Showing posts with label Jammu & Kashmir. Show all posts
Showing posts with label Jammu & Kashmir. Show all posts

Wednesday, December 30, 2020

ಕಾಶ್ಮೀರ: ಭದ್ರತಾ ಪಡೆಗಳಿಂದ ೩ ಉಗ್ರರ ಹತ್ಯೆ

 ಕಾಶ್ಮೀರ: ಭದ್ರತಾ ಪಡೆಗಳಿಂದ ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ಲಾವೆಪೊರಾದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಮೂವರು ಸ್ಥಳೀಯ ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಪಡೆಗಳು 2020 ಡಿಸೆಂಬರ್ 30ರ ಬುಧವಾರ ತಿಳಿಸಿವೆ.

ಆದಾಗ್ಯೂ, ಹತ್ಯೆಗೀಡಾದವರ ಕುಟುಂಬಗಳು ಭದ್ರತಾ ಪಡೆಗಳ ಹೇಳಿಕೆಯನ್ನು ಖಂಡಿಸಿ, ಗುಂಡಿನ ಘರ್ಷಣೆಯಲ್ಲಿ ಹತರಾದ ಯುವಕರು ನಾಗರಿಕರು ಎಂದು ಪ್ರತಿಪಾದಿಸಿದ್ದಾರೆ. ಮೃತರ ಕುಟುಂಬ ಸದಸ್ಯರು. ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಯ ಹೊರಗೆ ಕುಟುಂಬಗಳು ಪ್ರತಿಭಟನೆ ನಡೆಸಿದರು.

ಮಂಗಳವಾರ ಸಂಜೆ ಜಮ್ಮು-ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಪ್ರದೇಶಕ್ಕೆ ಮುತ್ತಿಗೆ ಹಾಕಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಉಗ್ರರ ಉಪಸ್ಥಿತಿಯ ಬಗ್ಗೆ ಮಾಹಿತಿ ಲಭಿಸಿತ್ತು ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ.

ತರುವಾಯ ಪ್ರದೇಶದಲ್ಲಿ ಜಂಟಿ ಪಡೆಗಳ ಮೂಲಕ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ತಡರಾತ್ರಿಯ ಹೊತ್ತಿಗೆ, ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಮತ್ತು ಪ್ರದೇಶದ ಕಡೆಗೆ ಎಲ್ಲ ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಸಂಪೂರ್ಣವಾಗಿ ಮುಚ್ಚಲಾಯಿತು ಎಂದು ಮೂಲಗಳು ತಿಳಿಸಿವೆ.

ಗುಂಡಿನ ಘರ್ಷಣೆಯಲ್ಲಿ ಹತರಾದ ಉಗ್ರರು ರಾಷ್ಟ್ರೀಯ ಹೆದ್ದಾರಿಯ ಮೇಲೆ ದೊಡ್ಡ ದಾಳಿಯನ್ನು ಯೋಜಿಸಿದ್ದರು ಎಂದು ಸೇನೆಯು ಹೇಳಿದೆ.

ನಾವು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಗ್ರಗಾಮಿ ಚಲನವಲನ ಬಗ್ಗೆ ಮಾಹಿತಿ ಪಡೆಯುತ್ತಿದ್ದೆವು. ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಮನೆಯೊಳಗೆ ಉಗ್ರರು ಇದ್ದಾರೆ ಎಂಬ ಮಾಹಿತಿ ಬಂದ ನಂತರ ಮಂಗಳವಾರ ಸಂಜೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಅವರನ್ನು ಶರಣಾಗುವಂತೆ ಕೇಳಲಾಯಿತು, ಆದಾಗ್ಯೂ, ಅವರು ಗುಂಡಿನ ದಾಳಿಯಿಂದ ಪ್ರತಿಕ್ರಿಯಿಸಿದರು ಮತ್ತು ರಾತ್ರಿಯವೇಳೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಬೆಳಿಗ್ಗೆ ಕಾರ್ಯಾಚರಣೆಯನ್ನು ಪುನಾರಂಭಿಸಿದಾಗ ಅವರಿಗೆ ಮತ್ತೆ ಶರಣಾಗಲು ಸೂಚಿಸಲಾಯಿತು. ಆದರೆ ಮತ್ತೆ ಗುಂಡು ಹಾರಿಸಲು ಪ್ರಾರಂಭಿಸಿದರು ಮತ್ತು ಪಡೆಗಳ ಮೇಲೆ ಗ್ರೆನೇಡುಗಳನ್ನು  ಎಸೆದರು, ಇದು ಅವರಿಗೆ ಶರಣಾಗುವ ಉದ್ದೇಶವಿಲ್ಲ ಎಂದು ನಮಗೆ ಸುಳಿವು ನೀಡಿತು ಎಂದು ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಕಿಲೋ ಫೋರ್ಸ್ ಎಚ್.ಎಸ್. ಸಾಹಿ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಗುಂಡಿನ ಘರ್ಷಣೆಯಲ್ಲಿ ಹತರಾದ ಮೂವರು ಯುವಕರ ಕುಟುಂಬಗಳು ಅವರನ್ನು ತುರ್ಕವಾಂಗಂ ಶೋಪಿಯಾನ್‌ನ ಜುಬೈರ್ ಅಹ್ಮದ್, ಪುತ್ರಿಗಮ್ ಪುಲ್ವಾಮಾದ ಅಜಾಜ್ ಮಕ್ಬೂಲ್ ಮತ್ತು ಅಥರ್ ಮುಷ್ತಾಕ್ ಎಂದು ಗುರುತಿಸಿವೆ.

ಕುಟುಂಬಗಳು ಮೃತರು ವಿದ್ಯಾರ್ಥಿಗಳೆಂದು ಹೇಳಿದ್ದು, ಮಂಗಳವಾರ ತಮ್ಮ ಮನೆ ತೊರೆದಿದ್ದು, ಅವರನ್ನು ಎತ್ತಿಕೊಂಡುಹೋಗಿ ನಂತರ ಗುಂಡಿನ ಘರ್ಷಣೆಯಲ್ಲಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದಾರೆ.

ಗುಂಡಿನ ಘರ್ಷಣೆ ಬಗ್ಗೆ ಅಧಿಕಾರಿಗಳು ಸ್ಪಷ್ಟ ಪಡಿಸಬೇಕು ಎಂದು ಜಮ್ಮು -ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

"ಶೋಪಿಯಾನಿನ  ನಕಲಿ ಮುಖಾಮುಖಿಯ ನಂತರ ಕಳೆದ ಕೆಲವು ತಿಂಗಳುಗಳಲ್ಲಿ ಜಮ್ಮು- ಕಾಶ್ಮೀರದಲ್ಲಿನ  ಇತರ ಕುಟುಂಬಗಳು ತಮ್ಮ ಮಕ್ಕಳು ನಿರಪರಾಧಿಗಳು ಮತ್ತು ಗುಂಡಿನ ಘರ್ಷಣೆಯಲ್ಲಿ ಹತರಾದರು ಎಂದು ಆರೋಪಿಸಿದ್ದಾರೆ. ಅಧಿಕಾರಿಗಳು ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ ಎಂದು ಮೆಹಬೂಬಾ ಟ್ವೀಟ್ ಮಾಡಿದ್ದಾರೆ.

ಬುಧವಾರ ಕಾರ್ಯಾಚರಣೆ ಮುಗಿದ ನಂತರವೂ ಪ್ರದೇಶದಲ್ಲಿ ಕಲ್ಲು ತೂರಾಟ ವರದಿಯಾಗಿದೆ.

ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಈವರೆಗೆ ೨೦೩ ಉಗ್ರರು ಹತರಾಗಿದ್ದಾರೆ, ಅವರಲ್ಲಿ ೧೬೬ ಸ್ಥಳೀಯ ಉಗ್ರರು, ಹೆಚ್ಚಿನವರು ದಕ್ಷಿಣ ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಕೊಲ್ಲಲ್ಪಟ್ಟರು. ಭದ್ರತಾ ಪಡೆಗಳು ೪೯ ಉಗ್ರರನ್ನು ಬಂಧಿಸಿವೆ ಮತ್ತು ಅವರಲ್ಲಿ ಒಂಬತ್ತು ಮಂದಿ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

೨೦೨೦ ರಲ್ಲಿ ೯೬ ಭಯೋತ್ಪಾದನೆ ಸಂಬಂಧಿತ ಘಟನೆಗಳು ನಡೆದಿವೆ. ೪೩ ನಾಗರಿಕರು ಸಾವನ್ನಪ್ಪಿದ್ದರೆ, ೯೨ ಮಂದಿ ಘಟನೆಗಳಲ್ಲಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ೨೦೧೯ ರಲ್ಲಿ ೪೭ ನಾಗರಿಕರು ಸಾವನ್ನಪ್ಪಿದರು ಮತ್ತು ೧೮೫ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು.

Saturday, December 26, 2020

ಜಮ್ಮು –ಕಾಶ್ಮೀರಕ್ಕೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ

 ಜಮ್ಮು –ಕಾಶ್ಮೀರಕ್ಕೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ

ನವದೆಹಲಿ: ’ದೆಹಲಿಯಲ್ಲಿನ ನನ್ನ ಟೀಕಾಕಾರರು ಜಮ್ಮು ಮತ್ತು ಕಾಶ್ಮೀರದಿಂದ ಪಾಠ ಕಲಿಯಬೇಕು ಎಂದು ವಿರೋಧ ಪಕ್ಷಗಳಿಗೆ 2020 ಡಿಸೆಂಬರ್ 26ರ ಶನಿವಾರ ಟಾಂಗ್ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರಕ್ಕೆ ಪ್ರಿಯವಾದಆಯುಷ್ಮಾನ್ ಭಾರತ ವೈದ್ಯಕೀಯ ವಿಮಾ ಯೋಜನೆಯನ್ನು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಿಸಿದರು.

ಪಂಚಾಯತ್ ಚುನಾವಣೆ ವಿಳಂಬದ ವಿಷಯದಲ್ಲಿ ಹಿಂದಿನ ಜಮ್ಮು ಮತ್ತು ಕಾಶ್ಮೀg ರಾಜ್ಯದಲ್ಲಿ ಪಿಡಿಪಿಯೊಂದಿಗೆ ಮಾಡಿಕೊಳ್ಳಲಾಗಿದ್ದ ಹೊಂದಾಣಿಕೆಯನ್ನು ರದ್ದು ಪಡಿಸಿ ಬಿಜೆಪಿ ಅಧಿಕಾರದಿಂದ ಹೊರನಡೆದಿತ್ತು ಎಂದು ಪ್ರಧಾನಿಯವರು ಆಯುಷ್ಮಾನ್ ಭಾರತ ಯೋಜನೆಯನ್ನು ಕೇಂದ್ರಾಡಳಿತ ಪ್ರದೇಶಕ್ಕೆ ವಿಸ್ತರಿಸುತ್ತಾ ಹೇಳಿದರು.

ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯ ಮುಕ್ತಾಯದೊಂದಿಗೆ ಜಮ್ಮು ಮತ್ತು ಕಾಶ್ಮೀರದಲಿ ಹೊಸ ದಶಕವನ್ನು ಬರೆಯಲಾಗಿದೆ ಎಂದು ಅವರು ನುಡಿದರು.

"ನಾವು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸರ್ಕಾರದ ಭಾಗವಾಗಿದ್ದೆವು ಆದರೆ ಪಂಚಾಯತ್ ಚುನಾವಣೆ ವಿಳಂಬದ ಕಾರಣಕ್ಕಾಗಿ ನಾವು ಸರ್ಕಾರದಿಂದ ಹೊರಬಂದಿದ್ದೆವು ಮತ್ತು ಸಾಮಾನ್ಯ ವ್ಯಕ್ತಿಯೊಂದಿಗೆ ರಸ್ತೆಗೆ ಬಂದೆವು ಎಂದು ಪ್ರಧಾನಿ ಹೇಳಿದರು.

ಡಿಡಿಸಿ ಮತದಾನದ ಮುಕ್ತಾಯದೊಂದಿಗೆ, ಮೂರು ಹಂತದ ತಳಮಟ್ಟದ ಪ್ರಜಾಪ್ರಭುತ್ವದ [ಬ್ಲಾಕ್, ಪಂಚಾಯತ್ ಮತ್ತು ಜಿಲ್ಲಾ ಮಂಡಳಿಗಳ] ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಕನಸನ್ನು ನಾವು ನನಸಾಗಿಸಿದ್ದೇವೆ. ನಾನು ಚುನಾವಣೆಯ ಪ್ರತಿಯೊಂದು ಹಂತವನ್ನು ಅನುಸರಿಸಿದ್ದೇನೆ ಮತ್ತು ತೀವ್ರವಾದ ಚಳಿ ಮತ್ತು ಸಾಂಕ್ರಾಮಿಕ ರೋಗದ ರೋಗದ ನಡುವೆಯೂ ಯುವಕರು, ವೃದ್ಧರು ಮತ್ತು ಮಹಿಳೆಯರು ಮತ ಚಲಾಯಿಸಲು ಹೇಗೆ ಬಂದರು ಎಂದು ನಾನು ನೋಡಿದ್ದೇನೆ. ಹಿಂದಿನದನ್ನು ಬಿಟ್ಟು ಉತ್ತಮ ಭವಿಷ್ಯಕ್ಕಾಗಿ ಹಾರೈಸುವ ಕನಸನ್ನು ನಾನು ಅವರ ಕಣ್ಣುಗಳಲ್ಲಿ ನೋಡಿದ್ದೇನೆ. ಜಮ್ಮು ಮತ್ತು ಕಾಶ್ಮೀರ ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಿದೆ ಎಂದು ಶಾಂತಿಯುತ ಚುನಾವಣೆ ನಡೆಸಿದ್ದಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಅವರ ತಂಡವನ್ನು ಅಭಿನಂದಿಸುತ್ತಾ ಮೋದಿ ಹೇಳಿದರು.

ಪುದುಚೇರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವಿಳಂಬ ಮಾಡಿದ್ದಕ್ಕಾಗಿ ಕಾಂಗ್ರೆಸ್ಸನ್ನು ಹೆಸರಿಸದೆಯೇ ಪ್ರಧಾನಿ ತರಾಟೆಗೆ ತೆಗೆದುಕೊಂಡರು.

"ದೆಹಲಿಯಲ್ಲಿ ನನ್ನ ಮೇಲೆ ದಾಳಿ ನಡೆಸುವ ಜನರಿದ್ದಾರೆ, ಅವರು ನನಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಲಿಸಲು ಪ್ರಯತ್ನಿಸುತ್ತಾರೆ ಆದರೆ ಕೇಂದ್ರಾಡಳಿತ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸೂಚಿಸಿದ ಸುಪ್ರೀಂಕೋರ್ಟಿನ ೨೦೧೮ರ ತೀರ್ಪಿನ ಹೊರತಾಗಿಯೂ ಇದೇ ಜನರು ಇಲ್ಲಿಯವರೆಗೆ ಚುನಾವಣೆಗಳು ನಡೆಯದಂತೆ ತಡೆದಿದ್ದಾರೆ. ಅವರು ಪ್ರಜಾಪ್ರಭುತ್ವವನ್ನು ನಂಬುವುದಿಲ್ಲ ಎಂದು ಮೋದಿ ಆರೋಪಿಸಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಮೂರು ಮಂತ್ರಗಳಾದಇನ್ಸಾನಿಯತ್, ಜಮ್ಹೂರಿಯಾತ್ ಮತ್ತು ಕಾಶ್ಮೀರಿಯತ್ ಆಧರಿಸಿ ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿ ಕಾರ್‍ಯಗಳು ನಡೆಯುತ್ತಿವೆ ಎಂದು ಪ್ರಧಾನಿ ಎಂದು ಹೇಳಿದರು.

ಸುಮಾರು ೮೦೦ ಕ್ಷೇಮ ಕೇಂದ್ರಗಳ ಅಭಿವೃದ್ಧಿ, ಲಕ್ಷಕ್ಕೂ ಹೆಚ್ಚು ಜನರಿಗೆ ಆರೋಗ್ಯ ವಿಮಾ ಯೋಜನೆಯ ಮೂಲಕ ಲಕ್ಷ ರೂ.ಗಳವರೆಗೆ ಆರೋಗ್ಯ ವಿಮೆಯ ಸವಲತ್ತು, ಕಣಿವೆಯ ಸೇಬು ಬೆಳೆಗಾರರಿಂದ ಸುಮಾರು ೧೨ ಲಕ್ಷ ಮೆಟ್ರಿಕ್ ಟನ್ ಸೇಬು ಖರೀದಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮೋದಿ ವಿವರಿಸಿದರು.

ಮುಂದಿನ ಎರಡು-ಮೂರು ವರ್ಷಗಳಲ್ಲಿ ಕೇಂದ್ರಾಡಳಿತ ಪ್ರದೇಶದ ರೈಲ್ವೆ ಜಾಲವನ್ನು ದೇಶದ ಉಳಿದ ಭಾಗಗಳ ಜೊತೆಗೆ ಸಂಪರ್ಕಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಅದೇ ಅವಧಿಯಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರತಿ ಮನೆಗೆ ಕೊಳವೆ ನೀರನ್ನು ವಿಸ್ತರಿಸಲು ಆಡಳಿತವು ಪ್ರಯತ್ನಿಸುತ್ತಿದೆ ಎಂದೂ ಅವರು ಹೇಳಿದರು.

Advertisement