Showing posts with label Priyanka Gandhi. Show all posts
Showing posts with label Priyanka Gandhi. Show all posts

Monday, August 10, 2020

ಅಶೋಕ ಗೆಹ್ಲೋಟ್ ಪರ ಸಚಿನ್, ಬೆಂಬಲಿಗರ ಮತ?

 ಅಶೋಕ ಗೆಹ್ಲೋಟ್  ಪರ ಸಚಿನ್, ಬೆಂಬಲಿಗರ ಮತ?

ಪ್ರಿಯಾಂಕಾಗೆ ಫೋನ್, ಅಂತಿಮಸೂತ್ರ ಸೋನಿಯಾ ಕೈಯಲ್ಲಿ

ನವದೆಹಲಿ: ರಾಜಸ್ಥಾನ ಉಪಮುಖ್ಯಮಂತ್ರಿ ಸ್ಥಾನ ಮತ್ತು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರು ಆಗಸ್ಟ್ ೧೪ ರಂದು ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ವೇಳೆ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಪರ ಮತ ಚಲಾಯಿಸುವ ಸಾಧ್ಯತೆಯಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.

ಮೂಲಗಳ ಪ್ರಕಾರ, ಪೈಲಟ್ ಅವರು ಕಾಂಗ್ರೆಸ್ ವರಿಷ್ಠರ ಜೊತೆ ಸಂಪರ್ಕದಲ್ಲಿದ್ದಾರೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.

ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ವರಿಷ್ಠ ಮಂಡಳಿಯು ಬಂಡಾಯ ನಾಯಕನಿಗೆ ಭರವಸೆ ನೀಡಿದೆ ಮತ್ತು ಅಶೋಕ ಗೆಹ್ಲೋಟ್ ಶಿಬಿರಕ್ಕೆ ಅವರ ಬೆಂಬಲವನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು "ಸಮನ್ವಯದ ಅಂತಿಮ ಸೂತ್ರ" ವನ್ನು ನಿರ್ಧರಿಸಲಿದ್ದಾರೆ ಎಂದು ಹೇಳಲಾಗಿದೆ.

ಅಶೋಕ ಗೆಹ್ಲೋಟ್ ವಿರುದ್ಧ ಬಹಿರಂಗ ಬಂಡಾಯ ಘೋಷಿಸಿ, ೧೮ ಶಾಸಕರೊಂದಿಗೆ ತಮ್ಮ ಸರ್ಕಾರದ ಕೈಬಿಟ್ಟ ಪೈಲಟ್, ಕಳೆದ ತಿಂಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗಳಿಗೆ ಹಾಜರಾಗದ ಕಾರಣ ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿದ್ದರು.

ಪೈಲಟ್ ಶಿಬಿರದಲ್ಲಿ ಇದ್ದ ಇತರ ಇಬ್ಬರು ಮಂತ್ರಿಗಳನ್ನೂ ಕ್ಯಾಬಿನೆಟ್‌ನಿಂದ ಕೈಬಿಡಲಾಯಿತು. ಪಕ್ಷದ ರಾಜಸ್ಥಾನ ಘಟಕದ ಅಧ್ಯಕ್ಷರಾಗಿ ಗೋವಿಂದ್ ಸಿಂಗ್ ದೋಟಾಸರ ಅವರನ್ನು ಕಾಂಗ್ರೆಸ್ ನೇಮಿಸಿತು.

ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಸಂಚು ಆಪಾದನೆಯ ಹಿನ್ನೆಲೆಯಲ್ಲಿ ರಾಜಸ್ಥಾನ ಪೊಲೀಸರು ತಮಗೆ ಕಳುಹಿಸಿದ ನೋಟಿಸ್ ಬಗ್ಗೆ ಪೈಲಟ್ ತೀವ್ರ ಅಸಮಾಧಾನಗೊಂಡಿದ್ದರು ಎಂದು ಸಚಿನ್ ಬೆಂಬಲಿಗರು ಹೇಳಿದ್ದರು.

ಹೇಳಿಕೆ ದಾಖಲಿಸಿಕೊಳ್ಳುವ ಸಲುವಾಗಿ ಕಾಲಾವಕಾಶ ನೀಡುವಂತೆ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಸಚಿನ್ ಅವರಿಗೆ ನೋಟಿಸ್ ಕಳಿಸಿತ್ತು.

ಅದೇ ನೋಟಿಸುಗಳನ್ನು ಮುಖ್ಯಮಂತ್ರಿ ಗೆಹ್ಲೋಟ್, ಸರ್ಕಾರಿ ಮುಖ್ಯ ಸಚೇತಕ ಮಹೇಶ್ ಜೋಶಿ ಮತ್ತು ಇತರ ಕೆಲವು ಶಾಸಕರಿಗೆ ಕಳುಹಿಸಲಾಗಿತ್ತು. ಆದರೆ ಪೈಲಟ್ ಅವರನ್ನು ಅವಮಾನಿಸುವುದಕ್ಕಾಗಿಯೇ ಕ್ರಮ ಕೈಗೊಳ್ಳಲಾಗಿತ್ತು ಎಂದು ಸಚಿನ್ ಪೈಲಟ್ ಆಪ್ತರು ದೂರಿದ್ದರು.

Tuesday, August 4, 2020

ರಾಮಮಂದಿರ ಭೂಮಿಪೂಜೆ: ಕಡೆಗೂ ಮೌನ ಮುರಿದ ಕಾಂಗ್ರೆಸ್

ರಾಮಮಂದಿರ ಭೂಮಿಪೂಜೆ:  ಕಡೆಗೂ ಮೌನ ಮುರಿದ ಕಾಂಗ್ರೆಸ್

ಲಕ್ನೋ: ಅಯೋಧ್ಯೆಯಲ್ಲಿ ಬುಧವಾರಕ್ಕೆ ನಿಗದಿಯಾಗಿರುವ ರಾಮ ಮಂದಿರ ಭೂಮಿ ಪೂಜೆ ಬಗ್ಗೆ ಬಿಜೆಪಿ ಸಹಿತವಾಗಿ ಹಲಡೆಗಳಿಂದ ಬಂದಿರುವ ಸಾಕಷ್ಟು ಟೀಕೆಗಳ ಬಳಿಕ 2020  ಆಗಸ್ಟ್  04ರ ಮಂಗಳವಾರ ಮೌನ ಮುರಿದಿರುವ ಕಾಂಗ್ರೆಸ್, ಸಮಾರಂಭಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸ್ಪಷ್ಟ ಪಡಿಸಿತು.

ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ದೇವಾಲಯಕ್ಕಾಗಿ ಶಿಲಾನ್ಯಾಸ ಸಮಾರಂಭದ ಒಂದು ದಿ ಮುಂಚಿತವಾಗಿ ಟ್ವಿಟ್ಟರಿನಲ್ಲಿ ನೀಡಿದ ಹೇಳಿಕೆಯಲ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಮ ಮಂದಿರದ ಭೂಮಿ ಪೂಜೆಯನ್ನುರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಮ್ಮಿಳನದ ಸಂದರ್ಭಎಂಬುದಾಗಿ ಬಣ್ಣಿಸಿದರು.

ಸರಳತೆ, ಧೈರ್ಯ, ಸಂಯಮ, ತ್ಯಾಗ, ಬದ್ಧತೆಗಳು ದೀನಬಂಧು ಭಗವಾನ್ ರಾಮ ಎಂಬ ಹೆಸರಿನ ಮೂಲತತ್ವ. ರಾಮ ಎಲ್ಲರಲ್ಲೂ ಇದ್ದಾನೆ, ರಾಮ ಎಲ್ಲರೊಂದಿಗೂ ಇದ್ದಾನೆ. ರಾಮ ಮತ್ತು ಮಾತೆ ಸೀತಾ ಅವರ ಸಂದೇಶ ಮತ್ತು ಆಶೀರ್ವಾದದೊಂದಿಗೆ, ರಾಮಲಾಲ ದೇವಾಲಯದ ಭೂಮಿಪೂಜೆಯು ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಮ್ಮಿಳನದ ಸಂದರ್ಭವಾಗಿದೆಎಂದು ಪ್ರಿಯಾಂಕಾ ಮಂಗಳವಾರ ಟ್ವೀಟಿನಲ್ಲಿ  ತಿಳಿಸಿದರು.

ರಾಮಾಯಣವು ವಿಶ್ವದ ಸಂಸ್ಕೃತಿ ಮತ್ತು ಭಾರತೀಯ ಉಪಖಂಡದಲ್ಲಿ ಆಳವಾದ ಮತ್ತು ಅಳಿಸಲಾಗದ ಗುರುತು ಹೊಂದಿದೆ. ಭಗವಾನ್ ರಾಮ, ತಾಯಿ ಸೀತಾ ಮತ್ತು ರಾಮಾಯಣದ ಕಥೆ ಪ್ರಕಾಶ ಪುಂಜವಾಗಿ ಸಾವಿರಾರು ವರ್ಷಗಳಿಂದ ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ನೆನಪುಗಳಲ್ಲಿ ಬೆಳಗಿದೆ. ಭಾರತೀಯ ಜನತೆ ರಾಮಾಯಣ, ಧರ್ಮ, ನೀತಿ, ಕರ್ತವ್ಯ, ತ್ಯಾಗ, ಭವ್ಯ, ಪ್ರೀತಿ, ಶೌರ್ಯ ಮತ್ತು ಸೇವೆಯ ವಿಷಯಗಳಿಂದ ಪ್ರೇರಿತರಾಗಿದ್ದಾರೆ. ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ, ರಾಮಕಥೆಯು ಅನೇಕ ರೂಪಗಳಲ್ಲಿ ಸ್ವಯಂ ವ್ಯಕ್ತವಾಗಿದೆ. ಶ್ರೀಹರಿಯ ಅಸಂಖ್ಯಾತ ರೂಪಗಳಂತೆ, ರಾಮಕಥಾ ಹರಿಕಥೆಯೂ ಅನಂತಎಂದು ಕಾಂಗ್ರೆಸ್ ನಾಯಕಿ ಬರೆದರು.

ಭಗವಾನ್ ರಾಮನ ಪಾತ್ರವು ಶತಮಾನಗಳಿಂದ ಭಾರತೀಯ ಪ್ರಾಂತ್ಯದಲ್ಲಿ ಮಾನವೀಯತೆಯನ್ನು ಸಂಪರ್ಕಿಸುವ ಎಳೆಯಾಗಿದೆ ಎಂದು ಪ್ರಿಯಾಂಕಾ ಹೇಳಿದರು. ‘ರಾಮನು ಆಶ್ರಯ ಮತ್ತು ತ್ಯಾಗ. ರಾಮ ಶಬರಿ, ಸುಗ್ರೀವ, ವಾಲ್ಮೀಕಿ, ಭಾಸನಿಗೂ ಸೇರಿದವನು. ರಾಮ ಕಂಬನ್‌ಗೆ ಸೇರಿದವನು ಮತ್ತು ಎಶುತಚ್ಚನ್‌ಗೆ ಸೇರಿದವನು. ರಾಮ್ ಕಬೀರ್‌ಗೆ ಸೇರಿದವನು, ತುಳಸಿದಾಸ, ರವಿದಾಸರಿಗೆ ಸೇರಿದವನು. ಎಲ್ಲವನ್ನು ಕೊಡುವವನು ಭಗವಾನ್ ರಾಮ. ಗಾಂಧಿಯವರ ರಘುಪತಿ ರಾಘವ್ ರಾಜ ರಾಮ್ ಎಲ್ಲರ ಒಪ್ಪಿಗೆ ನೀಡುವಂತಹುದು. ಜೋ ರಬ್ ಹೈ ವೋಹಿ ರಾಮ್ ಹೈ ಎಂದು ವಾರಿಸ್ ಅಲಿ ಶಾ ಹೇಳುತ್ತಾರೆ ಎಂದು ಪ್ರಿಯಾಂಕಾ ಬರೆದರು.

ತಷ್ಟ್ರಾ ಕವಿ ಮೈಥಿಲಿಶರಣ್ ಗುಪ್ತ ಅವರು ರಾಮನನ್ನುದುರ್ಬಲರ ಶಕ್ತಿಎಂದು ಕರೆಯುತ್ತಾನೆ. ಆದ್ದರಿಂದ ಮಹಾಪ್ರಾಣ್ ನಿರಾಲಾ ಅವರವೊಹ್ ಏಕ್ ಔರ್ ಮನ್ ರಹಾ ರಾಮ್ ಕಾ ಜೋ ನಾ ಥಾಕಪ್ರಸಿದ್ಧ ಸಾಲು ಭಗವಾನ್ ರಾಮನನ್ನುಶಕ್ತಿಯ ಮೂಲಭೂತ ಕಲ್ಪನೆಎಂದು ಹೇಳುತ್ತದೆ. ರಾಮ ಧೈರ್ಯ, ರಾಮ ಸಂಗಮ, ರಾಮ ಸಂಯಮ, ರಾಮ ಮಿತ್ರ. ರಾಮ ಎಲ್ಲರಿಗೂ ಸೇರಿದವನು. ಭಗವಾನ್ ರಾಮನು ಎಲ್ಲರ ಕಲ್ಯಾಣವನ್ನು ಬಯಸುತ್ತಾನೆ. ಅದಕ್ಕಾಗಿಯೇ ಅವರು ಘನತೆವೆತ್ತ ವ್ಯಕ್ತಿಎಂದು ಪ್ರಿಯಾಂಕಾ ಟ್ವೀಟಿನಲ್ಲಿ ಬರೆದರು.

ಆಗಸ್ಟ್ ರಂದು ದೇವಾಲಯದ ಭೂಮಿ ಪೂಜೆಯನ್ನು ಆಯೋಜಿಸಲಾಗಿz. ರಾಮ ದೇವರ ಕೃಪೆಯಿಂದ, ಕಾರ್ಯಕ್ರಮವು ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಮ್ಮಿಳನ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ ಮತ್ತು ಅದು ರಾಮನ ಸಂದೇಶವನ್ನು ಪ್ರಸಾರ ಮಾಡಿದೆ. ಜೈ ಸಿಯಾರಾಮ್ಎಂಬುದಾಗಿ ಪ್ರಿಯಾಂಕಾ ತಮ್ಮ ಟ್ವೀಟ್ ಕೊನೆಗೊಳಿಸಿದ್ದಾರೆ.

Saturday, August 1, 2020

ಅಯೋಧ್ಯೆ: ಮೌನ ಮುರಿಯಲು ಪ್ರಿಯಾಂಕಾಗೆ ಆಗ್ರಹ

ಅಯೋಧ್ಯೆ: ಮೌನ ಮುರಿಯಲು ಪ್ರಿಯಾಂಕಾಗೆ ಆಗ್ರಹ

ನವದೆಹಲಿ/ ಲಕ್ನೋ: ಗಡಿಯಾರ ವೇಗವಾಗಿ ಓಡುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಭೂಮಿ ಪೂಜೆಯ ಭವ್ಯ ಸಮಾರಂಭದ ಸಿದ್ಧತೆಗಳು ಭರದಿಂದ ಸಾಗಿವೆ. ವೇಳೆಯಲ್ಲಿ ಕಾಂಗ್ರೆಸ್ ಪಕ್ಷವು ಮೌನ ಮುರಿದು ವಿಚಾರದಲ್ಲಿ ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕು ಎಂಬ ಆಗ್ರಹಗಳು ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬರಲಾರಂಭಿಸಿವೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿದರು ಮತ್ತು ಕೋವಿಡ್ -೧೯ ಸಾಂಕ್ರಾಮಿಕದ ನಡುವೆಯೇಭೂಮಿ ಪೂಜೆನಡೆಸುವ ನಿರ್ಧಾರವನ್ನು ಸಮರ್ಥಿಸಿದರು.
ನಾನು ಭೂಮಿ ಪೂಜೆಯನ್ನು ಸ್ವಾಗತಿಸುತ್ತೇನೆ. ಇದಕ್ಕಾಗಿ ಭಾರತೀಯರು ಕಾಯುತ್ತಿದ್ದಾರೆ ಮತ್ತು ನಾವೆಲ್ಲರೂ ಬಯಸುವುದು ಇದನ್ನೇ. ಇದು ಭಾರತದಲ್ಲಿ ಮಾತ್ರ ಸಾಧ್ಯಎಂದು ಆಗಸ್ಟ್ ಭವ್ಯ ಕಾರ್ಯಕ್ರಮವನ್ನು ಬೆಂಬಲಿಸಿ ಬಹಿರಂಗವಾಗಿ ಮಾತನಾಡಿದ ಕಾಂಗ್ರೆಸ್ಸಿನ ಮೊದಲ ಹಿರಿಯ ನಾಯಕ ಕಮಲನಾಥ್ ಹೇಳಿದರು.
ಆರೋಗ್ಯ ಬಿಕ್ಕಟ್ಟಿನ ಮಧ್ಯೆ ಭೂಮಿ ಪೂಜೆ ಕಾರ್ಯದ ಅಗತ್ಯವನ್ನು ಮಹಾರಾಷ್ಟ್ರದ ಕಾಂಗ್ರೆಸ್ ಮಿತ್ರ ಪಕ್ಷಗಳ ನಾಯಕರಾದ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಅವರಂತಹ ವಿರೋಧ ಪಕ್ಷದ ನಾಯಕರು ಪ್ರಶ್ನಿಸಿರುವ ಸಮಯದಲ್ಲಿ ಕಮಲನಾಥ್ ಹೇಳಿಕೆ ಅಚ್ಚರಿ ಮೂಡಿಸಿತು.
ದೀಪೇಂದ್ರ ಹೂಡಾ ಮತ್ತು ಜಿತಿನ್ ಪ್ರಸಾದ ಅವರಂತಹ ಕಾಂಗ್ರೆಸ್ಸಿನ ಅನೇಕ ಕಿರಿಯ ನಾಯಕರು ವಿಷಯದ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಅಧಿಕೃತವಾಗಿ ಪ್ರಕಟಿಸಬೇಕು ಮತ್ತು ಕಮಲನಾಥ್ ಅವರ ನಿಲುವನ್ನು ಪಕ್ಷವು ಬೆಂಬಲಿಸಬೇಕು ಎಂದು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅನೇಕ ಕಾಂಗ್ರೆಸ್ ನಾಯಕರಂತೆ, ಗೋಡೆಯ ಮೇಲಿನ ಬರವಣಿಗೆಯನ್ನು ಕಮಲನಾಥ್ ಗಮನಿಸಿದ್ದಾರೆ.
೨೦೧೪ ಮತ್ತು ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಇತರ ವಿಷಯಗಳ ಜೊತೆಗೆ ಹಿಂದುತ್ವವನ್ನು ಪ್ರಬಲವಾಗಿ ಪ್ರತಿಪಾದಿಸಿಕೊಂಡೇ ಬಿಜೆಪಿ ಅಧಿಕಾರಕ್ಕೆ ಏರಿದೆ. ಹಿಂದುತ್ವ ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳಲು ಕಾಂಗ್ರೆಸ್ ಕೂಡಾ ತಡವಾಗಿ ಯತ್ನಿಸಿತು, ಆದರೆಅಲ್ಪಸಂಖ್ಯಾತರ ತುಷ್ಟೀಕರಣ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲ. ಇದನ್ನು ಬಿಜೆಪಿ ತನ್ನ ಅನುಕೂಲಕ್ಕೆ ತಕ್ಕಂತೆ ಸಮರ್ಥವಾಗಿಯೇ ಬಳಸಿಕೊಂಡಿತು.
ಉತ್ತರ ಪ್ರದೇಶದಲ್ಲಿ ಪಕ್ಷದ ಕಾರ್ಯತಂತ್ರ ಕುರಿತು ಇತ್ತೀಚೆಗೆ ನಡೆದ ಸಭೆಯಲ್ಲಿ ಪಕ್ಷದ ಉತ್ತರ ಪ್ರದೇಶದ ಉಸ್ತುವಾರಿ ವಹಿಸಿರುವ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಪಕ್ಷದ ಮುಖಂಡg ಅಭಿಪ್ರಾಯಗಳನ್ನು ಕೇಳಿದ್ದರು.
ಬಹುತೇಕ ಎಲ್ಲ ನಾಯಕರೂ ಕಾಂಗ್ರೆಸ್ ನೆಲದ ಮೇಲೆ ನಡೆಯುವ ಅಗತ್ಯವಿದೆ ಎಂದು ಹೇಳಿದರು. ಯೋಗಿ ಆದಿತ್ಯನಾಥ್ ಸರ್ಕಾರದ ಹಿಂದುತ್ವ ವರ್ಚಸ್ಸು, ಬಿಜೆಪಿಗೆ ಒಂದು ಆರಂಭ ನೀಡಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮುಂದುವರೆಯಲು ಬೇಕಾದಷ್ಟು ಅವಕಾಶವಿದೆ ಎಂದು ನಾಯಕರು ನುಡಿದರು.
ಸಮಾಜವಾದಿ ಪಕ್ಷವುಅಲ್ಪಸಂಖ್ಯಾತರ ತುಷ್ಟೀಕರಣದವರ್ಚಸ್ಸು ಬೆಳೆಸಿಕೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರವಾದ ಅಂಶ. ಅಲ್ಪಸಂಖ್ಯಾತರ ಮತಬ್ಯಾಂಕ್ ಕಳೆದುಕೊಳ್ಳುವ ಭೀತಿಯಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರಾಮಮಂದಿರ ವಿಚಾರವನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಾಗದೇ ಇರುವುದು ಕಾಂಗ್ರೆಸ್ ಪಾಲಿಗೆ ವರದಾನವಾಗುತ್ತದೆ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ನಾಯಕರು ನೀಡಿದರು. "ನಾವು ಅವಕಾಶವನ್ನು ಕಳೆದುಕೊಳ್ಳಬಾರದು ಮತ್ತು ರಾಮಮಂದಿರ ಭೂಮಿ ಪೂಜೆ ಬಗ್ಗೆ ನಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಬೇಕು. ಉತ್ತರ ಪ್ರದೇಶದಲ್ಲಿ ಪಕ್ಷವು ಚೇತರಿಸಿಕೊಳ್ಳಬೇಕು ಎಂಬುದಾಗಿ ಬಯಸುವುದಾದರೆ ಇದು ಅತ್ಯಂತ ಮುಖ್ಯವಾಗುತ್ತದೆ ಎಂದು ಯುವ ನಾಯಕರು ಪ್ರಿಯಾಂಕಾಗೆ ತಿಳಿಸಿದರು.
ವಾಸ್ತವವಾಗಿ, ಕಳೆದ ವರ್ಷ ಐತಿಹಾಸಿಕ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ದೇವಾಲಯದ ನಿರ್ಮಾಣವನ್ನು ಕಾಂಗ್ರೆಸ್ ಬಹಿರಂಗವಾಗಿ ಸ್ವಾಗತಿಸಿತ್ತು, ಆದರೆ ಭೂಮಿ ಪೂಜೆ ಬಗ್ಗೆ ಅದು ಮೌನವಾಗಿದೆ.
ಭೂಮಿ ಪೂಜೆಯ ಭವ್ಯ ಸಮಾರಂಭಕ್ಕೆ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಆಹ್ವಾನಿಸಲಾಗಿಲ್ಲ. ಆದರೆ, ಆಹ್ವಾನಿಸದಿದ್ದರೂ, ಅಯೋಧ್ಯೆಗೆ ಹೋಗುವ ಮೂಲಕ ಬಿಜೆಪಿ ಕಾರ್‍ಯತಂತ್ರವನ್ನು ವಿಫಲಗೊಳಿಸಬೇಕು ಎಂಬ ಅಭಿಪ್ರಾಯವನ್ನು ಜಿತಿನ್ ಪ್ರಸಾದ ಅವರಂತಹ ಅನೇಕ ಯುವ ನಾಯಕರು ವ್ಯಕ್ತ ಪಡಿಸಿದ್ದಾರೆ.
ಪಕ್ಷದಲ್ಲಿ ತಮಗಾಗಿ ಒಂದು ಸ್ಥಾನ ಸೃಷ್ಟಿಸಿಕೊಳ್ಳಲು ಯತ್ನಿಸುತ್ತಿರುವ ಹೂಡಾ ಮತ್ತು ಪ್ರಸಾದ ಅವರಂತಹ ಕಿರಿಯ ನಾಯಕರು, ಕಾಂಗ್ರೆಸ್ ಈಗ ತನ್ನ ಅಚ್ಚನ್ನು ಬದಲಾಯಿಸಬೇಕಾಗಿದೆ, ಮೌನವಾಗಿರುವುದು ಬಿಜೆಪಿಗೆ ಅನುಕೂಲಕರವಾಗುತ್ತದೆ ಎಂದು ಅರ್ಥಮಾಡಿಕೊಂಡಿದ್ದಾರೆ.
ವಾಸ್ತವವಾಗಿ, ಸೋನಿಯಾ ಗಾಂಧಿಯವರೊಂದಿಗಿನ ಸಭೆಯಲ್ಲಿ ಕೆಲವರು ರಾಮಮಂದಿರದ ಶ್ರೇಯಸ್ಸನ್ನು  ಪಡೆಯಲು ಕಾಂಗ್ರೆಸ್ ಹಿಂಜರಿಯಬಾರದು ಎಂದು ಅಭಿಪ್ರಾಯಪಟ್ಟರು. ಮೂಲತಃ ರಾಮಮಂದಿರದ ಬೀಗಗಳನ್ನು ತೆರೆದದ್ದು ರಾಜೀವ ಗಾಂಧಿಯವರೇ ಎಂದು ಕೆಲವು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಕಾರ್‍ಯದಲ್ಲಿ ಇದ್ದದ್ದು ಒಂದು ಸಣ್ಣ ಜನಸಮೂಹ ಎಂಬುದಾಗಿ ಹೇಳುವ ಮೂಲಕ ಇತಿಹಾಸಕಾರರು ಇದನ್ನು ನಿರಾಕರಿಸುತ್ತಾರಾದರೂ, ರಾಜೀವ ಗಾಂಧಿ ಅವರು ಮೌನವಾಗಿ ಇರುವ ಮೂಲಕ ಇದಕ್ಕೆ ಅವಕಾಶ ನೀಡಿದ್ದರು ಎಂದು ಯುವ ಕಾಂಗ್ರೆಸ್ಸಿಗರು ಪ್ರತಿಪಾದಿಸುತ್ತಾರೆ.
ಏನೇ ಇರಲಿ, ಕಾಂಗ್ರೆಸ್ ತನ್ನ ಬೆರಳುಗಳನ್ನು ಸುಟ್ಟುಕೊಂಡಿದೆ ಎಂಬುದು ಸತ್ಯ. ಪ್ರಿಯಾಂಕಾ ಅವರ ಉಸ್ತುವಾರಿಯೊಂದಿಗೆ, ಪಕ್ಷವು ಹತಾಶ ಸ್ಥಿತಿಯ ಬದಲಾವಣೆಗಾಗಿ ಪ್ರಯತ್ನಿಸುವುದು ಮುಖ್ಯವಾಗಿದೆ. ೨೦೧೯ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಅವರು ಕೂಡಾ ಅನೇಕ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಹಿಂದುತ್ವದ ಹಾದಿ ಹಿಡಿಯುವಲ್ಲಿ ತಾವೂ ಹಿಂದಿಲ್ಲ ಎಂದು ಬಿಂಬಿಸುವ ಯತ್ನ ಮಾಡಿದ್ದರು. ಆದರೆ ಫಲಿತಾಂಶಗಳು ತೋರಿಸಿದಂತೆ, ಇದು ಸ್ಪಷ್ಟವಾಗಿ ಸಾಕಾಗಲಿಲ್ಲ.
ಕಾಂಗ್ರೆಸ್ ಪಕ್ಷವು ಭೂಮಿ ಪೂಜೆಯನ್ನು ಬೆಂಬಲಿಸಬೇಕು. ನಾಯಕರು ಸಮಾರಂಭ ವೀಕ್ಷಿಸುವುದು ಟಿವಿಗಳಲ್ಲಿ ಮೂಡಿಬರಬೇಕು ಎಂದು ಪಕ್ಷದ ಯುವ ನಾಯಕರು ಭಾವಿಸುತ್ತಾರೆ. ಇಲ್ಲದೇ ಹೋದಲ್ಲಿ ಅವಕಾಶ ಬಳಕೆಯಲ್ಲಿ ಪಕ್ಷವು ತುಂಬಾ ಹಿಂದೆ ಬೀಳಲಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.

Advertisement