Showing posts with label ಇಂದಿನ ಇತಿಹಾಸ History Today (March 11-20).. Show all posts
Showing posts with label ಇಂದಿನ ಇತಿಹಾಸ History Today (March 11-20).. Show all posts

Sunday, March 21, 2010

ಇಂದಿನ ಇತಿಹಾಸ History Today ಮಾರ್ಚ್ 20

ಇಂದಿನ ಇತಿಹಾಸ

ಮಾರ್ಚ್ 20

ಭಾರತೀಯ ವಾಯುಪಡೆಯ ಮುಖ್ಯಸ್ಥರನ್ನಾಗಿ ವಾಯುಪಡೆಯ ಹಾಲಿ ವೈಸ್ ಚೀಫ್ ಪ್ರದೀಪ್ ವಸಂತ್ ನಾಯ್ಕಾ ಅವರನ್ನು ಸರ್ಕಾರ ನೇಮಕ ಮಾಡಿತು. 1969ರಲ್ಲಿ ಯುದ್ಧ ವಿಮಾನಗಳ ಪೈಲಟ್ ಆಗಿ ಸೇನೆಗೆ ಸೇರಿದ ನಾಯ್ಕಾ ಸೇನೆಯ ವಿವಿಧ ವಿಭಾಗಗಳಲ್ಲಿ 40 ವರ್ಷ ಸೇವೆ ಸಲ್ಲಿಸಿದವರು. 1971ರ ಭಾರತ-ಪಾಕ್ ಯುದ್ಧದಲ್ಲಿ ನಾಯ್ಕ ಪಾಲ್ಗೊಂಡಿದ್ದರು.

2009: ರಾಜ್ಯದಲ್ಲಿ ಉಗ್ರರ ನಿಗ್ರಹಕ್ಕಾಗಿ ಸೇನೆಯ ವಿಶೇಷ ಪಡೆಗೆ ಉನ್ನತ ತರಬೇತಿ ಪಡೆದ 500 ಅಧಿಕಾರಿಗಳು ಮತ್ತು ಯೋಧರನ್ನು ಸೇರಿಸುವ ಮೂಲಕ ಪಡೆಯನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಭಯೋತ್ಪಾದಕರ ಯಾವುದೇ ದಾಳಿ ಎದುರಿಸಲು ರೀತಿಯಲ್ಲಿ ಪಡೆಗೆ ಶಕ್ತಿ ತುಂಬಲಾಗುವುದು ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಮ್ ಬೆಂಗಳೂರಿನಲ್ಲಿ ಹೇಳಿದರು. ಕಬ್ಬನ್ ರಸ್ತೆಯಲ್ಲಿನ ಕರ್ನಾಟಕ ಮತ್ತು ಕೇರಳ ಉಪ ವಲಯ ಸೇನಾ ಮುಖ್ಯ ಕಚೇರಿಗೆ ಭೇಟಿ ನೀಡಿ ಹಿರಿಯ ರಕ್ಷಣಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ವರದಿಗಾರರೊಂದಿಗೆ ಮಾತನಾಡಿದರು.

2009: ಭಾರತೀಯ ವಾಯುಪಡೆಯ ಮುಖ್ಯಸ್ಥರನ್ನಾಗಿ ವಾಯುಪಡೆಯ ಹಾಲಿ ವೈಸ್ ಚೀಫ್ ಪ್ರದೀಪ್ ವಸಂತ್ ನಾಯ್ಕಾ ಅವರನ್ನು ಸರ್ಕಾರ ನೇಮಕ ಮಾಡಿತು. ಹಾಲಿ ಏರ್ ಚೀಫ್ ಮಾರ್ಷಲ್ ಫಾಲಿ ಹೋಮಿ ಮೇಜರ್ ಅವರು ಮೇ 31ರಂದು ನಿವೃತ್ತಿ ಹೊಂದಿದಾಗ ನಾಯ್ಕಾ ಅಧಿಕಾರ ವಹಿಸಿಕೊಳ್ಳುವರು. 1969ರಲ್ಲಿ ಯುದ್ಧ ವಿಮಾನಗಳ ಪೈಲಟ್ ಆಗಿ ಸೇನೆಗೆ ಸೇರಿದ ನಾಯ್ಕಾ ಸೇನೆಯ ವಿವಿಧ ವಿಭಾಗಗಳಲ್ಲಿ 40 ವರ್ಷ ಸೇವೆ ಸಲ್ಲಿಸಿದವರು. 1971ರ ಭಾರತ-ಪಾಕ್ ಯುದ್ಧದಲ್ಲಿ ನಾಯ್ಕ ಪಾಲ್ಗೊಂಡಿದ್ದರು.

2009: ಸುಪ್ರೀಂಕೋರ್ಟಿನಲ್ಲಿ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿಗಳತ್ತ ಶೂ ಎಸೆದ ಪ್ರಮಾದಕ್ಕಾಗಿ ಮಹಿಳೆಯೊಬ್ಬರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ ಘಟನೆ ನವದೆಹಲಿಯಲ್ಲಿ ನಡೆಯಿತು. ಮುಂಬೈಯ 'ಬಾಸ್ ಸ್ಕೂಲ್ ಆಫ್ ಮ್ಯೂಸಿಕ್' ಸಂಗೀತ ಶಾಲೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್ ಹಾಗೂ ಅಶೋಕ್ ಕುಮಾರ್ ಗಂಗೂಲಿ ಅವರಿದ್ದ ಪೀಠ ನಡೆಸುತ್ತಿದ್ದಾಗ ಈ ಘಟನೆ ನಡೆಯಿತು. ವಿಚಾರಣೆ ಎದುರಿಸುತ್ತಿದ್ದ ಶಾಲೆಯ ಐದು ಜನ ಆಡಳಿತ ಮಂಡಳಿ ಸದಸ್ಯರು ನ್ಯಾಯಮೂರ್ತಿಗಳನ್ನು ನಿಂದಿಸಿದರು. ತಮ್ಮ ವಿರುದ್ಧ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳನ್ನು ಜೈಲಿಗೆ ಕಳುಹಿಸಬೇಕೆಂದೂ ಒತ್ತಾಯಿಸಲು ಆರಂಭಿಸಿದರು. ಈ ಹಂತದಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯೆ ತನ್ನ ಕಾಲಿನಲ್ಲಿದ್ದ ಬೂಟನ್ನು ತೆಗೆದು ನೇರವಾಗಿ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರನ್ನು ಗುರಿಯಾಗಿಸಿ ಎಸೆದರು. ಅದೃಷ್ಟವಶಾತ್ ಗುರಿ ತಪ್ಪಿತು. ಈ ಘಟನೆ ಕೆಲಕಾಲ ನ್ಯಾಯಾಲಯದ ಆವರಣದಲ್ಲಿ ಕೋಲಾಹಲ ಸೃಷ್ಟಿಸಿತು.

2009: ಕೋಮುದ್ವೇಷ ಕೆರಳಿಸುವ ಪ್ರಚೋದನಕಾರಿ ಭಾಷಣ ಮಾಡಿದ ಪಿಲಿಭಿಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರಿಗೆ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತು. ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ವಜಾಗೊಳಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟಿನಲ್ಲಿ ವರುಣ್ ಸಲ್ಲಿಸಿದ ಅರ್ಜಿ ಇತ್ಯರ್ಥವಾಗುವವರೆಗೆ ಈ ಜಾಮೀನು ಜಾರಿಯಲ್ಲಿರುತ್ತದೆ.

2009: ದೆಹಲಿ ಮೆಟ್ರೊ, ಸೌರ ಶಕ್ತಿ ವಿದ್ಯುತ್ ಘಟಕವನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಸ್ನೇಹಿ ಆಗಿದ್ದು, ಇದರಿಂದ ವಾತಾವರಣಕ್ಕೆ ಪ್ರತಿ ವರ್ಷ ಬಿಡುತ್ತಿದ್ದ 2.35 ಲಕ್ಷ ಟನ್ ಹಸಿರು ಮನೆ ತ್ಯಾಜ್ಯ ತಡೆಯುವಂತಾಯಿತು. ಕನ್ನಾಟ್ ಪ್ಲೇಸ್‌ನಲ್ಲಿಯ ಮೆಟ್ರೊ ಪ್ರಧಾನ ಕಚೇರಿಯಲ್ಲಿ ಐದು ಕಿ.ವಾ.ಸಾಮರ್ಥ್ಯದ ಸೌರಶಕ್ತಿ ಘಟಕವನ್ನು ಸ್ಥಾಪಿಸಲಾಗಿದ್ದು, ವಿಶ್ವದಲ್ಲಿಯೇ ಹಸಿರು ಮನೆ ತ್ಯಾಜ್ಯ ನಿಲ್ಲಿಸಿದ ಪ್ರಥಮ ಮೆಟ್ರೊ ಯೋಜನೆ ಎಂಬ ನೋಂದಣಿ ಪತ್ರವನ್ನು ಅಮೆರಿಕದಿಂದ ಪಡೆದಿದೆ ಎಂದು ಅನುಜ್ ದಯಾಳ್ ತಿಳಿಸಿದರು. ಸೌರಶಕ್ತಿ ಘಟಕದಿಂದ ಉತ್ಪಾದನೆಯಾಗುವ ವಿದ್ಯುತ್, ಮೆಟ್ರೊ ಭವನದ ವಿದ್ಯುತ್ ಅಗತ್ಯವನ್ನು ಪೂರೈಸುತ್ತದೆ.

2009: ರಾಗಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಹಿಮಾಚಲ ಪ್ರದೇಶ ಸರ್ಕಾರವು ಸುಗ್ರಿವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೊಳಿಸಲು ನಿರ್ಧರಿಸಿತು. ಇದರನ್ವಯ ತಪ್ಪಿತಸ್ಥರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿವರೆಗೆ ದಂಡ ವಿಧಿಸುವ ಅವಕಾಶ ಕಲ್ಪಿಸಲಾಯಿತು. ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 'ಹಿಮಾಚಲ ಪ್ರದೇಶ ವಿದ್ಯಾಸಂಸ್ಥೆಗಳ (ರಾಗಿಂಗ್ ತಡೆಗಟ್ಟುವಿಕೆ) ಮಸೂದೆ-2009'ಕ್ಕೆ ಒಪ್ಪಿಗೆ ದೊರಕಿತು.

2008: ತೆಲುಗಿನ ಜನಪ್ರಿಯ ನಟ ಶೋಭನ್ ಬಾಬು (71) ಅವರು ಹೃದಯಾಘಾತದಿಂದ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದರು. ಶೋಭನ್ ಬಾಬು ಅವರು ದಶಕಗಳಿಂದ ತೆಲುಗು ಚಿತ್ರರಂಗದಲ್ಲಿದ್ದು, ಎನ್.ಟಿ. ರಾಮರಾವ್, ಎ. ನಾಗೇಶ್ವರ ರಾವ್ ಅವರಂತೆ ಜನಪ್ರಿಯರಾಗಿದ್ದರು. ತಮ್ಮ ಎಂದಿನ ದಿನಚರಿಯಂತೆ ಶೋಭನ್ ಬಾಬು ಅವರು ಹಿಂದಿನ ದಿನ ಬೆಳಗ್ಗೆ ಯೋಗಾಸನ ಮಾಡುತ್ತಿದ್ದ ಸಮಯದಲ್ಲಿ ಕುಸಿದು ಬಿದ್ದಾಗ ಅವರ ಮೂಗಿನಲ್ಲಿ ತೀವ್ರ ರಕ್ತಸ್ರಾವ ಕಂಡು ಬಂದಿತ್ತು. ತತ್ ಕ್ಷಣವೇ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.

2008: ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕರ್ನಾಟಕ ಮತ್ತು ಕೇರಳಕ್ಕೆ ಸಮೀಪದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಯಿತು. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಸಿ. ನಂದಿಹಳ್ಳಿ ಗ್ರಾಮದ ಮರಾಠಿ ಪಾಳ್ಯದಲ್ಲಿ ಸಿಡಿಲು ಬಡಿದು ಮರಿಯಪ್ಪ (55) ಎಂಬವರು ಮೃತರಾದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು, ಕೊಡಗು, ಚಿತ್ರದುರ್ಗ, ಕೋಲಾರ, ಮಂಡ್ಯ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಸಾಧಾರಣ ಹಾಗೂ ಇನ್ನು ಕೆಲವೆಡೆ ರಭಸದ ಮಳೆಯಾಯಿತು.

2008: ಅಮೆರಿಕವು ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ಥಾನದಿಂದ ಭಾರತಕ್ಕೆ ಹಸ್ತಾಂತರಿಸುವಂತೆ ಮಾಡಲು ಆರಂಭಿಕ ಪ್ರಯತ್ನಗಳನ್ನು ಬಿಟ್ಟರೆ ಹೆಚ್ಚಿನ ಆಸಕ್ತಿ ತೋರಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅಸಮಾಧಾನ ಸೂಚಿಸಿದರು. ಮಾಜಿ ಉಪಪ್ರಧಾನಿ ಮತ್ತು ಹಾಲಿ ಲೋಕಸಭೆಯ ಪ್ರತಿಪಕ್ಷ ನಾಯಕರಾದ ಅಡ್ವಾಣಿಯವರು ತಮ್ಮ ``ನನ್ನ ರಾಷ್ಟ್ರ, ನನ್ನ ಜೀವನ'' ಎಂಬ ಆತ್ಮಕಥನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

2008: ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ ಘೋಷಿಸಬೇಕಾಗಿದ್ದ ತೀರ್ಪನ್ನು ದೆಹಲಿ ಸೆಷನ್ಸ್ ನ್ಯಾಯಾಲಯ ಮಾರ್ಚ್ 24ರವರೆಗೆ ಕಾಯ್ದಿರಿಸಿತು.

2008: ಉದ್ಯೋಗ ನೀಡುವ ಸಂಸ್ಥೆಯೊಂದು ತನ್ನ ಒಬ್ಬ ನೌಕರನ ಹೆಸರಲ್ಲಿ ಹಲವು ಎಚ್-1ಬಿ ವೀಸಾ ಅರ್ಜಿಗಳನ್ನು ಸಲ್ಲಿಸುವುದನ್ನು ನಿರ್ಬಂಧಿಸುವ ನೂತನ ವೀಸಾ ನೀತಿಯನ್ನು ಅಮೆರಿಕ ಜಾರಿಗೆ ತಂದಿತು.

2007: ರಷ್ಯಾದ ಸೈಬೇರಿಯಾ ಕಲ್ಲಿದ್ದಲು ಗಣಿಯಲ್ಲಿ ದಶಕದ ಅವಧಿಯಲ್ಲಿ ಸಂಭವಿಸಿದ ಅತಿ ಭೀಕರ ಅನಿಲ ಸ್ಫೋಟದಲ್ಲಿ ಕನಿಷ್ಠ 106 ಮಂದಿ ಮೃತರಾದರು.

2007: ಭಾರತೀಯ ವಾಯುಪಡೆಯ ಮಿಗ್-23 ಯುದ್ಧ ವಿಮಾನಗಳು ಇತಿಹಾಸದ ಪುಟ ಸೇರಿದವು. ಪಾಕಿಸ್ಥಾನದ ಎಫ್-16 ಯುದ್ಧ ವಿಮಾನಗಳನ್ನು ಎದುರಿಸಲು ಕಳೆದ 25 ವರ್ಷಗಳಿಂದ ಸಮರ ಸನ್ನದ್ಧವಾಗಿದ್ದ ಮಿಗ್-23 ವಿಮಾನಗಳು ಜಾಮ್ ನಗರದಲ್ಲಿ ಸಾಂಪ್ರದಾಯಿಕ ಹಾರಾಟ ನಡೆಸುವ ಮೂಲಕ ತೆರೆಮರೆಗೆ ಸರಿದವು.

2006: ಹಿಂದಿ ಚಿತ್ರರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ಮೂರು ತಿಂಗಳ ನಂತರ ಮತ್ತೆ ಬಣ್ಣ ಹಚ್ಚಿ ಚಿತ್ರೀಕರಣದಲ್ಲಿ ಪಾಲ್ಗೊಂಡರು. ನವೆಂಬರ್ ತಿಂಗಳಲ್ಲಿ ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಮಿತಾಭ್ ಈ ದಿನ ಕರಣ್ ಜೋಹರ್ ಅವರ ಕಬಿ ಅಲ್ವಿದ ನಾ ಕೆಹನಾ ಚಿತ್ರಕ್ಕಾಗಿ ಕೆಲವು ಸನ್ನಿವೇಶಗಳಲ್ಲಿ ನಟಿ ರಾಣಿ ಮುಖರ್ಜಿ ಜೊತೆಗೆ ಅಭಿನಯಿಸಿದರು.

2006: ಮೆಲ್ಬೋರ್ನಿನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಟೇಬಲ್ ಟೆನಿಸಿನಲ್ಲಿ ಪುರುಷರ ತಂಡಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನ, ಮಹಿಳೆಯರಿಗೆ ಕಂಚು ಲಭಿಸಿತು.

2006: ಕ್ಷೀರಕ್ರಾಂತಿಯ ನೇತೃತ್ವ ವಹಿಸಿ ಭಾರತೀಯ ಡೇರಿ ಉದ್ಯಮದ ಅತ್ಯಂತ ಪ್ರಭಾವಿ ವ್ಯಕ್ತಿ ಎನಿಸಿದ್ದ ವರ್ಗೀಸ್ ಕುರಿಯನ್ ಅವರು 3600 ಕೋಟಿ ರೂಪಾಯಿ ವಹಿವಾಟು ಹೊಂದಿರುವ ಗುಜರಾತ್ ಹಾಲು ಮಾರಾಟ ಸಹಕಾರ ಸಂಘದ (ಜಿಸಿಎಂಸಿಎಫ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 34 ವರ್ಷಗಳಿಂದ ಅಧ್ಯಕ್ಷರಾಗಿದ್ದ 85ರ ಹರೆಯದ ಕುರಿಯನ್ ವಿರುದ್ಧ ಇತ್ತೀಚೆಗೆ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಅವಿಶ್ವಾಸ ನಿರ್ಣಯ ಮಂಡನೆಯಿಂದ ನೊಂದು ಅವರು ಈ ಕ್ರಮ ಕೈಗೊಂಡರು.

2006: ಖ್ಯಾತ ಚಿತ್ರ ನಿರ್ಮಾಪಕ ಅಡೂರು ಗೋಪಾಲಕೃಷ್ಣನ್, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ಸಿಇಒ ನಂದನ್ ನೀಲೇಕಣಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 51 ಗಣ್ಯರಿಗೆ 2006ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು.

2006: ಜನತಾದಳ (ಎಸ್) - ಬಿಜೆಪಿ ಮೈತ್ರಿ ಕೂಟದ ಕರ್ನಾಟಕ ಅಭಿವೃದ್ಧಿ ರಂಗದ ಚೊಚ್ಚಲ ಮುಂಗಡಪತ್ರವನ್ನು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದರು. ರೈತರು, ನೇಕಾರರು, ಮೀನುಗಾರರಿಗೆ ಶೇಕಡಾ 4ರ ಬಡ್ಡಿದರದಲ್ಲಿ ಸಾಲಸೌಲಭ್ಯ, ದೇಸೀ ಗೋ ತಳಿ ಸಂರಕ್ಷಣೆಗೆ ಕಾರ್ಯಕ್ರಮಗಳು ಮುಂಗಡ ಪತ್ರದ ವಿಶೇಷತೆಗಳಲ್ಲಿ ಪ್ರಮುಖವಾದವು. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹಮ್ಮಿಕೊಂಡ ದೇಸೀ ಗೋ ತಳಿ ಸಂರಕ್ಷಣೆ ಆಂದೋಲನದಿಂದ ಪ್ರೇರಣೆ ಪಡೆದು ದೇಸೀ ಗೋ ತಳಿ ಅಭಿವೃದ್ಧಿ ಪಡಿಸುವವರಿಗೆ ಪ್ರತಿ ಜಿಲ್ಲೆಯಲ್ಲಿ 20 ಎಕರೆ ಜಮೀನು ಗುತ್ತಿಗೆ ನೀಡಿಕೆ, ಅಲ್ಲಿ ಕನಿಷ್ಠ 100 ಹಸು ಸಾಕಣೆ ಮತ್ತು ಗೋಮೂತ್ರ ಸಂಗ್ರಹ ಕಡ್ಡಾಯಗೊಳಿಸಲು, ಗೋ ಮೂತ್ರ ಉಪಯುಕ್ತತೆ ಬಗ್ಗೆ ಸಂಶೋಧನೆಗೆ ಒತ್ತು ನೀಡಲು ನಿರ್ಧರಿಸಿದ್ದು ಮುಂಗಡಪತ್ರಗಳ ಇತಿಹಾಸದಲ್ಲೇ ಪ್ರಥಮ.

2003: ಅಮೆರಿಕವು ಬಾಗ್ದಾದ್ ಮೇಲೆ ವಿಮಾನದಾಳಿ ನಡೆಸಿ ಇರಾಕ್ ವಿರುದ್ಧ ಸಮರ ಆರಂಭಿಸಿತು

1999: ಬ್ರಿಟನ್ನಿನ ಬ್ರೈನ್ ಜೋನ್ಸ್ ಮತ್ತು ಸ್ವಿಟ್ಸರ್ಲೆಂಡಿನ ಬರ್ಟ್ರಂಡ್ ಪಿಕ್ಕಾರ್ಡ್ ಅವರು ಎಲ್ಲೂ ನಿಲ್ಲದೆ ಬಲೂನ್ ಮೂಲಕ ಜಗತ್ತಿಗೆ ಸುತ್ತು ಹಾಕಿದ ಮೊದಲ ಹಾರಾಟಗಾರರೆನಿಸಿದರು. ಮಾರ್ಚ್ 1ರಿಂದ 19 ದಿನಗಳ ಕಾಲ ನಡೆದ ಅವರ ಈ ಬಲೂನ್ ಹಾರಾಟ 19 ದಿನ 1 ಗಂಟೆ 49 ನಿಮಿಷಗಳ ಕಾಲ ನಡೆಯಿತು.

1962: ಭಾರತದ ಕ್ರಿಕೆಟ್ ಕ್ಯಾಪ್ಟನ್ ನಾರಿ ಕಾಂಟ್ರಾಕ್ಟರ್ ಅವರು ಬಾರ್ಬಡೋಸ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲರ್ ಚಾರ್ಲಿ ಗ್ರಿಫಿತ್ ಚೆಂಡಿನ (ಬಾಲ್) ಏಟಿನಿಂದ ತೀವ್ರವಾಗಿ ಗಾಯಗೊಂಡರು. ತುರ್ತು ಶಸ್ತ್ರಚಿಕಿತ್ಸೆ ನಡೆದರೂ ನಂತರ ಅವರು ಪಂದ್ಯದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ.

1856: ಫ್ರೆಡರಿಕ್ ವಿನ್ ಸ್ಲೋ ಟೇಲರ್ (1856-1915) ಹುಟ್ಟಿದ ದಿನ. ಅಮೆರಿಕನ್ ಸಂಶೋಧಕನಾದ ಈತ `ವೈಜ್ಞಾನಿಕ ಸಂಶೋಧನಾ ನಿರ್ವಹಣೆಯ ಜನಕ' ಎಂದೇ ಖ್ಯಾತನಾಗಿದ್ದಾನೆ.

1952: ಭಾರತದ ಮಾಜಿ ಟೆನಿಸ್ ಆಟಗಾರ ಆನಂದ್ ಅಮೃತರಾಜ್ ಹುಟ್ಟಿದ ದಿನ.

1951: ಭಾರತದ ಮಾಜಿ ಕ್ರಿಕೆಟ್ ಆಟಗಾರ ಮದನ ಲಾಲ್ (ಶರ್ಮಾ) ಹುಟ್ಟಿದ ದಿನ.

1855: ಸಿಮೆಂಟ್ ಉದ್ಯಮವನ್ನು ಅಭಿವೃದ್ಧಿ ಪಡಿಸಿದ ಮುಂಚೂಣಿ ಬ್ರಿಟಿಷ್ ಸಿಮೆಂಟ್ ಉದ್ಯಮಿ ಜೋಸೆಫ್ ಆಸ್ಪ್ ಡಿನ್ ತನ್ನ 77ನೇ ವಯಸ್ಸಿನಲ್ಲಿ ಮೃತನಾದ. ಪೋರ್ಟ್ ಲ್ಯಾಂಡ್ ಸಿಮೆಂಟಿಗೆ ಈತ ಪೇಟೆಂಟ್ ಪಡೆದಿದ್ದ. ಸಿಮೆಂಟಿನ ಬಣ್ಣ ಪೋರ್ಟ್ ಲ್ಯಾಂಡಿನ ಕಲ್ಲಿನ ಬಣ್ಣವನ್ನೇ ಹೋಲುತ್ತಿದ್ದುದರಿಂದ ಅದಕ್ಕೆ ಆತ ಪೋರ್ಟ್ ಲ್ಯಾಂಡ್ ಸಿಮೆಂಟ್ ಎಂದು ಹೆಸರು ನೀಡಿದ್ದ.

1727: ಖ್ಯಾತ ಭೌತವಿಜ್ಞಾನಿ, ಗಣಿತಜ್ಞ ಹಾಗೂ ಖಗೋಳತಜ್ಞ ಐಸಾಕ್ ನ್ಯೂಟನ್ ಲಂಡನ್ನಿನಲ್ಲಿ ತನ್ನ 84ನೇ ವಯಸ್ಸಿನಲ್ಲಿ ಮೃತನಾದ.

1413: ದೊರೆ 4ನೇ ಹೆನ್ರಿ ವೆಸ್ಟ್ ಮಿನ್ ಸ್ಟರ್ ಅಬ್ಬೆಯ ಜೆರುಸಲೇಂ ಚೇಂಬರಿನಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ಮೃತನಾದ. ಆತನ ಹಿರಿಯ ಪುತ್ರ ಐದನೇ ಹೆನ್ರಿ ಸಿಂಹಾಸನ ಏರಿದ.

Friday, March 19, 2010

ಇಂದಿನ ಇತಿಹಾಸ History Today ಮಾರ್ಚ್ 19


ಇಂದಿನ ಇತಿಹಾಸ

ಮಾರ್ಚ್ 19

ದಕ್ಷಿಣ ಭಾರತದ ಜನಪ್ರಿಯ ಬಹುಭಾಷಾ ಚಲನಚಿತ್ರ ನಟ ರಘುವರನ್ (60) ಹೃದಯಘಾತದಿಂದ ಚೆನ್ನೈಯಲ್ಲಿ ನಿಧನರಾದರು. ಅವರು ನಟಿ ರೋಹಿಣಿಯವರನ್ನು ವಿವಾಹವಾಗಿದ್ದರು. ಮೃತರು ತಮಿಳು ಭಾಷಾ ಚಿತ್ರಗಳು ಸೇರಿದಂತೆ ತೆಲುಗು, ಕನ್ನಡ, ಮಲೆಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು

2009: 1975ರ ನಂತರ ಇದೇ ಮೊದಲ ಬಾರಿಗೆ ಹಣದುಬ್ಬರ ಶೇ.0.44 ಮಟ್ಟಕ್ಕೆ ಕುಸಿಯಿತು. ಬಹುತೇಕ ಆಹಾರ ವಸ್ತುಗಳ ಬೆಲೆಗಳಲ್ಲಿ ಇಳಿಕೆ ಆಗದಿದ್ದರೂ ಹಣದುಬ್ಬರ ಇಳಿಯುವುದು ಮುಂದುವರಿಯಿತು. ಆರ್ಥಿಕತೆ ತೀವ್ರತರದ ಹಿಂಜರಿತಕ್ಕೆ ಸಿಲುಕಲಿದೆ ಎಂಬ ಭೀತಿಯನ್ನು ಇದು ಹುಟ್ಟುಹಾಕಿತು.

2009: ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವ 'ರಂಗ ತೋರಣ'ದಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ತಂಡ ಪ್ರಥಮ ಸ್ಥಾನ ಪಡೆಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ಘಟಕ ಅಲ್ಲಿನ ರಾಘವ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಆಳ್ವಾಸ್ ಪ್ರತಿಷ್ಠಾನದ ವಿದ್ಯಾರ್ಥಿಗಳು ಪ್ರದರ್ಶಿಸಿದ 'ಮಾಧ್ಯಮ ವ್ಯಾಯೋಗ' ಹಾಗೂ 'ದೂತ ವಾಕ್ಯ' ನಾಟಕಗಳು ಪ್ರಥಮ ಪ್ರಶಸ್ತಿ ಪಡೆದವು. ಜೀವನ್‌ರಾಂ ಸುಳ್ಯ ನಿರ್ದೇಶನದ ಈ ನಾಟಕಗಳು ಕೊಲ್ಕತ, ಕುರುಕ್ಷೇತ್ರ, ಚೆನ್ನೈ, ಮದುರೆ, ಕಲ್ಲಿಕೋಟೆ ಹಾಗೂ ವಾರಾಣಸಿ ಮೊದಲಾದ ಕಡೆ 52 ಪ್ರದರ್ಶನಗಳನ್ನು ಕಂಡಿವೆ. ವಿಶ್ವವಿದ್ಯಾಲಯಗಳ ರಾಷ್ಟ್ರೀಯ ರಂಗೋತ್ಸವದಲ್ಲಿ ಭಾಗವಹಿಸಿ ನಾಲ್ಕು ಬಾರಿ ರಾಷ್ಟ್ರೀಯ ರಂಗಪ್ರಶಸ್ತಿ ಪಡೆದಿವೆ.

2009: ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿನ ಗೊಟ್ಟಿಗೆರೆ ಕೆರೆಯ ಪಕ್ಕದಲ್ಲಿ ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರಿಗೆ ('ನೈಸ್') ಹೈಕೋರ್ಟ್ ಹಸಿರು ನಿಶಾನೆ ತೋರಿತು. ಈ ಕೆರೆಯ ಮೇಲೆ ಹಾದು ಹೋಗುವಂತೆ ಎತ್ತರದ ರಸ್ತೆ ನಿರ್ಮಾಣ ಮಾಡಲು 2006ರ ನವೆಂಬರ್ 4ರಂದು ಸರ್ಕಾರ ಹೊರಡಿಸಿದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ವಿ.ಜಿ.ಸಭಾಹಿತ ಅವರನ್ನು ಒಳಗೊಂಡ ವಿಭಾಗೀಯ ಪೀಠ ರದ್ದು ಮಾಡಿತು. ಈ ಹಿನ್ನೆಲೆಯಲ್ಲಿ 41 ಕಿ.ಮೀ. ಉದ್ದದ ಈ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳ ಕಾನೂನು ಸಮರದಲ್ಲಿ 'ನೈಸ್' ಪರ ತೀರ್ಪು ಹೊರಬಿದ್ದಂತಾಯಿತು.

2009: ಸುಪ್ರೀಂ ಕೋರ್ಟಿನ ಒತ್ತಡದಿಂದಾಗಿ ಕೇಂದ್ರ ಸರ್ಕಾರವು ತಾನು ಈಗಾಗಲೇ ಹೊರಡಿಸಿದ ನೂತನ ಆಹಾರ ಸುರಕ್ಷತಾ ಕಾನೂನನ್ನು ಈದಿನದಿಂದಲೇ ಅನ್ವಯವಾಗುವಂತೆ ಜಾರಿಗೆ ತಂದಿತು. ಇದರಿಂದಾಗಿ ಕೋಕೊ ಕೋಲಾ, ಪೆಪ್ಸಿ ಸಹಿತ ಇತರ ಪಾನೀಯ ಮತ್ತು ಆಹಾರ ತಯಾರಿಕಾ ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಬಳಸಿದ ವಿವಿಧ ಬಗೆಯ ಪದಾರ್ಥಗಳ ಬಗ್ಗೆ ವಿವರಣೆ ನೀಡುವುದು ಕಡ್ಡಾಯವಾಯಿತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ನೂತನ ಕಾನೂನನ್ನು ಜಾರಿಗೆ ತರಲು ಅಧಿಸೂಚನೆ ಹೊರಡಿಸಬೇಕು ಎಂಬ ಸುಪ್ರೀಂ ಕೋರ್ಟಿನ ತಾಕೀತಿನಿಂದಾಗಿ ಈ ಬೆಳವಣಿಗೆ ನಡೆಯಿತು. 'ಗ್ರಾಹಕರ ಹಿತದೃಷ್ಟಿಯಿಂದ ಪ್ಯಾಕ್ ಮಾಡಿದ ಆಹಾರ ಉತ್ಪನ್ನಗಳ ಮೇಲೆ ಲೇಬಲ್ ಹಚ್ಚುವುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಡ್ಡಾಯಗೊಳಿಸಿದೆ. ಇದರಿಂದಾಗಿ ಆರೋಗ್ಯಕರ ಮತ್ತು ಪೌಷ್ಟಿಕಾಂಶ ಇರುವ ಆಹಾರದ ಬಗ್ಗೆ ಗ್ರಾಹಕರಿಗೆ ಮಾಹಿತಿ ದೊರೆತಂತಾಗುತ್ತದೆ' ಎಂದು ಅಧಿಸೂಚನೆಯಲ್ಲಿ ತಿಳಿಸಲಾಯಿತು.

2009: ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರಿಮ್ ತೆಲಗಿಗೆ ಅಹಮದಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ನ್ಯಾಯಾಧೀಶ ಎ. ಪಿ. ಗೊಹಿಲ್ ಅವರು ತೆಲಗಿಯ ಸಹಚರರಾದ ಸಾದಿಕ್ ಇಬ್ರಾಹಿಂ ಮತ್ತು ಪೀಟರ್ ಫರ್ನಾಂಡಿಸ್‌ಗೆ ಕ್ರಮವಾಗಿ ಏಳು ವರ್ಷ ಹಾಗೂ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. ತೆಲಗಿ ಮತ್ತು ಸಾದಿಕ್‌ಗೆ ತಲಾ 35 ಸಾವಿರ ಹಾಗೂ ಪೀಟರ್‌ಗೆ 30 ಸಾವಿರ ರೂಪಾಯಿಗಳ ದಂಡ ವಿಧಿಸಲಾಯಿತು. ತೆಲಗಿಯ ಬಹುಕೋಟಿ ಛಾಪಾ ಕಾಗದ ಹಗರಣವು ಮೊದಲಿಗೆ ಮಹಾರಾಷ್ಟ್ರದಲ್ಲಿ ಪತ್ತೆಯಾಗಿ, ನಂತರ ದೇಶದ ವಿವಿಧ ರಾಜ್ಯಗಳಲ್ಲೂ ಜಾಲ ಹರಡಿದ್ದು ಬೆಳಕಿಗೆ ಬಂದಿತ್ತು. ಗುಜರಾತಿನಲ್ಲಿ ತೆಲಗಿ ತನ್ನ ಸಹಚರರ ಜತೆ ನಕಲಿ ಛಾಪಾ ಕಾಗದದ ವ್ಯವಹಾರ ನಡೆಸುತ್ತಿದ್ದ ಅನಾರೋಗ್ಯದ ಕಾರಣ ಕನಿಷ್ಠ ಸಜೆಯನ್ನು ನೀಡಬೇಕು ಎಂದು ತೆಲಗಿ ಮನವಿ ಮಾಡಿದ್ದ. ಆದರೆ ಕಾನೂನಿನಲ್ಲಿ ವಂಚನೆಯ ಅಪರಾಧಕ್ಕೆ ಇರುವ ಗರಿಷ್ಠ ಶಿಕ್ಷೆಯನ್ನು ಆತನಿಗೆ ವಿಧಿಸಲಾಯಿತು.

2008: ಬೆಳಗಾವಿ ಸೇರಿದಂತೆ ರಾಜ್ಯ ಗಡಿ ಭಾಗದ ಮರಾಠಿ ಭಾಷಿಕ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂಬ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕೈಗೊಂಡ ಗೊತ್ತುವಳಿ ವಿರುದ್ಧ ಕರ್ನಾಟಕ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿತು. ಗಡಿ ವಿವಾದ ಕುರಿತು ಆಗಾಗ್ಗೆ ತಗಾದೆ ತೆಗೆಯುವ ಮಹಾರಾಷ್ಟ್ರದ ಚಾಳಿಯನ್ನು ಹಿರಿಯ ಸಾಹಿತಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಕಟುವಾಗಿ ಟೀಕಿಸಿದರು. ಕನ್ನಡ ಪರ ಹೋರಾಟಗಾರರು ಪ್ರತಿಭಟನೆಯ ಮೂಲಕ ಪ್ರತಿಕ್ರಿಯಿಸಿದರು. ಕನ್ನಡಿಗರ ಸಹನೆ ಕೆಣಕದಂತೆ ಎಲ್ಲರೂ ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರರಾವ್, `ಮಹಾರಾಷ್ಟ್ರ ವಿಧಾನಸಭೆಯಲ್ಲಿನ ಗೊತ್ತುವಳಿ ಬಗ್ಗೆ ಅಧಿಕೃತ ಮಾಹಿತಿ ದೊರಕಿಲ್ಲ. ರಾಜ್ಯದ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ' ಎಂದು ಸ್ಪಷ್ಟ ಪಡಿಸಿದರು.

2008: `ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1968' ತಿದ್ದುಪಡಿಗೆ ರಾಜ್ಯ ಸರ್ಕಾರದ ಅನುಮೋದನೆ ದೊರಕಿ ರಾಜ್ಯದಾದ್ಯಂತ ಜಾರಿಗೆ ಬಂದಿತು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು 2007ರ ಡಿಸೆಂಬರ್ 24 ರಂದು ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ರೈತರು ಮತ್ತು ವರ್ತಕರಿಂದ ಬಂದ ಸಲಹೆ ಹಾಗೂ ಆಕ್ಷೇಪಗಳನ್ನೆಲ್ಲ ಪರಿಶೀಲಿಸಿದ ನಂತರ ಕಾಯ್ದೆ ತಿದ್ದುಪಡಿಯ ಅಂತಿಮ ನಿಯಮಾವಳಿಗಳಿಗೆ ಅನುಮೋದನೆ ದೊರಕಿತು. ಈದಿನದಿಂದಲೇ ರಾಜ್ಯದಾದ್ಯಂತ ಹೊಸ ಕಾಯ್ದೆ ಅನುಷ್ಠಾನಕ್ಕೆ ಬಂದಿರುತ್ತದೆ ಎಂದು ಕೃಷಿ ಮಾರಾಟ ಇಲಾಖೆ ತಿಳಿಸಿತು. ಕೇಂದ್ರ ಸರ್ಕಾರ ರೂಪಿಸಿದ್ದ ಮಾದರಿ ಶಾಸನದ ಅನ್ವಯ ರಾಜ್ಯ ಸರ್ಕಾರವೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಕ್ರಮ ಕೈಗೊಂಡಿದೆ ಎಂದು ಪ್ರಕಟಣೆ ತಿಳಿಸಿತು.

2008: ಹೊಗೇನಕಲ್ ನೀರಾವರಿ ಹಾಗೂ ವಿದ್ಯುತ್ ಉತ್ಪಾದನಾ ಯೋಜನೆ ಚಾಲನೆಯಿಂದ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದು, ಈ ಯೋಜನೆಗಳಿಗೆ ಕೇಂದ್ರ ಸರ್ಕಾರದ ಮಂಜೂರಾತಿ ಸಹ ದೊರಕಿದೆ. ಇದರಿಂದ ಯಾವುದೇ ಕಾಯ್ದೆಯ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಬೆಂಗಳೂರಿನಲ್ಲಿ ಹೇಳಿದರು.

2008: ಆರ್ಯ ಈಡಿಗ ಮಹಾಸಂಸ್ಥಾನದ ಕುಲಗುರುಗಳಾದ ಆರ್ಯ ಶ್ರೀ ರೇಣುಕಾನಂದ ಸ್ವಾಮೀಜಿಯವರ ಪಟ್ಟಾಭಿಷೇಕ ಮತ್ತು ಕಿರೀಟಧಾರಣೆ ಕಾರ್ಯಕ್ರಮ ಬೆಂಗಳೂರಿಗೆ ಸಮೀಪದ ಮಾಗಡಿ ತಾಲ್ಲೂಕಿನ ಸೋಲೂರು ಗ್ರಾಮದಲ್ಲಿ ನೆರವೇರಿತು. ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿಯವರು ಬೆಳಿಗ್ಗೆ 10.30ಕ್ಕೆ ಸರಿಯಾಗಿ ರೇಣುಕಾನಂದ ಸ್ವಾಮೀಜಿಯವರಿಗೆ ಬೆಳ್ಳಿಯ ಕಿರೀಟ ಧಾರಣೆ ಮಾಡಿದರು. ಸೋಲೂರಿನಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಬೃಹತ್ ನಿವೇಶನದಲ್ಲಿ ನಡೆದ ಈ ಸಮಾರಂಭಕ್ಕೆ ಸಹಸ್ರಾರು ಜನರು ಸಾಕ್ಷಿಯಾದರು.

2008: ಭಾರತ ತೊರೆದ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಲಂಡನ್ ತಲುಪಿದರು. ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಿಂದ ತಾವು ತೆರಳುವ ಸ್ಥಳಕ್ಕೆ ಪ್ರಯಾಣ ಬೆಳೆಸುವುದಕ್ಕೆ ಮುನ್ನ ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಭಾರತ ತೊರೆದು ತಾವು ತೆರಳುತ್ತಿರುವ ಸ್ಥಳ ಬಹಿರಂಗಪಡಿಸಲು ನಿರಾಕರಿಸಿದರು.

2008: ನಿರೀಕ್ಷೆಯಂತೆ ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಫಾಹ್ಮಿದಾ ಮಿರ್ಜಾ ಅವರು ಪಾಕಿಸ್ಥಾನ ರಾಷ್ಟ್ರೀಯ ಅಸೆಂಬ್ಲಿಯ 60 ವರ್ಷಗಳ ಇತಿಹಾಸದಲ್ಲಿ ಮೊದಲ ಮಹಿಳಾ ಸಭಾಧ್ಯಕ್ಷೆಯಾಗಿ ಆಯ್ಕೆಯಾದರು. ಅವರು ಮುಸ್ಲಿಂ ಲೀಗ್ (ಕ್ಯೂ) ಅಭ್ಯರ್ಥಿ ಸರ್ದಾರ್ ಮೊಹಮದ್ ಇಸ್ಸಾರ್ ಅವರನ್ನು 249-70 ಮತಗಳ ಅಂತರದಲ್ಲಿ ಪರಾಜಯಗೊಳಿಸಿದರು.

2008: `ಸ್ವತಂತ್ರ ಟಿಬೆಟ್'ಗೆ ಒತ್ತಾಯಿಸಿ ಮಾರ್ಚ್ 14ರಂದು ಲ್ಹಾಸಾದಲ್ಲಿ ಹಿಂಸಾಚಾರಕ್ಕೆ ಕಾರಣಕರ್ತರಾಗಿದ್ದ ಸುಮಾರು 105 ಮಂದಿ ಗಲಭೆಕೋರರು ಚೀನಾದ ಪೊಲೀಸರಿಗೆ ಶರಣಾದರು. ಈ ಹಿಂಸಾಚಾರದಲ್ಲಿ ಕನಿಷ್ಠ 13ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದರು. ಆಕ್ರೋಶಗೊಂಡಿದ್ದ ಗಲಭೆಕೋರರ ಶರಣಾಗತಿಗೆ ಟಿಬೆಟಿನ ಸ್ಥಳೀಯ ಸರ್ಕಾರ ಗಡುವು ನೀಡಿದ್ದರ ಹಿನ್ನೆಲೆಯಲ್ಲಿ 105 ಮಂದಿ ಗಲಭೆಕೋರರು ಶರಣಾಗತರಾದರು.

2008: ದಕ್ಷಿಣ ಭಾರತದ ಜನಪ್ರಿಯ ಬಹುಭಾಷಾ ಚಲನಚಿತ್ರ ನಟ ರಘುವರನ್ (60) ಹೃದಯಘಾತದಿಂದ ಚೆನ್ನೈಯಲ್ಲಿ ನಿಧನರಾದರು. ಅವರು ನಟಿ ರೋಹಿಣಿಯವರನ್ನು ವಿವಾಹವಾಗಿದ್ದರು. ಮೃತರು ತಮಿಳು ಭಾಷಾ ಚಿತ್ರಗಳು ಸೇರಿದಂತೆ ತೆಲುಗು, ಕನ್ನಡ, ಮಲೆಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ರಜನಿಕಾಂತ್ ಅವರ `ಶಿವಾಜಿ' ಹಾಗೂ `ಬಾಸ್' ಚಿತ್ರಗಳು ರಘುವರನ್ ನಟಿಸಿದ ಇತ್ತೀಚಿನ ಪ್ರಸಿದ್ಧ ಚಿತ್ರಗಳು, ನಾಯಕ, ಖಳನಾಯಕ, ಪೋಷಕ ನಟ ಮುಂತಾದ ಪಾತ್ರಗಳಲ್ಲಿ ನಟಿಸಿ ಅವರು ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದರು.

2008: ಭಾರತದ ಗೂಢಚಾರ ಎಂದು ಪಾಕಿಸ್ಥಾನ ಸರ್ಕಾರವು ಪರಿಗಣಿಸಿದ ಸರಬ್ಜಿತ್ ಸಿಂಗ್ ಅವರನ್ನು ಗಲ್ಲಿಗೇರಿಸುವ ದಿನವನ್ನು ಪಾಕಿಸ್ಥಾನ ಸರ್ಕಾರವು ಒಂದು ತಿಂಗಳ ಕಾಲ ಮುಂದೂಡಿತು. ಅವರಿಗೆ ಅಧ್ಯಕ್ಷ ಮುಷರಫ್ ಕ್ಷಮಾದಾನ ನೀಡುವ ಸಂಭವವಿದೆ ಎಂದು ವರದಿಗಳು ತಿಳಿಸಿದವು. ಲಾಹೋರ್ ಮತ್ತು ಮುಲ್ತಾನಿನಲ್ಲಿ 1990ರಲ್ಲಿ ನಾಲ್ಕು ಕಡೆ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆರೋಪಿ ಎಂದು ಭಾವಿಸಿ ಬಂಧಿಸಲಾದ ಸರಬ್ಜಿತ್ ಸಿಂಗ್ ಅವರಿಗೆ 1991ರಲ್ಲಿಯೇ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆಗ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಸುಮಾರು 14ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸರಬ್ಜಿತ್ ಅವರನ್ನು 2008ರ ಏಪ್ರಿಲ್ ಒಂದರಂದು ಗಲ್ಲಿಗೇರಿಸಲು ಸರ್ಕಾರ ನಿರ್ಧರಿಸಿತ್ತು.

2008: ಭ್ರಷ್ಟಾಚಾರದಲ್ಲಿ ಭಾರತ ವಿಶ್ವದ 180 ರಾಷ್ಟ್ರಗಳಲ್ಲಿ 72ನೇ ಸ್ಥಾನದಲ್ಲಿದೆ. ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಗ್ರಹಿಕೆ ವಿಷಯಸೂಚಿ (ಸಿಪಿಐ) ವರದಿಯಲ್ಲಿ ಇದನ್ನು ತಿಳಿಸಲಾಗಿದ್ದು ವರದಿ ಈದಿನ ಲೋಕಸಭೆಯಲ್ಲಿ ಪ್ರಸ್ತಾಪಗೊಂಡಿತು.

2008: ಮೇಘಾಲಯ ಪ್ರಗತಿಪರ ಒಕ್ಕೂಟದ (ಎಂಪಿಎ) ನಾಯಕ ಡೊಂಕುಪರ್ ರಾಯ್ ಅವರು ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಎಸ್.ಎಸ್. ಸಿಧು ಪ್ರಮಾಣ ವಚನ ಬೋಧಿಸಿದರು. ಡಿ.ಡಿ. ಲಪಾಂಗ್ ನೇತೃತ್ವದ 10 ದಿನಗಳ ಕಾಂಗ್ರೆಸ್ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆ ಎದುರಿಸುವ ಬದಲು ವಿಶ್ವಾಸಮತಕ್ಕೆ ಮುನ್ನವೇ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಡೊಂಕುಪರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

2008: ಮಾಜಿ ಉಪಪ್ರಧಾನಿ ಎಲ್. ಕೆ. ಅಡ್ವಾಣಿ ಅವರನ್ನು ಎಲ್ಲರೂ ತಪ್ಪಾಗಿ ತಿಳಿದುಕೊಂಡಿದ್ದಾರೆ. ಹಿಂದೂ ಉಗ್ರವಾದ ಮತ್ತು ವಾಸ್ತವದ ನಡುವಿನ ಅರ್ಥ ತಿಳಿಯದವರು ಅವರನ್ನು `ಬಲಿಪಶು' ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈದಿನ ಬಿಡುಗಡೆಯಾದ ಅಡ್ವಾಣಿ ಅವರ `ಮೈ ಕಂಟ್ರಿ, ಮೈ ಲೈಫ್' ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಹೇಳಿದ್ದಾರೆ. ವಾಜಪೇಯಿ ಅವರು ಅಡ್ವಾಣಿ ಅವರೊಂದಿಗೆ ಕಳೆದ ನಿಮಿಷಗಳನ್ನು ಮುನ್ನುಡಿಯಲ್ಲಿ ಸ್ಮರಿಸಿಕೊಂಡಿದ್ದಾರೆ. ಭಾರತೀಯ ಜನಸಂಘದಲ್ಲಿ ತಮ್ಮನ್ನು ತೊಡಗಿಸಿಕೊಂಡ 50ಕ್ಕೂ ಹೆಚ್ಚು ವರ್ಷಗಳಿಂದ `ಅಡ್ವಾಣಿ ನನ್ನ ಉತ್ತಮ ಸ್ನೇಹಿತರಾಗಿದ್ದಾರೆ' ಎಂದು ವಾಜಪೇಯಿ ಬರೆದಿದ್ದಾರೆ. `ನೈಜ ಜಾತ್ಯತೀತತೆ'ಯ ಬಗ್ಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದವರು ಅಡ್ವಾಣಿ. ಅವರ ಸುದೀರ್ಘ ರಾಜಕೀಯ ಜೀವನದುದ್ದಕ್ಕೂ ಅವರನ್ನು ಎಲ್ಲರೂ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ ಅಡ್ವಾಣಿ ಸಮಗ್ರ ರಾಷ್ಟ್ರೀಯತೆಯಲ್ಲಿ ಇಟ್ಟ ನಂಬಿಕೆಯನ್ನು ಅವರ ಒಡನಾಡಿಗಳು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ' ಎಂದು ವಾಜಪೇಯಿ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಸುದೀರ್ಘ ಒಡನಾಟದಲ್ಲಿ ತಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡ ವಾಜಪೇಯಿ ಅವರು ಒಂದೇ ಸಂಸ್ಥೆಯಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಜೊತೆಯಾಗಿ ಕೆಲಸ ಮಾಡಿದವರು ಒಂದೇ ದಿಕ್ಕಿನಲ್ಲಿ ಯೋಚಿಸಬೇಕು ಎಂದೇನಿಲ್ಲ. ಆದರೆ ಈ ಭಿನ್ನಾಭಿಪ್ರಾಯಗಳು ಆರೋಗ್ಯಕರವಾಗಿದ್ದವು. ಒಗ್ಗಟ್ಟನ್ನು ಇನ್ನಷ್ಟು ಬಲಗೊಳಿಸುವಂತಿದ್ದವು' ಎಂದು ಹೇಳಿದ್ದಾರೆ.

2008: ವೈಜ್ಞಾನಿಕ ಕಲ್ಪನೆಗಳ ಜಗತ್ಪ್ರಸಿದ್ಧ ಕಥೆಗಾರ ಆರ್ಥರ್ ಕ್ಲಾರ್ಕ್ (90) ನಿಧನರಾದರು. ಬಾಹ್ಯಾಕಾಶದಲ್ಲಿ ಪ್ರಸಕ್ತ ನಡೆದಿರುವ ಬಹಳಷ್ಟು ಸಾಧನೆಗಳನ್ನೆಲ್ಲ ಅರ್ಧ ಶತಮಾನದ ಹಿಂದೆಯೇ ತಮ್ಮಷ್ಟಕ್ಕೆ ತಾವೇ ಕಲ್ಪಿಸಿಕೊಂಡು ಕಥಾರೂಪ ನೀಡಿದ್ದ ಆರ್ಥರ್ ಕ್ಲಾರ್ಕ್ ಸಾವಿನಿಂದ ವೈಜ್ಞಾನಿಕ ಕಥಾ ಬರವಣಿಗೆಯ ಮಹತ್ವದ ಕೊಂಡಿಯೊಂದು ಕಳಚಿಕೊಂಡಂತಾಯಿತು. ಇಂಗ್ಲೆಂಡಿನಲ್ಲಿ 1917ರಲ್ಲಿ ಜನಿಸಿದ ಇವರು 1956ರ ಸುಮಾರಿಗೆ ಶ್ರೀಲಂಕಾಕ್ಕೆ ಬಂದು ನೆಲೆಸಿದರು. ವೈಜ್ಞಾನಿಕ ಕಲ್ಪನೆಗಳ ಬರಹಗಳಿಗೊಂದು ವಿಶಿಷ್ಠ ರೂಪ ನೀಡಿದ ಕ್ಲಾರ್ಕ್ ಸುಮಾರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರು. ಮಾನವನು ಚಂದ್ರನ ಮೇಲೆ ನಡೆದಾಡುವ ಬಗ್ಗೆ ಅರ್ಧ ಶತಮಾನಗಳ ಹಿಂದೆಯೇ ಕ್ಲಾರ್ಕ್ ಕಲ್ಪಿಸಿಕೊಂಡು ಕಥೆ ಬರೆದಾಗ ಎಲ್ಲರೂ ಲೇವಡಿ ಮಾಡಿದ್ದರು. ಆದರೆ ಅದಾಗಿ ಕೇವಲ ಒಂದೂವರೆ ದಶಕದಲ್ಲಿ ಮಾನವನು ಚಂದ್ರನ ಮೇಲೆ ಕಾಲಿರಿಸಿದ್ದನು. ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲದಂತಹ ಸಂದರ್ಭದಲ್ಲಿ ಕ್ಲಾರ್ಕ್ ಉಪಗ್ರಹಗಳ ಕಲ್ಪನೆಯೊಂದಿಗೆ ಕಥೆ ಬರೆದಿದ್ದರು. ಆಗ ಕೂಡ ಓದುಗರು `ಇದೆಲ್ಲಾ ಏನು, ಕಲ್ಪನೆಗೂ ಒಂದು ಮಿತಿ ಬೇಡವೆ' ಎಂದಿದ್ದರು. ಆದರೆ ಕೆಲವೇ ಸಮಯದಲ್ಲಿ ಬಾಹ್ಯಾಕಾಶ ತಂತ್ರಜ್ಞಾನವು ಉನ್ನತ ಮಟ್ಟ ತಲುಪಿತು. ಇವತ್ತು ಉಪಗ್ರಹಗಳಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವೈಜ್ಞಾನಿಕ ಕಥೆಗಳ ಈ ವಯೋವೃದ್ಧನಿಗೆ 1998ರಲ್ಲಿ ಇಂಗ್ಲೆಂಡ್ ಸರ್ಕಾರವು `ಸರ್' ಗೌರವ ನೀಡಿ ಅಭಿನಂದಿಸಿತ್ತು.

2007: ಅಮೆರಿಕದ ಉತ್ತರ ನೆವಾಡಾ ರಾಜ್ಯ ವಿಧಾನಸಭಾ ಅಧಿವೇಶನವನ್ನು ಗಾಯತ್ರಿ ಮಂತ್ರ ಪಠಣದೊಂದಿಗೆ ಆರಂಭಿಸುವುದರೊಂದಿಗೆ ಇತಿಹಾಸ ಸೃಷ್ಟಿಯಾಯಿತು. ಉತ್ತರ ನೆವಾಡಾದ ಹಿಂದೂ ದೇವಾಲಯದ ಸಾರ್ವಜನಿಕ ವ್ಯವಹಾರಗಳ ನಿರ್ದೇಶಕ ರಾಜನ್ ಜೆದ್ ವಿಧಾನಸಭೆಯ ಆರಂಭದಲ್ಲಿ ಗಾಯತ್ರಿ ಮಂತ್ರ ಪಠಿಸಿದರು. ನಂತರ ಉಪನಿಷತ್ತಿನಿಂದಲೂ ಕೆಲವು ಶ್ಲೋಕಗಳನ್ನು ಪ್ರಸ್ತುತ ಪಡಿಸಿದರು. 1864ರಲ್ಲಿ ನೆವಾಡಾ ರಾಜ್ಯ ವಿಧಾನಸಭೆ ಸ್ಥಾಪನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಹಿಂದೂ ಪ್ರಾರ್ಥನೆ ನೆರವೇರಿಸಿದರು. ಜೆದ್ ಅವರು ಕಾಷಾಯ ವಸ್ತ್ರ, ಹಣೆಯಲ್ಲಿ ಚಂದನದ ತಿಲಕ, ರುದ್ರಾಕ್ಷಿ ಮಾಲೆ ಧರಿಸಿ ಬಂದು ಗಾಯತ್ರಿ ಮಂತ್ರ ಹಾಗೂ ಋಗ್ವೇದದ ಶ್ಲೋಕಗಳನ್ನು ಪಠಿಸಿದರು.

2007: ದಕ್ಷಿಣ ರಷ್ಯಾದ ಗ್ರಾಮವೊಂದರ ವೃದ್ಧಾಶ್ರಮದಲ್ಲಿ ಮಧ್ಯರಾತ್ರಿ ಅಗ್ನಿ ಅನಾಹುತ ಸಂಭವಿಸಿ 63 ಹಿರಿಯ ನಾಗರಿಕರು ಮೃತರಾಗಿ, 33 ಮಂದಿ ಗಾಯಗೊಂಡರು.

2007: ಇರಾಕಿನಲ್ಲಿ ಸುಮಾರು 148 ಮಂದಿ ಶಿಯಾಗಳನ್ನು ಹತ್ಯೆ ಮಾಡಿದ ಅಪರಾಧಕ್ಕಾಗಿ, ಸದ್ದಾಮ್ ಹುಸೇನರ ಮಾಜಿ ಸಹಾಯಕರಾಗಿದ್ದ ತಾಹಾ ಯಾಸಿನ್ ರಂಜಾನ್ ಅವರನ್ನು ಬಾಗ್ದಾದಿನಲ್ಲಿ ಬೆಳಗಿನ ಜಾವ ಗಲ್ಲಿಗೇರಿಸಲಾಯಿತು.

2007: ಸೇಂಟ್ ಲೂಸಿಯಾದಲ್ಲಿ ನಡೆದ ಐಸಿಸಿ ವಿಶ್ವಕಪ್ನಲ್ಲಿ ಏಕದಿನ ಪಂದ್ಯಗಳ ಇತಿಹಾಸದಲ್ಲೇ ಗರಿಷ್ಠ ರನ್ (257) ಅಂತರದ ಜಯ ಗಳಿಸುವ ಮೂಲಕ ಭಾರತ ದಾಖಲೆ ಸೃಷ್ಟಿಸಿತು. ಇದರ ಜೊತೆಗೇ ವಿಶ್ವ ಕಪ್ ಕ್ರಿಕೆಟಿನಲ್ಲೇ ಅತಿ ಹೆಚ್ಚು ಮೊತ್ತ (413), ಕೊನೆಯ 10 ಓವರುಗಳಲ್ಲಿ 136 ರನ್ ಗಳಿಕೆಯ ದಾಖಲೆಗಳನ್ನೂ ಭಾರತ ನಿರ್ಮಿಸಿತು. ವಿಶ್ವದ ಮಹಾ ಕ್ರಿಕೆಟ್ ಸಮರಗಳಲ್ಲಿ 25 ಸಿಕ್ಸರ್ ಸಿಡಿಸಿದ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟುವ ಮೂಲಕ ಸೌರವ ಗಂಗೂಲಿ ಇನ್ನೊಂದು ದಾಖಲೆ ಸೃಷ್ಟಿಸಿದರು. ಒಂದೇ ಪಂದ್ಯದಲ್ಲಿ 18 ಸಿಕ್ಸರ್ ಗಳಿಸಿದ ದಕ್ಷಿಣ ಆಫ್ರಿಕದ ದಾಖಲೆಯನ್ನೂ ಭಾರತ ಸರಿಗಟ್ಟಿತು.

2007: ಸುಮಾರು 15 ವರ್ಷಗಳಿಂದ ಪಾರ್ಕಿನ್ ಸನ್ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾಗಿದ್ದ ರಾಘವೇಂದ್ರ ಖಾಸನೀಸ (74) ಅವರು, ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಈದಿನ ಸಂಜೆ ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆ ಮಾರ್ಚ್ 20ರಂದು ಹರಿಶ್ಚಂದ್ರ ಘಾಟಿನಲ್ಲಿ ನೆರವೇರಿತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿ 1991ರಲ್ಲಿ ನಿವೃತ್ತರಾಗಿದ್ದ ಅವರು ಕಳೆದ ಎರಡೂವರೆ ದಶಕಗಳಲ್ಲಿ ಸುಮಾರು 25 ಅಪರೂಪದ ಕತೆಗಳನ್ನು ನಾಡಿನ ಓದುಗರಿಗೆ ನೀಡಿದ್ದರು. `ಖಾಸನೀಸರ ಕತೆಗಳು' (1984) ಹಾಗೂ `ಬೇಡಿಕೊಂಡವರು' (1989) ಈ ಎರಡು ಕಥಾ ಸಂಕಲನಗಳು. (ಇವೆರಡನ್ನೂ ಸೇರಿಸಿ ಮೂರನೆಯದಾಗಿ ಹೊರಬಂದಿದ್ದ `ಖಾಸನೀಸರ ಸಮಗ್ರ ಕತೆಗಳು'). ಅವರು ಬರೆದದ್ದು ಕಡಿಮೆಯಾದರೂ ಅವರಿಗೆ ಕಥಾ ಪ್ರಪಂಚದಲ್ಲಿ ಶಾಶ್ವತವಾದ ಸ್ಥಾನವನ್ನು ತಂದು ಕೊಟ್ಟದ್ದು `ತಬ್ಬಲಿಗಳು' ಕತೆ. ಉಳಿದಂತೆ `ಮೋನಾಲಿಸಾ', `ಅಲ್ಲಾವುದ್ದೀನನ ಅದ್ಭುತ ದೀಪ', `ಹೀಗೂ ಇರಬಹುದು' ಮುಂತಾದ ಅಪರೂಪದ ಕತೆಗಳನ್ನು ಅವರು ಬರೆದಿದ್ದಾರೆ. ವಿಜಾಪುರದ ಇಂಡಿ ಗ್ರಾಮದಲ್ಲಿ 1933ರಲ್ಲಿ ಜನಿಸಿದ ಖಾಸನೀಸರು ಧಾರವಾಡದಲ್ಲಿ ತಮ್ಮ ಬಿಎ ಪದವಿ ಮುಗಿಸಿದ ನಂತರ ಮುಂಬಯಿಯಲ್ಲಿ ಇಂಗ್ಲಿಷ್ ಎಂ.ಎ. ಓದಿದ್ದರು. ಆನಂತರ ಗ್ರಂಥಾಲಯ ವಿಜ್ಞಾನ ಡಿಪ್ಲೊಮಾ ಪೂರೈಸಿ ಪುಣೆಯ ಎಂಜಿನಿಯರಿಂಗ್ ಕಾಲೇಜು ಒಂದರಲ್ಲಿ ವೃತ್ತಿಜೀವನ ಪ್ರಾರಂಭಿಸಿದ್ದರು. ಆಮೇಲೆ ಬೆಂಗಳೂರಿಗೆ ಬಂದ ಅವರು 1991ರವರೆಗೂ ಬೆಂಗಳೂರು ವಿವಿಯಲ್ಲಿ ಸಹಾಯಕ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಶಸ್ತಿಗಳು: ಸಾಕಷ್ಟು ಜನಪ್ರಿಯ ಕಥೆಗಾರರಾಗಿದ್ದರೂ ಖಾಸನೀಸರಿಗೆ ಪ್ರಶಸ್ತಿಗಳು ಬಂದದ್ದು ಬಹಳ ಕಡಿಮೆ. 1984ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುತ್ತಮ ಸೃಜನಶೀಲ ಕಥಾ ಪ್ರಶಸ್ತಿ ಹಾಗೂ 1995ರಲ್ಲಿ ಗೌರವ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿತ್ತು. ಮೃತರು ಪತ್ನಿ ಕಾಂತಾ, ಮೂವರು ಪುತ್ರಿಯರು ಮತ್ತು ಪುತ್ರನನ್ನು ಅಗಲಿದರು.

2007: ಉದ್ಯಮ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ `ಇಂಡಿಯಾ ಇಂಟರ್ ನ್ಯಾಷನಲ್ ಫೌಂಡೇಷನ್' ನ 2006ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಅನಿವಾಸಿ ಭಾರತೀಯ ಉದ್ಯಮಿ, `ಕೋಬ್ರಾ ಬೀರ್' ಸ್ಥಾಪಕ ಕರಣ್ ಬಿಲಿಮೋರಿಯಾ ಮತ್ತು ಇಂಗ್ಲೆಂಡಿನಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸಿದ್ದಕ್ಕಾಗಿ ನೀಡಲಾಗುವ ಪ್ರಶಸ್ತಿಯನ್ನು ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್. ನಂದಕುಮಾರ ಅವರು ಗೆದ್ದುಕೊಂಡರು. 1989ರಲ್ಲಿ, ತಮ್ಮ 28ರ ಹರೆಯದಲ್ಲಿ 20,000 ಪೌಂಡ್ ಸಾಲದೊಂದಿಗೆ `ಕೋಬ್ರಾ ಬೀರ್' ಆರಂಭಿಸಿದ ಲಾರ್ಡ್ ಬಿಲಿಮೋರಿಯಾ ಅದನ್ನು ವಾರ್ಷಿಕ 14.50 ಕೋಟಿ ಪೌಂಡ್ ವಹಿವಾಟು ನಡೆಸುವ ಜಾಗತಿಕ ಬೀರ್ ಕಂಪೆನಿಯನ್ನಾಗಿ ಬೆಳೆಸಿದ್ದಕ್ಕಾಗಿ ಈ ಪ್ರಶಸ್ತಿ ಬಂತು. 2004ರಲ್ಲಿ ರಾಣಿಯಿಂದ ಸಿಬಿಇ ಪ್ರಶಸ್ತಿಯನ್ನೂ ಪಡೆದ ಬಿಲಿಮೋರಿಯಾ ಲಂಡನ್ನಿನ ಥಾಮಸ್ ವ್ಯಾಲಿ ವಿಶ್ವವಿದ್ಯಾಲಯದ ಕುಲಪತಿ ಕೂಡಾ. ಲಂಡನ್ ವಿಶ್ವ ವಿದ್ಯಾಲಯದಲ್ಲಿ ಪಿ. ಎಚ್. ಡಿ. ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದ ನಂದಕುಮಾರ ಅವರು ಇಂಗ್ಲೆಂಡಿನಲ್ಲಿ ಭಾರತೀಯ ವಿದ್ಯಾಭವನದ ಚಟುವಟಿಕೆಗಳನ್ನು ಸಂಘಟಿಸಿ, ಭಾರತೀಯ ಸಂಸ್ಕೃತಿ ಬೆಳೆಸುವ ಮುಖ್ಯಶಕ್ತಿಯಾಗಿದ್ದು, ಸಂಗೀತ, ನೃತ್ಯದ ಪದವಿ ತರಗತಿಗಳ ಆಯೋಜಕರೂ ಹೌದು. ಇಂಗ್ಲೆಂಡಿನ ಜ್ಯುಡಿಷಿಯಲ್ ಅಪಾಯಿಂಟ್ ಮೆಂಟ್ ಕಮೀಷನ್ ಅಧ್ಯಕ್ಷರಾದ ಉಷಾ ಪ್ರಶಾರ್ ಲಂಡನ್ನಿನಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

2006: ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವಿಜಯ್ ಪೆಂಬಾ ತಮಾಂಗ್ ಅವರಿಗೆ ಶೂಟಿಂಗ್ 25 ಮೀ. ರಾಪಿಡ್ ಫೈರ್ ಪಿಸ್ತೂಲ್ ಪೇರ್ಸ್ ಬಂಗಾರ, ರಾಜ್ಯವರ್ಧನ್ ಸಿಂಗ್ ರಾಠೋಡ್- ವಿಕ್ರಮ್ ಭಟ್ನಾಗರ್ ಅವರಿಗೆ ಡಬಲ್ ಟ್ರ್ಯಾಪ್ ಫೇರ್ಸ್ ರಜತ, ಅಂಜಲಿ ಭಾಗ್ವತ್- ಅನುಜಾ ಜಂಗ್ ಅವರಿಗೆ 50 ಮೀ. ರೈಫಲ್ ಮೂರು ಭಂಗಿ ಫೇರ್ಸಿನಲ್ಲಿ ಎರಡನೇ ಸ್ಥಾನ, ವೇಟ್ ಲಿಫ್ಟಿಂಗಿನಲ್ಲಿ ಮೊಹಮ್ಮದ್ ಜಾಕೀರ್ ಅಸುದುಲ್ಲಾ ಅವರಿಗೆ ಪುರುಷರ 77 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಲಭಿಸಿದವು.

2006: ಬಿಜೆಪಿಯಿಂದ ಉಚ್ಚಾಟಿತರಾದ ಉಮಾಭಾರತಿ ಅವರ ರಾಲಿಯಲ್ಲಿ ಪಾಲ್ಗೊಳ್ಳುವ ಯೋಜನೆ ಪ್ರಕಟಿಸಿದ ಹಿನ್ನೆಲೆಯಲ್ಲಿ ಹಿರಿಯ ಬಿಜೆಪಿ ನಾಯಕ ಮದನ್ ಲಾಲ್ ಖುರಾನಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಪಕ್ಷದ ಅಧ್ಯಕ್ಷ ರಾಜನಾಥ್ಸಿಂಗ್ ಅವರು ಅಮಾನತುಗೊಳಿಸಿದರು.

2001: ವೆಸ್ಟ್ ಇಂಡಿಯನ್ ಬೌಲರ್ ಕರ್ಟ್ನ್ ವಾಲ್ಶ್ 500 ಟೆಸ್ಟ್ ವಿಕೆಟುಗಳನ್ನು ಪಡೆದ ಪ್ರಥಮ ಬೌಲರ್ ಎನಿಸಿಕೊಂಡರು. ಟ್ರಿನಿಡ್ಯಾಡ್ನ ಪೋರ್ಟ್ ಆಫ್ ಸ್ಪೇನಿನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ನಡೆದ ದ್ವಿತೀಯ ಟೆಸ್ಟಿನ ಎರಡನೇ ಇನ್ನಿಂಗ್ಸಿನಲ್ಲಿ ಜಾಕ್ ಕಾಲಿಸ್ ಅವರನ್ನು ಔಟ್ ಮಾಡಿ ಅವರು ಈ ಸಾಧನೆ ಮೆರೆದರು.

1982: ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಸಂಸದೀಯ ಪಟು, ಕಿಸಾನ್ ಮಜ್ದೂರ್ ದಳ ಸ್ಥಾಪಕ ಜೆ.ಬಿ. ಕೃಪಲಾನಿ (1888-1982) ಅವರು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದರು.

1973: ಕಲಾವಿದ ಪ್ರಭುಲಿಂಗಯ್ಯ ಬಿ.ಟಿ. ಜನನ.

1965: ಕಲಾವಿದ ರಾಜಶೇಖರ ಜೆ.ಎಂ. ಜನನ.

1937: ಕಲಾವಿದ ಸತ್ಯನಾರಾಯಣ ಎಂ.ಕೆ. ಜನನ.

1926: ಖ್ಯಾತ ಸಾಹಿತಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕು ಮೊಡಂಕಾಪು ಬಳಿಯ ಏರ್ಯ ಲಕ್ಷ್ಮೀನಾರಾಯಣ ಆಳ್ವ ಜನನ.

1924: ಕಲಾವಿದ ಎಂ.ಆರ್. ಗೌತಮ್ ಜನನ.

1912: ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ವೇಷಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲದಲ್ಲಿ ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದ ವಾಸುದೇವ ಗಿರಿಮಾಜಿ (19-3-1912ರಿಂದ 24-8-1993) ಗೋವಿಂದರಾವ್ ಗಿರಿಮಾಜಿ- ತುಂಗಮ್ಮ ದಂಪತಿಯ ಮಗನಾಗಿ ಜನಿಸಿದರು. ರಂಗಭೂಮಿ ನಟನೆಯೊಂದಿಗೆ ಸಿನಿಮಾದೊಂದಿಗೂ ನಂಟು. ಕನ್ನಡ, ಹಿಂದಿ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕ, ನಿರ್ದೇಶಕ, ನಾಯಕ, ಖಳನಾಯಕ ಪಾತ್ರಗಳನ್ನು ನಿರ್ವಹಿಸಿದ್ದರು.

1891: ಅರ್ಲ್ ವಾರನ್ (1891-1974) ಹುಟ್ಟಿದ ದಿನ. 1953-69ರ ಅವಧಿಯಲ್ಲಿ ಅಮೆರಿಕಾದ 14ನೇ ಮುಖ್ಯ ನ್ಯಾಯಾಧೀಶರಾದ ಇವರು ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಹತ್ಯೆಯ ತನಿಖೆಗಾಗಿ ರಚಿಸಲಾದ ಆಯೋಗದ ಅಧ್ಯಕ್ಷರಾಗಿದ್ದರು.

1876: ಸರ್ ಜಾನ್ ಹರ್ಬರ್ಟ್ ಮಾರ್ಷಲ್ (1876-1958) ಹುಟ್ಟಿದ ದಿನ. ಸಿಂಧೂ ಕಣಿವೆ ನಾಗರಿಕತೆಯನ್ನು ಬೆಳೆಸಿದ್ದ ಹರಪ್ಪ ಮತ್ತು ಮೊಹೆಂಜದಾರೊ ನಗರಗಳ ಪತ್ತೆಗೆ ನೆರವಾದ ಉತ್ಖನನಗಳ ಕಾರಣಕರ್ತನಾದ ಈತ ಭಾರತೀಯ ಪುರಾತತ್ವ ಸಮೀಕ್ಷೆಯ 1902-31) ಡೈರೆಕ್ಟರ್ ಜನರಲ್ ಆಗಿದ್ದಾಗ ಈ ಉತ್ಖನನ ನಡೆಯಿತು.

1821: ಸರ್ ರಿಚರ್ಡ್ (ಫ್ರಾನ್ಸಿಸ್) ಬರ್ಟನ್ (1821-1890) ಹುಟ್ಟಿದ ದಿನ. ಈತ `ದಿ ಅರೇಬಿಯನ್ ನೈಟ್ಸ್' ನ ಭಾಷಾಂತರವನ್ನು ಪ್ರಕಟಿಸಿದ ಇಂಗ್ಲಿಷ್ ವಿದ್ವಾಂಸ ಹಾಗೂ ಸಂಶೋಧಕ.

Thursday, March 18, 2010

ಇಂದಿನ ಇತಿಹಾಸ History Today ಮಾರ್ಚ್ 18

ಇಂದಿನ ಇತಿಹಾಸ

ಮಾರ್ಚ್ 18

ಬೆಂಗಳೂರಿನ ಕೃಷ್ಣರಾಜಪುರ ರೈಲ್ವೆ ನಿಲ್ದಾಣ ಬಳಿಯ ತೂಗುಸೇತುವೆ ಅತ್ಯುತ್ತಮ ರಾಷ್ಟ್ರೀಯ ಸೇತುವೆ ಪ್ರಶಸ್ತಿಗೆ ಪಾತ್ರವಾಯಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಡ್ಜ್ ಎಂಜಿನಿಯರ್ಸ್‌ ಸಂಸ್ಥೆ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೈರುತ್ಯ ರೈಲ್ವೆ ಡಿಜಿಎಂ ಪ್ರೇಮನಾರಾಯಣ ಹಾಗೂ ಉಪಮುಖ್ಯ ಎಂಜಿನಿಯರ್ ವಿಜಯ ಕುಮಾರ್ ಸ್ವೀಕರಿಸಿದರು. ಈ ಇಬ್ಬರ ಉಸ್ತುವಾರಿಯಲ್ಲಿ ಕೃಷ್ಣರಾಜಪುರ ತೂಗುಸೇತುವೆ ನಿರ್ಮಾಣವಾಗಿತ್ತು.

2009: ಬೆಂಗಳೂರಿನ ಕೃಷ್ಣರಾಜಪುರ ರೈಲ್ವೆ ನಿಲ್ದಾಣ ಬಳಿಯ ತೂಗುಸೇತುವೆ ಅತ್ಯುತ್ತಮ ರಾಷ್ಟ್ರೀಯ ಸೇತುವೆ ಪ್ರಶಸ್ತಿಗೆ ಪಾತ್ರವಾಯಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಡ್ಜ್ ಎಂಜಿನಿಯರ್ಸ್‌ ಸಂಸ್ಥೆ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೈರುತ್ಯ ರೈಲ್ವೆ ಡಿಜಿಎಂ ಪ್ರೇಮನಾರಾಯಣ ಹಾಗೂ ಉಪಮುಖ್ಯ ಎಂಜಿನಿಯರ್ ವಿಜಯ ಕುಮಾರ್ ಸ್ವೀಕರಿಸಿದರು. ಈ ಇಬ್ಬರ ಉಸ್ತುವಾರಿಯಲ್ಲಿ ಕೃಷ್ಣರಾಜಪುರ ತೂಗುಸೇತುವೆ ನಿರ್ಮಾಣವಾಗಿತ್ತು. ಬೆಂಗಳೂರು- ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾದ 230 ಮೀಟರ್ ಉದ್ದದ ಮೇಲ್ಸೇತುವೆಯಲ್ಲಿ ನಾಲ್ಕು ಪಥಗಳನ್ನು ನಿರ್ಮಿಸಲಾಗಿದೆ. ನೈರುತ್ಯ ರೈಲ್ವೆ ಈ ಸೇತುವೆಯನ್ನು ನಿರ್ಮಿಸಿತ್ತು. ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಕುಲದೀಪ ಚತುರ್ವೇದಿ ಮತ್ತು ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ವಿಜಯ ಕುಮಾರನ್ ಅವರು ಪ್ರಶಸ್ತಿ ಪಡೆದ ರೈಲ್ವೆ ಎಂಜಿನಿಯರುಗಳನ್ನು ಅಭಿನಂದಿಸಿದರು.

2009: ಮಹಾರಾಷ್ಟ್ರದ ಮುಖ್ಯಮಂತ್ರಿಯ ನಿಕಟ ಸಂಬಂಧಿಯೂ ಆದ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಲೋಕಾಯುಕ್ತ ಬಲೆಗೆ ಬಿದ್ದರು. ಅವರ ಬಳಿ ಈವರೆಗೆ 76 ಲಕ್ಷ ರೂಪಾಯಿ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಯಿತು. 'ಆದರೆ ಬೇನಾಮಿ ಹೆಸರಿನಲ್ಲಿ ರೂ 250 ಕೋಟಿಗೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಲಭ್ಯವಿರುವ ಮಾಹಿತಿ ಆಧರಿಸಿ ಎಲ್ಲ ಬೇನಾಮಿ ಆಸ್ತಿಯನ್ನೂ ಪತ್ತೆಹಚ್ಚಲಾಗುವುದು' ಎಂದು ಲೋಕಾಯುಕ್ತರು ಹೇಳಿದರು. ಇದೇ ಸಂದರ್ಭದಲ್ಲಿ ಬಿಬಿಎಂಪಿ ಸಹಾಯಕ ಆಯುಕ್ತ ಲಕ್ಷ್ಮಣ್, ಮಂಡ್ಯದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಚೆಲುವೇಗೌಡ, ಲಿಂಗಸುಗೂರಿನ ಕೃಷಿ ಅಧಿಕಾರಿ ಎಲ್.ಎಚ್. ಹನುಮಂತಪ್ಪ ಮತ್ತು ಭಾಲ್ಕಿ ತಾಲ್ಲೂಕು ಪಂಚಾಯತ್ ಕಿರಿಯ ಎಂಜಿನಿಯರ್ ವೀರಶೆಟ್ಟಿ ಅವರ ಮನೆ ಹಾಗೂ ಕಚೇರಿಗಳ ಮೇಲೂ ದಾಳಿ ನಡೆಯಿತು.

2009: ಕೆಲ ದಿನಗಳಿಂದ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದ್ದ ಮೇಘಾಲಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಯಿತು. ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು. ಮೇಘಾಲಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ವಿಫಲವಾದ ಕುರಿತು ರಾಜ್ಯಪಾಲ ಆರ್.ಎಸ್.ಮೂಶಾಹರಿ ಅವರಿಂದ ಕೇಂದ್ರ ಸಂಪೂರ್ಣ ವರದಿಯನ್ನು ಪಡೆದು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿತು. ಆಡಳಿತಾರೂಢ ಮೇಘಾಲಯ ಪ್ರಗತಿಪರ ಪರ ಮೈತ್ರಿಕೂಟಕ್ಕೆ (ಎಂಪಿಎಂ) ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದಿದ್ದ ಐವರು ಶಾಸಕರನ್ನು ಹಿಂದಿನ ರಾತ್ರಿ ಅಮಾನತುಗೊಳಿಸಿದ್ದ ಸ್ಪೀಕರ್ ಬಿ.ಎಂ. ಲನೊಂಗ್ ರಾಜ್ಯಪಾಲರ ನಿರ್ದೇಶನವನ್ನು ತಿರಸ್ಕರಿಸಿ ಎನ್‌ಸಿಪಿ ನೇತೃತ್ವದ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದರು. ಇದರಿಂದ ಸರ್ಕಾರ ಭದ್ರವಾಗಿತ್ತು

2009: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಸಮುದ್ರ ಮಟ್ಟಕ್ಕಿಂತ 13,050 ಅಡಿ ಎತ್ತರದಲ್ಲಿರುವ ವೈಭವಯುತ ರೋತಾಂಗ್ ಪಾಸ್ ಮಾರ್ಗ ಕಳೆದ ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಏಪ್ರಿಲ್ ತಿಂಗಳಿನ ಮೊದಲ ವಾರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಪ್ರಕಟಿಸಲಾಯಿತು. ಸಾಮಾನ್ಯವಾಗಿ ಈ ಮಾರ್ಗ ಮೇ ತಿಂಗಳಿನಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತವಾಗುತ್ತಿತ್ತು. 'ಕಳೆದ ಕೆಲ ವಾರಗಳಿಂದ ಈ ಪ್ರದೇಶದಲ್ಲಿ ಒಣಹವೆ ಮುಂದುವರಿದಿರುವುದರಿಂದ ಹಿಮವನ್ನು ತೆರವುಗೊಳಿಸುವ ಕಾರ್ಯವನ್ನು ಚುರುಕುಗೊಳಿಸಿದ್ದೇವೆ' ಎಂದು ಗಡಿ ರಸ್ತೆಗಳ ಸಂಸ್ಥೆಯ (ಬಿಆರ್‌ಒ) ಮುಖ್ಯ ಎಂಜಿನಿಯರ್ ಹೇಳಿದರು.

2009: ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಹ್ಯಾಮಿಲ್ಟನ್ನಿನಲ್ಲಿ ಆರಂಭವಾದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟಿನ ಮೊದಲ ದಿನದಾಟದಲ್ಲಿಯೇ ಆಸ್ಟ್ರೇಲಿಯಾದ ಮಾರ್ಕ್ ವಾ ಅವರ ಅತಿ ಹೆಚ್ಚು ಟೆಸ್ಟ್ ಕ್ಯಾಚುಗಳ ವಿಶ್ವ ದಾಖಲೆಯನ್ನು ಸರಿಗಟ್ಟಿದರು. ಜಹೀರ್ ಖಾನ್ ಬೌಲಿಂಗ್‌ನಲ್ಲಿ ಕಿವೀಸ್ ಪಡೆಯ ಮಾರ್ಟಿನ್ ಗುಪ್ಟಿಲ್ ಅವರ ಬ್ಯಾಟ್ ಜೊತೆಗೆ ಸರಸವಾಡಿದ ಚೆಂಡನ್ನು ಮೂರನೇ ಸ್ಲಿಫ್‌ನಲ್ಲಿದ್ದ ರಾಹುಲ್ ಆಕರ್ಷಕವಾಗಿ ಹಿಡಿತಕ್ಕೆ ಪಡೆದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಪಡೆದ ಕ್ಯಾಚುಗಳ ಸಂಖ್ಯೆ 181 ಆಯಿತು. ಕಾಂಗರೂಗಳ ನಾಡಿದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಕೂಡ ಇಷ್ಟು ಕ್ಯಾಚ್ ತೆಗೆದುಕೊಂಡು ವಿಶ್ವ ದಾಖಲೆ ನಿರ್ಮಿಸಿದ್ದರು. ಈಗ ದ್ರಾವಿಡ್ ಮತ್ತು ವಾ ಜಂಟಿಯಾಗಿ ಗರಿಷ್ಠ ಕ್ಯಾಚ್ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಂತಂತಾಯಿತು. 2002 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಮಾರ್ಕ್ ಅವರು ಕೇವಲ 128 ಟೆಸ್ಟ್‌ಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು. ಅದನ್ನು ಸರಿಗಟ್ಟಲು ರಾಹುಲ್‌ಗೆ 132 ಟೆಸ್ಟ್ ಬೇಕಾಯಿತು.

2009: ಬೆಂಗಳೂರು ಮೂಲದ ಮಾನವಸಂಪನ್ಮೂಲ ಕಾರ್ಯನಿರ್ವಹಣಾಧಿಕಾರಿ ಚೈತನ್ಯಾ ದತ್ಲಾ ಅವರು ಭಾರತೀಯ ನೌಕಾಪಡೆಗೆ ಸೇರಿದ ಯುದ್ಧ ನೌಕೆಯಲ್ಲಿ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳಲು ಅವಕಾಶ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದತ್ಲಾ (28) ಅವರು ನ್ಯಾಷನಲ್ ಜಿಯೊಗ್ರಾಫಿಕ್ ಚಾನೆಲ್‌ನ 'ಮಿಷನ್ ನೇವಿ: ಲೆಹ್ರೋನ್ ಕೆ ಸರ್ತಾಜ್' ರಿಯಾಲಿಟಿ ಶೋದಲ್ಲಿ ವಿಜೇತರಾದರು. ಈ ಹಿನ್ನೆಲೆಯಲ್ಲಿ ಅವರಿಗೆ ಯುದ್ಧನೌಕೆಯಲ್ಲಿ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳುವ ಅಪೂರ್ವ ಅವಕಾಶ ದೊರಕಿತು. ಈ ರಿಯಾಲಿಟಿ ಶೋದಲ್ಲಿ 50,000 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

2008: ಬೆಳಗಾವಿ ಮಹಾನಗರ ಪಾಲಿಕೆ ಆಡಳಿತ ಸೂತ್ರ ಕನ್ನಡಿಗರ ಕೈಸೇರಿದ ಬೆನ್ನಿಗೇ ಮತ್ತೊಮ್ಮೆ ಗಡಿ ವಿವಾದವನ್ನು ಎತ್ತಿಕೊಂಡು ತಗಾದೆ ತೆಗೆದ ಮಹಾರಾಷ್ಟ್ರ, ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿತು. ಮಹಾರಾಷ್ಟ್ರ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಮದಾಸ್ ಕದಂ ಅವರು ಗಡಿ ವಿವಾದ ಸಂಬಂಧ ಮಂಡಿಸಿದ ಗೊತ್ತುವಳಿಯನ್ನು ಸರ್ವಾನುಮತದಿಂದ ಅಂಗೀಕರಿಸಿದ ಸದನ, ಈ ಬಿಕ್ಕಟನ್ನು ಬಗೆಹರಿಸಲು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೇ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿತು.

2008: ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿದ್ದ ಇಂಡಿಯನ್ ಎಕ್ಸಪ್ರೆಸ್ ವರದಿಗಾರ್ತಿ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಐಜಿಪಿ ರವಿಕಾಂತ ಶರ್ಮಾ ಹಾಗೂ ಇತರೆ ಮೂವರು ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಮಾನಿಸಿತು. ಸಹಾಯಕ ಸೆಷನ್ಸ್ ನ್ಯಾಯಾಧೀಶ ರಾಜೇಂದ್ರ ಕುಮಾರ್ ಶಾಸ್ತ್ರಿ ಪ್ರಕರಣದ ಅಂತಿಮ ವಿಚಾರಣೆ ನಂತರ ಆರೋಪಿಗಳು ತಪ್ಪೆಸಗಿರುವುದು ರುಜುವಾತಾಗಿದೆ ಎಂಬ ತೀರ್ಮಾನಕ್ಕೆ ಬಂದರು. ಶ್ರೀ ಭಗವಾನ್ ಶರ್ಮಾ, ಪ್ರದೀಪ್ ಶರ್ಮಾ ಮತ್ತು ಸತ್ಯ ಪ್ರಕಾಶ್ ಇವರು ಶಿಕ್ಷೆಗೊಳಗಾಗಿರುವ ಇತರೆ ಆರೋಪಿಗಳು. ಇವರು ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದ ಸಂಚನ್ನು ಕಾರ್ಯರೂಪಕ್ಕೆ ತಂದ ಗುರುತರ ಆರೋಪವನ್ನು ಎದುರಿಸುತ್ತಿದ್ದರು. ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರ್ತಿ ಶಿವಾನಿ ಭಟ್ನಾಗರ್ 1999ರ ಜ. 23ರಂದು ಪೂರ್ವ ದೆಹಲಿಯ ತಮ್ಮ ಅಪಾರ್ಟ್ ಮೆಂಟಿನಲ್ಲಿ ಕೊಲೆಯಾಗಿದ್ದರು. ಆಪಾದಿತ ಐಪಿಎಸ್ ದರ್ಜೆ ಅಧಿಕಾರಿ ಐಜಿಪಿ ರವಿಕಾಂತ ಶರ್ಮಾ ಹಾಗೂ ಶಿವಾನಿ ಇಬ್ಬರೂ ಉತ್ತಮ ಸ್ನೇಹ ಹೊಂದಿದ್ದರು. ಶರ್ಮಾ ಪ್ರಧಾನಿ ಕಾರ್ಯಾಲಯದಲ್ಲಿ ವಿಶೇಷ ಕರ್ತವ್ಯದ ಮೇಲೆ ನಿಯೋಜಿತರಾಗಿದ್ದ ಸಂದರ್ಭದಲ್ಲಿ ಶಿವಾನಿಗೆ ಸರ್ಕಾರದ ಕೆಲ ರಹಸ್ಯ ದಾಖಲೆಗಳನ್ನು ನೀಡಿದ್ದರು. ಶರ್ಮಾ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬ ಭಾವನೆಯಿಂದ ಶಿವಾನಿ ದಾಖಲೆಗಳನ್ನು ಬಹಿರಂಗಪಡಿಸುವ ಬೆದರಿಕೆ ಒಡ್ಡಿದಳು. ಈ ಕಾರಣದಿಂದ ಶರ್ಮಾ, ಶಿವಾನಿ ಕೊಲೆ ಸಂಚು ರೂಪಿಸಿದ್ದರು ಎಂದು ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ತಾವು ಶಿವಾನಿ ಜತೆ ಉತ್ತಮ ಸ್ನೇಹ ಹೊಂದಿದ್ದುದಾಗಿ ವಿಚಾರಣೆ ವೇಳೆ ತಿಳಿಸಿದ್ದ ಶರ್ಮಾ ತಮ್ಮಿಬ್ಬರ ನಡುವೆ ಸಂಬಂಧವಿಲ್ಲ ಎಂದೂ ಹೇಳಿದ್ದರು

2008: ಕರ್ನಾಟಕ ನಾಟಕ ಅಕಾಡೆಮಿಯ 2007ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಮೈಸೂರಿನ ನಾಟಕಕಾರ ಪ್ರೊ. ಕೆ.ಎಸ್.ಭಗವಾನ್ ಅವರನ್ನು ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಗದಗದ ಕುಮಾರೇಶ್ವರ ಕೃಪಾ ಪೋಷಿತ ಪಂಚಾಕ್ಷರಿ ಗವಾಯಿಗಳವರ ನಾಟ್ಯ ಸಂಘವನ್ನು ಕೆ. ಹಿರಣ್ಣಯ್ಯ ಪ್ರಶಸ್ತಿಗೆ ಹಾಗೂ 15 ಕಲಾವಿದರನ್ನು ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಪ್ರಕಟಿಸಿದರು.

2008: `ಪರಿಷ್ಕೃತ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)- 2015'ರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿತು. ಈ ಯೋಜನೆಯ ರದ್ಧತಿ ಕೋರಿ ನಗರದ ಸಿಟಿಜನ್ಸ್ ಆಕ್ಷನ್ ಫೋರಂ, ಸದಾಶಿವನಗರ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ಅನೇಕ ಮಂದಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ನ್ಯಾಯಮೂರ್ತಿ ರವಿ ಮಳೀಮಠ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿತು. ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿ ಎಂ ಆರ್ ಡಿ ಎ) ರೂಪಿಸಿರುವ ನಿಯಮಕ್ಕೆ ವ್ಯತಿರಿಕ್ತವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಮನಸೋ ಇಚ್ಛೆ ಕಳೆದ ಜೂನ್ 25ರಂದು ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಅರ್ಜಿದಾರರು ದೂರಿದರು. 1995ರಲ್ಲಿ ಬೆಂಗಳೂರು ನಗರದಲ್ಲಿ ಹಸಿರು ವಲಯವು ಶೇ 56ರಷ್ಟಿತ್ತು. ಆದರೆ ಈ ಯೋಜನೆಯಿಂದಾಗಿ ಹಸಿರು ವಲಯವು ಶೇ 35ಕ್ಕೆ ಇಳಿದಿದೆ. ಅಷ್ಟೇ ಅಲ್ಲದೇ ಗಗನಚುಂಬಿ ಕಟ್ಟಡಗಳಿಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ನಗರದಲ್ಲಿ ಜನಸಾಂದ್ರತೆ ಹೆಚ್ಚಾಗುವ ಸಂಭವವಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

2008: ಹಿಂದೂ ದೇವತೆಗಳನ್ನು ಅವಮಾನಕರ ಹಾಗೂ ಆಶ್ಲೀಲವಾಗಿ ಚಿತ್ರಿಸಿದ ಆಪಾದನೆಗೆಗೊಳಗಾದ ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ಅವರ ಚಿತ್ರಗಳನ್ನು ಮುಂಬರುವ ಹರಾಜಿನಿಂದ ಹಿಂತೆಗೆದುಕೊಳ್ಳುವಂತೆ ಇಡಲಾಗಿದ್ದ ಬೇಡಿಕೆಯನ್ನು ಅಂತಾರಾಷ್ಟ್ರೀಯ ಚಿತ್ರಕಲಾ ಹರಾಜು ಸಂಸ್ಥೆ ಕ್ರಿಸ್ಟೀ ತಿರಸ್ಕರಿಸಿತು.

2008: ಕ್ಷೇತ್ರ ಮರು ವಿಂಗಡಣೆ ಹಾಗೂ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿಯನ್ನು ಒಳಗೊಂಡ 2008ರ ಮಸೂದೆಗಳನ್ನು ಕೇಂದ್ರ ಕಾನೂನು ಸಚಿವ ಹಂಸಲಾಲ್ ಭಾರಧ್ವಾಜ್ ರಾಜ್ಯಸಭೆಯಲ್ಲಿ ಮಂಡಿಸಿದರು.

2008: ನೂತನ ಪ್ರಸಾರ ಭಾರತಿ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅಂಗೀಕಾರ ನೀಡಿತು. ಈ ಮಸೂದೆ ಸುಗ್ರೀವಾಜ್ಞೆಯಾಗುವ ಮೂಲಕ ಪ್ರಸಿದ್ಧ ಪತ್ರಕರ್ತ ಎಂ.ವಿ. ಕಾಮತ್ ಅಧ್ಯಕ್ಷರಾಗಿರುವ ಪ್ರಸಾರ ಭಾರತಿ ಬದಲಾಗುವುದು. ಮಸೂದೆಯು ಅಧ್ಯಕ್ಷರ ಅಧಿಕಾರಾವಧಿಯನ್ನು ಮೂರು ವರ್ಷಗಳಿಗೆ ಮತ್ತು ವಯಸ್ಸನ್ನು 70 ವರ್ಷಕ್ಕೆ ಸೀಮಿತಗೊಳಿಸಿದ್ದು, ಆನಂತರ ಹಂಗಾಮಿ ಸದಸ್ಯರಾಗಿರುತ್ತಾರೆ. ಜೊತೆಗೆ ಕಾರ್ಯಕಾರಿ ಸದಸ್ಯರು ಐದು ವರ್ಷ ಕಾಲ ಪೂರ್ಣಾವಧಿಯ ಸದಸ್ಯರಾಗಿರಲು ಈ ಮಸೂದೆ ಅವಕಾಶ ನೀಡುವುದು.

2008: ಪಾಕಿಸ್ಥಾನ ಜೈಲಿನಲ್ಲಿದ್ದು ಏಪ್ರಿಲ್ 1ರಂದು ಗಲ್ಲು ಶಿಕ್ಷೆ ನಿಗದಿಯಾದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಗೆ ಮಾನವೀಯತೆಯ ಆಧಾರದಲ್ಲಿ `ಕ್ಷಮಾದಾನ' ನೀಡುವಂತೆ ಪಾಕ್ ಸರ್ಕಾರಕ್ಕೆ ಭಾರತ ಮನವಿ ಮಾಡಿತು. ಈ ಸಂಬಂಧ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಗೊಂಡು ಸರಬ್ಜಿತ್ ಪ್ರಾಣ ಉಳಿಸಲು ಸರ್ಕಾರ ತತ್ ಕ್ಷಣ ಮುಂದಾಗುವಂತೆ ಸದಸ್ಯರು ಆಗ್ರಹಿಸಿದಾಗ, ಸ್ವಯಂಪ್ರೇರಿತರಾಗಿ ಉತ್ತರ ನೀಡಿದ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ, ಈವರೆಗೆ ಪಾಕಿಸ್ಥಾನದಿಂದ ಗಲ್ಲುಶಿಕ್ಷೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸರ್ಕಾರಕ್ಕೆ ಬಾರದಿದ್ದರೂ ಮಾಧ್ಯಮ ವರದಿಗಳನ್ನು ಅನುಸರಿಸಿ ಕ್ಷಮಾದಾನದ ಕೋರಿಕೆ ಸಲ್ಲಿಸಿರುವುದಾಗಿ ಹೇಳಿದರು.

2008: ಈಜಿಪ್ಟಿನಲ್ಲಿ ನಡೆದ ಕೈರೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧಾತ್ಮಕ ವಿಭಾಗಕ್ಕೆ ಭಾರತದಿಂದ ಆಯ್ಕೆಯಾಗಿದ್ದ `ಕೇರ್ ಆಫ್ ಫುಟ್ ಪಾತ್' ಮಕ್ಕಳ ಚಿತ್ರ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ ಎಂದು ನಿರ್ದೇಶಕ ಮಾಸ್ಟರ್ ಕಿಶನ್ ಬೆಂಗಳೂರಿನಲ್ಲಿ ಪ್ರಕಟಿಸಿದರು. ಸಣ್ಣ ಕಥಾ ವಸ್ತು ಉಳ್ಳ ಮಕ್ಕಳ ಚಿತ್ರ ವಿಭಾಗದಲ್ಲಿ ಎರಡು ಅಂತಾರಾಷ್ಟ್ರೀಯ ವಿಶೇಷ ಪ್ರಶಸ್ತಿ ಹಾಗೂ ಈಜಿಪ್ಟ್ ಪತ್ರಕರ್ತರು ನೀಡಿದ `ಅಲೆಕ್ಸಾಂಡ್ರಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ' ಈ ಚಿತ್ರಕ್ಕೆ ಲಭಿಸಿದೆ.

2008: ಹವ್ಯಾಸಿ ರಂಗಭೂಮಿ ನಿರ್ದೇಶಕಿ ಗುಲ್ಬರ್ಗದ ಸುಜಾತಾ ಜಂಗಮ ಶೆಟ್ಟಿ, ಹವ್ಯಾಸಿ ರಂಗಭೂಮಿ (ನೇಪಥ್ಯ) ಬೆಂಗಳೂರು ಜಿಲ್ಲೆಯ ಕೆ.ಎಚ್.ಕುಮಾರ್, ಹವ್ಯಾಸಿ ರಂಗ ಭೂಮಿ (ನೇಪಥ್ಯ) ಹಾಸನದ ಉಮೇಶ್ ತೆಂಕನಹಳ್ಳಿ ಹಾಗೂ ಹವ್ಯಾಸಿ ರಂಗಭೂಮಿ ನಿರ್ದೇಶಕ ಹಾವೇರಿಯ ಶ್ರೀಪಾದ್ ಭಟ್ ಅವರನ್ನು ಸಿಜಿಕೆ ಯುವರಂಗ ಪುರಸ್ಕಾರಕ್ಕೆ ಆಯ್ಕೆ ಮಾಡಲಾಯಿತು.

2007: ಜಾಗತಿಕ ಕ್ರಿಕೆಟಿನ ಅತ್ಯಂತ ಪ್ರಭಾವಿ ಕೋಚ್ಗಳಲ್ಲಿ ಒಬ್ಬರೆಂದು ಖ್ಯಾತರಾಗಿದ್ದ ಪಾಕಿಸ್ಥಾನ ಕ್ರಿಕೆಟ್ ತಂಡದ ತರಬೇತುದಾರ ರಾಬರ್ಟ್ ಬಾಬ್ ಆಂಡ್ರ್ಯೂ ವೂಲ್ಮರ್ (58) (15-5-1948ರಿಂದ 18-3-2007) ಜಮೈಕಾದಲ್ಲಿ ನಿಗೂಢ ರೀತಿಯಲ್ಲಿ ಮೃತರಾದರು. ದುರ್ಬಲ ಐರ್ಲೆಂಡ್ ವಿರುದ್ಧ ಸೋಲುಂಡು ಪಾಕಿಸ್ಥಾನ ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿದ್ದುದರಿಂದ ಆಘಾತಕ್ಕೆ ಒಳಗಾದ ವೂಲ್ಮರ್ ಈದಿನ ಬೆಳಗ್ಗೆ ತಮ್ಮ ಕೊಠಡಿಯ ನೆಲದಲ್ಲಿ ಪ್ರಜ್ಞಾಶೂನ್ಯರಾಗಿ ಬಿದ್ದಿದ್ದರು. ಆಸ್ಪತ್ರೆಗೆ ಸೇರಿಸಿದರೂ ಮಧ್ಯಾಹ್ನದ ವೇಳೆಗೆ ಅವರು ಮೃತರಾದರು. ಭಾರತದ ಕಾನ್ಪುರದಲ್ಲಿ ಜನಿಸಿದ ವೂಲ್ಮರ್ 19 ಟೆಸ್ಟ್ಗಳಲ್ಲಿ ಆಡಿ, 1059 ರನ್ ಗಳಿಸಿದ್ದರು. ಮೂರು ಶತಕಗಳ ಸಾಧನೆ ಮಾಡಿದ್ದ ಅವರ ಸರಾಸರಿ ರನ್ನುಗಳು 33.09. ವಾರ್ವಿಕ್ ಷೈರ್ (1991), ದಕ್ಷಿಣ ಆಫ್ರಿಕಕ್ಕೆ (1994-1999) ಕೋಚಿಂಗ್ ನೀಡಿದ್ದ ಅವರು 2004ರಲ್ಲಿ ಪಾಕ್ ತಂಡಕ್ಕೆ ಕೋಚಿಂಗ್ ನೀಡಲು ಆಯ್ಕೆಯಾಗಿದ್ದರು.

2007: ಸಂಗೀತ ಸಾಮ್ರಾಜ್ಞಿ ಡಾ. ಗಂಗೂಬಾಯಿ ಹಾನಗಲ್ ಅವರಿಗೆ ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಯನ್ನು ಹೊನ್ನಾವರ ತಾಲ್ಲೂಕಿನ ಗುಣವಂತೆಯಲ್ಲಿ ಪ್ರದಾನ ಮಾಡಲಾಯಿತು.

2007: ಮುಂಬೈಯ ಅಕಾಡೆಮಿ ಆಫ್ ಮ್ಯೂಸಿಕ್ ಇಮೇಜಸ್ ಸಂಘಟಿಸಿದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ `ನಾಯಿ ನೆರಳು' ಚಿತ್ರವು ಶ್ರೇಷ್ಠ ಚಿತ್ರ ಮತ್ತು ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. `ನಾಯಿ ನೆರಳು' ಚಿತ್ರಕ್ಕೆ ಇದು ನಾಲ್ಕನೇ ಅಂತಾರಾಷ್ಟ್ರೀಯ ಪ್ರಶಸ್ತಿ. ಈ ಹಿಂದೆಯೇ ಕರಾಚಿ, ಓಷಿಯಾನ್ ಚಿತ್ರೋತ್ಸವಗಳಲ್ಲೂ ಪ್ರಶಸ್ತಿ ಗಳಿಸಿದ ಅದು 2006ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳಲ್ಲಿ ಎರಡು ಪುರಸ್ಕಾರಗಳಿಗೆ ಪಾತ್ರವಾಗಿತ್ತು. ಡಾ. ಎಸ್. ಎಲ್. ಭೈರಪ್ಪ ಅವರ ಕಾದಂಬರಿ ಆಧರಿಸಿದ ಈ ಚಿತ್ರವನ್ನು ಬಸಂತಕುಮಾರ್ ಪಾಟೀಲ್ ನಿರ್ಮಿಸಿದ್ದಾರೆ.

2007: ಎನ್ ಸಿ ಪಿ ಖಜಾಂಚಿ ರಾಮಾವತಾರ್ ಜೋಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಛತ್ತೀಸ್ ಗಢ ರಾಜ್ಯದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರನ್ನು ಪೊಲೀಸರು ಬಂಧಿಸಿದರು. 2003ರ ಜೂನ್ ತಿಂಗಳಲ್ಲಿ ರಾಮಾವತಾರ್ ಜೋಗಿ ಅವರನ್ನು ಛತ್ತೀಸ್ ಗಢದ ರಾಜಾನಂದಗಾಂವಿನಲ್ಲಿ ಮರುಚುನಾವಣೆ ಪ್ರಚಾರ ಸಂದರ್ಭದಲ್ಲಿ ಗುಂಡಿಟ್ಟು ಕೊಲೆಗೈಯಲಾಗಿತ್ತು.

2007: ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ (ತರಳಬಾಳು ಸ್ವಾಮೀಜಿ) ಅವರ ಪೂರ್ವಾಶ್ರಮದ ತಾಯಿ ಗಂಗಮ್ಮ (82) ಅನಾರೋಗ್ಯದಿಂದ ಶಿವಮೊಗ್ಗದಲ್ಲಿ ನಿಧನರಾದರು.

2006: ಅಂತಾರಾಷ್ಟ್ರೀಯ ಲೇಸರ್ ಪ್ರದರ್ಶನ ಸಂಸ್ಥೆಯು ಕಲಾವಿದರ ಅಮೋಫ ಸಾಧನೆಗೆ ನೀಡುವ ಅಂತಾರಾಷ್ಟ್ರೀಯ ಪ್ರಶಸ್ತಿಯು ಖ್ಯಾತ ಜಾದೂಗಾರ ಪಿ.ಸಿ. ಸರ್ಕಾರ್ ಅವರ ಪುತ್ರ ಮಾಣಿಕ್ ಸರ್ಕಾರ್ ಅವರಿಗೆ ವಾಷಿಂಗ್ಟನ್ನಿನಲ್ಲಿ ನಡೆದ ಲೇಸರ್ ಪ್ರದರ್ಶನದಲ್ಲಿ ಬುದ್ಧನ ಚರಿತ್ರೆ ಕುರಿತು ಅದ್ಭುತ ಲೇಸರ್ ಪ್ರದರ್ಶನ ನೀಡಿದ್ದಕ್ಕಾಗಿ ಲಭಿಸಿತು. ಮಾಣಿಕ್ ಸರ್ಕಾರ್ ಅವರ ಕಂಪೆನಿ ಲೇಸರ್ ಲೈಟ್ ಮ್ಯಾಜಿಕ್ಕಿಗೆ ಈ ಪ್ರಶಸ್ತಿ ಲಭಿಸಿತು. ಕಲಾವಿದರು ಹಾಗೂ ತಾಂತ್ರಿಕ ಕೌಶಲ್ಯಕ್ಕಾಗಿ ನೀಡಲಾಗುವ ಈ ಪ್ರಶಸ್ತಿ ಹಾಲಿವುಡ್ಡಿನ ಆಸ್ಕರ್ ಪ್ರಶಸ್ತಿಗೆ ಸಮಾನವಾದುದು.

2006: ದೆಹಲಿಯ ರೂಪಸಿ ನೇಹಾ ಕಪೂರ್ ಪಾಂಡ್ಸ್ ಫೆಮಿನಾ ಭಾರತ ಸುಂದರಿಯಾಗಿ ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಆಯ್ಕೆಯಾದರು.

2006: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು 2007ರ ವಿಶ್ವಕಪ್ ವರೆಗೆ ರಾಹುಲ್ ದ್ರಾವಿಡ್ ಅವರನ್ನು ಭಾರತ ತಂಡದ ನಾಯಕರನ್ನಾಗಿ ನೇಮಿಸಿತು. ಚಿತ್ರದುರ್ಗದ ಸುಧೀರ್ ಕುಮಾರ ಈ ದಿನ ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ವೇಟ್ ಲಿಫ್ಟಿಂಗಿನಲ್ಲಿ ಕಂಚಿನ ಪದಕ ಗೆದ್ದರೆ, ಶೂಟಿಂಗಿನಲ್ಲಿ ಸಮರೇಶ್ ಜಂಗ್ ಮತ್ತು ವೇಟ್ ಲಿಫ್ಟಿಂಗ್ ಮಹಿಳೆಯರ 58 ಕೆ.ಜಿ. ವಿಭಾಗದಲ್ಲಿ ರೇಣು ಬಾಲಾ ಚಾನು ಸ್ವರ್ಣಪದಕಗಳನ್ನು ಬಗಲಿಗೆ ಹಾಕಿಕೊಂಡರು.

1965: ಮೊತ್ತ ಮೊದಲ ಬಾಹ್ಯಾಕಾಶ ನಡಿಗೆ ನಡೆಯಿತು. ಸೋವಿಯತ್ ಗಗನಯಾನಿ ಅಲೆಸ್ಕಿ ಲಿಯೊನೊವ್ ಕ್ರೀಮಿಯಾದಿಂದ 177 ಕಿ.ಮೀ. ಎತ್ತರದಲ್ಲಿ ಭೂಪ್ರದಕ್ಷಿಣೆ ಕಾಲದಲ್ಲಿ ತಾವಿದ್ದ ಬಾಹ್ಯಾಕಾಶ ನೌಕೆಯ ವೊಸ್ಖೋಡ್ 2 ಕೋಶದಿಂದ ಹೊರಕ್ಕೆ ಬಂದು ಬಾಹ್ಯಾಕಾಶ ನೌಕೆಯ ಹೊರಭಾಗದಲ್ಲಿ 10 ನಿಮಿಷಗಳ ಕಾಲ ನಡೆದಾಡಿದರು. (1967ರಲ್ಲಿ ಲಿಯೋನಿದ್ ಬ್ರೆಜ್ನೇವ್ ಎಂದು ತಪ್ಪಾಗಿ ಭಾವಿಸಿದ ಹಂತಕರು ಗುಂಡು ಹೊಡೆದು ಇವರನ್ನು ಕೊಲ್ಲಲು ಯತ್ನಿಸಿದರು. ಇವರ ಕಾರಿನತ್ತ ಹಂತಕ ಮೂರು ಸುತ್ತು ಗುಂಡು ಹಾರಿಸಿದ.).

1944: ನೇತಾಜಿ ಸುಭಾಶ್ ಚಂದ್ರ ಬೋಸ್ ನೇತೃತ್ವದಲ್ಲಿ ಅಜಾದ್ ಹಿಂದ್ ಫೌಜ್ (ಭಾರತ ರಾಷ್ಟ್ರೀಯ ಸೇನೆ) ಭಾರತದ ವಿಮೋಚನೆಗಾಗಿ ಬರ್ಮಾ (ಈಗಿನ ಮ್ಯಾನ್ಮಾರ್) ಗಡಿ ದಾಟಿ ಭಾರತದತ್ತ ಚಲಿಸಿತು.

1938: ಚಿತ್ರನಟ ಶಶಿಕಪೂರ್ ಹುಟ್ಟಿದರು.

1936: ವಿಲ್ಲೆಮ್ ಡಿ ಕ್ಲರ್ಕ್ ಹುಟ್ಟಿದ ದಿನ. ರಾಜಕಾರಣಿ ಹಾಗೂ 1989-94ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದ ಇವರು ತಮ್ಮ ರಾಷ್ಟ್ರದಲ್ಲಿ ವರ್ಣಭೇದ ನೀತಿಯನ್ನು ಕೊನೆಗೊಳಿಸಿ ಬಹುಸಂಖ್ಯಾತರಿಗೆ ಸಂಧಾನದ ಮೂಲಕ ಆಡಳಿತ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಿದರು. ಈ ಸಾಧನೆಗಾಗಿ ಅವರಿಗೆ 1993ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತು. 1994ರಲ್ಲಿ ಕರಿಯರ ನಾಯಕ ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದರು.

1928: ಫಿಡೆಲ್ ರಾಮೋಸ್ ಹುಟ್ಟಿದ ದಿನ. ಫಿಲಿಪ್ಪೀನ್ಸಿನ ಸೇನಾ ನಾಯಕ ಹಾಗೂ ರಾಜಕಾರಣಿಯಾಗಿದ್ದ ಇವರು ಮುಂದೆ ಫಿಲಿಪ್ಪೀನ್ಸಿನ ಅಧ್ಯಕ್ಷರಾಗಿದ್ದರು.

1894: ರಫಿ ಅಹಮದ್ ಕಿದ್ವಾಯಿ (1894-1954) ಹುಟ್ಟಿದರು. ಇವರು ಸ್ವಾತಂತ್ರ್ಯ ಹೋರಾಟ ಕಾಲದ ರಾಷ್ಟ್ರೀಯವಾದಿ ನಾಯಕರಾಗಿದ್ದರು.

1837: ಸ್ಟೀಫನ್ ಗ್ರೋವರ್ ಕ್ಲೀವ್ ಲ್ಯಾಂಡ್ (1837-1908) ಹುಟ್ಟಿದ ದಿನ. ಅಮೆರಿಕದ ವಕೀಲನಾದ ಈತ ಅಮೆರಿಕಾದ 22 ಮತ್ತು 24ನೇ ಅಧ್ಯಕ್ಷನಾದ.

Wednesday, March 17, 2010

ಇಂದಿನ ಇತಿಹಾಸ History Today ಮಾರ್ಚ್ 17

ಇಂದಿನ ಇತಿಹಾಸ

ಮಾರ್ಚ್ 17

ಕೋಮುದ್ವೇಷಕ್ಕೆ ಪ್ರಚೋದನೆ ನೀಡುವ ಉದ್ರೇಕಕಾರಿ ಭಾಷಣ ಮಾಡಿದ್ದಕ್ಕಾಗಿ ಪಿಲಿಭಿಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಯಿತು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಐಪಿಸಿ ಹಾಗೂ ಜನಪ್ರತಿನಿಧಿಗಳ ಕಾಯ್ದೆ (ಆರ್‌ಪಿಎ) ಅಡಿ ಬರ್ಕೆರಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ, ವರುಣ್ ವಿರುದ್ಧ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡರು.

2009: ಇನ್ನು ಮುಂದೆ ತಂಬಾಕು (ಸಿಗರೇಟ್) ಕಂಪೆನಿಗಳು ಪ್ರಶಸ್ತಿ ಪ್ರದಾನ ಸಮಾರಂಭ, ಕ್ರೀಡಾಕೂಟಗಳನ್ನು ಪ್ರಾಯೋಜಿಸುವಂತಿಲ್ಲ. ತಂಬಾಕು ಕಂಪೆನಿಗಳು ಪ್ರಚಾರ ಗಿಟ್ಟಿಸುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕಂಪೆನಿಗಳು ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿತು. ಶೌರ್ಯ ಪ್ರಶಸ್ತಿ ಪ್ರದಾನದಂತಹ ಕಾರ್ಯಕ್ರಮಗಳನ್ನು ಬಳಸಿಕೊಂಡು ತಂಬಾಕು ಕಂಪೆನಿಗಳು ತಮ್ಮ ಉತ್ಪನ್ನಗಳಿಗೆ ಪ್ರಚಾರ ಪಡೆಯುತ್ತವೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿತು. ಫೆಬ್ರುವರಿ 27ರಂದೇ ನಿರ್ಬಂಧ ವಿಧಿಸಿ ಸಚಿವಾಲಯ ಅಧಿಸೂಚನೆಯನ್ನು ಹೊರಡಿಸಿತ್ತು.

2009: ಕೋಮುದ್ವೇಷಕ್ಕೆ ಪ್ರಚೋದನೆ ನೀಡುವ ಉದ್ರೇಕಕಾರಿ ಭಾಷಣ ಮಾಡಿದ್ದಕ್ಕಾಗಿ ಪಿಲಿಭಿಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಯಿತು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಐಪಿಸಿ ಹಾಗೂ ಜನಪ್ರತಿನಿಧಿಗಳ ಕಾಯ್ದೆ (ಆರ್‌ಪಿಎ) ಅಡಿ ಬರ್ಕೆರಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ, ವರುಣ್ ವಿರುದ್ಧ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡರು.

2009: ನಾಸಾದ ಸ್ಪಿಜರ್ ಖಗೋಳ ದೂರದರ್ಶಕ ರವಾನಿಸಿದ ಗ್ಯಾಲೆಕ್ಸಿ (ನಕ್ಷತ್ರಪುಂಜ) 'ಎನ್‌ಜಿಸಿ 6240'ಗಳ ಅಪೂರ್ವ ಸಮ್ಮಿಲನ ದೃಶ್ಯವನ್ನು ಎಪಿ ಪ್ರಕಟಿಸಿತು.

2009: ಎಲ್. ಕೆ. ಅಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ, ಲೋಕಸಭಾ ಚುನಾವಣೆಯಲ್ಲಿ ಯುಪಿಎಗೆ ತೀವ್ರ ಪೈಪೋಟಿ ನೀಡಲು ಹೊರಟ ಬಿಜೆಪಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿತು. ಅರುಣ್ ಜೇಟ್ಲಿ -ರಾಜನಾಥ್ ಸಿಂಗ್ ವಿರಸ ಹಾಗೂ ವರುಣ್ ಗಾಂಧಿ ಅವರ ಮುಸ್ಲಿಮ್ ವಿರೋಧಿ ಪ್ರಚೋದನಾತ್ಮಕ ಭಾಷಣಗಳು ಪಕ್ಷವನ್ನು ತೀವ್ರ ಇಕ್ಕಟ್ಟಿನಲ್ಲಿ ಸಿಲುಕಿಸಿದವು. ಕೇಂದ್ರೀಯ ಚುನಾವಣಾ ಸಮಿತಿಯ (ಸಿಇಸಿ) ಸಭೆಗೆ ಸತತ ಎರಡನೇ ಬಾರಿಗೆ ಗೈರು ಹಾಜರಾದ ಜೇಟ್ಲಿ ಪಕ್ಷದ ಹಿರಿಯ ನಾಯಕರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದರು.

2009: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಹಾಗೂ ಕೊಲೆ ಮಾಡಿದ ಆರೋಪಿಗಳೂ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿತರಾಗಿದ್ದ ಒಟ್ಟು 46 ಆರೋಪಿಗಳಿಗೆ 22 ನಿಮಿಷಗಳಲ್ಲಿ ಜಾಮೀನು ನೀಡಿ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ದಾಖಲೆ ಸೃಷ್ಟಿಸಿದರು. ಜಾಮೀನು ಪ್ರಕರಣಗಳನ್ನು ಶೀಘ್ರದಲ್ಲಿ ವಿಲೇ ಮಾಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಆರು ಮಂದಿ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು. ಅದರಲ್ಲಿ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಅವರದ್ದೇ ಈ ದಾಖಲೆ.

2009: ಮೇಘಾಲಯ ವಿಧಾನಸಭೆಯಲ್ಲಿ ಸ್ಪೀಕರ್ ಬಿ.ಎಂ. ಲಾನೊಂಗ್ ಸರ್ಕಾರದ ಪರವಾಗಿ ಮತ ಚಲಾಯಿಸಿದರು. ಪರಿಣಾಮವಾಗಿ ಮುಖ್ಯಮಂತ್ರಿ ಡೊಂಕುಪರ್ ರಾಯ್ ವಿಶ್ವಾಸಮತ ಗೆದ್ದರು. ಇದರಿಂದಾಗಿ ಮೇಘಾಲಯದಲ್ಲಿ ಉದ್ಭವಿಸಿದ್ದ ರಾಜಕೀಯ ಬಿಕ್ಕಟ್ಟು ತಾತ್ಕಾಲಿಕವಾಗಿ ಕೊನೆಗೊಂಡಿತು.

2008: ಕರಡಿ ಕೈ ಹಿಡಿತಕ್ಕೆ ಸಿಲುಕಿದ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು, ಮತ್ತೆ 951 ಅಂಶಗಳ ಭಾರಿ ಕುಸಿತವನ್ನು ಕಂಡಿತು. ಜಾಗತಿಕ ಅರ್ಥ ವ್ಯವಸ್ಥೆಗೆ ಸ್ಪಂದಿಸಿದ ದೇಶದ ಷೇರು ಸೂಚ್ಯಂಕವು, ಹೂಡಿಕೆದಾರರಲ್ಲಿ ಭೀತಿ ಮೂಡಿಸಿತು. 15060 ಅಂಶಗಳಿಂದ ಆರಂಭವಾದ ವಹಿವಾಟು, ಶೇ 6.03 ರಷ್ಟು ಅಂದರೆ 951 ಅಂಶಗಳನ್ನು ಕಳೆದುಕೊಂಡು ದಿನದ ಅಂತ್ಯದ ವಹಿವಾಟನ್ನು 14809 ಅಂಶಗಳಿಗೆ ಕೊನೆಗೊಳಿಸಿತು.

2008: ಪಾಕಿಸ್ಥಾನ ರಾಷ್ಟ್ರೀಯ ಅಸೆಂಬ್ಲಿಯ (ಸಂಸತ್) ಕೆಳಮನೆಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಒಟ್ಟು 342 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 328 ಸದಸ್ಯರಿಗೆ ನಿರ್ಗಮನ ಸ್ಪೀಕರ್ ಚೌಧುರಿ ಅಮೀರ್ ಹುಸೇನ್ ಪ್ರಮಾಣ ವಚನ ಬೋಧಿಸಿದರು. ಆನಂತರ ಮೃತ ನಾಯಕಿ ಬೆನಜೀರ್ ಭುಟ್ಟೋ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

2008: ವಿಜಯವಾಡ ಜಿಲ್ಲೆಯ ಮುರಗಲ್ಲು ಗ್ರಾಮದಲ್ಲಿ ಹತ್ತು ಅಡಿ ಉದ್ದದ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಗೋಪಿ ಎಂಬ ಬಾಲಕನನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕೈಗೊಂಡ ಕ್ರಮದಿಂದಾಗಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಬಾವಿಯೊಳಗಿದ್ದ ಬಾಲಕನನ್ನು ಯಾವುದೇ ಅಪಾಯವಿಲ್ಲದೇ ಮೇಲಕ್ಕೆತ್ತಲು ಸಾಧ್ಯವಾಯಿತು.

2008: ಹದಿನೆಂಟು ವರ್ಷಗಳ ಹಿಂದೆ ಪಾಕಿಸ್ಥಾನದಲ್ಲಿ ನಾಲ್ಕು ಬಾಂಬ್ ಸ್ಫೋಟಗಳ ಪ್ರಕರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ ಭಾರತದ ಸರಬ್ಜಿತ್ ಸಿಂಗ್ ಗೆ ಕ್ಷಮಾದಾನ ನೀಡಬೇಕೆಂದು ಪಾಕಿಸ್ಥಾನ ಸರ್ಕಾರಕ್ಕೆ ಭಾರತ ಮನವಿ ಮಾಡಿತು. ಸರಬ್ಜಿತ್ ಸಿಂಗ್ ನನ್ನು ಭೇಟಿ ಮಾಡಲು ಭಾರತದ ರಾಯಭಾರಿ ಕಚೇರಿಯ ಸಿಬ್ಬಂದಿಗೆ ಅವಕಾಶ ನೀಡಬೇಕೆಂದೂ ಭಾರತ ಸರ್ಕಾರ ಕೋರಿತು. 17 ವರ್ಷಗಳಿಂದ ಲಾಹೋರಿನ ಕೋಟ್ಲಖ್ ಪತ್ ಜೈಲಿನಲ್ಲಿರುವ ಸರಬ್ಜಿತ್ ಸಿಂಗ್ ನನ್ನು ಏಪ್ರಿಲ್ 1ರಂದು ಲಾಹೋರ್ ಜೈಲಿನಲ್ಲಿ ಮರಣದಂಡನೆಗೆ ಗುರಿಪಡಿಸಲು ಆದೇಶ ನೀಡಲಾಗಿತ್ತು.

2008: 1996ರ ಅಪಘಾತ ಪ್ರಕರಣವೊಂದರಲ್ಲಿ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಚಿತ್ರನಟಿ ಮಾಲಾಶ್ರಿ ಅವರು ಪರಿಹಾರ ಕೋರಿ 2002ನೇ ಸಾಲಿನಲ್ಲಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿತು.
ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯು (ಎಂಎಸಿಟಿ) ನೀಡಿರುವ ಕಡಿಮೆ ಪರಿಹಾರದ ಮೊತ್ತವನ್ನು ಪ್ರಶ್ನಿಸಿ ಮಾಲಾಶ್ರಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. 1996ರ ಜುಲೈ 29ರಂದು ಮಾಲಾಶ್ರಿಯವರು ನಟ ಸುನಿಲ್ ಹಾಗೂ ಇತರರ ಜೊತೆ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಿನಲ್ಲಿ ಆಗಮಿಸುತ್ತಿದ್ದಾಗ, ಚಿತ್ರದುರ್ಗದ ಬಳಿ ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸುನಿಲ್ ಅವರು ಸಾವನ್ನಪ್ಪಿ, ಮಾಲಾಶ್ರಿ ತೀವ್ರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಎಂಎಸಿಟಿಗೆ ನ್ಯಾಷನಲ್ ಇನ್ಶ್ಯೂರೆನ್ಸ್ ಕಂಪೆನಿ ವಿರುದ್ಧ ಅರ್ಜಿ ಸಲ್ಲಿಸಿ, 5 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೋರಿದ್ದರು. 2002ರ ಮಾರ್ಚ್ 6ರಂದು ಎಂಎಸಿಟಿಯು 59,670 ರೂಪಾಯಿ ಪರಿಹಾರಕ್ಕೆ ಆದೇಶ ನೀಡಿತು. ಈ ಆದೇಶವನ್ನು ಅವರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.

2008: ಮುಂಬೈ ಚಿನಿವಾರ ಪೇಟೆಯಲ್ಲಿ ಪ್ರತಿ ಕಿಲೋ ಬೆಳ್ಳಿ ರೂ 25650ಕ್ಕೆ ಹಾಗೂ ಸ್ಟ್ಯಾಂಡರ್ಡ್ ಚಿನ್ನ ಪ್ರತಿ 10 ಗ್ರಾಮಿಗೆ ರೂ 13495ಕ್ಕೆ ಜಿಗಿದು ಸಾರ್ವಕಾಲಿಕ ದಾಖಲೆ ನಿರ್ಮಿಸಿತು.

2007: ಮಿತ್ರ ಪಕ್ಷಗಳ ಒತ್ತಡಕ್ಕೆ ಮಣಿದು ಪಶ್ಚಿಮ ಬಂಗಾಳದ ಎಡರಂಗ ಸರ್ಕಾರವು ನಂದಿಗ್ರಾಮದಲ್ಲಿ ಭೂಸ್ವಾಧೀನವನ್ನು ತತ್ ಕ್ಷಣ ಸ್ಥಗಿತಗೊಳಿಸಿ, ಪೊಲೀಸ್ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿತು.

2007: ನಾಗಾರ್ಜುನ ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಯಶಸ್ವಿ ಹೆದ್ದಾರಿ ಬಂದ್ ನಡೆಯಿತು. ಪಡುಬಿದ್ರಿ, ನಂದಿಕೂರು, ಎರ್ಮಾಳು, ಎಲ್ಲೂರು ಪ್ರದೇಶ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇದ್ದರೂ ಪುರುಷರು, ಮಹಿಳೆಯರಾದಿಯಾಗಿ ನೂರಾರು ಮಂದಿ ರಸ್ತೆ ತಡೆಯಲ್ಲಿ ಪಾಲ್ಗೊಂಡರು.

2007: ಶ್ರವಣ ಬೆಳಗೊಳದ ಗೊಮ್ಮಟನ ದರ್ಶನದಿಂದ ಪುಳಕಿತರಾಗಿ ಭಾವ ಪರಾಕಾಷ್ಠೆ ತಲುಪಿದ ಜಿನಮುನಿ ಆಚಾರ್ಯ ಕೇಶವ ನಂದಿ ಮಹಾರಾಜ್ (85) ವೈರಾಗ್ಯಮೂರ್ತಿಯ ಸಮ್ಮುಖದಲ್ಲಿಯೇ ಇಹಯಾತ್ರೆ ಮುಗಿಸಿದರು. ಮುನಿದೀಕ್ಷೆ ಪಡೆದು ಕಳೆದ ಇಪ್ಪತ್ತೈದು ವರ್ಷಗಳಿಂದ ಕಠಿಣ ವ್ರತಾಧಾರಣೆ ಕೈಗೊಂಡಿದ್ದ ಆಚಾರ್ಯ ಕೇಶವ ನಂದಿ ಮಹಾರಾಜರು ಹುಬ್ಬಳ್ಳಿಯ ವರೂರಿನಲ್ಲಿ ನವಗ್ರಹ ಪೀಠ ಆರಾಧನಾ ಉತ್ಸವ ಮುಗಿಸಿ ಶ್ರೀಕ್ಷೇತ್ರ ಶ್ರವಣ ಬೆಳಗೊಳಕ್ಕೆ ಆಗಮಿಸಿದ್ದರು.

2007: ಸೆಲೆಬ್ರಿಟಿ ಬಿಗ್ ಬ್ರದರ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ವಿರುದ್ಧ ನಡೆದ ವರ್ಣನಿಂದನೆಯನ್ನು ಬ್ರಿಟನ್ ಸಂಸತ್ ಒಕ್ಕೊರಲಿನಿಂದ ಖಂಡಿಸಿತು.

2007: ಹಿರಿಯ ವಿಜ್ಞಾನಿ ಆರ್. ಎ. ಮಶೇಲ್ಕರ್ ಅವರು ತಮ್ಮ ಪ್ರಾಮಾಣಿಕತೆ, ದಕ್ಷತೆ ಬಗ್ಗೆ ಅನುಮಾನ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಪೇಟೆಂಟ್ ತಜ್ಞರ ಸಮಿತಿಗೆ ರಾಜೀನಾಮೆ ಸಲ್ಲಿಸಿದರು.

2007: ಅಮಾನತುಗೊಂಡ ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧುರಿ ಅವರ ಸ್ಥಾನಕ್ಕೆ ರಾಣಾ ಭಗವಾನ್ ದಾಸ್ ಅವರನ್ನು ಹಂಗಾಮಿಯಾಗಿ ನೇಮಿಸುವುದಾಗಿ ಪಾಕಿಸ್ಥಾನ ಸರ್ಕಾರ ಪ್ರಕಟಿಸಿತು. ರಾಣಾ ಭಗವಾನ್ ದಾಸ್ ಅವರು ಪಾಕ್ ಸುಪ್ರೀಂಕೋರ್ಟಿನ ಏಕೈಕ ಹಿಂದೂ ನ್ಯಾಯಾಧೀಶ.

2006: ಕರ್ನಾಟಕದ ಬಿಜೆಪಿಯ ನೂತನ ಅಧ್ಯಕ್ಷರಾಗಿ ಮಂಗಳೂರು ಲೋಕಸಭಾ ಸದಸ್ಯ ಡಿ.ವಿ. ಸದಾನಂದಗೌಡ ನೇಮಕಗೊಂಡರು. ಹೊಸ ಅಧ್ಯಕ್ಷರ ನೇಮಕವನ್ನು ಪಕ್ಷದ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ನವದೆಹಲಿಯ ಪಕ್ಷ ಕಚೇರಿಯಲ್ಲಿ ಪ್ರಕಟಿಸಿದರು.

2006: ಲಾಭದಾಯಕ ಹುದ್ದೆ ಹೊಂದಿರುವ ನೆಲೆಯಲ್ಲಿ ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್ ಅವರನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಜ್ಯಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದರು. ಈ ಪ್ರಕಟಣೆಗೆ ಕಲಾಂ ಅವರು ಒಂದು ದಿನ ಮೊದಲೇ (ಮಾರ್ಚ್ 16) ಸಹಿ ಹಾಕಿದ್ದಾರೆ ಎಂದು ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ಮೂಲಗಳು ತಿಳಿಸಿದವು. ಉತ್ತರ ಪ್ರದೇಶ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡ 2004ರ ಜುಲೈ 14ರ ದಿನದಿಂದಲೇ ಜಾರಿಗೊಳಿಸುವಂತೆ ಚುನಾವಣಾ ಆಯೋಗವು ಸಂವಿಧಾನದ 102ನೇ ವಿಧಿಯನ್ವಯ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿತ್ತು. ಜಯಾ ಬಚ್ಚನ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭೆಗೆ 2004ರಲ್ಲಿ ಆಯ್ಕೆಯಾಗಿದ್ದರು. ಈ ಪ್ರಕರಣ ದೇಶದಾದ್ಯಂತ ಭಾರಿ ಕೋಲಾಹಲ ಸೃಷ್ಟಿಸಿತು.

2006: ದೀಪಾ ಮೆಹ್ತಾ ಅವರ `ವಾಟರ್' ಚಿತ್ರದಲ್ಲಿ ಮಾಡಿದ ನಟನೆಗಾಗಿ ಖ್ಯಾತ ನಟಿ ಸೀಮಾ ಬಿಸ್ವಾಸ್ ಅವರಿಗೆ ಕೆನಡಾದಲ್ಲಿ ನಡೆದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ `ಅತ್ಯುತ್ತಮ ನಟಿ' (`ಬೆಸ್ಟ್ ಅ್ಯಕ್ಟ್ರೆಸ್ ಜೆನೀ') ಪ್ರಶಸ್ತಿ ಲಭಿಸಿತು. ಬೇರೊಂದು ರಾಷ್ಟ್ರದಲ್ಲಿ ನಡೆದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯಳೊಬ್ಬಳು `ಅತ್ಯುತ್ತಮ ನಟಿ ಪ್ರಶಸ್ತಿ' ಪಡೆದಿರುವುದು ಬಹುಶಃ ಇದೇ ಪ್ರಥಮ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ ಸೇರಿದಂತೆ ಎಂಟು ವರ್ಗಗಳಲ್ಲಿ ಪ್ರಶಸ್ತಿಗಾಗಿ `ವಾಟರ್' ಚಿತ್ರವನ್ನು ಹೆಸರಿಸಲಾಗಿತ್ತು. ಆದರೆ ಅತ್ಯುತ್ತಮ ನಟಿ ಪ್ರಶಸ್ತಿ ಮಾತ್ರವೇ `ವಾಟರ್'ಗೆ ಸಿಕ್ಕಿತು. ಸೀಮಾ ಬಿಸ್ವಾಸ್ ಪರವಾಗಿ `ವಾಟರ್'ನಲ್ಲಿ ಮುಖ್ಯಪಾತ್ರ ವಹಿಸಿರುವ ಲೀಸಾರಾಯ್ ಪ್ರಶಸ್ತಿ ಸ್ವೀಕರಿದರು. ಸೀಮಾ ಈ ಸಂದರ್ಭದಲ್ಲಿ ಚೆನ್ನೈಯಲ್ಲಿ ಬಾಲಾಜಿ ನಿರ್ದೇಶನದ `ತಲೈಮಗನ್' ಚಿತ್ರೀಕರಣದಲ್ಲಿ ಇದ್ದರು.

2006: ಶಾಸಕರ ಭವನದ 4ನೇ ಹಂತದ 2ನೇ ಘಟ್ಟದ ಪ್ಲಾಟುಗಳನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿ ಉದ್ಘಾಟಿಸಿದರು. 5 ಕೋಟಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಪ್ಲಾಟುಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ 38 ಸಾಂಸಾರಿಕ ಪ್ಲಾಟುಗಳಿವೆ. 2 ವಿಐಪಿ, 5 ಅತಿಥಿ ಗೃಹಗಳನ್ನು ಇದು ಒಳಗೊಂಡಿದೆ.

1969: ಗೋಲ್ಡಾ ಮೀರ್ ಅವರು ತಮ್ಮ 70ನೇ ವಯಸ್ಸಿನಲ್ಲಿ ಇಸ್ರೇಲ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಈ ಹುದ್ದೆಗೆ ಏರಿದ ಪ್ರಪ್ರಥಮ ಮಹಿಳೆ ಈಕೆ.

1963: ಭಾರತದ ಪ್ರಪ್ರಥಮ ರುದ್ರ ವೀಣಾ ವಾದಕಿ ಜ್ಯೋತಿ ಹೆಗಡೆ ಅವರು ಸತ್ಯನಾರಾಯಣ ದೇವಗುಡಿ- ಶಾಂತಾ ದೇವಗುಡಿ ದಂಪತಿಯ ಮಗಳಾಗಿ ಧಾರವಾಡದಲ್ಲಿ ಜನಿಸಿದರು. ಕರ್ನಾಟಕ ರುದ್ರವೀಣಾ ವಾದನದ ನಾಲ್ವರಲ್ಲಿ ಅಗ್ರಗಣ್ಯರೆಂಬ ಹೆಗ್ಗಳಿಕೆ ಇವರದು.

1959: ದಲೈ ಲಾಮಾ ಅವರು ಟಿಬೆಟ್ ತ್ಯಜಿಸಿ ಭಾರತಕ್ಕೆ ಬಂದರು. 1959ರ ಮಾರ್ಚ್ 31ರಂದು ಅವರಿಗೆ ಭಾರತದಲ್ಲಿ ರಾಜಕೀಯ ಆಶ್ರಯ ನೀಡಲಾಯಿತು.

1950: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಾವು ಹೊಸ `ರೇಡಿಯಾಕ್ಟಿವ್' ಕಂಡು ಹಿಡಿದಿರುವುದಾಗಿ ಬರ್ಕೆಲಿಯಲ್ಲಿ ಪ್ರಕಟಿಸಿದರು. ಇದಕ್ಕೆ ಅವರು `ಕ್ಯಾಲಿಫೋರ್ನಿಯಂ' ಎಂದು ಹೆಸರಿಟ್ಟರು.

1942: ಜನರಲ್ ಡೊಗ್ಲಾಸ್ ಮ್ಯಾಕ್ ಅರ್ಥರ್ ಅವರು ಎರಡನೇ ವಿಶ್ವ ಸಮರ ಸಂದರ್ಭದಲ್ಲಿ ನೈಋತ್ಯ ಫೆಸಿಫಿಕ್ ಭಾಗದಲ್ಲಿದ್ದ ಮಿತ್ರ ಪಡೆಗಳ ಸುಪ್ರೀಂ ಕಮಾಂಡರ್ ಹುದ್ದೆ ವಹಿಸಿಕೊಳ್ಳಲು ಆಸ್ಟ್ರೇಲಿಯಕ್ಕೆ ಆಗಮಿಸಿದರು.

1920: ಷೇಖ್ ಮುಜಿಬುರ್ ರಹಮಾನ್ (1920-75) ಜನ್ಮದಿನ. ಬಂಗಾಳಿ ನಾಯಕ ಹಾಗೂ ಬಾಂಗ್ಲಾದೇಶದ ಪ್ರಥಮ ಪ್ರಧಾನಿ ಹಾಗೂ ನಂತರ ಅಧ್ಯಕ್ಷರಾದ ಇವರನ್ನು 1975ರಲ್ಲಿ ಕೊಲೆಗೈಯಲಾಯಿತು.

1834: ಗೋಟ್ಲಬ್ (ವಿಲ್ಹೆಮ್) ಡೈಂಬ್ಲರ್ (1834-1900) ಹುಟ್ಟಿದ ದಿನ.ಜರ್ಮನ್ ಮೆಕ್ಯಾನಿಕಲ್ ಎಂಜಿನಿಯರ್ ಆದ ಈತ ಪ್ರಪ್ರಥಮ ಮರ್ಸಿಡಿಸ್ ಕಾರನ್ನು ನಿರ್ಮಿಸಿದ.

Tuesday, March 16, 2010

ಇಂದಿನ ಇತಿಹಾಸ History Today ಮಾರ್ಚ್ 16

ಇಂದಿನ ಇತಿಹಾಸ

ಮಾರ್ಚ್ 16

ಜಪಾನ್ ರಾಜಧಾನಿ ಟೋಕಿಯೊ ಸಮೀಪ ಸುಕುಬಾ ಎಂಬಲ್ಲಿ ನಡೆದ ಪ್ರದರ್ಶನವೊಂದರಲ್ಲಿ ಯುವತಿ ರೂಪದ ರೊಬೋಟ್ ಗಮನ ಸೆಳೆಯಿತು.

2009: ಜಪಾನ್ ರಾಜಧಾನಿ ಟೋಕಿಯೊ ಸಮೀಪ ಸುಕುಬಾ ಎಂಬಲ್ಲಿ ನಡೆದ ಪ್ರದರ್ಶನವೊಂದರಲ್ಲಿ ಯುವತಿ ರೂಪದ ರೊಬೋಟ್ ಗಮನ ಸೆಳೆಯಿತು.

2009: ಶರತ್ ಸಭರ್‌ವಾಲ್ ಅವರು ಪಾಕಿಸ್ಥಾನಕ್ಕೆ ಭಾರತದ ನೂತನ ರಾಯಭಾರಿಯಾಗಿ ನೇಮಕಗೊಂಡರು.

2009: ಪಾಕಿಸ್ಥಾನದಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿತು. ಮುಷರಫ್ ಸರ್ಕಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನದಿಂದ ಕಿತ್ತು ಹಾಕಿದ್ದ ಇಫ್ತಿಕಾರ್ ಮಹಮದ್ ಚೌಧರಿ ಅವರ ಪುನರ್ ನೇಮಕ ಮಾಡಬೇಕೆಂಬ ಷರೀಫ್ ಬೇಡಿಕೆಗೆ ಪಾಕಿಸ್ಥಾನ ಸರ್ಕಾರ ಒಪ್ಪಿ ಕೊಂಡಿತು. ಈ ಹಿನ್ನೆಲೆಯಲ್ಲಿ ಸಂಸತ್ ಭವನದ ಎದುರು ನಡೆಸಬೇಕಾಗಿದ್ದ ಧರಣಿಯನ್ನು ನವಾಜ್ ಷರೀಫ್ ಹಿಂತೆಗೆದುಕೊಂಡರು. 2007ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಅಂದಿನ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಇಫ್ತಿಕಾರ್ ಚೌಧರಿ ಸೇರಿದಂತೆ ಒಂಬತ್ತು ಮಂದಿ ನ್ಯಾಯಮೂರ್ತಿಗಳನ್ನು ಸೇವೆಯಿಂದ ಕಿತ್ತುಹಾಕಿದ್ದರು. ಆ ಆದೇಶವನ್ನು ಜರ್ದಾರಿ ಸರ್ಕಾರ ಹಿಂದಕ್ಕೆ ಪಡೆಯಿತು. ಹಾಲಿ ನ್ಯಾಯಮೂರ್ತಿ ಅಬ್ದುಲ್ ಹಮೀದ್ ದೋಗಾರ್ ಮಾರ್ಚ್ 21ರಂದು ನಿವೃತ್ತಿಯಾದಾಗ ಚೌಧರಿ ಅಧಿಕಾರ ಸ್ವಿಕರಿಸುವರು ಎಂದು ತಿಳಿಸಲಾಯಿತು.

'ಲಾಂಗ್‌ ಮಾರ್ಚ್' ಘಟನಾವಳಿ...
ಪಾಕಿಸ್ಥಾನದಲ್ಲಿ 25ದಿನಗಳಿಂದ ನಡೆಯುತ್ತಿದ್ದ ಜರ್ದಾರಿ ಸರ್ಕಾರದ ವಿರುದ್ಧದ ಪ್ರತಿಪಕ್ಷದ ಭಾರಿ ಪ್ರತಿಭಟನೆ ಅಂತ್ಯಗೊಂಡಿತು. ಮಾಜಿ ಪ್ರಧಾನಿ ಹಾಗೂ ಪಿಎಂಎಲ್‌ಎನ್ ಮುಖಂಡ ನವಾಜ್ ಷರೀಫ್ ಅವರ 'ಲಾಂಗ್‌ಮಾರ್ಚ್' ಪ್ರತಿಭಟನೆ ಹಾಗೂ ಸಂಸತ್ ಭವನದ ಮುಂದೆ ಧರಣಿ ಬೆದರಿಕೆಯ ಬಿಸಿ ತಟ್ಟಿದ ಕಾರಣ ಸರ್ಕಾರ ಬೇಡಿಕೆಗಳನ್ನೆಲ್ಲಾ ಈಡೇರಿಸಿತು. ವಜಾಗೊಂಡ ಪಂಜಾಬ್ ಸರ್ಕಾರವನ್ನು ಮರು ಸ್ಥಾಪಿಸಲಾಯಿತು. ಪದಚ್ಯುತ ನ್ಯಾಯಮೂರ್ತಿಗಳನ್ನು ಮರುನೇಮಿಸಲಾಯಿತು.

ಪಾಕ್‌ನಲ್ಲಿ ನಡೆದ ಪ್ರಮುಖ ಘಟನಾವಳಿಗಳು:

ಫೆಬ್ರುವರಿ 25: ಪಾಕಿಸ್ಥಾನದ ಸುಪ್ರೀಂಕೋರ್ಟ್ ತೀರ್ಪು- ನವಾಜ್ ಷರೀಫ್ ಮತ್ತವರ ಸೋದರ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಷಹಬಾಜ್‌ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ. ಪಂಜಾಬಿನಲ್ಲಿ ಷಹಬಾಜ್ ಸರ್ಕಾರ ಕಿತ್ತುಹಾಕಿ ರಾಜ್ಯಪಾಲರ ಆಡಳಿತ ಹೇರಿದ ಅಧ್ಯಕ್ಷ ಆಸೀಫ್ ಆಲಿ ಜರ್ದಾರಿ. ದೇಶದಾದ್ಯಂತ ಪ್ರತಿಭಟನೆ.

ಫೆಬ್ರುವರಿ 26: 'ತೀರ್ಪು ವಿಷಾದನೀಯ. ಪ್ರತಿಪಕ್ಷಗಳೊಂದಿಗೆ ರಾಜಿಸಂಧಾನ ಮಾತುಕತೆಗೆ ಸಿದ್ಧ'- ಪ್ರಧಾನಿ ಯೂಸುಫ್ ರಜಾ ಗಿಲಾನಿ ಹೇಳಿಕೆ.

ಮಾರ್ಚ್ 2: ಅಧ್ಯಕ್ಷ ಜರ್ದಾರಿ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಮಧ್ಯೆ ಸಂಬಂಧ ಸುಧಾರಣೆಗೆ ಪ್ರಾದೇಶಿಕ ಮತ್ತು ಸಣ್ಣಪಕ್ಷಗಳ ಪ್ರಯತ್ನ.ಸಂಧಾನಕ್ಕೆ ಒಪ್ಪದ ಷರೀಫ್, ಸರ್ಕಾರದ ವಿರುದ್ಧ ಬಂಡಾಯಕ್ಕೆ ಕರೆ.

ಮಾರ್ಚ್ 3: ಸರ್ಕಾರದ ಜತೆ ಮಾತುಕತೆಗೆ ಪಿಎಂಎಲ್‌ಎನ್ ಸಿದ್ಧತೆ. ನ್ಯಾಯಾಧೀಶರ ಮರುನೇಮಕ ಮತ್ತು ಷಹಬಾಜ್‌ ಸರ್ಕಾರ ಸ್ಥಾಪನೆಗೆ ಬೇಡಿಕೆ.

ಮಾರ್ಚ್ 4: 'ಅವಕಾಶವಾದಿ ನ್ಯಾಯಮೂರ್ತಿಗಳು, ಸೇನಾಧಿಪತಿಗಳು ಪಾಕ್ ಆಳುತ್ತಿದ್ದಾರೆ' ನವಾಜ್ ಹೇಳಿಕೆ. ಜರ್ದಾರಿ ವಿರುದ್ಧ ತೀವ್ರಗೊಂಡ ಪ್ರತಿಭಟನೆ.

ಮಾರ್ಚ್ 9: ಸರ್ಕಾರದ ವಿರುದ್ಧ ಪ್ರತಿಭಟಿಸಲು ಜನತೆಗೆ ನವಾಜ್ ಕರೆ. 'ಪ್ರಚೋದನಕಾರಿ ಭಾಷಣ, ದೇಶದ್ರೋಹಿ ಚಟುವಟಿಕೆ ಬೇಡ' ನವಾಜ್‌ಗೆ ಸರ್ಕಾರದ ಎಚ್ಚರಿಕೆ.

ಮಾರ್ಚ್ 10: ಆಡಳಿತಾರೂಢ ಪಾಕಿಸ್ಥಾನ್ ಪೀಪಲ್ಸ್‌ ಪಾರ್ಟಿ(ಪಿಪಿಪಿ)ಯಿಂದ ಪಿಎಂಎಲ್‌ಎನ್‌ಗೆ ಮಾತುಕತೆಯ ಆಹ್ವಾನ. ನವಾಜ್ ನಿರಾಕರಣೆ. ಬೇಡಿಕೆಗಳ ಜಾರಿಗಾಗಿ ಪ್ರತಿಭಟನೆ ಮತ್ತಷ್ಟು ತೀವ್ರ. ನವಾಜ್ ಷರೀಫ್ ಮೇಲೆ ನಿರ್ಬಂಧ ಹೇರಿದ ಸರ್ಕಾರ.

ಮಾರ್ಚ್ 11: ಸರ್ಕಾರಿ ಆದೇಶ ಉಲ್ಲಂಘಿಸಿದ ನವಾಜ್. ಸರ್ಕಾರದ ವಿರುದ್ಧ ಲಾಹೋರಿನಿಂದ ರಾಜಧಾನಿ ಇಸ್ಲಾಮಾಬಾದಿಗೆ 'ಲಾಂಗ್ ಮಾರ್ಚ್' ಜಾಥಾ, ಭಾರಿ ಜನಬೆಂಬಲ.

ಮಾರ್ಚ್ 12: ತುರ್ತುಸ್ಥಿತಿ ಘೋಷಣೆ. ಲಾಂಗ್‌ ಮಾರ್ಚ್ ದಮನಕ್ಕೆ ಸರ್ಕಾರದ ಇನ್ನೊಂದು ತಂತ್ರ. ತನ್ನ ಹತ್ಯೆಗೆ ಸಂಚು - ನವಾಜ್ ಆರೋಪ. ಶಾಂತಿ ಪಾಲಿಸಲು ಪಾಕ್‌ನ ಉಭಯ ನಾಯಕರಲ್ಲಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್‌ಬ್ರೂಕ್ ಮನವಿ. ಮಾತುಕತೆಗೆ ಸರ್ಕಾರದಿಂದ ಮತ್ತೊಮ್ಮೆ ಆಹ್ವಾನ. ನಿರಾಕರಿಸಿದ ನವಾಜ್. ನಾಯಕರು, ವಕೀಲರು ಸೇರಿದಂತೆ ನೂರಾರು ಮಂದಿ ಸೆರೆ. ತಗ್ಗದ ಪ್ರತಿಭಟನೆ.

ಮಾರ್ಚ್ 13: ಮೆತ್ತಗಾದ ಸರ್ಕಾರ. ಪಂಜಾಬಿನಲ್ಲಿ ರಾಜ್ಯಪಾಲರ ಆಳ್ವಿಕೆ ವಾಪಸ್. ಅಧ್ಯಕ್ಷ ಜರ್ದಾರಿ ಆಪ್ತರಾದ ವಾರ್ತಾ ಸಚಿವೆ ಶೆರಿ ರೆಹ್ಮಾನ್ ರಾಜೀನಾಮೆ. ಸರ್ಕಾರಕ್ಕೆ ಬಿಸಿ. ಸಜ್ಜಾಗಿರಲು ಸೇನೆಗೆ ಆದೇಶ.

ಮಾರ್ಚ್ 14: ಬಿಕ್ಕಟ್ಟು ತಣಿಸಲು ಸರ್ಕಾರ ಯತ್ನ. ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ, ನವಾಜ್ ಮತ್ತು ಸೋದರ ಷಾಹ್‌ಬಾಜ್ ಚುನಾವಣಾ ಅನರ್ಹತೆ ವಾಪಸಾತಿ- ಜರ್ದಾರಿ ಸರ್ಕಾರದ ಭರವಸೆ. ತಲೆಬಾಗದ ನವಾಜ್ ಷರೀಫ್.

ಮಾರ್ಚ್ 15: ನವಾಜ್ ಷರೀಫ್‌ಗೆ 3 ದಿನಗಳ ಗೃಹಬಂಧನ. ಲಾಂಗ್ ಮಾರ್ಚ್ ನಿಯಂತ್ರಿಸಲು ಸರ್ಕಾರ ಸಂಚು. ಆದೇಶ ಉಲ್ಲಂಘನೆ. ರಾಜಧಾನಿ ಇಸ್ಲಾಮಾಬಾದಿಗೆ ತೆರಳಿ ಸಂಸತ್‌ ಭವನದ ಮುಂದೆ ಜನಸ್ತೋಮದೊಂದಿಗೆ ಧರಣಿ ನಡೆಸಲು ಲಾಹೋರಿನಿಂದ ಪ್ರತಿಭಟನೆ ಮುನ್ನಡೆಸಿದ ನವಾಜ್‌ ಷರೀಫ್. ಪ್ರತಿಭಟನೆ ಬೆಂಬಲಿಸಿ ಹಿರಿಯ ಪೊಲೀಸ್- ಇತರ ಅಧಿಕಾರಿಗಳ ರಾಜೀನಾಮೆ. ಕಂಗೆಟ್ಟ ಜರ್ದಾರಿ ಸರ್ಕಾರ.

ಮಾರ್ಚ್ 16: ಪ್ರಧಾನಿ ಯೂಸುಫ್ ರಜಾ ಗಿಲಾನಿ ಆದೇಶ- ವಜಾ ಆಗಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮಹಮ್ಮದ್, ಇತರ ನ್ಯಾಯಾಧೀಶರ ಮರುನೇಮಕ. ತೃಪ್ತರಾದ ನವಾಜ್ ಷರೀಫ್. ಕೈಬಿಟ್ಟ ಲಾಂಗ್ ಮಾರ್ಚ್, ದೇಶವ್ಯಾಪಿ ಪ್ರತಿಭಟನೆ ಅಂತ್ಯ. ಎಲ್ಲೆಲ್ಲೂ ಸಂಭ್ರಮಾಚರಣೆ.

2008: ಬಾಹ್ಯಾಕಾಶ ನಿಲ್ದಾಣದಲ್ಲಿನ `ಡೆಕ್ಸಟರ್' ಹೆಸರಿನ ದೈತ್ಯ ಗಾತ್ರದ ಯಂತ್ರಮಾನವನ (ರೊಬೊಟ್) ವಿದ್ಯುತ್ ಸಮಸ್ಯೆಯನ್ನು ನಿವಾರಿಸಿದ ವ್ಯೋಮಯಾನಿಗಳು, ಅದರ 3.5 ಮೀಟರ್ ಉದ್ದದ ಕೈಗಳನ್ನು ಜೋಡಿಸುವ ಸಾಹಸದಲ್ಲೂ ಯಶಸ್ವಿಯಾದರು. ಈ ಕೆನಡಾ ನಿರ್ಮಿತ ರೊಬೊಟ್ 4 ಮೀಟರ್ ಎತ್ತರವಿದ್ದು, ಪೂರ್ಣವಾಗಿ ಸಜ್ಜುಗೊಂಡಾಗ ಒಟ್ಟು 1,500 ಕೆ.ಜಿ. ತೂಗುವುದು. ಭವಿಷ್ಯದ ದಿನಗಳಲ್ಲಿ ಅದು ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡುವ ಗಗನಯಾತ್ರಿಗಳಿಗೆ ಹಲವು ಪ್ರಯೋಗಗಳು ಮತ್ತು ರಿಪೇರಿ ಕಾರ್ಯಗಳಲ್ಲಿ ನೆರವಾಗುವುದು. ಎಂಡೇವರ್ ಗಗನನೌಕೆಯ ಮೊದಲ ಬಾಹ್ಯಾಕಾಶ ಯಾನದ ಸಂದರ್ಭದಲ್ಲಿ ರೊಬೊಟ್ನ 11 ಅಡಿ ಉದ್ದದ ತೋಳುಗಳಿಗೆ ಕೈಗಳನ್ನು ಜೋಡಿಸುವ ಕೆಲಸ ನಡೆದಿತ್ತು. ಈ ಬಾರಿ ವಿಜ್ಞಾನಿಗಳು ಈ ತೋಳುಗಳನ್ನು ಭುಜಗಳಿಗೆ ಸೇರಿಸುವ ಪ್ರಯತ್ನ ನಡೆಸಿ ಅದರಲ್ಲಿ ಯಶಸ್ವಿಯಾದರು. ರಿಚರ್ಡ್ ಲಿನ್ನೆಹನ್ ಮತ್ತು ಮೆಕೆಲ್ ಫೋರ್ಮನ್ ಅವರು ಏಳು ಗಂಟೆ ಕಾಲ ಸತತ ಬಾಹ್ಯಾಕಾಶ ನಡಿಗೆ ನಡೆಸಿ ಸಾರಿಗೆ ವೇದಿಕೆಯಿಂದ ರೊಬೊಟ್ನ ಕೈಗಳನ್ನು ಬೇರ್ಪಡಿಸುವ ಪ್ರಯತ್ನ ಮಾಡಿ ಅದರಲ್ಲಿ ಸಫಲರಾದರು. ಹಿಂದಿನ ದಿನ ಬಾಹ್ಯಾಕಾಶ ನಡಿಗೆ ಮಾಡಿದ ವ್ಯೋಮಯಾನಿಗಳು ರೊಬೊಟನ್ನು ಬಾಹ್ಯಾಕಾಶ ನಿಲ್ದಾಣದ ತಾಂತ್ರಿಕ ಸಂಪರ್ಕಕ್ಕೆ ತರಲು ಸಫಲರಾದುದರಿಂದ ರೊಬೊಟ್ಗೆ ಅಗತ್ಯವಾದ ವಿದ್ಯುತ್ ಪೂರೈಕೆ ಸಾಧ್ಯವಾಗಿತ್ತು.

2008: ಚೀನಾದ ಪ್ರಧಾನಿಯಾಗಿ ವೆನ್ ಜಿಯಾಬೊ (65) ಎರಡನೇ ಬಾರಿಗೆ ಪುನರಾಯ್ಕೆಯಾದರು. ಚೀನಾ ಕಮ್ಯುನಿಸ್ಟ್ ಪಾರ್ಟಿಯ (ಸಿಪಿಸಿ) ಮೂರನೇ ಶ್ರೇಯಾಂಕದ ನಾಯಕರಾದ ವೆನ್ ಅವರು ಪ್ರಧಾನಿ ಸ್ಥಾನದ ಏಕೈಕ ಅಭ್ಯರ್ಥಿಯಾಗಿದ್ದರು.

2008: ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ನೂತನ `ಷರಿಯತ್ ನಿಕಾಹನಾಮಾ' (ವಿವಾಹ ಷರತ್ತುಗಳು) ಪ್ರಕಟಿಸಿತು. ಈ ನೂತನ ನಿಕಾಹನಾಮಾದಿಂದ ಮಹಿಳೆಯರಿಗೆ ಸಮಾನತೆಯ ಅವಕಾಶಗಳು ಹೆಚ್ಚುತ್ತವೆ. ಇದು ಮೂರು ಸಾರಿ ತಲಾಖ್ (ವಿಚ್ಛೇದನಕ್ಕೆ ಬಳಸುವ ಪದ) ಎಂದು ಹೇಳುವ ತಲಾಖ್ ನಾಮಾಗಿಂತ ತುಂಬ ಭಿನ್ನವಾಗಿದೆ. ಹಳೆಯ ಪದ್ಧತಿಯಿಂದ ಕುರಾನಿನ ಸಮಾನತೆ ಪ್ರತಿಪಾದನೆಗೆ ಸೂಕ್ತ ನ್ಯಾಯ ದಕ್ಕುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ವಾದಿಸಿತು. ವಿಚ್ಛೇದನಕ್ಕೆ ಕನಿಷ್ಠ ಮೂರು ತಿಂಗಳ ಅವಧಿಯನ್ನು ಗಂಡು ಮತ್ತು ಹೆಣ್ಣಿಗೆ ನೀಡುವುದು ಹೊಸ ನಿಕಾಹನಾಮಾದ ಸುಧಾರಣಾ ಕ್ರಮಗಳಲ್ಲಿ ಒಂದು. ಎಸ್ ಎಂ ಎಸ್, ಇ-ಮೇಲ್, ದೂರವಾಣಿ ಅಥವಾ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ತಲಾಖ್ ನೀಡುವುದನ್ನು ಮಂಡಳಿಯ ಹೊಸ ನಿಕಾಹನಾಮಾ ತಿರಸ್ಕರಿಸಿತು. ತಲಾಖ್ಗೆ ಪ್ರಚೋದನೆಯನ್ನೂ ಅದು ವಿರೋಧಿಸಿತು. ಇದೇ ಮೊದಲ ಬಾರಿಗೆ ವಿವಾಹ ಸಂದರ್ಭದಲ್ಲಿ ಮೂರು ಫಾರಂಗಳನ್ನು ಭರ್ತಿ ಮಾಡಿಸಿಕೊಳ್ಳುವ ವಿಧಾನವನ್ನು ನಿಕಾಹನಾಮಾ ಅನುಸರಿಸುವುದು.

2008: ಟಿಬೆಟಿನಲ್ಲಿ ತನ್ನ ಆಡಳಿತ ವಿರುದ್ಧ ಬೌದ್ಧ ಬಿಕ್ಕುಗಳ ನೇತೃತ್ವದಲ್ಲಿ ಆರಂಭವಾದ ಹಿಂಸಾತ್ಮಕ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾದ ಚೀನಾವು ದಲೈಲಾಮ ಬೆಂಬಲಿಗರ ಮೇಲೆ `ಪ್ರಜಾ ಸಮರ' ಘೋಷಿಸಿತು.

2008: ಪಾಕಿಸ್ಥಾನದಲ್ಲಿ 1990ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರನ್ನು ಏಪ್ರಿಲ್ 1 ರಂದು ಲಾಹೋರಿನ ಕಾರಾಗೃಹದಲ್ಲಿ ನೇಣುಗಂಬಕ್ಕೆ ಏರಿಸಲಾಗುವುದು, 17 ವರ್ಷಗಳಿಂದ ಲಾಹೋರಿನ ಕೊಟ್ಲಖ್ ಪತ್ ಜೈಲುವಾಸಿಯಾದ ಸರಬ್ಜಿತ್ ಸಿಂಗ್ ಅವರನ್ನು ಗಲ್ಲಿಗೇರಿಸುವ ಸಂಬಂಧ ಕಾರಾಗೃಹ ಅಧಿಕಾರಿಗಳಿಗೆ ಸೂಚನೆ ಬಂದಿದೆ ಎಂದು ಪತ್ರಿಕೆಯೊಂದು ವರದಿ ಮಾಡಿತು.

2007: ಒರಿಸ್ಸಾದ ದಕ್ಷಿಣ ಗಂಜಾಮ್ ಜ್ಲಿಲೆಯ ಬೆರ್ಹಾಮ್ ಪುರದ ಫಾರ್ಮೆಸಿ ವಿದ್ಯಾರ್ಥಿ ಪಿಂಟು ಮಹಾಕುಲ್ ಅವರು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ 141 ಮೀಟರ್ ಉದ್ದ, 24 ಕಿಲೋ ಗ್ರಾಂ ತೂಕದ ಪತ್ರವೊಂದನ್ನು ಕಳುಹಿಸಿದರು. `ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಇನ್ನೊಂದು ಅವಧಿಗೆ ರಾಷ್ಟ್ರಪತಿಯಾಗಿ ಮುಂದುವರೆಯಬೇಕು ಎಂಬುದು ನಮ್ಮ ಆಗ್ರಹ' ಎಂಬುದು ಈ ಪತ್ರದ ಸಾರಾಂಶವಾಗಿತ್ತು.

2007: ಐಸಿಸಿ ವಿಶ್ವಕಪ್ನ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರು ಎಸೆತಗಳಲ್ಲಿ ಆರು ಸಿಕ್ಸರ್, ಒಂದೇ ಓವರಿನಲ್ಲಿ 36 ರನ್ ಗಳಿಸುವ ಮೂಲಕ ಸೇಂಟ್ ಕಿಟ್ಸ್ ನ ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ವಿಶ್ವದಾಖಲೆ ಸ್ಥಾಪಿಸಿದರು. ಹಾಲೆಂಡ್ ಮತ್ತು ದಕ್ಷಿಣ ಆಫ್ರಿಕದ ಮಧ್ಯೆ ನಡೆದ ವಿಶ್ವ ಕಪ್ ಎ ಬಣದ ಪಂದ್ಯದಲ್ಲಿ ಗಿಬ್ಸ್ ಈ ದಾಖಲೆ ಮಾಡಿದರು.

2007: ಹಿಂಸಾತ್ಮಕ ಪ್ರತಿಭಟನೆಗೆ ಬೆಚ್ಚಿ ಬಿದ್ದ ಪಶ್ಚಿಮ ಬಂಗಾಳ ಸರ್ಕಾರವು ರಾಷ್ಟ್ರಮಟ್ಟದಲ್ಲಿ `ಸಾಮಾಜಿಕ ಸಮನ್ವಯ ನೀತಿ' ರೂಪುಗೊಳ್ಳುವವರೆಗೆ ರಾಜ್ಯದಲ್ಲಿ ಎಲ್ಲ ವಿಶೇಷ ವಿತ್ತ ವಲಯಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿತು.

2007: ತಮಿಳು ಚಿತ್ರರಂಗದ ಮುಂಚೂಣಿ ನಟಿಯರಲ್ಲಿ ಒಬ್ಬರಾಗಿದ್ದ ಸರಿತಾ ಅವರು ತಮ್ಮ ಪತಿ ಮಲಯಾಳಿ ಚಿತ್ರನಟ ಮುಖೇಶ ಅವರ ವಿರುದ್ಧ ಕ್ರೂರ ನಡವಳಿಕೆಯ ಆರೋಪ ಮಾಡಿ ತಮಗೆ ವಿಚ್ಛೇದನ ಕೊಡಿಸುವಂತೆ ಚೆನ್ನೈಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

2006: ಅಲ್ ಖೈದಾ ಉಗ್ರಗಾಮಿಗಳ ಹಿಡಿತದ ಉತ್ತರ ಇರಾಕಿನ ಸಮರ್ರಾ ಪ್ರದೇಶದ ಮೇಲೆ ಅಮೆರಿಕ ಮತ್ತು ಇರಾಕಿ ಸಂಯುಕ್ತ ಪಡೆ ಭಾರಿ ಪ್ರಮಾಣದ ವಾಯುದಾಳಿ ಆರಂಭಿಸಿತು.

2006: ಮೆಲ್ಬೋರ್ನಿನಲ್ಲಿ ನಡೆದ 18ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹಿರಿಯ ವೇಟ್ ಲಿಫ್ಟಿಂಗ್ ಪಟು ಕುಂಜುರಾಣಿ ದೇವಿ ಭಾರತಕ್ಕೆ ಮೊದಲ ಸ್ವರ್ಣಪದಕ ತಂದುಕೊಟ್ಟರು. ಮಹಿಳೆಯರ 48 ಕಿಲೋ ವಿಭಾಗದಲ್ಲಿ 166 ಕಿಲೋ ತೂಕ ಎತ್ತುವ ಮೂಲಕ ಕುಂಜುರಾಣಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದರು.

2006: ಕರ್ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ ಕನ್ನಡದಿಂದ ಹಿಂದಿಗೆ ಅನುವಾದಿಸಿದ ಕುವೆಂಪು ರಾಮಾಯಣ ಕೃತಿಯು 2006ನೇ ಸಾಲಿನ ಪಿತಾಶ್ರೀ ಗೋಪಿರಾಂ ಗೋಯೆಂಕಾ ಕನ್ನಡ- ಹಿಂದಿ ಅನುವಾದ ಪುರಸ್ಕಾರಕ್ಕೆ ಆಯ್ಕೆಯಾಯಿತು. ಬೆಂಗಳೂರು ಯಲಹಂಕ ಉಪನಗರದ ಕಮಲ ಗೋಯೆಂಕಾ ಪ್ರತಿಷ್ಠಾನವು ಪ್ರತಿವರ್ಷ ಉತ್ತಮ ಅನುವಾದಿತ ಕೃತಿಗೆ ಈ ಪ್ರಶಸ್ತಿ ನೀಡುತ್ತದೆ.

2002: ನ್ಯೂಜಿಲ್ಯಾಂಡಿನ ನೇಥನ್ ಅಸ್ಟ್ಲೆ ಅವರು 218 ನಿಮಿಷಗಳಲ್ಲಿ 153 ಚೆಂಡುಗಳಿಗೆ (ಬಾಲ್ಗಳಿಗೆ) 200 ರನ್ ಗಳಿಸಿ ಅತಿ ಕಡಿಮೆ ಅವಧಿಯಲ್ಲಿ ದ್ವಿಶತಕ ಬಾರಿಸಿದ ಆಟಗಾರನೆನಿಸಿದರು. ಇಂಗ್ಲೆಂಡಿನ ಕ್ರೈಸ್ಟ್ ಚರ್ಚಿನಲ್ಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಅಸ್ಟ್ಲೆ ಅವರು ಈ ಸಾಧನೆ ಮಾಡಿದರು.

1960: ಕಲಾವಿದ ಬಿ. ರಘುರಾಮ್ ಜನನ.

1952: ಕಲಾವಿದೆ ಎಂ.ಎಸ್. ಶೀಲಾ ಜನನ.

1935: ಖ್ಯಾತ ರಂಗಕರ್ಮಿ ಜಿ.ವಿ. ಶಿವಾನಂದ (16-3-1935ರಿಂದ 25-3-2002) ಅವರು ವೃತ್ತಿ ರಂಗಭೂಮಿಯ ನಾಟಕ ರತ್ನ ಡಾ. ಗುಬ್ಬಿ ವೀರಣ್ಣ- ಜಿ. ಸುಂದರಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1927: ಬಾಹ್ಯಾಕಾಶ ಯಾನದಲ್ಲಿದ್ದಾಗ ಮೃತನಾದ ಪ್ರಪ್ರಥಮ ಸೋವಿಯತ್ ಗಗನಯಾನಿ ವ್ಲಾದಿಮೀರ್ ಕೊಮಾರೋವ್ ಹುಟ್ಟಿದ್ದು ಇದೇ ದಿನ.

1926: ದ್ರವ ಇಂಧನ ಶಕ್ತಿಯ ಜಗತ್ತಿನ ಪ್ರಪ್ರಥಮ ರಾಕೆಟನ್ನು ರಾಬರ್ಟ್ ಎಚ್ ಗೊಡ್ಡಾರ್ಡ್ ಅಮೆರಿಕದ ಮೆಸಾಚ್ಯುಸೆಟ್ಸಿನಲ್ಲಿ ಹಾರಿಸಿದ. ರಾಕೆಟಿಗೆ ಪೆಟ್ರೋಲ್ ಹಾಗೂ ದ್ರವ ಆಮ್ಲಜನಕ ಬಳಸಲಾಯಿತು.

1918: ಕಲಾವಿದ ವಿ. ನಾರಾಯಣಸ್ವಾಮಿ ಜನನ.

1910: ಇಫ್ತಿಕರ್ ಅಲಿ ಖಾನ್ (1910-1952) ಹುಟ್ಟಿದ ದಿನ. ಪಟೌಡಿಯ ನವಾಬರಾದ ಇವರು ಭಾರತದ ಟೆಸ್ಟ್ ಕ್ಯಾಪ್ಟನ್ ಆಗಿದ್ದರು. ಮನ್ಸೂರ್ ಅಲಿಖಾನ್ ಪಟೌಡಿ ಇವರ ಪುತ್ರ.

1836: ಬ್ರಿಟಿಷ್ - ಅಮೆರಿಕನ್ ಸಂಶೋಧಕ ಆ್ಯಂಡ್ರ್ಯೂ ಸ್ಮಿತ್ ಹಲ್ಲಿಡೀ (1836-1900) ಜನ್ಮದಿನ. ಕೇಬಲ್ ರೈಲ್ವೆ ಸಂಶೋಧಕ ಈತ.

1527: ಮೊಘಲ್ ಚಕ್ರವರ್ತಿ ಬಾಬರ್ ಆಗ್ರಾ ಸಮೀಪದ ಖಾನ್ವಾದಲ್ಲಿ ಮೇವಾಡದ ರಾಣಾ ಸಂಘ ನೇತೃತ್ವದ ರಜಪೂತ ಪಡೆಗಳನ್ನು ಸೋಲಿಸಿದನು. ಪಾಣಿಪತ್ ಯುದ್ಧಕ್ಕಿಂತಲೂ ಭೀಕರವಾಗಿ ನಡೆದ ಈ ಕದನದಲ್ಲಿ ಉಭಯ ಕಡೆಗಳಲ್ಲೂ ಸಾಕಷ್ಟು ಸಾವು ನೋವು ಸಂಭವಿಸಿತು. ಈ ಸಮರವು ಬಾಬರನನ್ನು ಹಿಂದುಸ್ಥಾನದ ಚಕ್ರವರ್ತಿಯನ್ನಾಗಿ ಮಾಡಿತು.

Monday, March 15, 2010

ಇಂದಿನ ಇತಿಹಾಸ History Today ಮಾರ್ಚ್ 15

ಇಂದಿನ ಇತಿಹಾಸ

ಮಾರ್ಚ್ 15

ಮೊದಲ ಸೂಪರ್‌ಮನ್ ಕಾಮಿಕ್ ಪುಸ್ತಕ ವೊಂದು ಹರಾಜಿನಲ್ಲಿ 3,17,200 ಡಾಲರುಗಳಿಗೆ ಮಾರಾಟವಾಯಿತು. ಇದಕ್ಕಾಗಿ ಟೆಂಡರನ್ನು ಆನ್‌ಲೈನಿನಲ್ಲಿ ಎರಡು ವಾರಗಳ ಹಿಂದೆ ಆರಂಭಿಸಲಾಗಿತ್ತು. ಮೊದಲಿಗೆ ಇದು 2ಲಕ್ಷ ಡಾಲರುಗಳಿಗೆ ಬಿಕರಿಯಾಗಿತ್ತು ಕೊನೆ ಕ್ಷಣದಲ್ಲಿ ಇದರ ಬೆಲೆ 3 ಲಕ್ಷ ಡಾಲರಿಗೆ ಏರಿತು. ಆದರೆ ಇದರ ಮಾರಾಟಗಾರರಾಗಲಿ ಖರೀದಿ ಮಾಡಿದವರಾಗಲಿ ಯಾರು ಎಂಬುದು ಗೊತ್ತಾಗಲಿಲ್ಲ.

ಇಂದು ವಿಶ್ವ ಬಳಕೆದಾರರ ದಿನ

2009: ಪ್ರಸಕ್ತ 15ನೇ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವು ಇತರೆ ಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳದೆ ತನ್ನ ಸ್ವಂತ ಬಲದ ಮೇಲೆಯೇ ಏಕಾಂಗಿಯಾಗಿ ಸೆಣಸಲಿದೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿ ತೃತೀಯ ರಂಗವನ್ನು ದೂರಸರಿಸಿದರು.

2009: ಹಲವಾರು ದಿನಗಳಿಂದ ಚಳವಳಿ ನಡೆಸುತ್ತಿದ್ದ ವಕೀಲರು ಮತ್ತು ವಿರೋಧ ಪಕ್ಷಗಳ ಕಾರ್ಯಕರ್ತರು ಸಂಸತ್ ಭವನದ ಎದುರು ಧರಣಿ ನಡೆಸಲು ಉದ್ದೇಶಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿರೋಧ ಪಕ್ಷದ ಪ್ರಮುಖ ನಾಯಕ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಸಹೋದರ ಶಹಬಾಜ್ ಅವರನ್ನು ಗೃಹ ಬಂಧನದಲ್ಲಿ ಇಡಲಾಯಿತು. ಈ ಬೆಳವಣಿಗೆಯಿಂದ ಪಾಕ್ ಬಿಕ್ಕಟ್ಟು ಉಲ್ಬಣಗೊಂಡಿತು.

2009: ಮೊದಲ ಸೂಪರ್‌ಮನ್ ಕಾಮಿಕ್ ಪುಸ್ತಕ ವೊಂದು ಹರಾಜಿನಲ್ಲಿ 3,17,200 ಡಾಲರುಗಳಿಗೆ ಮಾರಾಟವಾಯಿತು. ಇದಕ್ಕಾಗಿ ಟೆಂಡರನ್ನು ಆನ್‌ಲೈನಿನಲ್ಲಿ ಎರಡು ವಾರಗಳ ಹಿಂದೆ ಆರಂಭಿಸಲಾಗಿತ್ತು. ಮೊದಲಿಗೆ ಇದು 2ಲಕ್ಷ ಡಾಲರುಗಳಿಗೆ ಬಿಕರಿಯಾಗಿತ್ತು ಕೊನೆ ಕ್ಷಣದಲ್ಲಿ ಇದರ ಬೆಲೆ 3 ಲಕ್ಷ ಡಾಲರಿಗೆ ಏರಿತು. ಆದರೆ ಇದರ ಮಾರಾಟಗಾರರಾಗಲಿ ಖರೀದಿ ಮಾಡಿದವರಾಗಲಿ ಯಾರು ಎಂಬುದು ಗೊತ್ತಾಗಲಿಲ್ಲ.

2009: ಪಾಕಿಸ್ಥಾನದ ಖಾಲಿದ್ ಲತೀಫ್ ಅವರು ಪ್ರಥಮ ದರ್ಜೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಗಳಿಸಿದ ವಿಶ್ವದ ಒಂಬತ್ತನೇ ಆಟಗಾರ ಎನಿಸಿದರು. ಪಾಕ್ ದೇಸಿ ಏಕದಿನ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಕರಾಚಿ ತಂಡದ ಪರ ಆಡಿದ ಲತೀಫ್ ಕರಾಚಿಯ ನ್ಯಾಷನಲ್ ಬ್ಯಾಂಕ್ ಕಾಂಪ್ಲೆಕ್ಸಿನಲ್ಲಿ ಕ್ವೆಟ್ಟಾ ತಂಡದ ವಿರುದ್ಧದ ಪಂದ್ಯದಲ್ಲಿ 163 ಎಸೆತಗಳಲ್ಲಿ 204 ರನ್ ಗಳಿಸಿದರು. ಈ ಸಾಧನೆ ಮಾಡಿದ ಪಾಕಿಸ್ಥಾನದ ಎರಡನೇ ಆಟಗಾರ ಎಂಬ ಗೌರವವನ್ನೂ ಲತೀಫ್ ತಮ್ಮದಾಗಿಸಿಕೊಂಡರು. ಈ ಮೊದಲು ಮೊಹಮ್ಮದ್ ಅಲಿ ಅವರು 2004-05 ರಲ್ಲಿ ಸಿಯಾಲ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಡಿಫೆನ್ಸ್ ತಂಡದ ಪರ 207 ರನ್ ಗಳಿಸಿದ್ದರು.

2008: ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ಮಾಣ ಯೋಜನೆಯನ್ನು ಶಾಶ್ವತವಾಗಿ ರದ್ದು ಮಾಡುವಂತೆ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಭಿಜಿತ್ ದಾಸ್ ಗುಪ್ತ ಶಿಫಾರಸು ಮಾಡಿದ್ದು ಬೆಳಕಿಗೆ ಬಂತು. ಚುನಾಯಿತ ಸರ್ಕಾರ ಇಲ್ಲದಾಗ ಐಎಎಸ್ ಅಧಿಕಾರಿಗಳು ಈ ಬಗ್ಗೆ ಏಕಪಕ್ಷೀಯ ನಿರ್ಧಾರ ಕೈಗೊಂಡು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ ಅವರಿಗೆ ಪತ್ರ ಬರೆಯುವ ಮೂಲಕ ಈ ಭಾಗದ ಜನತೆಗೆ ದ್ರೋಹ ಎಸಗಿದ್ದು, ರಾಜ್ಯಪಾಲರು ಕೂಡಾ ಸಾರ್ವಜನಿಕ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

2008: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಅವರನ್ನು ಜನರೇ ನೇರವಾಗಿ ಆಯ್ಕೆ ಮಾಡಬೇಕು ಹಾಗೂ ಅವರ ಅಧಿಕಾರಾವಧಿ ಐದು ವರ್ಷ ಇರಬೇಕು ಎಂದು ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್ ನೇತೃತ್ವದ ಸಮಿತಿ ಶಿಫಾರಸು ಮಾಡಿತು. ಬೆಂಗಳೂರು ಮಹಾನಗರದ ವಲಯ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಡಳಿತ ಸುಧಾರಣೆಯ ಉದ್ದೇಶದಿಂದ ರಚಿಸಿದ್ದ ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಈ ಸಮಿತಿ ರಾಜ್ಯಪಾಲರಿಗೆ ತನ್ನ ವರದಿ ಸಲ್ಲಿಸಿತು.

2008: ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಹಿರಿಯ ನೇತಾರ ಹು ಜಿಂಟಾವೊ ಚೀನಾದ ಅಧ್ಯಕ್ಷರಾಗಿ 2ನೇ ಅವಧಿಗೆ ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಝಿ ಜಿಂಗ್ ಪಿಂಗ್ ಚುನಾಯಿತರಾದರು. ಚೀನಾದ ಸಂಸತ್ತು ರಾಷ್ಟ್ರೀಯ ಪ್ರಜಾ ಕಾಂಗ್ರೆಸ್ಸಿನಲ್ಲಿ (ಎನ್ ಪಿ ಸಿ) ಹು ಜಿಂಟಾವೊ ಅವರ ಆಯ್ಕೆಯನ್ನು ಸಂಭ್ರಮದಿಂದ ಘೋಷಿಸಲಾಯಿತು.

2008: ನವದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಎಐಐಎಂಎಸ್- ಏಮ್ಸ್) ದಾಖಲಾದ ಸನ್ಯಾಸಿಯೊಬ್ಬರು ತನ್ನ ವಯಸ್ಸು 130 ವರ್ಷ ಎಂದು ಹೇಳಿ, ಆಸ್ಪತ್ರೆಯ ವೈದ್ಯರನ್ನು ಫಜೀತಿಗೆ ತಳ್ಳಿದರು. ಮೂತ್ರಕೋಶದಲ್ಲಿ ಬೆಳೆದ ದುರ್ಮಾಂಸವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದ ಉತ್ತರ ಪ್ರದೇಶದ ಶಹಜಾನಪುರ ಸಮೀಪದ ಬೆಹ್ತಾ ಅರಣ್ಯ ಪ್ರದೇಶದಿಂದ ಬಂದ ಸಂತ ಸ್ವಾಮಿ ರಮಾನಂದ ಅವರು ತನ್ನ ವಯಸ್ಸು 130 ವರ್ಷಗಳು ಎಂದು ವೈದ್ಯರಿಗೆ ತಿಳಿಸಿದರು. 'ಅವರ ವಯಸ್ಸು 100ಕ್ಕಿಂತ ಹೆಚ್ಚಾಗಿರುವುದು ಮಾತ್ರ ಹೌದು. ಆದರೆ 130 ವರ್ಷ ಆಗಿರಬಹುದೇ ಇಲ್ಲವೇ ಎಂಬ ಬಗ್ಗೆ ನನಗೆ ಖಚಿತತೆ ಇಲ್ಲ' ಎಂದು ಏಮ್ಸ್ ನ ಮೂತ್ರಕೋಶ ವಿಭಾಗದ ಮುಖ್ಯಸ್ಥ ಡಾ. ಎನ್. ಪಿ. ಗುಪ್ತ ಹೇಳಿದರು. ರಮಾನಂದ ಅವರ ವಯಸ್ಸು 100 ವರ್ಷಗಳಿಗಿಂತ ಹೆಚ್ಚಾಗಿದ್ದರೂ ಏಮ್ಸ್ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ದಾಖಲೆಯೊಂದನ್ನು ನಿರ್ಮಿಸಿದಂತಾಗಿದ್ದು, 100 ವರ್ಷ ಮೀರಿದ ವ್ಯಕ್ತಿಯೊಬ್ಬರು ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಈ ಸಂಸೆಯಲ್ಲಿ ಇದೇ ಮೊದಲ ಸಲ ಎಂದು ಡಾ. ಗುಪ್ತ ಹೇಳಿದರು. 'ಅವರ ಮೂತ್ರಕೋಶದಲ್ಲಿ ದುರ್ಮಾಂಸ ಬೆಳೆದಿತ್ತು. ಅದನ್ನು ಯಾವುದೇ ಗಾಯವೂ ಇಲ್ಲದಂತೆ ತೆಗೆದುಹಾಕಲಾಯಿತು' ಎಂದು ಡಾ. ಗುಪ್ತ ಹೇಳಿದರು. ಪ್ರಸ್ತುತ ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕದ ದಾಖಲೆಯ ಪ್ರಕಾರ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ 122 ವರ್ಷಗಳ ಒಬ್ಬ ಫ್ರೆಂಚ್ ಮಹಿಳೆ.

2009: ಕೇಂದ್ರ ಮುಂಬೈಯ ಸಿಯೋನ್ ನಿಲ್ದಾಣದಲ್ಲಿ ನಿಂತಿದ್ದ ಹೊರವಲಯ ರೈಲುಗಾಡಿಯೊಂದರಲ್ಲಿ ಮಧ್ಯಾಹ್ನ ಸ್ಫೋಟ ಸಂಭವಿಸಿ ಐವರು ಗಾಯಗೊಂಡರು. ರೈಲುಗಾಡಿಯ ಪ್ರಯಾಣಿಕರೊಬ್ಬರ ಬಳಿ ಇದ್ದ ಅನಿಲ ಬಾಟಲಿ ಅನಿರೀಕ್ಷಿತವಾಗಿ ಸ್ಫೋಟಗೊಂಡು ಈ ದುರಂತ ಸಂಭವಿಸಿತು.

2008: ಟಿಬೆಟ್ ರಾಜಧಾನಿ ಲ್ಹಾಸಾದಲ್ಲಿ ಬೌದ್ಧ ಭಿಕ್ಷುಗಳ ಪ್ರದರ್ಶನದ ಮೇಲೆ ನಡೆದ `ಹಿಂಸಾತ್ಮಕ ದಮನ'ವನ್ನು ಪ್ರತಿಭಟಿಸಿ ರಾಜಧಾನಿಯಲ್ಲಿ ಚೀನೀ ರಾಯಭಾರ ಕಚೇರಿ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಸುಮಾರು 50 ಮಂದಿ ಟಿಬೆಟಿಯನ್ನರನ್ನು ಬಂಧಿಲಾಯಿತು. ಹಿಂದಿನ ದಿನ ಲ್ಹಾಸಾದಲ್ಲಿ ಸಂಭವಿಸಿದ ಚೀನಾ ವಿರೋಧಿ ಪ್ರತಿಭಟನೆ ಕಾಲದಲ್ಲಿ 10 ಮಂದಿ ಮೃತರಾದರು ಎಂದು ಚೀನಾ ತಿಳಿಸಿತು. ಈ ಮಧ್ಯೆ ಟಿಬೆಟನ್ನರು ಮತ್ತು ಅವರ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಚೀನಾ ಸರ್ಕಾರದ ನಡುವಣ ಹಿಂಸಾತ್ಮಕ ಸಂಘರ್ಷದಲ್ಲಿ ಕನಿಷ್ಠ 100 ಟಿಬೆಟನ್ನರು ಸಾವನ್ನಪ್ಪಿ, ನೂರಾರು ಟಿಬೆಟ್ ನಾಗರಿಕರು ತೀವ್ರವಾಗಿ ಗಾಯಗೊಂಡರು ಎಂದು ಅನಧಿಕೃತ ವರದಿಗಳು ಹೇಳಿದವು.

2008: ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ನೂತನ ಕುಲಪತಿಗಳನ್ನಾಗಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನೇಮಕ ಮಾಡಿದರು.

2008: ರಾಜ್ಯ ಲಲಿತಕಲಾ ಅಕಾಡೆಮಿಯ ಧೋರಣೆಯನ್ನು ಖಂಡಿಸಿ ಉಡುಪಿಯ ಹಿರಿಯ ಕಲಾವಿದ ರಮೇಶರಾವ್ ಅವರು ಸುವರ್ಣ ಕರ್ನಾಟಕ ವಿಶೇಷ ಪ್ರಶಸ್ತಿಯನ್ನು ತಿರಸ್ಕರಿಸಲು ನಿರ್ಧರಿಸಿದರು. ಸುವರ್ಣ ಕರ್ನಾಟಕ ಆಚರಣೆ ಸಂದರ್ಭದಲ್ಲಿ ಲಲಿತಕಲಾ ಆಕಾಡೆಮಿಯು ರಾಜ್ಯದ 28 ಕಲಾವಿದರನ್ನು ಗುರುತಿಸಿ ವಿಶೇಷ ಪುರಸ್ಕಾರ ನೀಡಲು ನಿರ್ಧರಿಸಿತ್ತು. ಆದರೆ ಈ ತನಕ ಪುರಸ್ಕಾರ ನೀಡದೇ ಇರುವುದು ಹಾಗೂ ಪ್ರಸ್ತುತ ಒತ್ತಡದ ಹಿನ್ನೆಲೆಯಲ್ಲಿ 55 ಕಲಾವಿದರಿಗೆ ಪ್ರಶಸ್ತಿ ನೀಡಲು ಮುಂದಾಗಿರುವುದನ್ನು ವಿರೋಧಿಸಿ ತಾವು ಈ ನಿರ್ಧಾರಕ್ಕೆ ಬಂದುದಾಗಿ ರಮೇಶ ರಾವ್ ತಿಳಿಸಿದರು.

2007: ಛತ್ತೀಸ್ ಗಢದ ದಂಟೆವಾಡ ಜಿಲ್ಲೆಯ ರಾಣಿಬೊದ್ಲಿಯಲ್ಲಿನ ಪೊಲೀಸ್ ಚೌಕಿ ಮೇಲೆ ಬೆಳಗಿನ ಜಾವ ದಾಳಿ ನಡೆಸಿದ ಮಾವೋವಾದಿ ನಕ್ಸಲೀಯರು ಗ್ರೆನೇಡ್ ಹಾಗೂ ಪೆಟ್ರೋಲ್ ಬಾಂಬ್ ಎಸೆದು, ಮನಸೋ ಇಚ್ಛೆ ಗುಂಡು ಹಾರಿಸಿದ್ದರಿಂದ 55 ಮಂದಿ ಭದ್ರತಾ ಸಿಬ್ಬಂದಿ ಹತರಾದರು. ಸತ್ತವರಲ್ಲಿ ಛತ್ತೀಸ್ ಗಢ ವಿಶೇಷ ಸಶಸ್ತ್ರ ಪಡೆಯ 16 ಮಂದಿ ಹಾಗೂ 38 ಮಂದಿ ವಿಶೇಷ ಪೊಲೀಸ್ ಅಧಿಕಾರಿಗಳೂ ಸೇರಿದ್ದರು. ಗಾಯಾಳುಗಳ ಪೈಕಿ 10 ಮಂದಿ ತೀವ್ರ ಸುಟ್ಟಗಾಯಗಳಿಗೆ ಒಳಗಾದರು.

2007: ರಾಷ್ಟ್ರೀಯ ಜಲ ನೀತಿ ರೂಪಿಸುವವರೆಗೆ ಕಾವೇರಿ ನ್ಯಾಯಮಂಡಳಿ ಐತೀರ್ಪು ಜಾರಿಗೆ ಅಧಿಸೂಚನೆ ಹೊರಡಿಸದಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ಸರ್ವಾನುಮತದ ನಿರ್ಣಯವನ್ನು ಕರ್ನಾಟಕ ವಿಧಾನಸಭೆ ಕೈಗೊಂಡಿತು. ಸುದೀರ್ಘ ಚರ್ಚೆಯ ಬಳಿಕ ಪ್ರತಿಪಕ್ಷದ ನಾಯಕ ಧರ್ಮಸಿಂಗ್ ಮಂಡಿಸಿದ ಈ ನಿರ್ಣಯಕ್ಕೆ ಸದನ ಒಕ್ಕೊರಲ ಅನುಮೋದನೆ ನೀಡಿತು.

2007: ಅಲ್ ಖೈದಾ ಸಂಘಟನೆಯ ಮೂರನೇ ನಂಬರ್ ನಾಯಕನ ಸ್ಥಾನದಲ್ಲಿರುವ ಖಲೀದ್ ಶೇಖ್ ಮೊಹಮ್ಮದ್, 2001ರ ಸೆಪ್ಟೆಂಬರ್ 11ರಂದು ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ನಿನಲ್ಲಿ ನಡೆದ ದಾಳಿಕೃತ್ಯಗಳ ಯೋಜನೆ ರೂಪಿಸಿದ್ದಾಗಿ ಒಪ್ಪಿಕೊಂಡನು. ಪಾಕಿಸ್ಥಾನೀಯನಾದ ಶೇಕ್ ಮೊಹಮ್ಮದ್ ಗ್ವಾಂಟೆನಾಮೋದಲ್ಲಿ ರಹಸ್ಯ ಸೇನಾ ಟ್ರಿಬ್ಯೂನಲ್ ಮುಂದೆ ಈ ತಪ್ಪೊಪ್ಪಿಗೆ ನೀಡಿ, ಈ ಕೃತ್ಯಕ್ಕಾಗಿ ವಿಷಾದ ವ್ಯಕ್ತಪಡಿಸಿದ.

2007: ಮುಂಬೈಯಲ್ಲಿ ನಡೆದ ಮಾಮಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರ `ನಾಯಿ ನೆರಳು' ಚಿತ್ರವೂ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆಯಿತು.

2007: ಬಹುಕೋಟಿ ಖೋಟಾ ಛಾಪಾಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಹೂಡಲಾಗಿದ್ದ ಮೊತ್ತ ಮೊದಲ ಪ್ರಕರಣದ ವಿಚಾರಣೆ ಪರಪ್ಪನ ಅಗ್ರಹಾರದ ವಿಶೇಷ ಸೆರೆಮನೆಯಲ್ಲಿ ಆರಂಭಗೊಂಡಿತು.

2007: ಬೆಂಗಳೂರಿನ ವೈದ್ಯ ಡಾ. ಬಿ. ರಮಣರಾವ್ ಅವರು ದೀರ್ಘಕಾಲದಿಂದ ಉಚಿತವಾಗಿ ಪ್ರತಿವಾರ ವೈದ್ಯಕೀಯ ಶಿಬಿರಗಳನ್ನು ನಡೆಸಿದ್ದಕ್ಕಾಗಿ `ಲಿಮ್ಕಾ ದಾಖಲೆಗಳ ಪುಸ್ತಕ'ಕ್ಕೆ ಸೇರ್ಪಡೆಯಾದರು.

2006: ಹಳೆಯ ಮಲಯಾಳಂ, ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಖ್ಯಾತರಾಗಿದ್ದ ಜಿ. ದೇವರಾಜನ್ (78) ಚೆನ್ನೈಯಲ್ಲಿ ತಮ್ಮ ನಿವಾಸದಲ್ಲಿ ನಿಧನರಾದರು. ಕೆಲವು ಕನ್ನಡ ಮತ್ತು ತಮಿಳು ಚಿತ್ರಗಳೊಂದಿಗೆ ಸುಮಾರು 350 ಮಲಯಾಳಂ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿದ್ದ ಅವರಿಗೆ ಐದು ಬಾರಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

2006: ಮೆಲ್ಬೋರ್ನಿನಲ್ಲಿ ಕಾಮನ್ವೆಲ್ತ್ ಕ್ರೀಡೆಗಳು ಸಂಭ್ರಮೋತ್ಸಾಹದ ಮಧ್ಯೆ ಉದ್ಘಾಟನೆಗೊಂಡಿತು.

2001: ವಿ.ವಿ.ಎಸ್. ಲಕ್ಷ್ಮಣ್ ಅವರು ತಮ್ಮ 281ನೇ ರನ್ ಗಳಿಸಿ ಟೆಸ್ಟ್ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರ ಎನಿಸಿದರು. ಕೋಲ್ಕತ್ತಾದಲ್ಲಿ ಆಸ್ಟ್ರೇಲಿಯಾ ಜೊತೆಗೆ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸುನಿಲ್ ಗಾವಸ್ಕರ್ ಗಳಿಸಿದ್ದ 236 ರನ್ನುಗಳ ದಾಖಲೆಯನ್ನು ಇದು ಮುರಿಯಿತು.

1999: ಢಾಕಾದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು ಒಂದು ಇನ್ನಿಂಗ್ಸ್ ಹಾಗೂ 175 ರನ್ನುಗಳ ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಪಾಕಿಸ್ಥಾನವು ಉದ್ಘಾಟನಾ ಏಷ್ಯನ್ ಟೆಸ್ಟ್ ಚಾಂಪಿಯನ್ ಶಿಪ್ಪನ್ನು ಗೆದ್ದುಕೊಂಡಿತು.

1996: ಡಚ್ ಸರ್ಕಾರವು ಇನ್ನಷ್ಟು ಸಾಲ ಕೊಡಲು ನಿರಾಕರಿಸಿದ ಪರಿಣಾಮವಾಗಿ 77 ವರ್ಷಗಳ ಫಾಕ್ಕರ್ ವಿಮಾನಯಾನ ಕಂಪೆನಿಯು ದಿವಾಳಿ ಎದ್ದಿತು. ದಚ್ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಹೆಚ್ಚು ತರಬೇತಿ ಪಡೆದ 5000ಕ್ಕೂ ಹೆಚ್ಚು ನೌಕರರು ತಮ್ಮ ಕೆಲಸ ಕಳೆದುಕೊಂಡರು. ಫಾಕ್ಕರ್ ಕಂಪೆನಿಯ ವಿವಿಧ ಭಾಗಗಳನ್ನು ಹೊಸದಾಗಿ ನಿರ್ಮಿಸಲಾದ ಕಂಪೆನಿಯೊಂದಕ್ಕೆ ವರ್ಗಾಯಿಸಲಾಯಿತು.

1975: ಕ್ವಾಲಾಲಂಪುರದಲ್ಲಿ ನಡೆದ ವಿಶ್ವಕಪ್ ಹಾಕಿ ಪಂದ್ಯದಲ್ಲಿ ಪಾಕಿಸ್ಥಾನವನ್ನು 2-1 ಗೋಲುಗಳೊಂದಿಗೆ ಪರಾಭವಗೊಳಿಸುವ ಮೂಲಕ ಭಾರತದ ಹಾಕಿ ತಂಡ ತನ್ನ ಅಪರೂಪದ ಸಾಧನೆಗಳಲ್ಲಿ ಒಂದನ್ನು ದಾಖಲು ಮಾಡಿತು.

1965: ಕಲಾವಿದೆ ರಾದಿಕಾ ದಯಾನಂದ ಜನನ.

1964: ನಟಿ ಎಲಿಜಬೆತ್ ಟೇಲರ್ ಮಾಂಟ್ರಿಯಲ್ನಲ್ಲಿ ನಟ ರಿಚರ್ಡ್ ಬರ್ಟನ್ ಅವರನ್ನು ಮದುವೆಯಾದರು. (ಇದು ಆಕೆಯ ಐದನೇ ಮದುವೆ ಮತ್ತು ಆತನ ಎರಡನೇ ಮದುವೆ. ಮುಂದೆ ಎಲಿಜಬೆತ್ ತನ್ನ 8ನೇ ಮದುವೆಯನ್ನೂ ಈತನ ಜೊತೆಗೇ ಮಾಡಿಕೊಂಡರು).

1960: ಕಲಾವಿದ ಗಂಗಪ್ಪ ಗುಡಾರದ ಜನನ.

1944: ಕಲಾವಿದ ಎಂ.ವಿ. ಕೃಷ್ಣಮೂರ್ತಿ ಜನನ.

1941: ಕಲಾವಿದ ಎನ್. ವೆಂಕಟಶ್ಯಾಮಾಚಾರಿ ಜನನ.

1933: ಕಲಾವಿದ ಕೃಷ್ಣಮೂರ್ತಿದಾಸ್ ಜನನ.

1931: ವೀಣಾ ವಾದಕ, ಸಂಗೀತ ಶಾಸ್ತ್ರಜ್ಞ, ಗಾಯಕ ಹಾಗೂ ಅತ್ಯುತ್ತಮ ವಾಗ್ಮಿಯಾಗಿ ಖ್ಯಾತರಾದ ರಾ. ವಿಶ್ವೇಶ್ವರನ್ ಅವರು ಹೆಸರಾಂತ ಸಂಗೀತ ಕುಟುಂಬದ ರಾಮಯ್ಯ- ವರಲಕ್ಷ್ಮಿ ದಂಪತಿಯ ಮಗನಾಗಿ ಈದಿನ ಜನಿಸಿದರು.

1917: ರಷ್ಯದ ತ್ಸಾರ್ 2ನೇ ನಿಕೋಲಸ್ ತನ್ನ ಸಹೋದರ ಮೈಕೆಲ್ ಪರವಾಗಿ ಸಿಂಹಾಸನ ತ್ಯಜಿಸಿದ. ಆದರೆ ಮೈಕೆಲ್ ಸಿಂಹಾಸನ ನಿರಾಕರಿಸಿದ. 1918ರ ಏಪ್ರಿಲಿನಲ್ಲಿ 2ನೇ ನಿಕೋಲಸ್ ಮತ್ತು ಕುಟುಂಬ ಸದಸ್ಯರನ್ನು ಯೆಕೆಟರಿನ್ ಬರ್ಗಿಗೆ ಕರೆದೊಯ್ದು ಅದೇ ವರ್ಷದ ಜುಲೈಯಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು.

1892: ಅಮೆರಿಕನ್ ಸಂಶೋಧಕ ಜೆಸ್ಸೆ ರೆನೊ ಅವರಿಗೆ ಮೊತ್ತ ಮೊದಲ ರೆನೊ ಇನ್ ಕ್ಲೈನ್ಡ್ ಎಲೆವೇಟರ್ ಹೆಸರಿನ ಎಸ್ಕಲೇಟರಿಗೆ ಪೇಟೆಂಟ್ ಲಭಿಸಿತು. ಅದನ್ನು ಕೋನಿ ದ್ವೀಪದ ಓಲ್ಡ್ ಪೈಯರಿನಲ್ಲಿ 1896ರಲ್ಲಿ ಅಳವಡಿಸಲಾಯಿತು.

1877: ಮೆಲ್ಬೋರ್ನಿನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮೊತ್ತ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ ಆಡಿದವು. ಆಸ್ಟ್ರೇಲಿಯಾ 45 ರನ್ನುಗಳ ವಿಜಯ ಸಾಧಿಸಿತು. ಚಾರ್ಲ್ಸ್ ಬೆನ್ನರ್ ಮ್ಯಾನ್ 165 ರನ್ನುಗಳೊಂದಿಗೆ ಮೊತ್ತ ಮೊದಲ ಟೆಸ್ಟ್ ಸೆಂಚುರಿ ಸಿಡಿಸಿದರು.

1854: ಎಮಿಲ್ (ಅಡಾಲ್ಫ್) ವೊನ್ ಬೆಹ್ರಿಂಗ್ (1854-1917) ಹುಟ್ಟಿದ ದಿನ. ಬ್ಯಾಕ್ಟೀರಿಯಾ ತಜ್ಞನಾದ ಈತ ವೈದ್ಯಕೀಯಕ್ಕಾಗಿ ನೀಡಲಾಗುವ ಮೊತ್ತ ಮೊದಲ ನೊಬೆಲ್ ಪ್ರಶಸ್ತಿ ವಿಜೇತ ವ್ಯಕ್ತಿ.

1848: ಜೋಸೆಫ್ ಜೆಂಕಿನ್ಸ್ ರಾಬರ್ಟ್ಸ್ (1848-1856) ಹುಟ್ಟಿದ ದಿನ. ಈತ ಲೈಬೀರಿಯಾದ ಮೊದಲ ಅಧ್ಯಕ್ಷ.

1767: ಆಂಡ್ರ್ಯೂ `ಓಲ್ಡ್ ಹಿಕೊರಿ' ಜಾಕ್ಸನ್ (1767-1845) ಹುಟ್ಟಿದ. ಅಮೆರಿಕಾದ ಸೇನಾ ನಾಯಕನಾದ ಈತ 1829-37ರ ಅವದಿಯಲ್ಲಿ ಅಮೆರಿಕಾದ ಅಧ್ಯಕ್ಷನೂ ಆಗಿ ಸೇವೆ ಸಲ್ಲಿಸಿದ. ಮತದಾರರ ಸಾಮೂಹಿಕ ಮನವಿ ಮೂಲಕ ಅಧಿಕಾರಕ್ಕೆ ಏರಿದ ಪ್ರಥಮ ವ್ಯಕ್ತಿ ಈತ. ಈತನ ರಾಜಕೀಯ ಚಳವಳಿ `ಜಾಕ್ಸೋನಿಯನ್ ಡೆಮಾಕ್ರಸಿ' ಎಂದೇ ಹೆಸರಾಗಿದೆ.

ಕ್ರಿ.ಪೂ.44: ಬ್ರೂಟಸ್ ಮತ್ತು ಕ್ಯಾಸಿಯಸ್ ಅವರೂ ಇದ್ದ ಒಳಸಂಚುಗಾರರ ಕೂಟವೊಂದು ಜ್ಯೂಲಿಯಸ್ ಸೀಸರ್ನನ್ನು ಕೊಲೆಗೈದಿತು.

Sunday, March 14, 2010

ಇಂದಿನ ಇತಿಹಾಸ History Today ಮಾರ್ಚ್ 14

ಇಂದಿನ ಇತಿಹಾಸ

ಮಾರ್ಚ್ 14

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನವದೆಹಲಿಯಲ್ಲಿ ಅಧಿಕೃತವಾಗಿ ಆ ಪಕ್ಷ ಸೇರಿದರು. ಇದರಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷಕ್ಕೆ ಅನಾಯಾಸವಾಗಿ ಒಬ್ಬ ಅಭ್ಯರ್ಥಿ ಸಿಕ್ಕಿದಂತಾಯಿತು.

2009: ರಾಜ್ಯ ಬಿಜೆಪಿಯಲ್ಲಿ ಎದ್ದಿದ್ದ ಬಿರುಗಾಳಿ ಬಂದ ವೇಗದಲ್ಲೇ ತಣ್ಣಗಾಗಿದೆಯೇನೋ ಎಂಬಂತೆ ಬಿಜೆಪಿಯ ಎಲ್ಲ ಮುಖಂಡರೂ ಬೆಂಗಳೂರಿನಲ್ಲಿ ಒಂದೇ ವೇದಿಕೆಯ ಮೇಲೆ ನಿಂತು ಮತದಾರರತ್ತ ಕೈಬೀಸುವುದರೊಂದಿಗೆ ಬಿಜೆಪಿ, ಲೋಕಸಭಾ ಚುನಾವಣೆಯ ಮತಯಾಚನೆಗೆ ಚಾಲನೆ ನೀಡಿತು. ಎಲ್.ಕೆ.ಅಡ್ವಾಣಿ ಅವರ ಸಮರ್ಥ ನಾಯಕತ್ವ, ಸುರಕ್ಷತೆ ಮತ್ತು ಸ್ಪಷ್ಟ ನೀತಿಯನ್ನು ಒಳಗೊಂಡ ನಿರ್ಣಾಯಕ ಸರ್ಕಾರ ನೀಡುವುದಾಗಿ ಬಿಜೆಪಿ ಭರವಸೆ ನೀಡಿತು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲು ಸಹ ನಿರ್ಧರಿಸಿತು.

2009: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನವದೆಹಲಿಯಲ್ಲಿ ಅಧಿಕೃತವಾಗಿ ಆ ಪಕ್ಷ ಸೇರಿದರು. ಇದರಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷಕ್ಕೆ ಅನಾಯಾಸವಾಗಿ ಒಬ್ಬ ಅಭ್ಯರ್ಥಿ ಸಿಕ್ಕಿದಂತಾಯಿತು.. 2004ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಮುನ್ನ ಬಂಗಾರಪ್ಪ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದರು. ಆದರೆ ಒಂದೇ ವರ್ಷದ ಅವಧಿಯಲ್ಲಿ ಆ ಪಕ್ಷವನ್ನೂ ತೊರೆದು ಸಮಾಜವಾದಿ ಪಕ್ಷ ಸೇರಿದ್ದರು.

2009: ಈಶಾನ್ಯ ಸಿರಿಯಾದ ವಸಾಹತು ಪ್ರದೇಶವೊಂದರಲ್ಲಿ ಸುಮಾರು 9000 ವರ್ಷಗಳಷ್ಟು ಪುರಾತನವಾದದ್ದು ಎಂದು ನಂಬಲಾದ ಬಾವಿಯೊಂದರ ಅವಶೇಷಗಳನ್ನು ಪುರಾತತ್ವ ಸಂಶೋಧಕರು ಪತ್ತೆ ಹಚ್ಚಿದರು. ಈ ಬಾವಿಯನ್ನು ಆ ಕಾಲದಲ್ಲಿ ನೀರು ಶುದ್ಧಿಕರಣಕ್ಕಾಗಿ ಬಳಸುತ್ತಿದ್ದಿರಬಹುದು ಎಂದು ನಂಬಲಾಯಿತು. ಬಹುಶ: ನೀರು ಶುದ್ಧಿಕರಣದ ಉದ್ದೇಶಕ್ಕಾಗಿಯೇ ಬಳಸುತ್ತಿದ್ದ ಅತ್ಯಂತ ಪುರಾತನ ಬಾವಿ ಇದು ಎಂದು ಟೋಕಿಯೋ ವಿಶ್ವ ವಿದ್ಯಾಲಯದ ವಸ್ತುಸಂಗ್ರಹಾಲಯದ ಪ್ರೊಫೆಸರ್ ಯೊಶಿಹಿರೊ ನಿಶಿಯಾಕಿ ಹೇಳಿದರು. ಜನರಲ್ಲಿ ನೀರು ಶುದ್ಧೀಕರಣದ ವಿಚಾರಗಳು ಹೇಗೆ ಬೆಳೆದು ಬಂದವು ಎಂಬುದನ್ನು ಈ ಬಾವಿ ತೋರಿಸುತ್ತದೆ ಎಂದು ಅವರು ನುಡಿದರು. ಇಸ್ರೇಲಿನಲ್ಲಿ ಪತ್ತೆಯಾಗಿದ್ದ 6000 ವರ್ಷಗಳಷ್ಟು ಪುರಾತನವಾದ ಬಾವಿಯೇ ನೀರು ಶುದ್ಧಿಕರಣ ಸಲುವಾಗಿ ನಿರ್ಮಿಸಲಾಗಿದ್ದ ಅತ್ಯಂತ ಪುರಾತನ ಬಾವಿ ಎಂಬುದಾಗಿ ನಂಬಲಾಗಿತ್ತು ಎಂದು ಪುರಾತತ್ವ ಸಂಶೋಧಕರ ತಂಡ ಹೇಳಿತು. ಕಳೆದ ಆಗಸ್ಟ್ ತಿಂಗಳಲ್ಲಿ ಪತ್ತೆಯಾದ ಸಿರಿಯಾದ ಈ ಪುರಾತನ ಬಾವಿ ಸುಮಾರು 2.5 ಮೀಟರ್ ಸುತ್ತಳತೆ ಹೊಂದಿದ್ದು, ಅಂದಾಜು 4 ಮೀಟರ್ ಆಳವಿದೆ. ಜನಸಂಖ್ಯೆ ಹೆಚ್ಚಿದಾಗ ಕಲುಷಿತ ನೀರಿನ ಬಳಕೆಯಿಂದ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂಬ ಭೀತಿಯಿಂದ ಈ ವಸತಿ ಪ್ರದೇಶದ ಜನ ಶುದ್ಧ ನೀರು ಪಡೆಯ ಬಯಸಿದ್ದಿರಬಹುದು ಎಂದು ನಿಶಿಯಾಕಿ ನುಡಿದರು. ಯೂಪ್ರೆಟಿಸ್ ನದಿಯ ಉಪನದಿಯೊಂದು ಈ ಬಾವಿಯಿಂದ ಸುಮಾರು 100 ಮೀಟರ್ ದೂರದಲ್ಲಿ ಹರಿಯುತ್ತದೆ. ಇದರರ್ಥ ಇಲ್ಲಿನ ನಿವಾಸಿಗಳು ನೀರು ಪಡೆಯುವ ಉದ್ದೇಶವನ್ನಷ್ಟೇ ಹೊಂದಿರಲಿಲ್ಲ, ಬದಲಾಗಿ ಶುದ್ಧ ನೀರು ಪಡೆಯುವ ಉದ್ದೇಶ ಹೊಂದಿದ್ದರು ಎಂಬುದನ್ನು ಈ ಬಾವಿ ತೋರಿಸುತ್ತದೆ ಎಂಬುದು ಪುರಾತತ್ವ ತಜ್ಞರ ತಂಡದ ಅಭಿಪ್ರಾಯ.

2009: ಬಿಂಬಗಳು ಅಥವಾ ವಿಡಿಯೋಗಳನ್ನು ಹಿಡಿದು ಇರಿಸಿಕೊಳ್ಳಬಲ್ಲಷ್ಟು ಸಾಮರ್ಥ್ಯದ ಹೊಸ 'ಬಾರ್ ಕೋಡ್'ಗಳನ್ನು ತಾವು ಅಭಿವೃದ್ಧಿ ಪಡಿಸಿರುವುದಾಗಿ ವಾಷಿಂಗ್ಟನ್ ವಿಜ್ಞಾನಿಗಳು ಪ್ರತಿಪಾದಿಸಿದರು. ಈ ಹೊಸ ಬಾರ್ ಕೋಡ್‌ಗಳಲ್ಲಿನ ಬಿಂಬ ಅಥವಾ ವಿಡಿಯೋಗಳನ್ನು ನಂತರ ಕ್ಯಾಮರಾ ಫೋನ್‌ಗಳ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬಹುಮಾಧ್ಯಮ ಮಾಹಿತಿಯನ್ನು ಬಾರ್ ಕೋಡ್‌ಗಳಲ್ಲಿ ಶೇಖರಿಸಿ ಇಡಬಹುದಾದಂತಹ ಮಾರ್ಗವನ್ನು ತಾವು ಪರಿಶೀಲಿಸುತ್ತಿರುವುದಾಗಿ ಎಡಿತ್ ಕೊವಾನ ವಿಶ್ವ ವಿದ್ಯಾಲಯದ ವಿಜ್ಞಾನಿಗಳ ತಂಡವೊಂದು ಹೇಳಿತು. ಮೊಬೈಲ್ ಫೋನ್ ಕ್ಯಾಮರಾದ ಮೂಲಕ ಭಾವಚಿತ್ರ ತೆಗೆಯುವಂತೆ ಮ್ಯಾಗಜಿನ್‌ಗಳಂತಹ ಮಾಧ್ಯಮಗಳಿಂದ ರಿಂಗ್ ಟೋನ್‌ನ್ನು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡುವಂತಹ ಮಾದರಿಯ ಸಾಫ್ಟ್‌ವೇರ್‌ನ್ನು ಒಳಗೊಂಡ ಯಾವುದಾದರೂ ವಿಧಾನದ ಮೂಲಕ ಬಹುಮಾಧ್ಯಮ ಮಾಹಿತಿಯನ್ನು ಬಾರ್ ಕೋಡ್‌ಗಳಲ್ಲಿ ಶೇಖರಿಸಿ ಇಡುವ ಬಗ್ಗೆ ತಂಡ ಪರಿಶೀಲನೆ ನಡೆಸಿದೆ ಎಂದು ವಿಜ್ಞಾನಿಗಳು ಹೇಳಿದರು. ಈ ಹೊಸ ಬಾರ್ ಕೋಡ್‌ಗೆ 'ಮೊಬೈಲ್ ಮಲ್ಟಿ ಕಲರ್ ಕಂಪೋಸಿಟ್ (ಎಂಎಂಸಿಸಿ) 2ಡಿ - ಬಾರ್‌ಕೋಡ್' ಎಂದು ವಿಜ್ಞಾನಿಗಳು ಹೆಸರಿಟ್ಟರು. 'ಎಂಎಂಸಿಸಿಯು ಎರಡು ಆಯಾಮದ ವರ್ಣ ಬಾರ್‌ಕೋಡ್. ಇದನ್ನು ಮುದ್ರಣ ಮಾಧ್ಯಮದಲ್ಲಿ ಮುದ್ರಿಸಬಹುದಾಗಿದ್ದು ಮಾಹಿತಿ ಶೇಖರಣೆಯ ಅತ್ಯುನ್ನತ ಸಾಮರ್ಥ್ಯ ಹೊಂದಿರುತ್ತದೆ ಮತ್ತು ಮೊಬೈಲ್ ಫೋನ್‌ಗೆ ತತ್ ಕ್ಷಣ ಅನ್ವಯಿಸುವಂತಿರುತ್ತದೆ' ಎಂದು ಮುಂಚೂಣಿಯ ವಿಜ್ಞಾನಿ ಡಾ. ಅಲ್ಫ್ರೆಡ್ ಟಾನ್ ನುಡಿದರು. ಎಂಎಂಸಿಸಿ ಬಳಸುವ ಮೂಲಕ ಬಳಕೆದಾರನು ಡಿಜಿಟಲ್ ಮಾಹಿತಿಯನ್ನು ತನ್ನ ಕ್ಯಾಮರಾ ಮೊಬೈಲ್ ಫೋನ್ ಮೂಲಕ ಬಾರ ಕೋಡ್ ಬಿಂಬವನ್ನು ಸೆರೆ ಹಿಡಿದು ಮೊಬೈಲ್ ಮೂಲಕ ನೇರವಾಗಿ ಅದರೊಳಗಿರುವ ವಿಡಿಯೋವನ್ನು ನೋಡಬಹುದು ಎಂದು ಅವರು ಹೇಳಿದರು.

2009: ಸರ್ಕಾರದ ಮಾಧ್ಯಮ ನೀತಿ ಕುರಿತಂತೆ ಹಿರಿಯ ನಾಯಕರೊಂದಿಗೆ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ ಪಾಕಿಸ್ಥಾನದ ವಾರ್ತಾ ಸಚಿವೆ ಶೆರ್ರಿ ರಹಮಾನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದಾರೆ ಎಂದು ಜಿಯೋ ಟಿವಿ ವರದಿ ಮಾಡಿತು.

2008: ಕರ್ನಾಟಕ ಹೈಕೋರ್ಟಿನಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪು ನೀಡುವ ಮೂಲಕ ನ್ಯಾಯಮೂರ್ತಿ ಅರಳಿ ನಾಗರಾಜ್ ಚಾರಿತ್ರಿಕ ದಾಖಲೆ ನಿರ್ಮಿಸಿದರು. ಸುವರ್ಣ ವರ್ಷಾಚರಣೆ ಸಂತಸದ ಮಧ್ಯೆ ಹೈಕೋರ್ಟ್ ಈ ಐತಿಹಾಸಿಕ ದಾಖಲೆ ನಿರ್ಮಿಸಿ ಈ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿ ಮಾರ್ಪಡಿಸಿತು. ಭೂ ನ್ಯಾಯಮಂಡಳಿಯ ವಿವಾದವೊಂದಕ್ಕೆ ಸಂಬಂಧಿಸಿದಂತೆ ಸುಮಾರು ಎಂಟು ಪುಟಗಳ ತೀರ್ಪನ್ನು ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಕನ್ನಡದಲ್ಲಿಯೇ ನೀಡಿ ಕೋರ್ಟ್ ಆವರಣದಲ್ಲಿ ನೆರೆದಿದ್ದ ವಕೀಲ ಸಮೂಹವನ್ನು ನಿಬ್ಬೆರಗಾಗಿಸಿದರು. ಬಳ್ಳಾರಿ ಜಿಲ್ಲೆ ಸಿರಗುಪ್ಪದ ಎಲ್. ಗೋವಿಂದರಾಜು ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು. `ಉಳುವವನೆ ಭೂಮಿಯ ಒಡೆಯ' ಎಂಬ ಸರ್ಕಾರದ ಆದೇಶದಂತೆ ಸಿರಗುಪ್ಪದಲ್ಲಿರುವ 3.25 ಎಕರೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಸುವಂತೆ ಅವರು ಮಾಡಿಕೊಂಡ ಕೋರಿಕೆಯನ್ನು 1986ರಲ್ಲಿ ಭೂ ನ್ಯಾಯಮಂಡಳಿ ತಿರಸ್ಕರಿಸಿತ್ತು. ಈ ಆದೇಶವನ್ನು ಅವರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ವಿಚಾರಣೆಯನ್ನು ಭೂ ನ್ಯಾಯಮಂಡಳಿಗೆ ಹಿಂದಿರುಗಿಸಿದ ನ್ಯಾಯಮೂರ್ತಿಗಳು ಈ ಕುರಿತು ಹೊಸದಾಗಿ ಪರಿಶೀಲಿಸುವಂತೆ ಸೂಚಿಸಿ ಅರ್ಜಿ ವಿಲೇವಾರಿ ಮಾಡಿದರು. ಕೋಲಾರ ಮೂಲದ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಈ ಹಿಂದೆ ಬೆಳಗಾವಿ, ಮಂಗಳೂರು, ವಿಜಾಪುರ ಹಾಗೂ ಬೆಂಗಳೂರಿನಲ್ಲಿ ಸೆಷನ್ಸ್ ಕೋರ್ಟುಗಳಲ್ಲಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಅನೇಕ ಆದೇಶಗಳನ್ನು ಕನ್ನಡದಲ್ಲಿಯೇ ನೀಡಿದ್ದರು. ಕಾನೂನಿಗೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಕೂಡಾ ಅವರು ಕನ್ನಡದಲ್ಲಿ ಬರೆದಿದ್ದಾರೆ. 2007ರ ಜುಲೈ 7ರಂದು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲೂ ಇವರು ಕನ್ನಡದಲ್ಲಿಯೇ ಭಾಷಣ ಮಾಡಿ ಕನ್ನಡ ಪ್ರೇಮ ಮೆರೆದಿದ್ದರು.

2008: ಒಲ್ಲದ ಮನಸ್ಸಿನಿಂದಲೇ ರಾಜಕಾರಣಕ್ಕೆ ಬಂದು, ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಹತ್ತು ವರ್ಷ ಕಾಲ ಯಶಸ್ವಿಯಾಗಿ ನಿಭಾಯಿಸಿ ಸಕ್ರಿಯ ರಾಜಕಾರಣದಲ್ಲಿ ದಶಮಾನೋತ್ಸವ ಆಚರಿಸಿದ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಮನಮೋಹನ ಸಿಂಗ್ ಸೇರಿದಂತೆ ಕಾಂಗ್ರೆಸ್ಸಿನ ಹಲವು ಗಣ್ಯರು ಅಭಿನಂದಿಸಿದರು. ಪ್ರಧಾನಿ ಮನಮೋಹನ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಸಭೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಪ್ರಶಂಸಿಸುವ ನಿರ್ಣಯವನ್ನು ಸ್ವೀಕರಿಸಲಾಯಿತು. `ಕಾಂಗೆಸ್ಸಿನ 122 ವರ್ಷಗಳ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಪಕ್ಷಕ್ಕೆ ಬೆನ್ನೆಲುಬಿನಂತೆ ನಿಂತ ನಿಮಗೆ ನಾವು ಕೃತಜ್ಞರು' ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು.

2008: ಚಲನಚಿತ್ರ ರಂಗಕ್ಕೆ ನೀಡಿದ ಶ್ರೇಷ್ಠ ಕೊಡುಗೆಗಾಗಿ ಹಿರಿಯ ನಟ ಧರ್ಮೇಂದ್ರ ಅವರಿಗೆ ಮುಂಬೈಯಲ್ಲಿ ಮುಕ್ತಾಯಗೊಂಡ ಮಾಮಿ (ಮುಂಬೈ ಅಕಾಡೆಮಿ ಆಫ್ ಮೂವಿಂಗ್ ಇಮೇಜ್) ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವರ್ಣರಂಜಿತ ಕಾರ್ಯಕ್ರಮದಲ್ಲಿ 35 ವರ್ಷಗಳಿಂದ ಬೆಳ್ಳಿಪರದೆಯ ಮೇಲೆ ಜನರನ್ನು ರಂಜಿಸಿದ ರಿಷಿ ಕಪೂರ್ ಅವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಲಾಯಿತು. ಸ್ಪೇನಿನ ಚಲನಚಿತ್ರ ನಿರ್ದೇಶಕ ಕಾರ್ಲೋಸ್ ಸಾರಾ ಅವರಿಗೂ ಜೀವಮಾನದ ಸಾಧನೆಗಾಗಿ ಮೊದಲ ಜಾಗತಿಕ ಪ್ರಶಸ್ತಿ, ಸಾಹಿತಿ ಗುಲ್ಜಾರ್ ಅವರಿಗೆ ಭಾರತ ಸಿನೆಮಾ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ವಿಶೇಷ ಪ್ರಶಸ್ತಿ ನೀಡಲಾಯಿತು. ಚಿತ್ರರಂಗದ ದಿಗ್ಗಜರಾದ ದೇವ್ ಆನಂದ್, ಯಶ್ ಚೋಪ್ರಾ, ಐಶ್ವರ್ಯ ರೈ ಪ್ರಶಸ್ತಿ ಪ್ರದಾನ ಮಾಡಿದರು. ಭಾರತೀಯ ಸಿನೆಮಾ ವಿಭಾಗದಲ್ಲಿ ತಾರೆ ಜಮೀನ್ ಪರ್ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ದರ್ಶೀಲ್ ಸಫಾರಿ ಉತ್ತಮ ನಟ ಮತ್ತು `ಅಂತರ್ ದ್ವಂದ್ವ' ಚಿತ್ರದಲ್ಲಿನ ಅಭಿನಯಕ್ಕಾಗಿ ಸ್ವಾತಿ ಸೇನ್ ಉತ್ತಮ ನಟಿ ಪ್ರಶಸ್ತಿ ಪಡೆದರು. ವಿಮರ್ಶಕರ ಪ್ರಶಸ್ತಿಯನ್ನು ಮರಾಠಿ ಚಿತ್ರ `ಟಿಂಗ್ಯಾ' ಚಿತ್ರವು ಪಡೆದುಕೊಂಡಿತು. ಮಾರ್ಚ್ 6ರಿಂದ 13ರವರೆಗೆ ನಡೆದ ಚಲನಚಿತ್ರೋತ್ಸವದಲ್ಲಿ 45 ರಾಷ್ಟ್ರಗಳ 140 ಸಿನಿಮಾಗಳನ್ನು ಪ್ರದರ್ಶಿಸಲಾಯಿತು ಎಂದು `ಮಾಮಿ' ಚಲನಚಿತ್ರೋತ್ಸವದ ಅಧ್ಯಕ್ಷ ಶ್ಯಾಮ್ ಬೆನೆಗಲ್ ಹೇಳಿದರು.

2008: ಇಂಗ್ಲೆಂಡಿನಲ್ಲಿ ಇತ್ತೀಚೆಗೆ ವಲಸೆ ನಿಯಮಗಳಿಗೆ ತರಲಾದ ಬದಲಾವಣೆಗಳನ್ನು ಪ್ರತಿಭಟಿಸಿ ಲಂಡನ್ನಿನ ಭಾರತೀಯ ರೆಸ್ಟೋರೆಂಟುಗಳ ಮಾಲೀಕರು ಎಡಿನ್ ಬರೋದ ಸ್ಕಾಟಿಷ್ ಪಾರ್ಲಿಮೆಂಟ್ ಹೊರಭಾಗದಲ್ಲಿ ಪ್ರದರ್ಶನ ನಡೆಸಿದರು. ಇಂಗ್ಲೆಂಡಿನಲ್ಲಿ ವಲಸೆ ನಿಯಮಾವಳಿಗಳಿಗೆ ಮಾಡಲಾಗಿರುವ ಬದಲಾವಣೆಗಳು ಇಲ್ಲಿನ ಭಾರತೀಯ ಆಹಾರ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಅವರು ಆಪಾದಿಸಿದರು. ಹೊಸ ನಿಯಮಾವಳಿಗಳು ಭಾರತೀಯ ರೆಸ್ಟೋರೆಂಟುಗಳು ಭಾರತ ಉಪಖಂಡದಿಂದ ಚೆಫ್ಗಳ ನೇಮಕ ಮಾಡುವುದನ್ನು ನಿರ್ಬಂಧಿಸುತ್ತವೆ. ಇದು ಇಂಗ್ಲೆಂಡಿನಲ್ಲಿ ಇರುವ ಸಹಸ್ರಾರು ಭಾರತೀಯ ರೆಸ್ಟೋರೆಂಟುಗಳ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆ. ಚೆಫ್ಗಳ ಅಭಾವ ಕಾರಣ ಹಲವಾರು ರೆಸ್ಟೋರೆಂಟುಗಳು ಈಗಾಗಲೇ ಬಾಗಿಲು ಎಳೆದುಕೊಂಡಿವೆ.

2008: ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಏಷ್ಯಾದ ಅತಿ ಎತ್ತರದ ಮಹಿಳೆ ಎಂಬುದಾಗಿ ಹೆಸರು ದಾಖಲಿಸಿರುವ ಮೀರತ್ತಿನ ಮಹಿಳೆಯೊಬ್ಬರ ಮಗ ಒಂಬತ್ತು ತಿಂಗಳಿಗೇ ಮೂರಡಿ ಎತ್ತರ ಎಳೆದು ಅಮ್ಮನ ದಾರಿಯಲ್ಲೇ `ಲಿಮ್ಕಾ' ದಾಖಲೆ ಸೇರಲು ಹೊರಟ. ಒಂಬತ್ತು ತಿಂಗಳ ಮಗು ಮೂರು ಅಡಿ ಒಂದು ಅಂಗುಲ ಎತ್ತರ ಹಾಗೂ 22.5 ಕಿ.ಗ್ರಾಂ. ತೂಕ ಹೊಂದಿರುವುದು ಸಾಮಾನ್ಯವಲ್ಲ ಎಂಬುದು ಮೀರತ್ತಿನ ಜಿಂದಾಲ್ ಆಸ್ಪತ್ರೆಯ ವೈದ್ಯ ಮಧು ಹೇಳಿಕೆ. ಮಕ್ಕಳು ತಮ್ಮ ಪಾಲಕರಂತೆಯೇ ಎತ್ತರ ಬೆಳೆಯಬೇಕು ಎಂದೇನೂ ಇಲ್ಲ. ಆದರೆ ಈ ಬಾಲಕ (ಕರಣ್) ತನ್ನ ತಂದೆ ತಾಯಿಯರನ್ನು ಈ ವಿಚಾರದಲ್ಲಿ ಅನುಸರಿಸುವ ಎಲ್ಲ ಲಕ್ಷಣಗಳನ್ನೂ ತೋರುತ್ತಿದ್ದಾನೆ ಎಂಬುದು ಅವರ ಅಭಿಪ್ರಾಯ. ಸ್ವೆಲ್ತಾನ ಸಿಂಗ್ ಮತ್ತು ಸಂಜಯ ಸಿಂಗ್ ಪುತ್ರನಾಗಿ ಕರಣ್ 2007ರ ಜೂನ್ ತಿಂಗಳಲ್ಲಿ ಹುಟ್ಟಿದ್ದಾನೆ. ಹುಟ್ಟಿದಾಗ ಬಾಲಕನ ಎತ್ತರ 63 ಸೆಂಟಿಮೀಟರ್ ಮತ್ತು ತೂಕ 5.5 ಕಿ.ಗ್ರಾಂ. ಇತ್ತು. ಏಳು ಅಡಿ ಆರು ಅಂಗುಲ ಎತ್ತರ ಇರುವ ಸ್ವೆಲ್ತಾನ ಸಿಂಗ್ ಏಷ್ಯಾದ ಅತ್ಯಂತ ಎತ್ತರದ ಮಹಿಳೆ ಎಂಬುದಾಗಿ `ಲಿಮ್ಕಾ' ದಾಖಲೆಗಳ ಪುಸ್ತಕದಲ್ಲಿ ದಾಖಲಾಗಿದ್ದಾರೆ. ಪ್ರಕೃತಿ ಚಿಕಿತ್ಸಕ ಸಂಜಯ್ ಸಿಂಗ್ ಕೂಡಾ ಆರು ಅಡಿ ಆರು ಅಂಗುಲ ಎತ್ತರವಿದ್ದಾರೆ. ಸಿಂಗ್ ದಂಪತಿಗಳು ಮೀರತ್ತಿನ ಡಿಫೆನ್ಸ್ ಕಾಲೋನಿಯ ನಿವಾಸಿಗಳು.

2008: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಚುಂಬಿಸಿದ ಪ್ರಕರಣದಲ್ಲಿ ಬಂಧನ ವಾರೆಂಟ್ ಪಡೆದ ಹಾಲಿವುಡ್ ನಟ ರಿಚರ್ಡ್ ಗೇರ್ ವಿರುದ್ಧ ಇದ್ದ ಕ್ರಿಮಿನಲ್ ಅಪರಾಧ ಪ್ರಕರಣವನ್ನು ಸುಪ್ರೀಂಕೋರ್ಟ್ ಅಕ್ಷರಶಃ ಕೈಬಿಟ್ಟಿತು.
ರಿಚರ್ಡ್ ಗೇರ್ ಯಾವುದೇ ಭಯವಿಲ್ಲದೇ ಭಾರತಕ್ಕೆ ಬರಬಹುದು, ಇಲ್ಲಿಂದ ವಾಪಸಾಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠ ಗೇರ್ ಅವರಿಗೆ ಅನುಮತಿ ನೀಡಿತು. ಅಲ್ಲದೇ ಗೇರ್ ವಿರುದ್ಧ ಜೈಪುರ ಹೈಕೋರ್ಟ್ ಹೊರಡಿಸಿದ ಬಂಧನ ವಾರಂಟನ್ನು ಸುಪ್ರೀಂಕೋರ್ಟ್ ಪೀಠ ರದ್ದುಪಡಿಸಿತು. ಗೇರ್ ವಿರುದ್ಧ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯ ಪರ ವಾದಿಸಿದ ವಕೀಲರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪೀಠ `ಇಂಥ ಕೃತ್ಯಗಳು ಅಗ್ಗದ ಜನಪ್ರಿಯತೆ ಪಡೆಯಲು ವಿನಃ ಬೇರೇನೂ ಸದುದ್ದೇಶಗಳು ಇರುವುದಿಲ್ಲ. ನೀವು ದೇಶಕ್ಕೆ ಕೆಟ್ಟ ಹೆಸರು ತರುತ್ತಿದ್ದೀರಿ. ಯಾರನ್ನಾದರೂ ತಬ್ಬಿಕೊಂಡರೂ ನೀವು ದೂರು ನೀಡುವಿರಾ?' ಎಂದು ಪ್ರಶ್ನಿಸಿತು.

2008: ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಸಹ-ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೊ ಅವರ ಪತಿ ಅಸೀಫ್ ಅಲಿ ಜರ್ದಾರಿ ಅವರು ತಮ್ಮ ವಿರುದ್ಧ ಹೊರಿಸಲಾಗಿದ್ದ ಭ್ರಷ್ಟಾಚಾರ ಆರೋಪಗಳ ಕೊನೆಯ ಪ್ರಕರಣದಿಂದ ಮುಕ್ತಿ ಪಡೆದರು. ಅವರನ್ನು `ನಿರ್ದೋಷಿ' ಎಂಬುದಾಗಿ ಪ್ರಕರಣದ ವಿಚಾರಣೆ ನಡೆಸಿದ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯ ತೀರ್ಪು ನೀಡಿತು.

2008: ಕಮಲಾ ಗೋಯೆಂಕಾ ಪ್ರತಿಷ್ಠಾನ ನೀಡುವ ಹಿಂದಿ- ಕನ್ನಡ ಶ್ರೇಷ್ಠ ಅನುವಾದ ಪ್ರಶಸ್ತಿಗಾಗಿ ಡಾ.
ತಿಪ್ಪೇಸ್ವಾಮಿ ಮತ್ತು ಡಾ. ವಿ.ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಯಿತು. ಅಮೃತಲಾಲ್ ನಗರ್ ಅವರ ಹಿಂದಿ ಉಪನ್ಯಾಸದ ಕನ್ನಡ ಅನುವಾದ ಮಾಡಿರುವ ಡಾ.ತಿಪ್ಪೇಸ್ವಾಮಿ ಅವರು `ಪಿತಾಶ್ರೀ ಗೋಪಿರಾಂ ಗೋಯೆಂಕಾ ಹಿಂದಿ- ಕನ್ನಡ ಅನುವಾದ ಪುರಸ್ಕಾರ'ಕ್ಕೆ ಆಯ್ಕೆಯಾದರು. ಸಾಹಿತಿ ಡಾ.ವಿ.ವೆಂಕಟೇಶ್ ಅವರು `ಗೋಯೆಂಕಾ ಹಿಂದಿ ಸಾಹಿತ್ಯ ಸರಸ್ವತ್ ಸನ್ಮಾನ' ಪುರಸ್ಕಾರಕ್ಕೆ ಆಯ್ಕೆಯಾದರು ಎಂದು ಕಮಲಾ ಗೋಯೆಂಕಾ ಪ್ರತಿಷ್ಠಾನದ ಧರ್ಮದರ್ಶಿ ಶ್ಯಾಮ್ ಸುಂದರ್ ಗೋಯೆಂಕಾ ತಿಳಿಸಿದರು.

2007: ಸಾಹಿತ್ಯ ಸೇವೆಗಾಗಿ ಕರ್ನಾಟಕ ಸರ್ಕಾರವು ನೀಡುವ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಈ ಸಾಲಿಗಾಗಿ ಹಿರಿಯ ವಿಮರ್ಶಕ ಜಿ.ಎಸ್. ಆಮೂರ, ಲೇಖಕಿಯರಿಗೆ ನೀಡಲಾಗುವ `ದಾನ ಚಿಂತಾಮಣಿ ಅತ್ತಿಮಬ್ಬೆ' ಪ್ರಶಸ್ತಿಗೆ ಹಿರಿಯ ಬರಹಗಾರ್ತಿ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಆಯ್ಕೆಯಾದರು.

2007: ಇಂಡೋನೇಷ್ಯಾದ ಸಲೀಂ ಸಮೂಹದ ವಿಶೇಷ ಆರ್ಥಿಕ ವಲಯಕ್ಕೆ ಭೂಮಿ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಪೂರ್ವ ಮಿಡ್ನಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ 18 ಜನ ಮೃತರಾಗಿ, 75ಕ್ಕೂ ಹೆಚ್ಚು ಜನ ಗಾಯಗೊಂಡರು.

2007: ನಾಸಾದ ಕ್ಯಾಸಿನಿ ಬಾಹ್ಯಾಕಾಶ ನೌಕೆಯು ಶನಿ ಗ್ರಹದ ಒಂದು ದೊಡ್ಡ ಚಂದ್ರ `ಟೈಟನ್' ನಲ್ಲಿ ಬೃಹತ್ ಸಮುದ್ರಗಳ ಕುರುಹನ್ನು ಪತ್ತೆ ಹಚ್ಚಿತು. ಈ ಸಮುದ್ರಗಳ ಪೈಕಿ ಒಂದು ಉತ್ತರ ಅಮೆರಿಕದ `ಗ್ರೇಟ್ ಲೇಕ್ಸ್'ಗಿಂತಲೂ ದೊಡ್ಡದಾಗಿದೆ. ಈ ಸಮುದ್ರಗಳಲ್ಲಿ ದ್ರವರೂಪದ ಮಿಥೇನ್ ಅಥವಾ ಇಥೇನ್ ಇರುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಪ್ರಕಟಿಸಿದರು.

2007: ಹೊಸ ನಗರ ಸಮೀಪದ ಚಕ್ರಾನಗರದಲ್ಲಿ ಗೋ ಪುರ ಪ್ರವೇಶ ಮತ್ತು ವಿಶ್ವ ಗೋ ಸಮ್ಮೇಳನದ ಪೂರ್ವ ಸಿದ್ಧತಾ ಸಮಾವೇಶವನ್ನು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು.

2006: ರಾಸಾಯನಿಕಗಳನ್ನು ಬಳಸದೆ ನೈಸರ್ಗಿಕವಾಗಿ ಸಿಗುವ ಜಾಯಿಕಾಯಿ, ಲವಂಗ, ಏಲಕ್ಕಿ ಮತ್ತು ನೀಲಗಿರಿ ತೈಲದಿಂದ ತಯಾರಿಸಲಾದ ಹೊಸ `ಎಫರ್ ಮೆಂಟ್' ಹೆಸರಿನ ಟ್ರೂ ದೇಸಿ (ಟೂತ್) ಪೇಸ್ಟನ್ನು ಕ್ಯಾಂಪ್ಕೊ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿತು.

2006: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಪ್ತ ಸದಸ್ಯ ಸಮಿತಿಯು ಯೋಜನೆಯ ಅನುಷ್ಠಾನದಲ್ಲಿ `ಅನುಚಿತ ವರ್ತನೆಗಾಗಿ'ಗಾಗಿ ನಾಲ್ವರು ಸಂಸದರನ್ನು 2005 ಡಿಸೆಂಬರ್ 20ರಿಂದ 2006 ಮಾರ್ಚ್ 22ರವರೆಗೆ ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಲು ಶಿಫಾರಸು ಮಾಡಿತು. `ಚರ್ಚಿಲ್ ಅಲೆಮಾವೊ (ಕಾಂಗ್ರೆಸ್), ಪಾರಸ್ ನಾಥ್ ಯಾದವ್ (ಎಸ್ ಪಿ), ಫಗನ್ ಸಿಂಗ್ ಕುಲಸ್ತೆ ಹಾಗೂ ರಾಮಸ್ವರೂಪ್ ಕೋಲಿ (ಇಬ್ಬರೂ ಬಿಜೆಪಿ) ಈ ನಾಲ್ಕೂ ಮಂದಿಗೆ ವಾಗ್ದಂಡನೆ ವಿಧಿಸುವಂತೆಯೂ ವಿ. ಕಿಶೋರ ಚಂದ್ರ ಎಸ್. ದೇವ್ ನೇತೃತ್ವದ ಸಂಸದೀಯ ಸಮಿತಿಯು ತನ್ನ 51 ಪುಟಗಳ ಸರ್ವಾನುಮತದ ವರದಿಯಲ್ಲಿ ಸೂಚಿಸಿತು. ಟೆಲಿವಿಷನ್ನಿನಲ್ಲಿ ತೋರಿಸಲಾದ `ಆಪರೇಷನ್ ಚಕ್ರವ್ಯೂಹ' (ಕುಟುಕು ಕಾರ್ಯಾಚರಣೆ) ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವವರೆಗೆ ಸದನಕ್ಕೆ ಹಾಜರಾಗಬೇಡಿ ಎಂದು ಸಭಾಧ್ಯಕ್ಷರು ಈ ನಾಲ್ಕೂ ಮಂದಿ ಸಂಸದರಿಗೆ ಸೂಚಿಸಿದ್ದರು.

1990: ಸೋವಿಯತ್ ಕಾಂಗ್ರೆಸ್ ಮಿಖಾಯಿಲ್ ಗೊರ್ಬಚೆವ್ ಅವರನ್ನು ರಾಷ್ಟ್ರದ ಹೊಸ ಶಕ್ತಿಶಾಲಿ `ಆಧ್ಯಕ್ಷ' ಹುದ್ದೆಗೆ ಆಯ್ಕೆ ಮಾಡಿತು. ಹುದ್ದೆಯನ್ನು ಸೃಷ್ಟಿಸಿದ ಮರುದಿನ ಈ ಆಯ್ಕೆ ನಡೆಯಿತು.

1965: ಹಿಂದಿ ಚಿತ್ರನಟ ಅಮೀರ್ ಖಾನ್ ಹುಟ್ಟಿದ ದಿನ.

1959: ಕಲಾವಿದ ಡಾ. ಹನುಮಂತ ಬುರ್ಲಿ ಜನನ.

1949: ಕಲಾವಿದ ಎಂ.ಎಸ್. ಕೇಶವನ್ ಜನನ.

1948: ಈದಿನ ಜವಾಹರಲಾಲ್ ನೆಹರೂ ಅವರು ಸಿಂಧಿಯಾ ನೆವಿಗೇಷನ್ ಕಂಪೆನಿಯ ಎಸ್. ಎಸ್. ಜಲ ಉಷಾ ಹಡಗಿಗೆ ಚಾಲನೆ ನೀಡಿದರು. ಭಾರತದಲ್ಲೇ ನಿರ್ಮಿಸಲಾದ ಮೊತ್ತ ಮೊದಲ ಹಡಗು (ಸ್ಟೀಮರ್) ಇದು. ಇದನ್ನು ವಿಶಾಖಪಟ್ಟಣದಲ್ಲಿ ನಿರ್ಮಿಸಲಾಯಿತು.

1944: ಕಲಾವಿದ ಕೆ.ಪಿ. ಉಪಾಧ್ಯಾಯ ಜನನ.

1941: ಉಭಯಗಾನ ವಿದುಷಿ ಎಂದೇ ಹೆಸರು ಪಡೆದಿರುವ ಶ್ಯಾಮಲಾ ಜಿ. ಭಾವೆ ಅವರು ಗ್ವಾಲಿಯರ್ ಘರಾನಾ ಗಾಯಕ ಗೋವಿಂದ ವಿಠ್ಠಲ ಭಾವೆ ಮತ್ತು ಗಾಯಕಿ ಲಕ್ಷ್ಮೀ ಗೋವಿಂದ ಭಾವೆ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು. ತಂದೆಯಿಂದಲೇ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಶಿಕ್ಷಣ ಜೊತೆಗೆ ಕರ್ನಾಟಕ ಸಂಗೀತವನ್ನೂ ಕಲಿತ ಇವರು ಮುಂಬೈ ಕರ್ನಾಟಕ ಸಂಘದಿಂದ ಗಾನಕೋಗಿಲೆ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಸುರ್ ಸಿಂಗಾರ್ನ ಸುರಮಣಿ ಪ್ರಶಸ್ತಿ, ನ್ಯೂಯಾರ್ಕಿನ ಕೊಲಂಬಿಯಾ ವಿವಿಯ ನೈಟಿಂಗೇಲ್ ಆಫ್ ಇಂಡಿಯಾ ಪ್ರಶಸ್ತಿ, ಹೂಸ್ಟನ್ ವಿವಿಯ ಗೌರವ ಡಾಕ್ಟರೇಟ್ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದವರು.

1938: ಕಲಾವಿದೆ ಇಂದಿರಾ ಆರ್. ಜನನ.

1935: ಕಲಾವಿದ ಬಸವರಾಜ ಸಿ. ಅಕ್ಕಿ ಜನನ.

1934: ಈಜೆನ್ ಸೆರ್ನಾನ್ ಹುಟ್ಟಿದ ದಿನ. ಅಮೆರಿಕಾದ ಗಗನಯಾನಿಯಾದ ಇವರು 1972ರಲ್ಲಿ ಚಂದ್ರನ ಮೇಲೆ ಇಳಿದ ಕೊನೆಯ ಮಾನವ. ಭೂಗರ್ಭತಜ್ಞ ಹ್ಯಾರಿಸನ್ ಸ್ಮಿಟ್ ಜೊತೆಗೆ ಚಂದ್ರನ ಮೇಲೆ ಇಳಿದ ಇವರು ಚಂದ್ರನ ನೆಲದ ಮೇಲೆ ಹೆಚ್ಚು ಸಮಯ ಕಳೆದ ಗಗನಯಾನಿ.

1932: ಕೊಡಕ್ ಕ್ಯಾಮರಾದ ಸಂಶೋಧಕ ಜಾರ್ಜ್ ಈಸ್ಟ್ ಮನ್ ಆತ್ಮಹತ್ಯೆ ಮಾಡಿಕೊಂಡ.

1931: ಭಾರತದ ಮೊದಲ ಟಾಕಿ ಚಿತ್ರ `ಆಲಂ ಅರಾ' ಬಾಂಬೆಯ (ಈಗಿನ ಮುಂಬೈ) ಮೆಜೆಸ್ಟಿಕ್ ಥಿಯೇಟರಿನಲ್ಲಿ ಬಿಡುಗಡೆಗೊಂಡಿತು. ಅರ್ಡೆಶಿರ್ ಎಂ. ಇರಾನಿ ನಿರ್ದೇಶನದ ಈ ಚಿತ್ರವನ್ನು ಇಂಪೀರಿಯಲ್ ಕಂಪೆನಿ ನಿರ್ಮಿಸಿತು. (ಅಂದು ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ತೆರೆಯ ಮೇಲೆ ಚಲನಚಿತ್ರ ಮಾತಾಡಿತು. ಅದು `ಆಲಂ ಆರಾ'. ಮೂಕಿಯಿಂದ ಟಾಕಿಗೆ ಜಿಗಿದ ಮಹತ್ತರ ಗಳಿಗೆ. ಭಾರತೀಯ ಸಿನಿಮಾ ಜಗತಿನಲ್ಲಿ ಹೊಸದೊಂದು ಅಲೆಯನ್ನೇ ಎಬ್ಬಿಸಿದ `ಆಲಂ..'ನಿಂದ ಜನ ನಿಜಕ್ಕೂ ನಿಬ್ಬೆರಗಾದರು. `ಚಿತ್ರಗಳು ಮಾತನಾಡುತ್ತವೆ ಎಂದರೆ ಏನು?' ಎಂದು ಮುಂಬೈನ ಗಲ್ಲಿಗಲ್ಲಿಗಳಲ್ಲಿ ಜನ ನಿಂತು ಮಾತನಾಡತೊಡಗಿದರು. ಅದೊಂದು ಅದ್ಭುತವಾಗಿತ್ತು. ಆಶ್ಚರ್ಯವಾಗಿತ್ತು. ಸಿನೆಮಾ ಮಂದಿರಕ್ಕೆ ಜನತೆ ಮುಗಿಬಿತ್ತು. ತೆರೆಯ ಮೇಲೆ ತಮ್ಮ ಭಾಷೆಯನ್ನೇ ಮಾತನಾಡುವ ಮಾಸ್ಟರ್ ವಿಠಲ್, ಜುಬೇದಾ, ಪೃಥ್ವಿರಾಜ್ ಕಪೂರ್ ಅವರನ್ನು ನೋಡಲು ದೊಡ್ಡ ಗಲಾಟೆಯೇ ನಡೆಯಿತು. ಆ ಪರಿಯ ಜನಪ್ರವಾಹದಿಂದ ಬಾಕ್ಸ್ ಆಫೀಸೇ ಕಕ್ಕಾಬಿಕ್ಕಿಯಾಗುವ ಪರಿಸ್ಥಿತಿ. ಆ ದಿನದಲ್ಲೂ ಬ್ಲ್ಯಾಕ್ ಟಿಕೆಟ್ 50 ರೂಪಾಯಿಗೆ ಮಾರಾಟವಾದವು . ಅಂದು ಬಾಂಬೆ ರೋಮಾಂಚನಗೊಂಡಿತ್ತು.)

1928: ಫ್ರಾಂಕ್ ಬೋರ್ಮನ್ ಹುಟ್ಟಿದ ದಿನ. ಅಮೆರಿಕದ ಗಗನಯಾನಿಯಾದ ಇವರು ಜೇಮ್ಸ್ ಎ ಲೋವೆಲ್ ಮತ್ತು ವಿಲಿಯಂ ಅವರ ಜೊತೆಗೆ ಅಪೋಲೊ 8 ರ ಮೂಲಕ 1968ರಲ್ಲಿ ಚಂದ್ರನಿಗೆ ಸುತ್ತು ಹಾಕಿದರು. ಮಾನವ ಸಹಿತವಾಗಿ ಬಾಹ್ಯಾಕಾಶ ನೌಕೆ ಮೂಲಕ ಚಂದ್ರನಿಗೆ ಪ್ರದಕ್ಷಿಣೆ ಹಾಕಿದ ಮೊದಲ ಗಗನಯಾನ ಇದು.

1920: ಹ್ಯಾಂಕ್ ಕೆಚಮ್ (Hank Ketcham) (1920-2001) ಹುಟ್ಟಿದರು. ಅಮೆರಿಕಾದ ವ್ಯಂಗ್ಯಚಿತ್ರಕಾರರಾದ ಇವರು `ಡೆನ್ಸಿಸ್ ದಿ ಮಿನೇಸ್' ಸೃಷ್ಟಿ ಮೂಲಕ ಖ್ಯಾತರಾದರು.

1883 ಜರ್ಮನ್ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್ ಹುಟ್ಟಿದ ದಿನ.

1879: ಆಲ್ಬರ್ಟ್ ಐನ್ ಸ್ಟೀನ್ ಹುಟ್ಟಿದ ದಿನ. ಜರ್ಮನ್- ಅಮೆರಿಕನ್ ವಿಜ್ಞಾನಿಯಾದ ಇವರು `ಟೈಮ್' ಮ್ಯಾಗಜಿನ್ನಿನ `ಶತಮಾನದ ವ್ಯಕ್ತಿ' ಎನಿಸಿಕೊಂಡರು.

Saturday, March 13, 2010

ಇಂದಿನ ಇತಿಹಾಸ History Today ಮಾರ್ಚ್ 13

ಇಂದಿನ ಇತಿಹಾಸ

ಮಾರ್ಚ್ 13

ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಊಧಮ್ ಸಿಂಗ್ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಕಾಲದ್ಲಲಿ ಪಂಜಾಬ್ ಗವರ್ನರ್ ಜನರಲ್ ಆಗ್ದಿದ ಮೈಕೆಲ್ ಒ'ಡಾಯರ್ನನ್ನು ಇಂಗ್ಲೆಂಡಿನ ಕಾಕ್ಸ್ ಟನ್ ಹಾಲ್ನಲ್ಲಿ ಗುಂಡಿಟ್ಟು ಕೊಲೆಗೈದರು. ಲಂಡನ್ನಿನಲ್ಲಿ ಜೂನ್ 13ರಂದು ಅವರನ್ನು ಗಲ್ಲಿಗೇರಿಸಲಾಯಿತು.

2009: ಹಿಂದಿನ ದಿನವಷ್ಟೇ ಹೊಸದಾಗಿ ಮತ್ತೆ ಅಸ್ತಿತ್ವಕ್ಕೆ ಬಂದ ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಅಂಗ ಪಕ್ಷಗಳಲ್ಲಿ ಆರಂಭದಲ್ಲಿಯೇ ಅಪಸ್ವರ ಮೂಡಿತು. ಇನ್ನೊಂದೆಡೆ ಪ್ರಧಾನಿ ಪಟ್ಟಕ್ಕೆ ಏರಲು ಮಹಾರಾಷ್ಟ್ರದವರೊಬ್ಬರು ಯತ್ನಿಸುವ ಕಾಲ ಈಗ ಕೂಡಿ ಬಂದಿದೆ ಎಂದು ಹೇಳುವ ಮೂಲಕ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ತಾವೂ ಸ್ಪರ್ಧೆಯಲ್ಲಿ ಇರುವ ಇಂಗಿತ ವ್ಯಕ್ತಪಡಿಸಿದರು. ತಮ್ಮನ್ನು ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕೆಂದು ಉತ್ತರಪ್ರದೇಶದ ಮುಖ್ಯಮಂತ್ರಿ, ಬಿಎಸ್ಪಿ ನಾಯಕಿ ಮಾಯಾವತಿ ಪಟ್ಟು ಹಿಡಿದದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿತು. ಇನ್ನೊಂದೆಡೆ ಅಂಗಪಕ್ಷಗಳ ನಾಯಕರು ವಿಭಿನ್ನ ಹೇಳಿಕೆ ನೀಡಿ ತಮ್ಮೊಳಗಿನ ಒಡಕನ್ನು ಬಹಿರಂಗಪಡಿಸಿದರು.

2009: ಪಿತ್ತಜನಕಾಂಗ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನಿಗೆ ಶಸ್ತ್ರಚಿಕಿತ್ಸೆ ಮೂಲಕ ಮೃತ ವ್ಯಕ್ತಿಯ ಪಿತ್ತಜನಕಾಂಗ ಕಸಿ ಮಾಡಿ ಗುಣಪಡಿಸಿರುವುದಾಗಿ ಮಣಿಪಾಲ್ ಆಸ್ಪತ್ರೆಯ ವೈದ್ಯರು ಪ್ರಕಟಿಸಿದರು. ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಪಿತ್ತಜನಕಾಂಗ ಕಸಿ ಮಾಡಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ಆಂಧ್ರ ಪ್ರದೇಶದ ಮದನಪಲ್ಲಿಯ ರೆಡ್ಡಿ ಬಾಯಿ ಸಹಜ ಜೀವನ ನಡೆಸಬಹುದು ಎಂದು ವೈದ್ಯರು ಹೇಳಿದರು. ಮದ್ಯವ್ಯಸನಿಯಾಗಿದ್ದ ಬಾಯಿ ಕೆಲ ತಿಂಗಳುಗಳಿಂದ ಪಿತ್ತಜನಕಾಂಗ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಸದಾ ಹೊಟ್ಟೆ ನೋವು ಕಾಡುತಿತ್ತು. ಸೇವಿಸಿದ ಆಹಾರ ಪಚನವಾಗುತ್ತಿರಲಿಲ್ಲ. ದೇಹ ಊದಿಕೊಳ್ಳುತಿತ್ತು. ಪ್ರಾಣ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದರು. ಕುಟುಂಬ ಸದಸ್ಯರು ಬಾಯಿ ಅವರನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಬೇರೆ ವ್ಯಕ್ತಿಯ ಪಿತ್ತಜನಕಾಂಗದ ಅಗತ್ಯವಿದೆ ಎಂದು ವೈದ್ಯರು ಹೇಳಿದಾಗ, ಕುಟುಂಬ ಸದಸ್ಯರು ದಾನಿಗಳಿಗಾಗಿ ಹುಡುಕಾಟ ನಡೆಸಿದರು. ಕೊನೆಯ ಪ್ರಯತ್ನ ಎಂಬಂತೆ ಮಣಿಪಾಲ್ ಆಸ್ಪತ್ರೆಗೆ ಬಂದಾಗ, ತಾಯಿಯೊಬ್ಬರು ಅಪಘಾತದಲ್ಲಿ ಮೃತಪಟ್ಟ ತಮ್ಮ ಪುತ್ರನ ಪಿತ್ತಜನಕಾಂಗ ದಾನ ಮಾಡಲು ಮುಂದಾದರು.

2009: ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯ ಮೂಲದ ಅಮೆರಿಕನ್ ಫೆಡರಲ್ ಮುಖ್ಯ ತಾಂತ್ರಿಕ ಅಧಿಕಾರಿ ವಿವೇಕ್ ಕುಂದ್ರಾ ರಜೆ ಮೇಲೆ ತೆರಳಿದರು. ವಾಷಿಂಗ್ಟನ್ ಡಿ.ಸಿ.ಯಲ್ಲಿ ಮುಖ್ಯ ತಾಂತ್ರಿಕ ಅಧಿಕಾರಿಯಾಗಿದ್ದ ಕುಂದ್ರಾ ಅವರನ್ನು ಅಧ್ಯಕ್ಷ ಬರಾಕ್ ಒಬಾಮ ಅವರನ್ನು ವಾರದ ಹಿಂದೆ ಶ್ವೇತಭವನದಲ್ಲಿ ಮುಖ್ಯ ತಾಂತ್ರಿಕ ಅಧಿಕಾರಿಯನ್ನಾಗಿ ನೇಮಕ ಮಾಡಿದ್ದರು. ಎಫ್‌ಬಿಐ ಅಧಿಕಾರಿಗಳು ಕುಂದ್ರಾ ಅವರ ಹಳೆಯ ಕಚೇರಿಗೆ ದಾಳಿ ಮಾಡಿದ ನಂತರ ಅವರೇ ರಜೆ ಮೇಲೆ ತೆರಳುವ ನಿರ್ಧಾರ ಕೈಗೊಂಡರು ಎಂದು ಶ್ವೇತಭವನದ ಮೂಲಗಳು ಹೇಳಿದವು. ಸುಶೀಲ್ ಬನ್ಸಾಲ್ ಸೇರಿದಂತೆ ಇಬ್ಬರು ಭಾರತೀಯ ಮೂಲದವರನ್ನು ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬಂಧಿಸಲಾಗಿದೆ ಎಂದು ಕುಂದ್ರಾ ಅವರ ಭ್ರಷ್ಟಾಚಾರದ ಕುರಿತು ಮೊದಲ ಬಾರಿಗೆ ವರದಿ ಮಾಡಿದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ತಿಳಿಸಿತ್ತು. ಯೂಸುಫ್ ಆಸ್ಕರ್ ಎಂಬ ಮಾಹಿತಿ ಭದ್ರತಾ ಅಧಿಕಾರಿಯನ್ನೂ ಸಹ ಬಂಧಿಸಲಾಯಿತು.

2009: ವಿಶ್ವದಲ್ಲೇ ಅತ್ಯಂತ ಸಣ್ಣದಾದ ಐಪಾಡ್ ಒಂದನ್ನು ಕಂಡು ಹಿಡಿದಿರುವುದಾಗಿ ಅಪಲ್ ಕಂಪೆನಿಯೊಂದು ಪ್ರಕಟಿಸಿತು. ಈ ಹಿಂದಿನ ಮಾದರಿಗಳಿಗಿಂತ ಇದು ಅರ್ಧದಷ್ಟು ಸಣ್ಣದು. ಮೂರನೇ ತಲೆಮಾರಿನ ಐಪಾಡ್ ಎಂದು ಕರೆಯಲಾದ ಇದು 1000 ಹಾಡುಗಳನ್ನು ಸಂಗ್ರಹಿಸಿಕೊಳ್ಳಬಲ್ಲುದು. ಈ ಐಪಾಡ್ ಒಟ್ಟು 14 ಭಾಷೆಗಳಲ್ಲಿ ಮಾತನಾಡಬಲ್ಲುದು. ಅತ್ಯುತ್ತಮ ರಕ್ಷಾ ಕವಚವನ್ನು ಸಹ ಇದು ಹೊಂದಿದೆ.

2009: ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ, ಗಾಂಧಿವಾದಿ ಸತ್ಯವ್ರತ (79) ಅವರು ಈದಿನ ರಾತ್ರಿ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಂತರ್ಜಾತಿ ವಿವಾಹ ವೇದಿಕೆ 'ಮಾನವ ಮಂಟಪ', ಕರ್ನಾಟಕ ಸರ್ವೋದಯ ಮಂಡಳ ಮತ್ತು ಕರ್ನಾಟಕ ಸ್ಮಾರಕ ಗಾಂಧಿ ನಿಧಿಯ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸುತ್ತಿದ್ದರು. ಮೂಲತಃ ಚಿತ್ರದುರ್ಗದವರಾಗಿದ್ದ ಸತ್ಯವ್ರತ ಅವರ ನಿಜವಾದ ಹೆಸರು ಕೊಂಡಾಚಾರ್. ಚಿಕ್ಕವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟ ಚಳವಳಿಯಲ್ಲಿ ಪಾಲ್ಗೊಂಡ ಅವರು ಗಾಂಧಿಯವರ ಅನುಯಾಯಿಗಳಾಗಿದ್ದರು. ವಿನೋಬಾ ಭಾವೆಯವರು ಕೈಗೊಂಡ ಭೂಸುಧಾರಣಾ ಚಳವಳಿಯಲ್ಲೂ ಸಕ್ರಿಯ ಪಾತ್ರ ವಹಿಸಿದ ಅವರು ದೇಶ ಮತ್ತು ರಾಜ್ಯದಲ್ಲೆಡೆ ಪಾದಯಾತ್ರೆ ಕೈಗೊಂಡರು. ಆಶ್ರಮದಲ್ಲಿ ಭಾವೆಯವರ ಕಚೇರಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದರು. ಚಳವಳಿಯಲ್ಲಿ ಜೊತೆಯಾದ ಗುಜರಾತ್ ಮೂಲದ ಲಕ್ಷ್ಮಿ ಅವರೊಡನೆ ವಿವಾಹವಾದ ಅವರು ಜನಪರ ಚಳವಳಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿದ್ದರು.

2008: ಸುಳ್ಳು ಮೊಕದ್ದಮೆಯೊಂದರ ಕುರಿತು ನ್ಯಾಯಾಲಯಕ್ಕೆ `ಬಿ' ವರದಿ ಸಲ್ಲಿಸಲು ಫಾರೂಕ್ ಎಂಬ ಗಣಿ ಉದ್ಯಮಿಯೊಬ್ಬರಿಂದ 50 ಸಾವಿರ ರೂಪಾಯಿ ಲಂಚ ಪಡೆದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ಶ್ರೀಕಂಠಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದರು. ರಾಜ್ಯ ಪೊಲೀಸ್ ಸೇವೆಯಲ್ಲಿದ್ದ ಶ್ರೀಕಂಠಪ್ಪ ಕೆಲವು ವರ್ಷಗಳ ಹಿಂದೆ ಐ ಪಿ ಎಸ್ ಗೆ ಪದೋನ್ನತಿ ಹೊಂದಿದ್ದರು. ಲೋಕಾಯುಕ್ತ ಇತಿಹಾಸದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಲಂಚ ಪಡೆಯುತ್ತಿದ್ದಾಗ `ಖೆಡ್ಡಾ'ಕ್ಕೆ ಬಿದ್ದದ್ದು ಇದೇ ಮೊದಲು. ಲಂಚ ಪಡೆದು ಸಿಕ್ಕಿ ಬಿದ್ದ ಎರಡನೇ ಐಪಿಎಸ್ ಅಧಿಕಾರಿ ಎಂಬ ಅಪಕೀರ್ತಿಯೂ ಅವರಿಗೆ ಸಂದಿತು. 1980ರ ದಶಕದ ಕೊನೆಯಲ್ಲಿ ಹಾವೇರಿಯ ಹೆಚ್ಚುವರಿ ಎಸ್ ಪಿ ಯಾಗಿದ್ದ ಪದಮ್ ಕುಮಾರ್ ಗರ್ಗ್ ಲಂಚ ಸ್ವೀಕರಿಸಿ ಬಂಧನಕ್ಕೆ ಒಳಗಾಗಿದ್ದರು. ಶ್ರೀಕಂಠಪ್ಪ ಅವರು ಪ್ರಸಕ್ತ ವರ್ಷದ 73ದಿನಗಳಲ್ಲಿ ಲಂಚ ಸ್ವೀಕರಿಸಿ ಬಂಧಿತರಾದ 74ನೇ ಅಧಿಕಾರಿ.

2008: ಜಾಗತಿಕ ಹಣಕಾಸು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕವು ದಿನದ ಅಂತ್ಯಕ್ಕೆ 15,357 ಅಂಶಗಳಿಗೆ ಇಳಿಯಿತು. ಷೇರುಪೇಟೆ ಇತಿಹಾಸದಲ್ಲಿ ಇದು ಆರನೆ ಅತಿ ದೊಡ್ಡ ಕುಸಿತವಾಗಿದ್ದು, 2007ರ ಆಗಸ್ಟ್ 31ರ ಮಟ್ಟಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕವೂ (ಎನ್ ಎಸ್ ಇ) ಆರು ತಿಂಗಳ ಹಿಂದಿನ ಮಟ್ಟಕ್ಕೆ (4624 ಅಂಶಗಳಿಗೆ) ಇಳಿಯಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ಲಿಗೆ 110 ಡಾಲರಿನಷ್ಟು ಆಗಿರುವುದು ಷೇರುಪೇಟೆಯ ದಾಖಲೆ ಕುಸಿತಕ್ಕೆ ಕಾರಣ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟರು. ಇದೇ ವೇಳೆಗೆ ಮುಂಬೈ ಚಿನಿವಾರ ಪೇಟೆಯಲ್ಲಿ ಚಿನ್ನವು ಪ್ರತಿ 10 ಗ್ರಾಮುಗಳಿಗೆ ರೂ 240ರಷ್ಟು ಏರಿಕೆ ಕಂಡರೆ, ಬೆಳ್ಳಿ ಬೆಲೆ ತಲಾ ಕೆಜಿಗೆ ರೂ 480ರಷ್ಟು ಹೆಚ್ಚಿತು. ಚಿನ್ನವು ತಲಾ ಹತ್ತು ಗ್ರಾಮುಗಳಿಗೆ ರೂ 13,025ರಷ್ಟಾಗಿ ಹೊಸ ದಾಖಲೆ ಬರೆಯಿತು.

2008: ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯಿಂದ ಪ್ರೇರಿತವಾದ ಇಸ್ರೇಲಿನ ಯುವ ಜೋಡಿಯೊಂದು ಗಂಗಾವತಿ ತಾಲ್ಲೂಕಿನ ಸಣಾಪುರದಲ್ಲಿ ವೇದ ಮಂತ್ರಗಳೊಂದಿಗೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಇಸ್ರೇಲ್ ದೇಶದ ಓಮರ್ ಕ್ಲಿಫ್ ಮತ್ತು ಮೇರಮ್ ಜೋಡಿ ಗೌರಿ ರೆಸ್ಟೋರೆಂಟಿನಲ್ಲಿ ವೈದಿಕ ಸಂಪ್ರದಾಯದಂತೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಸತಿಪತಿಗಳಾದರು. ಇವರ ವಿದೇಶಿ ಸ್ನೇಹಿತರು, ಪ್ರವಾಸಿಗರು ಭಾರತೀಯ ಶೈಲಿಯ ಈ ವಿವಾಹವನ್ನು ಕಣ್ಣಾರೆ ಕಂಡು ಖುಷಿಪಟ್ಟರು.

2008: ಪ್ರಸ್ತುತ ಸಾಲಿನ ಬಿ. ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಯು ಹಿರಿಯ ವಿಮರ್ಶಕ, ಕವಿ, ಕಥೆಗಾರ ಹಾಗೂ ಪ್ರಬಂಧಕಾರ ಡಾ. ಗಿರಡ್ಡಿ ಗೋವಿಂದರಾಜ ಅವರ ಲಲಿತ ಪ್ರಬಂಧ `ಹಿಡಿಯದ ಹಾದಿ' ಕೃತಿಗೆ ದೊರೆಯಿತು. ಗದಗ ಜಿಲ್ಲೆಯ ಅಬ್ಬಿಗೇರಿಯವರಾದ ಡಾ. ಗಿರಡ್ಡಿಯವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. 1996-99ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದವರು. ತಮ್ಮ ಸಾಹಿತ್ಯ ಕೃಷಿಗಾಗಿ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ (1972), ಮೈಸೂರು ವಿ.ವಿ. ಸುವರ್ಣ ಮಹೋತ್ಸವ ಬಹುಮಾನ (1972), ರಾಜ್ಯ ಅಕಾಡೆಮಿ ಗೌರವ ಪ್ರಶಸ್ತಿ (1992) ಮುಂತಾದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಡಾ. ಎಂ. ಜಿ. ಹೆಗಡೆ, ಡಾ. ಆರ್. ವಿ. ಭಂಡಾರಿ, ಪ್ರೊ. ಎಂ. ರಮೇಶ ಹಾಗೂ ರಾಜಶೇಖರ ಹೆಬ್ಬಾರ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಡಾ. ಗಿರಡ್ಡಿಯವರ `ಹಿಡಿಯದ ಹಾದಿ' ಕೃತಿಯನ್ನು ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಿತು.

2008: ಸ್ತನ ಕ್ಯಾನ್ಸರನ್ನು ನಿಯಂತ್ರಿಸುವ ವಂಶವಾಹಿಯನ್ನು ಕಂಡುಹಿಡಿದಿರುವುದಾಗಿ ಅಮೆರಿಕ ವಿಜ್ಞಾನಿಗಳು ಪ್ರಕಟಿಸಿದರು. ಎಸ್ ಎ ಟಿ ಬಿ 1 ಹೆಸರಿನ ವಂಶವಾಹಿಯು ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಬಲ್ಲುದು ಎಂದು ಕ್ಯಾಲಿಫೋರ್ನಿಯಾದ ಲಾರೆನ್ಸ್ ಬರ್ಕೆಲಿ ರಾಷ್ಟ್ರೀಯ ಪ್ರಯೋಗಾಲಯದ ಡಾ. ತೆರುಮಿ ಕೊಹ್ವಿ-ಶಿಗೆ ಮತ್ಸು ಪ್ರಕಟಿಸಿದರು.

2008: ದೇಶದಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳು ಆರಂಭಗೊಂಡ ಮೇಲೆ ಈಗಿರುವ ವಿಮಾನನಿಲ್ದಾಣಗಳನ್ನು ಮುಚ್ಚುವುದಿಲ್ಲ ಎಂಬುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟ ಭರವಸೆ ನೀಡಿದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ವಿಮಾನನಿಲ್ದಾಣ ಪ್ರಾಧಿಕಾರ ನೌಕರರ ಅಸಹಕಾರ ಮುಷ್ಕರ ಈದಿನ ಸಂಜೆ ಕೊನೆಗೊಂಡಿತು.

2008: ದೇಶದಲ್ಲಿ ವಿಶೇಷ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ರೈಲ್ವೆ ಇಲಾಖೆಗೆ ಅಧಿಕಾರ ನೀಡುವ ರೈಲ್ವೆ (ತಿದ್ದುಪಡಿ) ಮಸೂದೆ 2008ಕ್ಕೆ ಸಂಸತ್ತು ತನ್ನ ಸಮ್ಮತಿ ಸೂಚಿಸಿತು. ಮಸೂದೆಯನ್ನು ಲೋಕಸಭೆ ಈ ಮೊದಲೇ ಅಂಗೀಕರಿಸಿತ್ತು. ರಾಜ್ಯಸಭೆ ಈದಿನ ಅದನ್ನು ಧ್ವನಿಮತದಿಂದ ಅಂಗೀಕರಿಸಿತು.

2008: ಗೊಂದಲದ ಗೂಡಾದ ಬೆಂಗಳೂರಿನ ವೈದ್ಯ ಮೊಹಮ್ಮದ್ ಹನೀಫ್ ಪ್ರಕರಣ ಕುರಿತು ಕೂಲಂಕಷವಾಗಿ ವಿಚಾರಣೆ ನಡೆಸಲು ಆಸ್ಟ್ರೇಲಿಯಾ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿತು. ನ್ಯೂ ಸೌಥ್ ವೇಲ್ಸ್ ರಾಜ್ಯದ ಸುಪ್ರೀಂಕೋರ್ಟಿನ ಮಾಜಿ ನ್ಯಾಯಮೂರ್ತಿ ಜಾನ್ ಕ್ಲರ್ಕ್ ಕ್ಯೂ.ಸಿ. ಅವರನ್ನು ತನಿಖಾ ತಂಡದ ಮುಖ್ಯಸ್ಥರನ್ನಾಗಿ ಸರ್ಕಾರ ನೇಮಿಸಿತು.

2007: ಪಾಕ್ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಹುದ್ದೆಯಿಂದ ಕಿತ್ತು ಹಾಕಲ್ಪಟ್ಟ ನ್ಯಾಯಮೂರ್ತಿ ಇಫ್ತಿಕಾರ್ ಮುಹಮ್ಮದ್ ಚೌಧರಿ ಅವರು ವಿಚಾರಣೆ ಎದುರಿಸುವ ಸಲುವಾಗಿ ಸುಪ್ರೀಂ ನ್ಯಾಯಾಂಗಮಂಡಳಿಯ ಎದುರು ಹಾಜರಾದರು.

2007: ಭಾರತೀಯ ಮಹಿಳೆಯರ ಸಬಲೀಕರಣ ಹಾಗೂ ಅವರನ್ನು ರಾಜಕೀಯದಲ್ಲಿ ಕೆಳಮಟ್ಟದಿಂದ ಮೇಲಕ್ಕೆ ಎತ್ತಲು ಪ್ರಯತ್ನಿಸ್ದಿದಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾರ್ಗರೆಟ್ ಆಳ್ವ ಅವರು ಅಮೆರಿಕದ ಪ್ರತಿಷ್ಠಿತ `ವೈಟಲ್ ವಾಯ್ಸಸ್' ಪ್ರಶಸ್ತಿಗೆ ಭಾಜನರಾದರು.

2006: ಬೆಂಗಳೂರಿನ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮೆಟ್ರೋಗೆ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ರಂಗೋಲಿಯನ್ನು ಹೋಲುವ ಲಾಂಛನವನ್ನು ರೂಪಿಸಲಾಗಿದ್ದು ರಾಜ್ಯಪಾಲ ಟಿ.ಎನ್. ಚತುರ್ವೇದಿ ರಾಜಭವನದಲ್ಲಿ ನಮ್ಮ ಮೆಟ್ರೊ ಹೆಸರಿನ ಜೊತೆಗಿರುವ ಈ ಲಾಂಛನವನ್ನು ಬಿಡುಗಡೆ ಮಾಡಿದರು. ಸಾರ್ವಜನಿಕ ಸ್ಪರ್ಧೆ ಮೂಲಕ ಇದನ್ನು ಆಯ್ಕೆ ಮಾಡಲಾಗಿದೆ. ಜಯಂತ್ ಜೈನ್ ಮತ್ತು ಮಹೇಂದ್ರ ಜೈನ್ ಎಂಬ ಯುವಜೋಡಿ ಈ ಸಾಂಕೇತಿಕ ಲಾಂಛನವನ್ನು ರೂಪಿಸಿದವರು.

2006: ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸಿ ಅಮಾಯಕರ ಸಾವಿಗೆ ಕಾರಣವಾಗುವ ಭಯೋತ್ಪಾದಕರ ಕೃತ್ಯದ ವಿರುದ್ಧ 400 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಇಸ್ಲಾಂ ಧಾರ್ಮಿಕ ಸಂಸ್ಥೆ ದರುಲ್- ಇಫ್ತಾ- ಫಿರಂಗಿ ಮಹಲ್ ಫತ್ವಾ ಹೊರಡಿಸಿತು.

2006: ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷರಾಗಿ 2006-09ರ ಸಾಲಿಗೆ ವಿಜಾಪುರದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವಿರೋಧ ಆಯ್ಕೆಯಾದರು.

2006: ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ 9 ಆರೋಪಿಗಳನ್ನು ನ್ಯಾಯಾಲಯ ಖುಲಾಸೆ ಗೊಳಿಸಿರುವುದನ್ನು ಪ್ರಶ್ನಿಸಿ ಸ್ಥಳೀಯ ಪೊಲೀಸರು ದೆಹಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಈ ಆರೋಪಿಗಳನ್ನು ಖುಲಾಸೆಗೊಳಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್. ಎಲ್. ಭಯಾನ ಅವರ ತೀರ್ಪು, ವಿಚಾರಣಾ ನ್ಯಾಯಾಲಯದಲ್ಲಿ ಆಗಿರುವ ಗಂಭೀರ ಪ್ರಮಾದ, ಫಿರ್ಯಾದುದಾರರು ಸಂಗ್ರಹಿಸಿರುವ ಸನ್ನಿವೇಶದ ಸಾಕ್ಷ್ಯಗಳನ್ನು ಪರಿಶೀಲಿಸಲು ನ್ಯಾಯಾಲಯ ವಿಫಲವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಯಿತು. 1999ರಲ್ಲಿ ರೂಪದರ್ಶಿ ಜೆಸ್ಸಿಕಾ ಲಾಲ್ ಅವರನ್ನು ಹತ್ಯೆ ಮಾಡಿದ ಆರೋಪಕ್ಕೆ ಗುರಿಯಾದ ಹರಿಯಾಣದ ಮಾಜಿ ಸಚಿವರೊಬ್ಬರ ಪುತ್ರ ಮನು ಶರ್ಮ, ಮಾಜಿ ರಾಜ್ಯಸಭಾ ಸದಸ್ಯ ಡಿ.ಪಿ. ಯಾದವ್ ಅವರ ಪುತ್ರ ವಿಕಾಸ್ ಯಾದವ್ ಹಾಗೂ ಇತರ ಏಳು ಮಂದಿಯನ್ನು ಇತ್ತೀಚೆಗೆ ಪಾಟಿಯಾಲ ನ್ಯಾಯಾಲಯ ಆರೋಪಮುಕ್ತಿಗೊಳಿಸಿತ್ತು.

1986: ಮೈಕ್ರೋಸಾಫ್ಟ್ ಕಂಪೆನಿಯ ಸ್ಟಾಕ್ ಟ್ರೇಡಿಂಗ್ ಆರಂಭವಾಯಿತು. ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಬಿಲ್ ಗೇಟ್ಸ್ ಕೋಟ್ಯಧೀಶರಾಗಿ, ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿ ಆಗಬೇಕೆಂಬ ಆಶಯವನ್ನು ಈಡೇರಿಸಿಕೊಂಡರು.

1964: ನ್ಯೂಯಾರ್ಕ್ ನಗರದಲ್ಲಿ ಇಪ್ಪತ್ತೆಂಟು ವರ್ಷದ ಕಿಟ್ಟಿ ಜೆನೋವೆಸ್ ಇರಿತಕ್ಕೆ ಒಳಗಾಗಿ ಸಾಯುತ್ತಿದ್ದಾಗ ಅಲ್ಲಿಯೇ ಇದ್ದ ನೆರೆಹೊರೆಯ 37 ಮಂದಿ ನಿವಾಸಿಗಳು ಯಾವುದೇ ರೀತಿ ಪ್ರತಿಕ್ರಿಯಿಸಲು ವಿಫಲರಾದರು. ವಿನ್ ಸ್ಟನ್ ಮೋಸ್ಲೆ ಎಂಬ ಕೊಲೆಗಾರ ಆಕೆಯನ್ನು ಮೂರು ಕಡೆಗಳಲ್ಲಿ ಇರಿದು ಕೊಂದು ಹಾಕಿದ. ಕನಿಷ್ಠ 37 ಮಂದಿ ಈ ಭೀಕರ ಕೃತ್ಯವನ್ನು ನೋಡುತ್ತಲೇ ಇದ್ದರು. ಆದರೆ ಪ್ರತಿಕ್ರಿಯಿಸಲು ವಿಫಲರಾದರು ಎಂದು ಪೊಲೀಸ್ ತನಿಖೆಯಿಂದ ದಿಟವಾಯಿತು. ಈ ಪ್ರತ್ಯಕ್ಷ ಸಾಕ್ಷಿಗಳು ಪ್ರದರ್ಶಿಸಿದ `ನನಗೇಕೆ ಉಸಾಬರಿ' ಎಂಬ ಈ ವರ್ತನೆ `ಕಿಟ್ಟಿ ಜೆನೋವೆಸ್ ಸಿಂಡ್ರೋಮ್' ಎಂದೇ ಹೆಸರು ಪಡೆಯಿತು.

1943: ರಂಗನಟ, ನಿರ್ದೇಶಕ, ಬೆಳಕು ತಜ್ಞ, ರಂಗ ವಿನ್ಯಾಸಕ ಹೀಗೆ ರಂಗಭೂಮಿಯ ಹಲವಾರು ಆಯಾಮಗಳಲ್ಲಿ ದುಡಿದ ಆರ್. ನಾಗೇಶ್ ಅವರು ರಾಮರಾಜ ಅರಸು- ಲಕ್ಷ್ಮೀದೇವಮ್ಮ ದಂಪತಿಯ ಮಗನಾಗಿ ಬೆಂಗಳೂರು ಸಮೀಪದ ರಾಮೋಹಳ್ಳಿಯಲ್ಲಿ ಜನಿಸಿದರು.

1940: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಊಧಮ್ ಸಿಂಗ್ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಕಾಲದ್ಲಲಿ ಪಂಜಾಬ್ ಗವರ್ನರ್ ಜನರಲ್ ಆಗ್ದಿದ ಮೈಕೆಲ್ ಒ'ಡಾಯರ್ನನ್ನು ಇಂಗ್ಲೆಂಡಿನ ಕಾಕ್ಸ್ ಟನ್ ಹಾಲ್ನಲ್ಲಿ ಗುಂಡಿಟ್ಟು ಕೊಲೆಗೈದರು. ಲಂಡನ್ನಿನಲ್ಲಿ ಜೂನ್ 13ರಂದು ಅವರನ್ನು ಗಲ್ಲಿಗೇರಿಸಲಾಯಿತು. 1974ರ ಜುಲೈ 9ರಂದು ಊಧಮ್ ಸಿಂಗ್ ಚಿತಾಭಸ್ಮವನ್ನು ನವದೆಹಲಿಗೆ ತರಲಾಯಿತು.

1878: ಪ್ರಾದೇಶಿಕ ಪತ್ರಿಕೆಗಳನ್ನು ನಿಯಂತ್ರಿಸಲು ಭಾಷಾವಾರು ಪತ್ರಿಕಾ ಕಾಯ್ದೆಯನ್ನು ಅಂಗೀಕರಿಸಲಾಯಿತು. ಮರುದಿನವೇ `ಅಮೃತ ಬಜಾರ್ ಪತ್ರಿಕಾ' ಇಂಗ್ಲಿಷ್ ಸುದ್ದಿ ಪತ್ರಿಕೆಯಾಯಿತು.

1855: ಪರ್ಸೀವಲ್ ಲೋವೆಲ್ (1855-1916) ಹುಟ್ಟಿದ. ಅಮೆರಿಕನ್ ಖಗೋಳ ತಜ್ಞನಾದ ಈತ ಪ್ಲೂಟೋ ಗ್ರಹದ ಅಸ್ತಿತ್ವ ಬಗ್ಗೆ ಭವಿಷ್ಯ ನುಡಿದು ಅದಕ್ಕಾಗಿ ಶೋಧ ಆರಂಭಿಸಿ ಕೊನೆಗೆ ಅದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ.

1852: `ನ್ಯೂಯಾರ್ಕ್ ಲ್ಯಾಂಟರ್ನ್' ನಲ್ಲಿ ಕಾರ್ಟೂನ್ ಪಾತ್ರವಾಗಿ `ಅಂಕಲ್ ಸ್ಯಾಮ್' ಚೊಚ್ಚಲ ಹೆಜ್ಜೆ ಇರಿಸಿದ.

1781: ಸರ್ ವಿಲಿಯಂ ಹರ್ಷೆಲ್ `ಯುರೇನಸ್' ಗ್ರಹವನ್ನು ಕಂಡು ಹಿಡಿದ. ಮೂರನೇ ಜಾರ್ಜ್ ಗೌರವಾರ್ಥ ಈ ಗ್ರಹಕ್ಕೆ ಆತ `ಜಾರ್ಜಿಯಂ ಸಿಡಸ್' ಎಂಬುದಾಗಿ ಹೆಸರು ಇಟ್ಟ.

1733: ಜೋಸೆಫ್ ಪ್ರೀಸ್ಟ್ ಲೀ ಹುಟ್ಟಿದ. ಇಂಗ್ಲಿಷ್ ಪಾದ್ರಿ, ಭೌತವಿಜ್ಞಾನಿಯಾದ ಈತ ಆಮ್ಲಜನಕದ ಸಂಶೋಧನೆಯಿಂದ ಖ್ಯಾತಿ ಪಡೆದ.

1639: ಹಾರ್ವರ್ಡ್ ಯುನಿವರ್ಸಿಟಿಗೆ ಪಾದ್ರಿ ಜಾನ್ ಹಾರ್ವರ್ಡ್ ಹೆಸರನ್ನು ಇಡಲಾಯಿತು.

Advertisement