Showing posts with label Adhyathma/ Temples/ Belief. Show all posts
Showing posts with label Adhyathma/ Temples/ Belief. Show all posts

Friday, January 1, 2021

ದೇವಾಲಯ ಪುನರ್ ನಿರ್ಮಾಣಕ್ಕೆ ಪಾಕ್ ಪ್ರಾದೇಶಿಕ ಸರ್ಕಾರದ ನೆರವು

 ದೇವಾಲಯ ಪುನರ್ ನಿರ್ಮಾಣಕ್ಕೆ ಪಾಕ್  ಪ್ರಾದೇಶಿಕ ಸರ್ಕಾರದ ನೆರವು

ಇಸ್ಲಾಮಾಬಾದ್: ವಾಯವ್ಯ ಪಾಕಿಸ್ತಾನದಲ್ಲಿನ ಖೈಬರ್ ಪಖ್ತೂನ್ ಕ್ವಾದಲ್ಲಿ ಮುಸ್ಲಿಂ ಜನಸಮೂಹದಿಂದ ನಾಶವಾದ ಹಿಂದೂ ದೇವಾಲಯವನ್ನು ಪ್ರಾಂತೀಯ ಸರ್ಕಾರದ ಹಣವನ್ನು ಬಳಸಿಕೊಂಡು ಪುನರ್ನಿರ್ಮಿಸಲಾಗುವುದು ಪ್ರಾದೇಶಿಕ ಸರ್ಕಾರದ ಮಾಹಿತಿ ಸಚಿವರು 2021ರ ಜನವರಿ 01ರ ಶುಕ್ರವಾರ ತಿಳಿಸಿರುವುದಾಗಿಅಲ್ ಜಜೀರಾ ಪತ್ರಿಕೆ ವರದಿ ಮಾಡಿದೆ.

ಪ್ರಾಂತೀಯ ರಾಜಧಾನಿ ಪೇಶಾವರದಿಂದ ಆಗ್ನೇಯಕ್ಕೆ ಸುಮಾರು ೧೦೦ ಕಿ.ಮೀ (೬೨ ಮೈಲಿ) ದೂರದಲ್ಲಿರುವ ಕರಕ್ ಪಟ್ಟಣದ ಶ್ರೀ ಪರಮಹಂಸ ಜಿ ಮಹಾರಾಜ್ ಸಮಾಧಿ ಮತ್ತು  ದೇವಾಲಯದ ಮೇಲೆ ಬುಧವಾರ ನಡೆದ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಸ್ಥಳೀಯ ಮುಸ್ಲಿಂ ನಾಯಕ ಸೇರಿದಂತೆ ಸುಮಾರು ಎರಡು ಡಜನ್ ಜನರನ್ನು ಪೊಲೀಸರು ಬಂಧಿಸಿದ್ದಾರೆ.

"ದಾಳಿಯಿಂದ ಉಂಟಾದ ಹಾನಿಗೆ ನಾವು ವಿಷಾದಿಸುತ್ತೇವೆ" ಎಂದು ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್--ಇನ್ಸಾಫ್ (ಪಿಟಿಐ) ಪಕ್ಷಕ್ಕೆ ಸೇರಿದ ಪ್ರಾಂತೀಯ ಮಾಹಿತಿ ಸಚಿವ ಕಮ್ರಾನ್ ಬಂಗಾಶ್ ಹೇಳಿದ್ದಾರೆ.

"ದೇವಾಲಯ ಮತ್ತು ಪಕ್ಕದ ಮನೆಯ ಪುನರ್ನಿರ್ಮಾಣಕ್ಕೆ ಮುಖ್ಯಮಂತ್ರಿ ಆದೇಶಿಸಿದ್ದಾರೆ" ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಹಿಂದೂ ಗುಂಪಿನ ಒಡೆತನದ ಪಕ್ಕದ ಕಟ್ಟಡವೊಂದನ್ನು ನವೀಕರಣವನ್ನು ವಿರೋಧಿಸಿ ಸುಮಾರು ,೫೦೦ ಜನರು ದೂರದ ಹಳ್ಳಿಯ ದೇವಸ್ಥಾನದ ಮೇಲೆ ದಾಳಿ ನಡೆಸಿದ್ದರು. ಕಟ್ಟqಕ್ಕೆ ಕಿಚ್ಚಿಡುವ ಮುನ್ನ ಗೋಡೆಗಳನ್ನು ಒಡೆಯಲು ಅವರು ಸುತ್ತಿಗೆಗಳನ್ನು ಬಳಸಿದ್ದರು ಎಂದು ವರದಿ ಹೇಳಿದೆ.

ಹಿಂದೂ ಸಮುದಾಯದ ಬೆಂಬಲದೊಂದಿಗೆ ಆದಷ್ಟು ಬೇಗ ನಿರ್ಮಾಣ ಪ್ರಾರಂಭವಾಗಲಿದ್ದು, ಸ್ಥಳದಲ್ಲಿ ಭದ್ರತೆ ಒದಗಿಸಲಾಗುವುದು ಎಂದು ಬಂಗಾಶ್ ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಸುಮಾರು ೪೫ ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಇರ್ಫಾನುಲ್ಲಾ ಖಾನ್ ತಿಳಿಸಿದ್ದಾರೆ. ಸ್ಥಳೀಯ ಮುಸ್ಲಿಂ ಮುಖಂಡ ಮುಲ್ಲಾ ಷರೀಫ್ ಮತ್ತಿತರರು ಜನಸಮೂಹವನ್ನು ಪ್ರಚೋದಿಸಿದರೆಂಬ ಆರೋಪ ಇರುವುದಾಗಿ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನದ ಅತಿದೊಡ್ಡ ಇಸ್ಲಾಮಿಕ್ ಪಕ್ಷಗಳಲ್ಲಿ ಒಂದಾದ ಜಾಮಿಯತ್ ಉಲೆಮಾ--ಇಸ್ಲಾಂ (ಜೆಯುಐ-ಎಫ್) ಜಿಲ್ಲಾ ನಾಯಕ ಮುಲ್ಲಾ ಮಿರ್ಜಾ ಅಕೀಮ್ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ಇರ್ಫಾನುಲ್ಲಾ ಖಾನ್ ಹೇಳಿದರು.

ಸುಪ್ರೀಂಕೋರ್ಟ್ ಆದೇಶ: ದೇವಾಲಯದ ವಿನಾಶದ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಗುರುವಾರ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಆದೇಶಿಸಿದೆ. ದೇಗುಲ ಧ್ವಂಸ ಘಟನೆಯು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದಿಂದ ಖಂಡನೆಗೆ ಗುರಿಯಾಯಿತು.

ಸಿಂಧ್ ಪ್ರಾಂತ್ಯದ ರಾಜಧಾನಿ ಮತ್ತು ದೇಶದ ಹೆಚ್ಚಿನ ಹಿಂದೂಗಳು ವಾಸಿಸುವ ಕರಾಚಿಯಲ್ಲಿ ೨೦೦ ಕ್ಕೂ ಹೆಚ್ಚು ಜನರು ನ್ಯಾಯಕ್ಕಾಗಿ ಒತ್ತಾಯಿಸಿ ಸುಪ್ರೀಂ ಕೋರ್ಟಿನ ಹೊರಗೆ ಪ್ರತಿಭಟನೆ ನಡೆಸಿದರು.

ನೀವು ಇತರ ಜನರ ಧರ್ಮವನ್ನು ಗೌರವಿಸಬೇಕು. ನಾವು ಪಾಕಿಸ್ತಾನಿಗಳು, ಮತ್ತು ದೇವರ ಸಲುವಾಗಿ ಯಾರೂ ನಮಗೆ ನಿಷ್ಠೆಯ ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ ಎಂದು ಸಿಂಧ್ ಪ್ರಾಂತೀಯ ಸಭೆಯ ಹಿಂದೂ ಸದಸ್ಯ ಮಂಗ್ಲಾ ಶರ್ಮಾ ಹೇಳಿದರು.

೧೯೯೭ ರಲ್ಲಿ ಇದೇ ರೀತಿಯ ಪರಿಸ್ಥಿತಿಯಲ್ಲಿ ನಾಶವಾದ ದೇವಾಲಯವನ್ನು ೨೦೧೫ ರಲ್ಲಿ ಉನ್ನತ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪುನರ್ನಿರ್ಮಿಸಲಾಯಿತು.

ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ

ಪ್ರದೇಶದಲ್ಲಿ ಯಾವುದೇ ಹಿಂದೂಗಳು ವಾಸಿಸುತ್ತಿಲ್ಲವಾದರೂ, ಭಕ್ತರು ಆಗಾಗ್ಗೆ ದೇವಾಲಯ ಮತ್ತು ಅದರ ಸಮಾಧಿಗೆ ಭೇಟಿ ನೀಡಿ ಹಿಂದೂ ಸಂತ ಶ್ರೀ ಪರಮಹಂಸರಿಗೆ ಗೌರವ ಸಲ್ಲಿಸುತ್ತಾರೆ, ಅವರು ಪಾಕಿಸ್ತಾನ ೧೯೪೭ರಲ್ಲಿ ಜನ್ಮ ತಳೆಯುವುದಕ್ಕೆ ಕಾರಣವಾದ ಭಾರತ ವಿಭಜನೆಗೆ ಮುನ್ನ ಅಲ್ಲಿಯೇ ವಿಧಿವಶರಾಗಿದ್ದರು.

ಪಾಕಿಸ್ತಾನದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಸಾಮಾನ್ಯವಾಗಿ ಒಟ್ಟಿಗೆ ಶಾಂತಿಯುತವಾಗಿ ವಾಸಿಸುತ್ತಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ಇತg ದಾಳಿಗಳು ಹೆಚ್ಚಿವೆ.

ಕಳೆದ ವರ್ಷ, ಅಮೆರಿಕವು ಪಾಕಿಸ್ತಾನವನ್ನು ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಗಾಗಿ "ನಿರ್ದಿಷ್ಟ ಕಳವಳಕಾರಿ ದೇಶಗಳ" ಪಟ್ಟಿಯಲ್ಲಿ ಇರಿಸಿತು.

ದೇಶದ ಧಾರ್ಮಿಕ ವ್ಯವಹಾರಗಳ ಸಚಿವ ನೂರುಲ್ ಹಕ್ ಖಾದ್ರಿ ದಾಳಿಯನ್ನು "ಪಂಥೀಯ ಸಾಮರಸ್ಯದ ವಿರುದ್ಧದ ಪಿತೂರಿ" ಎಂದು ಕರೆದರು.

ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಜಾರಿ, "ನಮ್ಮ ಎಲ್ಲ ನಾಗರಿಕರ ಮತ್ತು ಅವರ ಪೂಜಾ ಸ್ಥಳಗಳ ಸುರಕ್ಷತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವ" ಜವಾಬ್ದಾರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.

ಪ್ರಧಾನಿ ಖಾನ್ ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ಅವರ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಪತ್ರಿಕಾ ವರದಿ ತಿಳಿಸಿದೆ.

"ಪಾಕಿಸ್ತಾನದಲ್ಲಿ ನಮ್ಮ ಮುಸ್ಲಿಮೇತರ ನಾಗರಿಕರನ್ನು ಅಥವಾ ಅವರ ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಕಟ್ಟುನಿಟ್ಟಾಗಿ ವ್ಯವಹರಿಸಲಾಗುವುದು ಎಂದು ನಾನು ನಮ್ಮ ಜನರಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ನಮ್ಮ ಅಲ್ಪಸಂಖ್ಯಾತರು ದೇಶದ ಸಮಾನ ನಾಗರಿಕರುಎಂದು ಖಾನ್ ಫೆಬ್ರವರಿಯಲ್ಲಿ ಟ್ವೀಟ್ ಮಾಡಿದ್ದರು.

ಪಾಕಿಸ್ತಾನದಲ್ಲಿ ಹಿಂದೂ ದೇವಳ ಧ್ವಂಸ: ಭಾರತದ ಪ್ರತಿಭಟನೆ

 ಪಾಕಿಸ್ತಾನದಲ್ಲಿ ಹಿಂದೂ ದೇವಳ  ಧ್ವಂಸ: ಭಾರತದ ಪ್ರತಿಭಟನೆ

ನವದೆಹಲಿ: ಖೈಬರ್ ಪಖ್ತೂನ್ಕ್ವಾದ ಕರಕ್ ಜಿಲ್ಲೆಯಲ್ಲಿ ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸಿದ ಘಟನೆಯ ಬಗ್ಗೆ ಖಾರವಾಗಿ ಪ್ರತಿಕ್ರಿಸಿರುವ ಭಾರತ ಪಾಕಿಸ್ತಾನಕ್ಕೆ ಔಪಚಾರಿಕ ಪ್ರತಿಭಟನೆಯನ್ನು ಸಲ್ಲಿಸಿದೆ.

" ವಿಷಯವನ್ನು ಪಾಕಿಸ್ತಾನದ ಜೊತೆಗೆ ಅಧಿಕೃತವಾಗಿ ಕೈಗೆತ್ತಿಕೊಳ್ಳಲಾಯಿತು ಮತ್ತು ಪ್ರಬಲ ಪ್ರತಿಭಟನೆ ಸಲ್ಲಿಸಲಾಯಿತು ಎಂದ ಹೆಸರು ಹೇಳಲು ಇಚ್ಛಿಸದ, ಸುದ್ದಿ ಮೂಲ 2021ರ ಜನವರಿ 01ರ ಶುಕ್ರವಾರ  ತಿಳಿಸಿತು.

ವಾಯುವ್ಯ ಪಟ್ಟಣವಾದ ಕರಕ್ ತೇರಿ ಗ್ರಾಮದಲ್ಲಿರುವ ಕೃಷ್ಣ ದ್ವಾರ ಮಂದಿರದೊಂದಿಗೆ ಶ್ರೀ ಪರಮಹಂಸ ಜಿ ಮಹಾರಾಜರ ಸಮಾದಿಯನ್ನು ಬುಧವಾರ ಜನಸಮೂಹ ಧ್ವಂಸಗೊಳಿಸಿದೆ.

ದೇವಾಲಯವು ಹೆಚ್ಚುವರಿ ಭೂಮಿಯನ್ನು ಅತಿಕ್ರಮಣ ಮಾಡಿ ಬೆಂಕಿ ಹಚ್ಚಿದೆ ಎಂದು ಜನಸಮೂಹ ಹೇಳಿಕೊಂಡಿದೆ. ಹಿಂದೂ ದೇವಾಲಯದ ಮೇಲೆ ಬುಧವಾರ ದಾಳಿ ನಡೆದ ನಂತರ ನಡೆಸಲಾದ ರಾತ್ರಿ  ಕಾರ್ಯಾಚರಣೆಯಲ್ಲಿ ಕನಿಷ್ಠ ಎರಡು ಡಜನ್ ಜನರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸುಮಾರು ,೫೦೦ ಜನರು ದೇವಾಲಯದ ಮೇಲಿನ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ವರದಿ ಹೇಳಿದೆ.

ಟೆರಿ ಗ್ರಾಮದಲ್ಲಿ ಪೂಜಾ ಸ್ಥಳದ ಮೇಲೆ ನಡೆದ ದಾಳಿಯ ಬಗ್ಗೆ ದೇಶದ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಗುರುವಾರ ಸ್ವ ಇಚ್ಛೆಯಿಂದ ಗಮನ ಸೆಳೆದ ನಂತರ ಬಂಧನಗಳು ನಡೆದಿವೆ.

ಕರಾಚಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತ ಶಾಸಕ ರಮೇಶ್ ಕುಮಾರ್ ಅವರು ದೇವಾಲಯಕ್ಕೆ ಬೆಂಕಿ ಹಚ್ಚಿರುವ ಬಗ್ಗೆ ವಿವರಿಸಿದ ನಂತರ ಮುಖ್ಯ ನ್ಯಾಯಮೂರ್ತಿ ಕ್ರಮ ಕೈಗೊಂಡಿದ್ದಾರೆ. ದೇಶದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಜನವರಿ ರಂದು ವಿಚಾರಣೆ ನಡೆಸಲಿದೆ.

ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವ ನೂರುಲ್ ಹಕ್ ಖಾದ್ರಿ ದಾಳಿಯನ್ನು "ಪಂಥೀಯ ಸಾಮರಸ್ಯದ ವಿರುದ್ಧದ ಪಿತೂರಿ" ಎಂದು ಕರೆದರು. ಖಾದ್ರಿ  ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆ ನಮ್ಮ ಧಾರ್ಮಿಕ, ಸಾಂವಿಧಾನಿಕ, ನೈತಿಕ ಮತ್ತು ರಾಷ್ಟ್ರೀಯ ಜವಾಬ್ದಾರಿ ಗುರುವಾರ ಟ್ವೀಟ್ ಮಾಡಿದ್ದರು.

ಸ್ಥಳೀಯ ಮಾಧ್ಯಮಗಳು ಹಿಂದೂ ಸಮುದಾಯದ ಪ್ರತಿನಿಧಿ ವಕೀಲ ರೋಹಿತ್ ಕುಮಾರ್ ಅವರನ್ನು ಉಲ್ಲೇಖಿಸಿ, ದೇವಾಲಯವು ಒಪ್ಪಿದ ಪ್ರದೇಶವನ್ನು ಮೀರಿಲ್ಲ ಎಂದು ವರದಿ ಮಾಡಿವೆ.

ಏತನ್ಮಧ್ಯೆ, ತೇರಿ ಗ್ರಾಮದಲ್ಲಿ ಪೂಜಾ ಸ್ಥಳವನ್ನು ಪುನರ್ನಿರ್ಮಿಸಬೇಕೆಂದು ಒತ್ತಾಯಿಸಿ ಡಜನ್ಗಟ್ಟಲೆ ಹಿಂದೂಗಳು ಕರಾಚಿ ನಗರದಲ್ಲಿ ಪ್ರದರ್ಶನ ನಡೆಸಿದ್ದಾರೆಂದು ವರದಿ ತಿಳಿಸಿದೆ.

ದೇವಾಲಯದ ಮೇಲೆ ಮುನ್ನ ಮೊದಲು ೧೯೯೭ ರಲ್ಲಿ ಆಕ್ರಮಣ ನಡೆಸಿ ಅದನ್ನು ನೆಲಸಮ ಮಾಡಲಾಗಿತ್ತು. ೨೦೧೫ ರಲ್ಲಿ ಸುಪ್ರೀಂ ಕೋರ್ಟಿನ ಮಧ್ಯಸ್ಥಿಕೆಯ ನಂತರ ಸ್ಥಳೀಯ ಸಮುದಾಯವು ಅದರ ಪುನರ್ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು.

ದೇವಾಲಯದ ಪುನರ್ನಿರ್ಮಾಣದ ಸಮಯದಲ್ಲಿ ದೇವಾಲಯಕ್ಕೆ ಹಂಚಿಕೆಯಾದ ಜಮೀನಿನ ಬಗ್ಗೆ ವಿವಾದ ಉಂಟಾಗಿದ್ದು, ದೇವಾಲಯದ ಬೆಂಬಲಿಗರು ಮತ್ತು ಸ್ಥಳೀಯ ಮುಸ್ಲಿಂ ಧಾರ್ಮಿಕ ಮುಖ್ಯಸ್ಥರ ಮಧ್ಯೆ ಕೆಲವು ತಪ್ಪು ತಿಳುವಳಿಕೆಗಳಿಗೆ ಕಾರಣವಾಯಿತು ಎನ್ನಲಾಗಿದೆ.

೧೯೧೯ ರಲ್ಲಿ ಗುರು ಶ್ರೀ ಪರಮಹಂಸ ದಯಾಳ್ ಅವರ ಪಾರ್ಥಿವ ಶರೀರವನ್ನು ಸ್ಥಳದಲ್ಲಿ ಸಮಾಧಿ ಮಾಡಲಾಗಿತ್ತು ಮತ್ತು ಅಲ್ಲಿ ದೇವಾಲಯವನ್ನು ನಿರ್ಮಿಸಲಾಗಿತ್ತು.

ಮುಸ್ಲಿಂ ಧಾರ್ಮಿಕ ಮುಖ್ಯಸ್ಥರ ಪರಿಷತ್ತಿನ ಶಿಫಾರಸಿನ ಮೇರೆಗೆ ಪಾಕಿಸ್ತಾನ ಸರ್ಕಾರ ಹಿಂದೂ ನಿವಾಸಿಗಳಿಗೆ ಇಸ್ಲಾಮಾಬಾದಿನಲ್ಲಿ ಹೊಸ ದೇವಾಲಯ ನಿರ್ಮಿಸಲು ಅವಕಾಶ ನೀಡಿದ ಕೆಲವೇ ವಾರಗಳ ನಂತರ ದಾಳಿ ನಡೆದಿದೆ.

Advertisement