಸ್ಪದ ಸುದ್ದಿಗಳನ್ನು ವರದಿ ಮಾಡಲು:

ಭಾರತ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ನಕಲಿ ಅಥವಾ ಸಂದೇಹಾಸ್ಪದ ವಿಷಯಗಳು ಕಂಡುಬಂದಲ್ಲಿ ಸಾರ್ವಜನಿಕರು ಕೆಳಗಿನ ವಿವರಗಳ ಮೂಲಕ PIB ಗೆ ದೂರು ನೀಡಬಹುದು:

  • ವಾಟ್ಸಾಪ್/ಫೋನ್ ಸಂಖ್ಯೆ: +91 8799711259
  • ಇಮೇಲ್: factcheck@pib.gov.in

Wednesday, July 29, 2026

ವೈಶಾಖ ಮಾಸದ ಶ್ರೀ ಸತ್ಯನಾರಾಯಣ ಪೂಜಾ

 ವೈಶಾಖ ಮಾಸದ ಶ್ರೀ ಸತ್ಯನಾರಾಯಣ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ಸತ್ಯನಾರಾಯಣ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಜುಲೈ ೨೯ರ ಬುಧವಾರ ವೈಶಾಖ ಮಾಸದ ಶ್ರೀ ಸತ್ಯನಾರಾಯಣ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.



Tuesday, June 30, 2026

ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು

 ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು

ಯಕ್ಷಗಾನ ತರಗತಿ ದ್ವಿತೀಯ ತಂಡ ಪ್ರಾರಂಭೋತ್ಸವ + ಸತ್ಯನಾರಾಯಣ ಪೂಜಾ

ಕ್ತಿ ಶ್ರದ್ಧೆಯೊಂದಿಗೆ ನಡೆಯುವ ದೇವಾರಾಧನೆ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇಂಬುಕೊಡುವ ಕಾರ್ಯಕ್ರಮಗಳು ದೇವಾಲಯಕ್ಕೆ ವಿಶೇಷ ಕಳೆಯನ್ನು ನೀಡುತ್ತವೆ.

ಗಣೇಶೋತ್ಸವ, ವಾರ್ಷಿಕೋತ್ಸವ, ಜಾತ್ರೆ ಇವುಗಳೆಲ್ಲ ದೇವಸ್ಥಾನಕ್ಕೆ ವಿಶೇಷ ಕಳೆಯನ್ನು ತಂದುಕೊಡುವ ವಿಶೇಷ ಸಂದರ್ಭಗಳು. ಹಾಗೆಯೇ ಇಂತಹ ಸಂದರ್ಭಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವಿಶೇಷ ಸಂದರ್ಭಗಳನ್ನು ಇನ್ನಷ್ಟು ಸ್ಮರಣೀಯವನ್ನಾಗಿ ಮಾಡುತ್ತವೆ.

ದೇವಸ್ಥಾನಗಳಲ್ಲಿ ಇಂತಹ ಸಾಂಸ್ಕತಿಕ ಚಟುವಟಿಕೆಗೆ ಒದಗಿ ಬರುವ ಪ್ರೋತ್ಸಾಹ ಇನ್ನೂ ವಿಶೇಷವಾದದ್ದು.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನವು ಈ ನಿಟ್ಟಿನಲ್ಲಿ ನಿರಂತರ ಶ್ರಮ ವಹಿಸುತ್ತಿದೆ.

ಪ್ರತಿ ಮಾಸವೂ ಸತ್ಯ ನಾರಾಯಣ ಪೂಜೆ ಮತ್ತು ಸಂಕಷ್ಟಿ ಪೂಜೆಯನ್ನು ನಿರಂತರವಾಗಿ ನೆರವೇರಿಸುತ್ತಾ ಬಂದಿರುವುದರ ಜೊತೆಗೆ ಕಳೆದ ಎಂಟು ತಿಂಗಳುಗಳಿಂದ ಯಕ್ಷಗುರು ಉಮೇಶರಾಜ್‌ ಮಂದಾರ್ತಿ ನೇತೃತ್ವದ ʼಯಕ್ಷ ಕಲಾ ಕೌಸ್ತುಭʼ ತಂಡದ ಮೂಲಕ ಆಸಕ್ತರಿಗೆ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಕಲಿಸಿಕೊಡುವ ಕೈಕಂಕರ್ಯಕ್ಕೆ ನೀರೆಯುತ್ತಾ ಬಂದಿದೆ.

ಈ ತಂಡದ ಮೂಲಕ ಯಕ್ಷಗಾನ ಕಲಿತ ಮಕ್ಕಳು, ಮಹಿಳೆಯರು ಈ ಅವಧಿಯಲ್ಲಿ ಮೂರು ಯಕ್ಷಗಾನ ಪ್ರದರ್ಶನಗಳನ್ನೂ ಯಶಸ್ವಿಯಾಗಿ ನೀಡಿದ್ದಾರೆ. ಇದೀಗ ತಂಡವು ಯಕ್ಷಗಾನ ಕಲಿಯಬಯಸಿರುವ ಎರಡನೇ ತಂಡಕ್ಕೆ ತರಗತಿಗಳನ್ನೂ ಆರಂಭಿಸಿದೆ.

೨೦೨೬ ಜೂನ್‌ ೨೮ರ ಭಾನುವಾರ ಎರಡನೇ ತಂಡದ ಯಕ್ಷಗಾನ ತರಗತಿಯ ಆರಂಭೋತ್ಸವ ʼಬಾಲಾಜಿ ಮಹಾಗಣಪತಿಯ ಸನ್ನಿಧಿಯಲ್ಲಿ ಕಿರೀಟ ಪೂಜೆಯೊಂದಿಗೆ ಜರುಗಿತು. ಯಕ್ಷಗಾನ ವಿದ್ಯಾರ್ಥಿಗಳು, ಪೋಷಕರು, ಯಕ್ಷ ಕಲಾ ಕೌಸ್ತುಭ ಕುಟುಂಬದ ಸರ್ವ ಸದಸ್ಯರು, ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಟ್ರಸ್ಟಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮರುದಿನ ೨೦೨೬ ಜೂನ್‌ ೨೯ರ ಸೋಮವಾರ ದೇವಸ್ಥಾನದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.

ಈ ಎರಡೂ ಕಾರ್ಯಕ್ರಮಗಳ ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.


Advertisement