Showing posts with label ಅಯೋಧ್ಯೆ. Show all posts
Showing posts with label ಅಯೋಧ್ಯೆ. Show all posts

Tuesday, November 25, 2025

ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!

ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ 2025 ನವೆಂಬರ್‌ 25ರ ಸೋಮವಾರ ಧರ್ಮ ಧ್ವಜವನ್ನು ಹಾರಿಸಿದರು.

ಇದರೊಂದಿಗೆ ದೇವಾಲಯ ನಿರ್ಮಾಣದ ಆಚರಣೆಯ ಪ್ರತಿವಿಧಿಯೂ ಶುದ್ಧತೆ ಮತ್ತು ಶ್ರದ್ಧೆಯೊಂದಿಗೆ ಸಂಪೂರ್ಣಗೊಂಡಿತು.

ಈ ಕ್ಷಣವು ಕೋಟ್ಯಂತರ ಜನರ ಭಕ್ತಿ ಮತ್ತು ತಲೆತಲಾಂತರದ ಪ್ರಾರ್ಥನೆಗಳಿಂದ ಸಂಪನ್ನಗೊಂಡಿದೆ.

ಯಾವುದೇ ದೇವಾಲಯದ ಆಚರಣೆಗಳು ಅಂತಿಮ ಹಂತಕ್ಕೆ ತಲುಪಿದಾಗ, ಪ್ರತಿ ವಿಧಿಯು ಶುದ್ಧತೆ ಮತ್ತು ಶ್ರದ್ಧೆಯಿಂದ ಸಂಪೂರ್ಣಗೊಂಡಿದೆ ಎಂಬುದನ್ನು ಸೂಚಿಸಲು ಈ ಪವಿತ್ರ ಧ್ವಜವನ್ನು ಏರಿಸಲಾಗುತ್ತದೆ.

ಶ್ರೀರಾಮ ಮತ್ತು ಸೀತಾಮಾತೆಯ ಕಲ್ಯಾಣ ಸಂಪನ್ನಗೊಂಡ ದಿನ ಎಂಬುದಾಗಿ ನಂಬಲಾಗಿರುವ ಈದಿನ ನಡೆದ ಈ ಸಮಾರಂಭದೊಂದಿಗೆ, ಶ್ರೀ ರಾಮ ಜನ್ಮಭೂಮಿ ಮಂದಿರವು ಈಗ ವಿಧ್ಯುಕ್ತವಾಗಿ ಪೂರ್ಣಗೊಂಡಿತು. ಇದು ಪ್ರತಿಯೊಬ್ಬ ಭಕ್ತನ ಹೃದಯವನ್ನೂ ಭಾವನೆಗಳಿಂದ ತುಂಬುವಂತೆ ಮಾಡಿತು.

ಧರ್ಮಧ್ವಜಾರೋಹಣದ ಈ ಸಂದರ್ಭಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ನೂರಾರು ಮಂದಿ ಸಂತರು ಸೇರಿದಂತೆ ಸಹಸ್ರಾರು ಗಣ್ಯರು ಸಾಕ್ಷಿಯಾದರು.

(ವೀಡಿಯೊ ಕೃಪೆ: Instagram ನಲ್ಲಿ MyGovindia)

Saturday, March 2, 2024

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

 ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಭಾನುವಾರ ಲೋಕಾರ್ಪಣೆ, ಅಯೋಧ್ಯೆಯ ನಂಟೂ ಉಂಟು..

ಬೆಂಗಳೂರು: ಇದು ಕೇವಲ 30 ದಿನಗಳ ಅವಧಿಯಲ್ಲಿ ನಿರ್ಮಾಣಗೊಂಡ ಕಲ್ಲಿನ ದೇಗುಲ. ಅಷ್ಟೇ ಅಲ್ಲ ಅಯೋಧ್ಯೆಯ ಬಾಲರಾಮನ ಜೊತೆ ನಂಟು ಹೊಂದಿರುವ ದೇವಾಲಯ. ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನವು ಕೇವಲ 30 ದಿನಗಳ ಅವಧಿಯಲ್ಲಿ ನಿರ್ಮಾಣಗೊಳ್ಳುವುದರೊಂದಿಗೆ ಇತಿಹಾಸ ಸೃಷಿಸಿದೆ.

ವಾಸ್ತವವಾಗಿ ಈ ಬಡಾವಣೆಯಲ್ಲಿ ದೇವಾಲಯದ ನಿರ್ಮಾಣ ಆಗಬೇಕು ಎಂಬುದು ಇಲ್ಲಿನ ನಿವಾಸಿಗಳ ಸುಮಾರು ಎರಡು ದಶಕಕ್ಕೂ ಹೆಚ್ಚಿನ ಅವಧಿಯ ಕನಸು. ಸುಮಾರು 20 ವರ್ಷಗಳ ಹಿಂದೆ ಇಲ್ಲಿ ಬಡಾವಣೆ ನಿರ್ಮಾಣ ಮಾಡುವ ಸಮಯದಲ್ಲೇ ಬಡಾವಣೆಯ ನಿರ್ಮಾಪಕರು ಇಲ್ಲಿ ದೇವಾಲಯ ನಿರ್ಮಿಸಿಕೊಡುವ ಭರವಸೆ ಕೊಟ್ಟದ್ದಲ್ಲದೆ ಅದಕ್ಕಾಗಿ ಭೂಮಿ ಪೂಜೆಯನ್ನೂ ನೆರವೇರಿಸಿದ್ದರು.

ಆದರೆ ಕಾರಣಾಂತರಗಳಿಂದ ದೇವಾಲಯ ನಿರ್ಮಾಣ ಕಾರ್ಯ ಮುಂದಕ್ಕೆ ಹೋಗುತ್ತಲೇ ಬಂದಿತ್ತು. ಒಂದು ವರ್ಷದ ಹಿಂದೆ ಬಡಾವಣೆಯ ಹಿರಿಯ ಸದಸ್ಯರು ದೇವಾಲಯ ನಿರ್ಮಾಣ ಮಾಡಲೇಬೇಕು ಎಂಬ ಸಂಕಲ್ಪದೊಂದಿಗೆ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್‌ ರಚಿಸಿಕೊಂಡು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಬಡಾವಣೆಯ ನಿರ್ಮಾಪಕರೂ ದೇವಸ್ಥಾನ ನಿರ್ಮಾಣಕ್ಕೆ ನೆರವಿನ ಹಸ್ತ ನೀಡುವ ಭರವಸೆ ಕೊಟ್ಟರು.

ಆದರೂ ದೇವಾಲಯ ನಿರ್ಮಾಣ ಕಾರ್ಯಕ್ಕೆ ವೇಗ ಲಭಿಸಲಿಲ್ಲ. ಮತ್ತೆ ಮತ್ತೆ ಅಡ್ಡಿ ಆತಂಕಗಳು ಎದುರಾಗುತ್ತಲೇ ಬಂದವು. ಕೊನೆಗೆ ಸಾದಹಳ್ಳಿಯ ಸಾಲಿಗ್ರಾಮ ಭೂ ವರಾಹ ಸ್ವಾಮಿ ಸನ್ನಿಧಿಗೆ ತೆರಳಿ ದೇವಾಲಯ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಿಕೊಂಡ ಸಮಿತಿಯ ಸದಸ್ಯರು ಅಲ್ಲಿನ ಆನಂದ ಗುರೂಜಿ ಮಾರ್ಗದರ್ಶನದಂತೆ ದೇವಸ್ಥಾನ ನಿರ್ಮಾಣಕ್ಕೆ ಮುಂದಾದರು.

2024 ಜನವರಿ 11ರ ನಸುಕಿನಲ್ಲಿ ಅತ್ಯಂತ ಶ್ರೇಷ್ಠ ಮುಹೂರ್ತ ಎಂಬುದಾಗಿ ಪರಿಗಣಿಸಲಾಗಿರುವ ಬ್ರಾಹ್ಮೀ ಮುಹೂರ್ತದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿ ದೇವಾಲಯದ ಪಾಯ ನಿರ್ಮಾಣದ ಕೆಲಸ ಆರಂಭಿಸಿದರು. ಸಮಿತಿಯ ಒಂದು ತಂಡವು ತಮಿಳುನಾಡಿನ ಮಹಾಬಲಿಪುರಂಗೆ ತೆರಳಿ ಇಡೀ ದಿನ ಹುಡುಕಾಡಿ ಶ್ರೀ ವೆಂಕಟೇಶ್ವರ (ಬಾಲಾಜಿ) ಮತ್ತು ಅಭಯ ಆಂಜನೇಯ ಸ್ವಾಮಿಯ ವಿಗ್ರಹಗಳನ್ನು ಆಯ್ಕೆ ಮಾಡಿಕೊಂಡು ಬಂದಿತು.

ಅಯೋಧ್ಯೆಯ ಸಂಬಂಧ!

ಬಡಾವಣೆಯ ಶಿಲ್ಪಿ ಎನ್.‌ ಎಂ. ಬಡಿಗೇರ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ ಮೈಸೂರಿನ ಹೆಗ್ಗಡದೇವನ ಕೋಟೆಯಿಂದ ಕೆಲವು ಕಪ್ಪು ಶಿಲೆ ಅಥವಾ ಕೃಷ್ಣ ಶಿಲೆಗಳನ್ನು ಆಯ್ಕೆ ಮಾಡಿಕೊಂಡು ಬೆಂಗಳೂರಿನ ತಮ್ಮ ನಿವಾಸಕ್ಕೆ ವಿಗ್ರಹಗಳನ್ನು ಕೆತ್ತಲೆಂದೇ ತಂದಿದ್ದರು. ಈ ಬಂಡೆಗಳಲ್ಲಿ ಅವರು ಮಹಾಗಣಪತಿ ಮತ್ತು ಸರಸ್ವತಿ ದೇವಿಯ ವಿಗ್ರಹಗಳನ್ನು ನಿರ್ಮಿಸಿದ್ದಾರೆ. ಅತ್ಯಂತ ವಿಶೇಷವೆಂದರೆ ಈ ವರ್ಷ ಲೋಕಾರ್ಪಣೆಗೊಂಡಿರುವ ಅಯೋಧ್ಯೆಯ ಚಾರಿತ್ರಿಕ ರಾಮ ಮಂದಿರದಲ್ಲಿ ಈಗ ಪ್ರತಿಷ್ಠಾಪನೆಗೊಂಡಿರುವ ಬಾಲರಾಮ ಕೂಡಾ ಇದೇ ಪ್ರದೇಶದ ಕೃಷ್ಣಶಿಲೆಯಿಂದ ನಿರ್ಮಾಣಗೊಂಡಿರುವ ವಿಗ್ರಹ.

ಬಡಾವಣೆಯಲ್ಲಿ ದೇವಾಲಯ ನಿರ್ಮಾಣದ ಪ್ರಸ್ತಾಪ ಬರುತ್ತಿದ್ದಂತೆಯೇ ಬಡಿಗೇರ ಅವರು ತಾವು ನಾಲ್ಕು ವರ್ಷಗಳ ಶ್ರಮದಲ್ಲಿ ನಿರ್ಮಿಸಿದ ಇದೇ ಕೃಷ್ಣ ಶಿಲೆಯ ಶ್ರೀ ಮಹಾಗಣಪತಿ ವಿಗ್ರಹವನ್ನು ದೇವಾಲಯಕ್ಕೆ ನೀಡುವುದಾಗಿ ಘೋಷಿಸಿದರು.


ಅತ್ತ ಮಹಾಬಲಿಪುರಂನಲ್ಲಿ ಬಾಲಾಜಿ ಮತ್ತು ಅಭಯ ಆಂಜನೇಯ ವಿಗ್ರಹದ ಹುಡುಕಾಟಕ್ಕಾಗಿ ತೆರಳಿದ್ದ ತಂಡಕ್ಕೆ ಇಡೀ ದಿನ ಹುಡುಕಾಡಿದರೂ ಯಾವುದೇ ವಿಗ್ರಹ ಮನಸ್ಸಿಗೆ ತೃಪ್ತಿ ನೀಡಿರಲಿಲ್ಲ. ಕೊನೆಗೆ ವಾಪಸಾಗಬೇಕೆಂದು ಯೋಚಿಸಿ ಹೊರಟಾಗ ವಿಗ್ರಹಗಳಿದ್ದ ಪುಟ್ಟ ಅಂಗಡಿಯೊಂದು ಕಂಡಿತು. ಅಲ್ಲಿದ್ದ ವೆಂಕಟೇಶ್ವರ ವಿಗ್ರಹ ಎಲ್ಲರಿಗೂ ತೃಪ್ತಿ ನೀಡಿತು. ಬೆಂಗಳೂರಿನ ದಿಕ್ಕಿಗೆ ಮುಖ ಮಾಡಿ ನಿಂತಿದ್ದ ಈ ವಿಗ್ರಹ ಕಳೆದ ನಾಲ್ಕು ವರ್ಷಗಳಿಂದ ಅಲ್ಲಿ ಮಾರಾಟವಾಗದೆ ಹಾಗೆಯೇ ಉಳಿದಿತ್ತು ಎಂಬುದು ಅಂಗಡಿಕಾರರ ಜೊತೆಗೆ ಮಾತನಾಡಿದಾಗ ತಿಳಿಯಿತು.

ಈ ಬಾಲಾಜಿ ವಿಗ್ರಹದ ಎದುರಿನಲ್ಲೇ ಇದ್ದ ಅಭಯ ಆಂಜನೇಯ ಸ್ವಾಮಿಯ ವಿಗ್ರಹವೂ ತಂಡದ ಗಮನ ಸೆಳೆಯಿತು. ವಿಗ್ರಹ ಆಯ್ಕೆಯ ತಂಡ ಈ ಎರಡೂ ವಿಗ್ರಹಗಳನ್ನು ದೇವಾಲಯದ ಸಲುವಾಗಿ ಆಯ್ಕೆ ಮಾಡಿತು. ಮರುದಿನವೇ ಎರಡೂ ವಿಗ್ರಹಗಳು ಬಡಾವಣೆಗೆ ಬಂದಿಳಿದವು.

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ದಿನವೇ ಬಡಾವಣೆಯ ಮಂದಿರದ ಉದ್ಘಾಟನೆಯೂ ನೆರವೇರಬೇಕು ಎಂಬುದು ಸಮಿತಿಯ ಸದಸ್ಯರ ಆಶಯವಾಗಿತ್ತು. ಆದರೆ ಮತ್ತೆ ವಿಘ್ನಗಳು ಎದುರಾಗಿ ಸುಮಾರು ಜನವರಿ 16ಕ್ಕೆ ದೇವಾಲಯ ನಿರ್ಮಾಣ ಕಾಮಗಾರಿ ನಿಂತಿತು.

ಛಲ ಬಿಡದ ತ್ರಿವಿಕ್ರಮನಂತೆ ಸಮಿತಿ ಸದಸ್ಯರು ಫೆಬ್ರುವರಿ ಮೊದಲ ವಾರದಲ್ಲಿ ಮತ್ತೆ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಸಕ್ರಿಯರಾದರು. ಫೆಬ್ರುವರಿ 3ಕ್ಕೆ ದೇವಾಲಯ ನಿರ್ಮಾಣ ಕಾರ್ಯ ಪುನರಾರಂಭ ಮಾಡಿ, ಫೆಬ್ರುವರಿ 29ರ ವೇಳೆಗೆ ಅದನ್ನು ಪೂರ್ಣಗೊಳಿಸಿದರು.

ಇದೀಗ ಭವ್ಯವಾಗಿ ಎದ್ದು ನಿಂತಿರುವ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗೂ ಶ್ರೀ ದೇವರುಗಳ ಪ್ರಾಣ ಪ್ರತಿಷ್ಠಾಪನೆ 2024ರ ಭಾನುವಾರ ಮಾಘ ಬಹುಳ ಸಪ್ತಮೀ ಅನೂರಾಧ ನಕ್ಷತ್ರ ಪ್ರಾತಃಕಾಲ 9.15ರಿಂದ 10.30ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ನೆರವೇರಲಿದೆ.

ಅದಕ್ಕೆ ಪೂರ್ವಭಾವಿಯಾಗಿ ಶನಿವಾರ ಸಂಜೆಯಿಂದಲೇ ಗಂಗಾಪೂಜೆ ಮತ್ತಿತರ ಧಾರ್ಮಿಕ ವಿಧಿಗಳು ಆರಂಭವಾಗಲಿದೆ.

 

Saturday, May 9, 2020

ಅಯೋಧ್ಯೆ ರಾಮಮಂದಿರಕ್ಕೆ ನೀಡುವ ದೇಣಿಗೆಗಳಿಗೆ ಶೇ.೫೦ರಷ್ಟು ತೆರಿಗೆ ವಿನಾಯಿತಿ

ಅಯೋಧ್ಯೆ ರಾಮಮಂದಿರಕ್ಕೆ ನೀಡುವ ದೇಣಿಗೆಗಳಿಗೆ ಶೇ.೫೦ರಷ್ಟು ತೆರಿಗೆ ವಿನಾಯಿತಿ
ನವದೆಹಲಿ:  ಅಸಾಧಾರಣ ನಡೆಯೊಂದರಲ್ಲಿ ಕೇಂದ್ರ ಸರ್ಕಾರವು  2020 ಮೇ 09ರ ಶನಿವಾರ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ನೀಡುವ ದೇಣಿಗೆಗಳಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿತು.

ಕೇಂದ್ರ ನೇರ ತೆರಿಗೆ ಮಂಡಳಿಯು 2020 ಮೇ ೮ರಂದು ಈ ಬಗ್ಗೆ ಅಧಿಸೂಚನೆಯೊಂದನ್ನು ಹೊರಡಿಸಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ೮೦ ಜಿಯ ಉಪವಾಕ್ಯ (ಬಿ) ಅನ್ವಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವನ್ನು ಐತಿಹಾಸಿಕ ಮಹತ್ವದ ಹಾಗೂ ಪ್ರಸಿದ್ಧ ಸಾರ್ವಜನಿಕ ಆರಾಧನಾ ಸ್ಥಳವೆಂದು ವರ್ಗೀಕರಿಸಲಾಗಿದೆ. ಇದರಿಂದಾಗಿ ೨೦೨೦-೨೧ರ ವಿತ್ತೀಯ ವರ್ಷದಲ್ಲಿ ಟ್ರಸ್ಟ್ಗೆ ದೇಣಿಗೆ ನೀಡುವವರ ಆದಾಯ ತೆರಿಗೆಯಲ್ಲಿ ಶೇ.೫೦ರವರೆಗೆ ವಿನಾಯಿತಿ ನೀಡಬಹುದಾಗಿದೆ ಎಂದ ಹೇಳಿಕೆ ತಿಳಿಸಿತು..

೧೫ ಸದಸ್ಯರನ್ನೊಳಗೊಂಡ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ಕೇಂದ್ರ ಸರ್ಕಾರವು  ಫೆಬ್ರವರಿ ೫ರಂದು ರಚಿಸಿತ್ತು. ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರವನ್ನು ನಿರ್ಮಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದ ಮೂರು ತಿಂಗಳ ಬಳಿಕ ಟ್ರಸ್ಟ್ ರಚನೆಯಾಗಿತ್ತು.

Friday, December 13, 2019

ಅಯೋಧ್ಯಾ ತೀರ್ಪು ಅಂತಿಮ: ಎಲ್ಲ ಪುನರ್ ಪರಿಶೀಲನಾ ಅರ್ಜಿ ವಜಾ

ಅಯೋಧ್ಯಾ ತೀರ್ಪು ಅಂತಿಮ: ಎಲ್ಲ
ಪುನರ್ ಪರಿಶೀಲನಾ ಅರ್ಜಿ ವಜಾ

ರಾಮಮಂದಿರ ನಿರ್ಮಾಣಕ್ಕೆ ದಾರಿ ಸುಗಮಗೊಳಿಸಿದ ಸುಪ್ರೀಂಕೋರ್ಟ್
ನವದೆಹಲಿ: ಅಯೋಧ್ಯೆಯ ವಿವಾದಾತ್ಮಕ ನಿವೇಶನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಾರಿ ಸುಗಮಗೊಳಿಸಿ ಅಯೋಧ್ಯಾ ಪ್ರಕರಣದಲ್ಲಿ ಪಂಚ ಸದಸ್ಯ ಸಂವಿಧಾನ ಪೀಠವು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಪುನರ್ ಪರಿಶೀಲನಾ ಅರ್ಜಿಗಳನ್ನೂ ಸುಪ್ರೀಂಕೋರ್ಟ್  2019 ಡಿಸೆಂಬರ್ 12ರ ಗುರುವಾರ ವಜಾಗೊಳಿಸಿತು.

ಸಂವಿಧಾನ ಪೀಠದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಎಲ್ಲ ೧೮ ಪ್ರಕರಣಗಳನ್ನೂಕೊಠಡಿಯ ಒಳಗೆಪರಿಶೀಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ ಬೋಬ್ಡೆ ನೇತೃತ್ವದ ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವುಅರ್ಹತೆ ಇಲ್ಲಎಂಬ ನೆಲೆಯಲ್ಲಿ ಅವೆಲ್ಲವನ್ನೂ ವಜಾಗೊಳಿಸಿತು.

ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಅಶೋಕ ಭೂಷಣ್, ಎಸ್ ನಜೀರ್ ಮತ್ತು ನಿವೃತ್ತ ಸಿಜೆಐ ರಂಜನ್ ಗೊಗೋಯಿ ಅವರ ಬದಲಿಗೆ ನೇಮಕಗೊಂಡಿದ್ದ ಸಂಜೀವ ಖನ್ನಾ ಅವರು ಪೀಠದ ಇತರ ಸದಸ್ಯರಾಗಿದ್ದರು. ಪೀಠವು ಸೂಕ್ಷ್ಮ ವಿವಾದದಲ್ಲಿ ನಾಲ್ಕು ಮೂಲ ಖಟ್ಲೆಗಳಲ್ಲಿ ಕಕ್ಷಿದಾರರಾಗಿದ್ದವರ ಪುನರ್ ಪರಿಶೀಲನಾ ಅರ್ಜಿಗಳನ್ನು ಮಾತ್ರವೇ ಪರಿಗಣಿಸಿತು.

ಪಂಚ ಸದಸ್ಯ ಸಂವಿಧಾನ ಪೀಠದ ಗುರುವಾರದ ಆದೇಶವು ರಾಮಲಲ್ಲಾನಿಗೆ .೭೭ ಎಕರೆ ವಿವಾದಾತ್ಮಕ ಭೂಮಿಯನ್ನು ನೀಡಿ ನವೆಂಬರ್ ೯ರಂದು ನೀಡಲಾದ ಸರ್ವಾನುಮತದ ತೀರ್ಪಿನ ಅನುಷ್ಠಾನಕ್ಕೆ ಹಾದಿ ಸುಗಮಗೊಳಿಸಿತು.

ಸಲ್ಲಿಕೆಯಾಗಿದ್ದ ೧೮ ಪುನರ್ ಪರಿಶೀಲನಾ ಅರ್ಜಿಗಳಲ್ಲಿ ಅರ್ಜಿಗಳನ್ನು ಹಿಂದಿನ ಖಟ್ಲೆಗಳಲ್ಲಿ ಕಕ್ಷಿದಾರರಾಗಿದ್ದವರು ಸಲ್ಲಿಸಿದ್ದರು ಮತ್ತು ಇತರ ಅರ್ಜಿಗಳನ್ನುಮೂರನೇ ಕಕ್ಷಿದಾರರುಸಲ್ಲಿಸಿದ್ದರು.

ಮೂಲಖಟ್ಲೆಯಲ್ಲಿ ಕಕ್ಷಿದಾರರಾಗಿ ಇಲ್ಲದೇ ಇದ್ದವರು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಗಳನ್ನು ಪರಿಗಣಿಸಲು ಪೀಠವು ತಿರಸ್ಕರಿಸಿತು. ’ಮೂರನೇ ಕಕ್ಷಿದಾರರಪೈಕಿ ೪೦ ಮಂದಿ ನಾಗರಿಕ ಹಕ್ಕುಗಳ ಕಾರ್ಯಕರ್ತರೂ ಸೇರಿದ್ದು ಅವರು ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಲು ಒಟ್ಟಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಪುನರ್ ಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸುವುದರೊಂದಿಗೆ ಅರ್ಜಿಗಳ ಮೇಲೆ ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು ಎಂಬುದಾಗಿ ಕಕ್ಷಿದಾರರು ಸಲ್ಲಿಸಿದ್ದ ಮನವಿ ಕೂಡಾ ವಜಾಗೊಂಡಂತಾಗಿದೆ.

ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ನವೆಂಬರ್ ೯ರಂದು ನೀಡಿದ ತನ್ನ ಸರ್ವಾನುಮತದ ತೀರ್ಪಿನಲ್ಲಿ ಅಯೋಧ್ಯೆಯ .೭೭ ಎಕರೆ ವಿವಾದಾತ್ಮಕ ಭೂಮಿ ಪೂರ್ಣವಾಗಿ ರಾಮಲಲ್ಲಾಗೆ  (ಬಾಲರಾಮ) ಸೇರಿದ್ದು ಎಂಬುದಾಗಿ ಹೇಳಿ, ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಸುನ್ನಿ ವಕ್ಫ್ ಮಂಡಳಿಗೆ ಎಕರೆ ಪರ್ಯಾಯ ಭೂಮಿಯನ್ನು ಹಂಚಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ  ನಿರ್ದೇಶನ ನೀಡಿತ್ತು.

ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಬೆಂಬಲ ಪಡೆದ ಕೆಲವರು ಸೇರಿದಂತೆ ಹಲವಾರು ಮುಸ್ಲಿಮ್ ಕಕ್ಷಿದಾರರು, ೪೦ ಮಂದಿ ಹಕ್ಕು ಕಾರ್ಯಕರ್ತರು, ಹಿಂದೂ ಮಹಾಸಭಾ ಮತ್ತು ನಿರ್ಮೋಹಿ ಅಖಾಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದವರಲ್ಲಿ ಸೇರಿದ್ದರು.

ಸುಪ್ರೀಂಕೋರ್ಟ್ ನಿರ್ಧಾರದಿಂದ ತಾವು ತೊಂದರೆಗೆ ಒಳಗಾಗಿದ್ದೇವೆ ಎಂದು ಹೇಳಿದ ಅರ್ಜಿದಾರರು ಮೇಲ್ನೋಟಕ್ಕೆ ತಪ್ಪುಗಳು ಎದ್ದು ಕಾಣುತ್ತಿರುವುದರಿಂದ ನಿರ್ಣಯವನ್ನು ಪುನರ್ ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.

ಹಿಂದು ಕಕ್ಷಿದಾರರಿಗೆ ಕೊಟ್ಟಿರುವ ಪರಿಹಾರವು, ಅತಿಕ್ರಮ ಪ್ರವೇಶ ಮತ್ತು ಮಸೀದಿ ನಾಶಗೊಳಿಸಿದ ಅಕ್ರಮ ಕೃತ್ಯಗಳಿಗೆ ಕೊಟ್ಟ ಬಹುಮಾನಕ್ಕೆ ಸಮವಾಗಿದೆ ಎಂದು ಮುಸ್ಲಿಮ್ ಕಕ್ಷಿದಾರರು ತೀರ್ಪಿನ ವಿರುದ್ಧದ ತಮ್ಮ ಪುನರ್ ಪರಿಶೀಲನಾ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.

ತೀರ್ಪು ಜಾತ್ಯತೀತ ತತ್ವಕ್ಕಿಂತ ಹೆಚ್ಚಾಗಿ ಹಿಂದೂ ನಂಬಿಕೆಯನ್ನು ಆಧರಿಸಿದೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಬೆಂಬಲದೊಂದಿಗೆ ಇತರ ವ್ಯಕ್ತಿಗಳು ಸಲ್ಲಿಸಿದ್ದ ಇನ್ನೊಂದು ಪುನರ್ ಪರಿಶೀಲನಾ ಅರ್ಜಿ ವಾದಿಸಿತ್ತು.

ದೇವರ ಮೇಲಿನಶೆಬಾಯಿತ್ (ನಿರ್ವಹಣಾ) ಹಕ್ಕು ಪ್ರತಿಪಾದಿಸಿದ್ದ ನಿರ್ಮೋಹಿ ಅಖಾಡವು, ತನ್ನ ಹಕ್ಕುಗಳನ್ನು ತಿರಸ್ಕರಿಸಿದ ಪೀಠದ ನಿರ್ಧಾರವನ್ನು ಪ್ರಶ್ನಿಸಿ, ಪುನರ್ ಪರಿಶೀಲನೆಗೆ ಕೋರಿಕೆ ಮಂಡಿಸಿತ್ತು

ಮೂಲ ಪ್ರಕರಣದಲ್ಲಿ ಕಕ್ಷಿದಾರರಾಗಿ ಇಲ್ಲದೇ ಇದ್ದ ೪೦ ಮಂದಿ ನಾಗರಿಕ ಹಕ್ಕುಗಳ ಕಾರ್ಯಕರ್ತರು ತಮ್ಮ ಪುನರ್ ಪರಿಶೀಲನಾ ಅರ್ಜಿಯಲ್ಲಿತೀರ್ಪಿನಿಂದ ದೇಶದ ಸಮನ್ವಯದ ಸಂಸ್ಕೃತಿ ಮತ್ತು ಸಂವಿಧಾನದಲ್ಲಿ ಹೇಳಲಾಗಿರುವ ಜಾತ್ಯತೀತ ಚೌಕಟ್ಟಿನ ಮೇಲೆ ಪರಿಣಾಮ ಬೀರಿದೆಎಂದು ವಾದಿಸಿದ್ದರು.

ವಿವಾದಾತ್ಮಕ ನಿವೇಶನವನ್ನು ರಾಮಲಲ್ಲಾನಿಗೆ ನೀಡುವುದರ ಜೊತೆಗೆ, ಅಯೋಧ್ಯೆಯಲ್ಲಿ ನೂತನ ಮಸೀದಿ ನಿರ್ಮಿಸಲು ಐದು ಎಕರೆ ಪರ್ಯಾಯ ಭೂಮಿಯನ್ನು ನೀಡುವಂತೆಯೂ ಪೀಠವು ಆದೇಶ ನೀಡಿತ್ತು. ರಾಮಮಂದಿರ ನಿರ್ಮಾಣ ಮತ್ತು ನಿವೇಶನದ ನಿರ್ವಹಣೆಗೆ ಟ್ರಸ್ಟ್ ಒಂದನ್ನು ರಚಿಸುವಂತೆಯೂ ಪೀಠವು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು.

ಪುನರ್ ಪರಿಶೀಲನಾ ಅರ್ಜಿಗಳನ್ನು ತಿರಸ್ಕರಿಸಿದ ಪೀಠದ ನಿರ್ಧಾರವು ಅರ್ಜಿದಾರರಿಗೆ ಈಗಕುರೇಟಿವ್ ಅರ್ಜಿಯನ್ನು ಸಲ್ಲಿಸುವ ಕಟ್ಟ ಕಡೆಯ ಅವಕಾಶವನ್ನು ಮಾತ್ರ ಉಳಿಸಿದೆಆದರೆ ಇಂತಹ ಅರ್ಜಿ ಯಶಸ್ವಿಯಾಗುವ ಸಾಧ್ಯತೆ ಅತ್ಯಂತ ಅಪರೂಪ ಎಂದು ಹಿರಿಯ ವಕೀಲರ ಅಭಿಮತ..

Sunday, November 10, 2019

ಬಾಲರಾಮನಿಗೆ ಜನುಮಭೂಮಿ, ಮಸೀದಿಗೆ ಪರ್ಯಾಯ ಭೂಮಿ

ಬಾಲರಾಮನಿಗೆ ಜನುಮಭೂಮಿ, ಮಸೀದಿಗೆ ಪರ್ಯಾಯ ಭೂಮಿ
ಸುಪ್ರೀಂಕೋರ್ಟ್ ಚಾರಿತ್ರಿಕ ತೀರ್ಪು, ದಶಕಗಳ ಅಯೋಧ್ಯಾ ವ್ಯಾಜ್ಯಕ್ಕೆ ತೆರೆ
ನವದೆಹಲಿ: ರಾಮಲಲ್ಲಾಗೆ ಅಯೋಧ್ಯೆಯ ವಿವಾದಿತ .೭೭ ಎಕರೆ ಜಾಗ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಮಸೀದಿ ನಿರ್ಮಾಣಕ್ಕೆ ಎಕರೆ ಪರ್ಯಾಯ ಭೂಮಿ ನೀಡುವಂತೆ ಸರ್ವಾನುಮತದ ಐತಿಹಾಸಿಕ ತೀರ್ಪು ನೀಡುವ ಮೂಲಕ ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವು ದಶಕಗಳಿಂದ ಇತ್ಯರ್ಥವಾಗದೇ ಉಳಿದಿದ್ದ, ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಸೂಕ್ಷ್ಮದ ಅಯೋಧ್ಯಾ ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದಕ್ಕೆ 2019 ನವೆಂಬರ್ 9ರ ಶನಿವಾರ ತೆರೆ ಎಳೆಯಿತು.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ನೇತೃತ್ವ ಹಾಗೂ ನ್ಯಾಯಮೂರ್ತಿಗಳಾದ ಎಸ್.. ಬೋಬ್ಡೆ, ಡಿ.ವೈ.ಚಂದ್ರಚೂಡ್,  ಅಶೋಕ ಭೂಷಣ್ ಮತ್ತು ಎಸ್.. ನಜೀರ್ ಅವರನ್ನು ಒಳಗೊಂಡ ಪಂಚ ಸದಸ್ಯ ಸಂವಿಧಾನಪೀಠವು ಬಾಲ ರಾಮ ದೇವರನ್ನು ಪ್ರತಿನಿಧಿಸುವ ರಾಮ ಲಲ್ಲಾ ವಿರಾಜಮಾನ್ಗೆ ಮಂದಿರ ನಿರ್ಮಾಣಕ್ಕಾಗಿ .೭೭ ಎಕರೆ ಜಾಗವನ್ನು ನೀಡಬೇಕು ಮತ್ತು ಅದಕ್ಕಾಗಿ ಟ್ರಸ್ಟ್ ಒಂದನ್ನು ಕೇಂದ್ರ ಸರ್ಕಾರವು ರಚಿಸಬೇಕು ಎಂದು ಸರ್ವಾನುಮತದ ತೀರ್ಪು ನೀಡಿತು. ಟ್ರಸ್ಟ್ ರಚನೆಗೆ ಮೂರು ತಿಂಗಳ ಗಡುವು ನೀಡಿದ ಪೀಠ, ಅಲ್ಲಿಯವರೆಗೆ ಭೂಮಿಯು ಅಧಿಕೃತ ರಸೀವರ್ ಸುಪರ್ದಿಯಲ್ಲಿ ಇರಬೇಕು ಎಂದು ಆಜ್ಞಾಪಿಸಿತು.

ಒಳ ಮತ್ತು ಹೊರ ಪ್ರಾಂಗಣದ ಸ್ವಾಧೀನವನ್ನು ಟ್ರಸ್ಟಿಗಳ ಮಂಡಳಿಗೆ ಒಪ್ಪಿಸಬೇಕು. ಟ್ರಸ್ಟ್ ರೂಪುರೇಷೆಯನ್ನು ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕುಎಂದು ಸುಪ್ರೀಂಕೋರ್ಟ್  ತನ್ನ ೧೦೪೫ ಪುಟಗಳ ತೀರ್ಪಿನಲ್ಲಿ ಆಜ್ಞಾಪಿಸಿತು. ತೀರ್ಪನ್ನು ಸಿಜೆಐ ರಂಜನ್ ಗೊಗೋಯಿ ಅವರು ಓದಿ ಹೇಳಿದರು.

ರಾಮನು ಜನಿಸಿದ ಸ್ಥಳ ಅಯೋಧ್ಯೆ ಎಂಬ ಹಿಂದುಗಳ ನಂಬಿಕೆಯು ವಿವಾದಾತೀತ ಎಂದು ಹೇಳಿದ ಪೀಠವು, ರಾಮಲಲ್ಲಾನೇ ಮುಖ್ಯ ಅರ್ಜಿದಾರ ಎಂದು ಮಾನ್ಯ ಮಾಡಿತು. ವಿವಾದಿತ ಜಾಗ ರಾಮಲಲ್ಲಾನಿಗೆ ಸೇರಿದ್ದು, ಅಲ್ಲಿ ಮಂದಿರ ನಿರ್ಮಾಣಮಾಡಬೇಕು. ಮಂದಿರದ ಹೊಣೆಯನ್ನು ಟ್ರಸ್ಟಿಗೆ ವಹಿಸಬೇಕು ಎಂದು ಪೀಠ ಹೇಳಿತು.

ಬಾಬರಿ ಮಸೀದಿಯು ಖಾಲಿಜಾಗದಲ್ಲಿ ನಿರ್ಮಾಣಗೊಂಡಿಲ್ಲ, ವಿವಾದಿತ ಕಟ್ಟಡ ಇಸ್ಲಾಮಿಕ್ ಸಂರಚನೆ ಹೊಂದಿಲ್ಲ ಎಂದು ಪೀಠವು ಹೇಳಿತು.

ಭೂಮಿಯು ಯಾರಿಗೆ ಸೇರಿದ್ದು ಎಂಬುದು ಕಾನೂನಿನ ವಿವಾದ. ಮಸೀದಿಗೆ ಹಾನಿ ಮಾಡಿದ್ದು, ಕಾನೂನನ್ನು ಕೈಗೆತ್ತಿಕೊಂಡದ್ದು ತಪ್ಪು ಎಂದು ಹೇಳಿದ ಪೀಠ, ಧರ್ಮ ಅಥವಾ ನಂಬಿಕೆಗಳ ಮೇಲಷ್ಟೇ ವ್ಯಾಜ್ಯ ಇತ್ಯರ್ಥ ಸಾಧ್ಯವಿಲ್ಲ. ಕಾನೂನಿನ ಪರಿಧಿಯಲ್ಲಷ್ಟೇ ಅದನ್ನು ಇತ್ಯರ್ಥ ಪಡಿಸಬಹುದು ಎಂದು ಹೇಳಿತು.

ಸರ್ಕಾರವು ೧೯೪೯ ಮತ್ತು ೧೯೯೨ರಲ್ಲಿ ಎರಡು ಬಾರಿ ತಪ್ಪೆಸಗಿದೆ, ಆದ್ದರಿಂದ ಮುಸ್ಲಿಮ್ ಕಕ್ಷಿದಾರರದ ಸುನ್ನಿ ವಕ್ಫ್ ಮಂಡಳಿಗೆ  ಸೂಕ್ತ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಎಕರೆ ಪರ್ಯಾಯಭೂಮಿಯನ್ನು ನೀಡಬೇಕು ಪೀಠವು ಸರ್ಕಾರಕ್ಕೆ ಆದೇಶ ನೀಡಿತು.

ನಿರ್ಮೋಹಿ ಆಖಾಡವುಶೆಬಾಯಿಟ್ಅಥವಾ ರಾಮಲಲ್ಲಾನ ಭಕ್ತ ಅಲ್ಲ ಎಂಬುದಾಗಿ ಪೀಠ ಹೇಳುವುದರೊಂದಿಗೆ ನಿರ್ಮೋಹಿ ಆಖಾಡವು ಹಿನ್ನಡೆ ಅನುಭವಿಸಿತು. ಅಖಾಡದ ಅರ್ಜಿಯು ವಿಳಂಬಿತ ಅರ್ಜಿಯಾಗಿದ್ದು, ಸಮಯದ ಮಿತಿಯ ಕಾರಣಕ್ಕಾಗಿ ತಿರಸ್ಕೃತವಾಗಿದೆ ಎಂದು ಪೀಠವು ಹೇಳಿತು.

ಉನ್ನತ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ನಾಯಕರಿಂದ ಶಾಂತಿ ಹಾಗೂ ಸೌಹಾರ್ದ ಕಾಯ್ದುಕೊಳ್ಳುವಂತೆ ಮಾಡಲಾದ ಮನವಿಗಳು ಮತ್ತು ದುಷ್ಕರ್ಮಿಗಳಿಂದ ಅಹಿತಕರ ಘಟನೆಗಳು ಸಂಭವಿಸಿದಂತೆ ತಡೆಯುವ ಸಲುವಾಗಿ ರಾಷ್ಟ್ರವ್ಯಾಪಿ ಭದ್ರತಾ ಕಟ್ಟೆಚ್ಚರದ ಮಧ್ಯೆ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಿತು.

ಮಸೀದಿಯನ್ನು ಖಾಲಿ ಭೂಮಿಯಲ್ಲಿ ನಿರ್ಮಿಸಲಾಗಿರಲಿಲ್ಲ ಎಂದು ಹೇಳಿದ ತೀರ್ಪು, ಸಂರಚನೆಯೊಂದರ ಮೇಲೆ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿತ್ತು ಎಂಬುದಾಗಿ ಭಾರತೀಯ ಪ್ರಾಕ್ತನ ಸಮೀಕ್ಷೆಯು (ಎಎಎಸ್) ನೀಡಿದ್ದ ವರದಿಗೆ ಒತ್ತು ನೀಡಿತು. ಆದರೆ ಪ್ರಾಕ್ತನ ಸಮೀಕ್ಷೆಯು ತನ್ನ ವರದಿಯಲ್ಲಿ ವಿವಾದಾತ್ಮಕ ಕಟ್ಟಡವನ್ನು ನಿರ್ಮಿಸಲು ದೇವಾಲಯವನ್ನು ಕೆಡವಲಾಗಿತ್ತು ಎಂಬುದಾಗಿ ಎಂಬ ನಿರ್ದಿಷ್ಟ ಅಭಿಪ್ರಾಯ ನೀಡಿಲ್ಲ ಎಂದೂ ತೀರ್ಪು ಉಲ್ಲೇಖಿಸಿತು.

ಒಳ ಪ್ರಾಂಗಣದ ಮೇಲಿನ ತನ್ನ ಹಕ್ಕುಗಳನ್ನ ಸಾಬೀತು ಪಡಿಸಲು ಮುಸ್ಲಿಮ್ ಕಕ್ಷಿದಾರರು ಸಮರ್ಥರಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು. ’ಮುಸ್ಲಿಮ್ ಕಕ್ಷಿದಾರರು ತಮಗೆ ಸ್ವಾಧೀನ ಪೂರ್ವಕ ನಿಯಂತ್ರಣ ಇದ್ದುದನ್ನು ಇಲ್ಲವೇ ಅಲ್ಲಿ ನಮಾಜ್ ನಡೆಯುತ್ತಿದ್ದುದನ್ನು ಸಾಬೀತು ಪಡಿಸುವಂತಹ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ಪೀಠ ಹೇಳಿತು.

ಮುಸ್ಲಿಮರಷ್ಟೇ ಸ್ವಾಮ್ಯ ಹೊಂದಿದ್ದಾರೆ ಎಂಬುದನ್ನು ಸೂಚಿಸುವಂತಹ ಸಾಕ್ಷ್ಯಗಳು ಇಲ್ಲ. ರಾಮಛಬೂತ್ರ ಮತ್ತು ಸೀತಾ ರಸೋಯಿಯಲ್ಲಿ ಹಿಂದುಗಳು ಪೂಜೆ ಮಾಡುತ್ತಿದ್ದರು ಎಂಬ ವಾಸ್ತವವು ಹೊರ ಪ್ರಾಂಗಣದ ಮೇಲೆ ಹಿಂದುಗಳು ಅಡಚಣೆರಹಿತ ಸ್ವಾಮ್ಯ ಹೊಂದಿದ್ದರು ಎಂಬುದನ್ನು ಸೂಚಿಸುತ್ತದೆಎಂದು ನಾಯಮೂರ್ತಿ ಗೊಗೋಯಿ ಹೇಳಿದರು. ಕೇವಲ ಶ್ರದ್ಧೆ ಮತ್ತು ನಂಬಿಕೆಯನ್ನು ಆಧರಿಸಿ ಹಕ್ಕನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದೂ ಅವರು ನುಡಿದರು.

ಶನಿವಾರ ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವು ಕಲಾಪ ಆರಂಭಿಸುವುದಕ್ಕೆ ಒಂದು ದಿನ ಮುಂಚಿತವಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ಉತ್ತರ ಪ್ರದೇಶದ ಉನ್ನತ ಅಧಿಕಾರಿಗಳನ್ನು ಕರೆಸಿಕೊಂಡು ಆಡಳಿತವು ತೀರ್ಪಿನ ಬಳಿಕದ ಪರಿಣಾಮಗಳನ್ನು ಎದುರಿಸಲು ಸಜ್ಜಾಗಿದೆಯೇ ಎಂದು ಸ್ವತಃ ಮನನ ಮಾಡಿಕೊಂಡಿದ್ದರು.

ಪ್ರಕರಣದ
ವಿಚಾರಣೆ ನಡೆಸಿದ್ದ ಐವರೂ ನ್ಯಾಯಮೂರ್ತಿಗಳ ಮನೆಗಳ ಸುತ್ತ ಭದ್ರತೆಯನ್ನೂ ಹೆಚ್ಚಿಸಲಾಗಿತ್ತು.

೨೦೧೦ರ ಅಲಹಾಬಾದ್ ಹೈಕೋರ್ಟ್ ಭೂವಿವಾದದ ಮೇಲೆ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ಮೇಲಿನ ದೈನಂದಿನ ವಿಚಾರಣೆಯನ್ನು ಸಂವಿಧಾನ ಪೀಠವು ಆಗಸ್ಟ್ ತಿಂಗಳಲ್ಲಿ ಆರಂಭಿಸಿತ್ತು. ಇದಕ್ಕೆ ಮುನ್ನ ನ್ಯಾಯಾಲಯದ ಹೊರಗೆ ಮಾತುಕತೆಗಳ ಮೂಲಕ ಸಂಧಾನ ನಡೆಸಲು ಅದು ಕೈಗೊಂಡ ಪ್ರಯತ್ನ ಫಲಪ್ರದವಾಗಿರಲಿಲ್ಲ.

ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ ತನ್ನ : ಬಹುಮತದ ತೀರ್ಪಿನಲ್ಲಿ ವಿವಾದಿತ .೭೭ ಎಕರೆ ಭೂಮಿಯನ್ನು ಸಮಾನವಾಗಿ ಕಕ್ಷಿದಾರರಾಗಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ವಿರಾಜಮಾನ್ ಮಧ್ಯೆ ಹಂಚಿಕೆ ಮಾಡುವಂತೆ ಆದೇಶ ನೀಡಿತ್ತು. ಹಿಂದೂಗಳು ಮತ್ತು ಮುಸ್ಲಿಮರಿಬ್ಬರಿಗೂ ವಿವಾದಿತ ಭೂಮಿಯ ಮೇಲೆ ಹಕ್ಕಿದೆ ಎಂದು ಹೈಕೋರ್ಟ್ ಪೀಠ ಹೇಳಿತ್ತು.

ಬಾಬರನ ಆದೇಶದ ಮೇರೆಗೆ ಕಮಾಂಡರ್ ಮೀರ್ ಬಾಕಿ ನಿರ್ಮಿಸಿದ್ದ ೧೬ನೇ ಶತಮಾನದ ವಿವಾದಿತ ಬಾಬರಿ ಮಸೀದಿ ಕಟ್ಟಡವನ್ನು ೧೯೯೨ರ ಡಿಸೆಂಬರ್ ೬ರಂದು ಹಿಂದೂ ಕರಸೇವಕರು ದ್ವಂಸಗೊಳಿಸಿದ್ದರು.

Advertisement