Showing posts with label Telecom. Show all posts
Showing posts with label Telecom. Show all posts

Friday, February 21, 2020

ಟೆಲಿಕಾಂ ಎಜಿಆರ್ ಬಿಕ್ಕಟ್ಟು: ತೆರಿಗೆ, ಶುಲ್ಕ ಕಡಿತಕ್ಕೆ ಸುನಿಲ್ ಮಿತ್ತಲ್ ಮನವಿ

ಟೆಲಿಕಾಂ ಎಜಿಆರ್ ಬಿಕ್ಕಟ್ಟು: ತೆರಿಗೆ, ಶುಲ್ಕ ಕಡಿತಕ್ಕೆ  ಸುನಿಲ್ ಮಿತ್ತಲ್ ಮನವಿ
ನವದೆಹಲಿ: ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಬಾಕಿಗೆ ಸಂಬಂಧಿಸಿದಂತೆಅಭೂತಪೂರ್ವ’  ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೆರಿಗೆಗಳು ಮತ್ತು ಶುಲ್ಕಗಳಲ್ಲಿ ಕಡಿತ ಮಾಡುವ ಮೂಲಕ ಉದ್ಯಮದ ನೆರವಿಗೆ ಬರುವಂತೆ ಭಾರ್ತಿ ಏರ್ ಟೆಲ್ ಅಧ್ಯಕ್ಷ ಹಾಗೂ ಸಂಸ್ಥಾಪಕ ಸುನಿಲ್ ಮಿತ್ತಲ್ ಅವರು 2020 ಫೆಬ್ರುವರಿ 20ರ ಗುರುವಾರ ಕೇಂದ್ರ ದೂರಸಂಪರ್ಕ (ಟೆಲಿಕಾಂ) ಸಚಿವ ರವಿಶಂಕರ ಪ್ರಸಾದ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.

ಎಜಿಆರ್ ಬಾಕಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲನೆಗೆ ಏರ್ಟೆಲ್ ಬದ್ಧವಾಗಿದೆ ಮತ್ತು ಕಂಪೆನಿಯು ಆದಷ್ಟೂ ಶೀಘ್ರ ಬಾಕಿ ಪಾವತಿ ಮಾಡಲಿದೆಎಂದು ಮಿತ್ರಲ್ ಅವರು ಸಚಿವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
ಸರ್ಕಾರವು ನಿರ್ವಹಿಸುತ್ತಿರುವ ಎಜಿಆರ್ ಪ್ರಸ್ತುತ ಉದ್ಯಮದ ಪಾಲಿಗೆ ಹಿಂದೆಂದೂ ಸಂಭವಿಸದ ಬಿಕ್ಕಟ್ಟು ಆಗಿ ಪರಿಣಮಿಸಿದೆಎಂದು ಅವರು ನುಡಿದರು.

ಉದ್ಯಮದ ಮೇಲೆ ಅತಿಯಾದ ತೆರಿಗೆ ಹೊರೆ ಇದೆ. ಉದ್ಯಮರಂಗದ ಮೇಲಿನ ತೆರಿಗೆ ಮತ್ತು ಶುಲ್ಕಗಳನ್ನು ಕಡಿತಗೊಳಿಸುವ ಅಗತ್ಯವಿದೆಎಂದು ಅವರು ಸರ್ಕಾರಕ್ಕೆ ಸಲಹೆ ಮಾಡಿದರು.

ಬಾಕಿ ಪಾವತಿ ಮಾಡಲು ಏರ್ ಟೆಲ್ಗೆ ಮಾರ್ಚ್ ೧೭ರವರೆಗೆ ಕಾಲಾವಕಾಶ ಇದೆ. ಅದಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಸಂಸ್ಥೆಯು ತನ್ನ ಬಾಕಿಗಳನ್ನು ಪಾವತಿ ಮಾಡಲಿದೆ ಎಂದು ಅವರು ನುಡಿದರು.

ಕಳೆದ ವಾರ ತನ್ನ ಹಿಂದಿನ ಆದೇಶ ಪಾಲನೆಗೆ ವಿಫಲವಾದುದಕ್ಕಾಗಿ ಕಂಪೆನಿಗಳು ಮತ್ತು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂಕೋರ್ಟ್ ಎಚ್ಚರಿಸಿದ ಬಳಿಕ ಸರ್ಕಾರವು ವೊಡಾಫೋನ್ ಐಡಿಯಾ ಸೇರಿದಂತೆ ಎಲ್ಲ ಮೊಬೈಲ್ ಸೇವಾ ಸಂಸ್ಥೆಗಳಿಗೆ ಸಹಸ್ರಾರು ಕೋಟಿ ರೂಪಾಯಿಗಳ ಬಾಕಿಯನ್ನು ತತ್ ಕ್ಷಣ ಪಾವತಿ ಮಾಡುವಂತೆ ಆಜ್ಞಾಪಿಸಿತ್ತು.

ವಾರಾರಂಭದಲ್ಲಿ ಭಾರ್ತಿ ಏರ್ಟೆಲ್ ೧೦,೦೦೦ ಕೋಟಿ ರೂಪಾಯಿಗಳನ್ನು ದೂರಸಂಪರ್ಕ ಇಲಾಖೆಗೆ (ಡಿಒಟಿ) ಸ್ಥಾಯೀ ಬಾಕಿಗಳ ಸಲುವಾಗಿ ಪಾವತಿ ಮಾಡಿತ್ತು. ’ಭಾರ್ತಿ ಏರ್ಟೆಲ್, ಭಾರ್ತಿ ಹೆಕ್ಸಾಕಾಮ್ ಮತ್ತು ಟೆಲೆನೋರ್ ಪರವಾಗಿ ೧೦,೦೦೦ ಕೋಟಿ ರೂಪಾಯಿಗಳನ್ನು ಪಾವತಿ ಮಾಡಲಾಗಿದೆಎಂದು ಭಾರ್ತಿ ಏರ್ಟೆಲ್ ಸೋಮವಾರ ತಿಳಿಸಿತ್ತು.

ವೊಡಾಫೋನ್ ಐಡಿಯಾ ಈವರೆಗೆ ,೫೦೦ ಕೋಟಿ ರೂಪಾಯಿಗಳನ್ನು ಎಜಿಆರ್ ಬಾಕಿ ಸಲುವಾಗಿ ದೂರಸಂಪರ್ಕ ಇಲಾಖೆಗೆ ಪಾವತಿ ಮಾಡಿದೆ.

ವೈರ್ಲೆಸ್ ಕಂಪೆನಿಗಳು ೯೨,೦೦೦ ಕೋಟಿ ರೂಪಾಯಿಗಳನ್ನು ಬಾಕಿ ಶುಲ್ಕ ಮತ್ತು ಬಡ್ಡಿ ಸಲುವಾಗಿ ಪಾವತಿ ಮಾಡಬೇಕು ಎಂಬುದಾಗಿ ದೂರಸಂಪರ್ಕ ಇಲಾಖೆಯು ಮುಂದಿಟ್ಟಿದ್ದ ಬೇಡಿಕೆಯನ್ನು ಅಕ್ಟೋಬರ್ ತಿಂಗಳ ತನ್ನ ಆದೇಶದಲ್ಲಿ ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್ ಬಾಕಿ ಪಾವತಿಗೆ ಮೂರು ತಿಂಗಳುಗಳ ಗಡುವು ನೀಡಿತ್ತು.

ಇತ್ತೀಚಿನ ಲಭ್ಯ ಅಂದಾಜುಗಳ ಪ್ರಕಾರ, ಏರ್ಟೆಲ್ ಪರವಾನಗಿ ಶುಲ್ಕ ಮತ್ತು  ತರಂಗಾಂತರ ಬಳಕೆಗೆ ಸಂಬಂಧಿಸಿದ ಶುಲ್ಕ ಸೇರಿದಂತೆ  ಸುಮಾರು ೩೫,೫೮೬ ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಾಗಿದೆ.

ವೊಡಾಫೋನ್ ಐಡಿಯಾ ೫೩,೦೦೦ ಕೋಟಿ ರೂಪಾಯಿ (೨೪,೭೨೯ ಕೋಟಿ ರೂಪಾಯಿ ತರಂಗಾಂತರ ಶುಲ್ಕ ಬಾಕಿ ಮತ್ತು ೨೮,೩೦೯ ಕೋಟಿ ರೂಪಾಯಿ ಪರವಾನಗಿ ಶುಲ್ಕ) ಬಾಕಿ ಪಾವತಿ ಮಾಡಬೇಕಾಗಿದೆ. ಟಾಟಾ ಟೆಲಿ ಸರ್ವೀಸಸ್ ೧೩,೮೦೦ ಕೋಟಿ ರೂಪಾಯಿ, ಬಿಎಸ್ಎನ್ಎಲ್  ,೯೮೯ ಕೋಟಿ ರೂಪಾಯಿ ಮತ್ತು ಎಂಟಿಎನ್ಎಲ್ ,೧೨೨ ಕೋಟಿ ರೂಪಾಯಿಗಳ ಬಾಕಿ ಪಾವತಿ ಮಾಡಬೇಕಾಗಿದೆ.

Sunday, February 16, 2020

ಬಾಕಿ ಪಾವತಿಗೆ ವೊಡಾಫೋನ್ ಐಡಿಯಾ ಸಿದ್ಧ

ಬಾಕಿ ಪಾವತಿಗೆ ವೊಡಾಫೋನ್ ಐಡಿಯಾ ಸಿದ್ಧ
ವ್ಯವಹಾರ ಮುಂದುವರಿಕೆ ಅನುಮಾನ
ನವದೆಹಲಿ: ಸಾಲಗ್ರಸ್ತ ವೊಡಾಫೋನ್ ಐಡಿಯಾ ಟೆಲಿಕಾಂ ಸಂಸ್ಥೆಯು ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ಬಾಕಿ ಪಾವತಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ, ಆದರೆ, ಭಾರತದಲ್ಲಿ ವ್ಯವಹಾರ ಮುಂದುವರಿಕೆ ಬಗ್ಗೆ ಅನುಮಾನ ವ್ಯಕ್ತ ಪಡಿಸಿದೆ. ಭಾರತದಲ್ಲಿ ವ್ಯವಹಾರ ಮುಂದುವರಿಕೆಯು ಸುಪ್ರೀಂಕೋರ್ಟ್ ನೀಡುವ ಅನುಕೂಲಕರ ತೀರ್ಪನ್ನು ಅವಲಂಬಿಸಿದೆ ಎಂದು ಸಂಸ್ಥೆಯು  2020 ಫೆಬ್ರುವರಿ 15ರ ಶನಿವಾರ ತಿಳಿಸಿತು.

ಎಜಿಆರ್ ಬಾಕಿಗೆ ಪಾವತಿ ಮಾಡಬಹುದಾದ ಮೊತ್ತವನ್ನು ಸಂಸ್ಥೆಯು ಅಂದಾಜು ಮಾಡುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಹೊಂದಾಣಿಕೆಯ ಒಟ್ಟು ಆದಾಯ ಬಾಕಿ ಪಾವತಿಸುವ ಪ್ರಕ್ರಿಯೆಯಲ್ಲಿದೆ ಎಂದು ಕಂಪೆನಿಯು ಹೇಳಿತು.

ಆದಾಗ್ಯೂ, ಭಾರತದಲ್ಲಿ ವ್ಯವಹಾರವನ್ನು ಮುಂದುವರೆಸುವುದು ತಾನು ಸಲ್ಲಿಸಿರುವ ಮಾರ್ಪಾಡು ಮನವಿಯ ಮೇಲೆ ಸುಪ್ರೀಂ ಕೋರ್ಟ್ ನೀಡಬಹುದಾದ ಅನುಕೂಲಕರ ಆದೇಶವನ್ನು ಅವಲಂಬಿಸಿರುತ್ತದೆ ಎಂದು ಕಂಪೆನಿ ಹೇಳಿತು.

ಕಂಪನಿಯು ಪ್ರಸ್ತುತ ೨೪ ಅಕ್ಟೋಬರ್ ೨೦೧೯ ಆದೇಶದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದಂತೆ ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ಆಧಾರಿತ ಲೆಕ್ಕಾಚಾರದ ಬಾಕಿ ಮೊತ್ತವನ್ನು ಟೆಲಿಕಾಂ ಇಲಾಖೆಗೆ (ಡಿಒಟಿ) ಪಾವತಿಸಲು ಬೇಕಾದ ಅಂದಾಜು ಮೊತ್ತದ ಲೆಕ್ಕ ಹಾಕುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಅಂದಾಜು ಮಾಡಿದ ಮೊತ್ತವನ್ನು ಪಾವತಿಸಲು, ಕ್ರಮ ವಹಿಸುವುದಾಗಿ ವೊಡಾಫೋನ್ ಐಡಿಯಾ ಬಿಎಸ್ ಫೈಲಿಂಗ್ಸ್ ನಲ್ಲಿ ತಿಳಿಸಿದೆ.

ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್), ೨೪,೭೨೯ ಕೋಟಿ ರೂಪಾಯಿ ತರಂಗಾಂತರ  ಬಾಕಿ ಮತ್ತು, ೨೮,೩೦೯ ಕೋಟಿ ರೂಪಾಯಿ ಪರವಾನಗಿ ಶುಲ್ಕ ಸೇರಿದಂತೆ ಸುಮಾರು, ೫೩,೦೩೮ ಕೋಟಿ ರೂಪಾಯಿ ಬಾಕಿಯನ್ನು ಪಾವತಿ ಮಾಡಬೇಕಾಗಿದೆ ಎಂದು ಅಂದಾಜಿಸಲಾಗಿದೆ, ಯಾವುದೇ ಪರಿಹಾರ ನೀಡದಿದ್ದರೆ ವ್ಯವಹಾರ ಸ್ಥಗಿತಗೊಳಿಸುವ ಬಗ್ಗೆ ಕಂಪೆನಿ ಈಗಾಗಲೇ ಎಚ್ಚರಿಕೆ ನೀಡಿದೆ.
"ಡಿಸೆಂಬರ್ ೩೧, ೨೦೧೯ ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದ ಕಂಪನಿಯ ಹಣಕಾಸು ಹೇಳಿಕೆಗಳಲ್ಲಿ ಬಹಿರಂಗಪಡಿಸಿದಂತೆ, ಕಂಪೆನಿಯ ಮುಂದುವರಿಕೆ ಸಾಮರ್ಥ್ಯವು ಮಾರ್ಪಾಡು ಅರ್ಜಿಯ ಮೇಲೆ ಸುಪ್ರೀಂಕೋರ್ಟ್ ನೀಡಬಹುದಾದ ಸಕಾರಾತ್ಮಕ ಫಲಿತಾಂಶವನ್ನು ಅವಲಂಬಿಸಿದೆಎಂದು ಕಂಪನಿಯು ಹೇಳಿದೆ.

ಪ್ರಕರಣದ ವಿಚಾರಣೆ ೨೦೨೦ ಮಾರ್ಚ್ ೧೭ರಂದು ನಡೆಯಲಿದೆ.

Saturday, February 15, 2020

ಸುಪ್ರೀಂ ಛೀಮಾರಿ ಬೆನ್ನಲ್ಲೇ ೧.೪೭ ಲಕ್ಷ ಕೋಟಿ ರೂ ಬಾಕಿ ಪಾವತಿ: ಟೆಲ್ಕೋಗಳಿಗೆ ಕೇಂದ್ರ ಆದೇಶ

ಸುಪ್ರೀಂ ಛೀಮಾರಿ ಬೆನ್ನಲ್ಲೇ  .೪೭ ಲಕ್ಷ ಕೋಟಿ ರೂ ಬಾಕಿ ಪಾವತಿ: ಟೆಲ್ಕೋಗಳಿಗೆ  ಕೇಂದ್ರ ಆದೇಶ
ನವದೆಹಲಿ: ಹೊಂದಾಣಿಕೆ ಮಾಡಲಾದ ಒಟ್ಟು ಕಂದಾಯ (ಅಜೆಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪಾವತಿ ಸಂಬಂಧ ತನ್ನ ಆದೇಶವನ್ನು ಪಾಲಿಸದೇ ಇದ್ದುದಕ್ಕಾಗಿ ಸುಪ್ರೀಂಕೋರ್ಟ್ ಟೆಲಿಕಾಂ ಕಂಪನಿಗಳಿಗೆ 2020 ಫೆಬ್ರುವರಿ 14ರ ಶುಕ್ರವಾರ ಛೀಮಾರಿ ಹಾಕಿದ ಕೆಲವೇ ಗಂಟೆಗಳಲ್ಲಿ ಇದೇ ದಿನ ರಾತ್ರಿ ೧೧.೫೯ ಗಂಟೆಯ ಒಳಗಾಗಿ ಬಾಕಿಗಳನ್ನು ಪಾವತಿ ಮಾಡುವಂತೆ ಕೇಂದ್ರ ಸರ್ಕಾರ ಟೆಲಿಕಾಂ ಕಂಪೆನಿಗಳಿಗೆ ಆದೇಶ ನೀಡಿತು.
ಎಜಿಆರ್ ಬಾಕಿ ಪಾವತಿ ಸಂಬಂಧ ತನ್ನ ಆದೇಶದ ಪಾಲನೆ ಮಾಡದೇ ಇದ್ದುದಕ್ಕಾಗಿ ಟೆಲಿಕಾಂ ಕಂಪೆನಿಗಳ ಆಡಳಿತ ಮಂಡಳಿಗಳನ್ನು 2020 ಫೆಬ್ರುವರಿ 14ರ ಶುಕ್ರವಾರ  ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ಎಸ್.ಅಬ್ದುಲ್ ನಜೀರ್ ಮತ್ತು ಎಂ.ಆರ್. ಶಾ ಅವರ ಪೀಠವು, ನ್ಯಾಯಾಲಯ ನಿಂದನೆ ಕ್ರಮಗಳನ್ನು ಏಕೆ ಕೈಗೊಳ್ಳಬಾರದು ಎಂದು ಝಾಡಿಸಿತ್ತು.

ಸುಪ್ರೀಂಕೋರ್ಟ್ ಕೆಂಡಾಮಂಡಲ ಸಿಟ್ಟು ವ್ಯಕ್ತ ಪಡಿಸಿದ ಕೆಲವೇ ಗಂಟೆಗಳಲ್ಲಿ ಸರ್ಕಾರವು ಭಾರ್ತಿ ಏರ್ ಟೆಲ್, ವೊಡಾಫೋನ್ ಐಡಿಯಾದಂತಹ ಟೆಲಿಕಾಂ ಕಂಪೆನಿಗಳಿಗೆ ಎಜಿಆರ್ ಬಾಕಿಗಳನ್ನು 2020 ಫೆಬ್ರುವರಿ 14ರ ಶುಕ್ರವಾರ ರಾತ್ರಿ ೧೧.೫೯ ಗಂಟೆಗಳ ಒಳಗಾಗಿ ಪಾವತಿ ಮಾಡುವಂತೆ ಆದೇಶ ನೀಡಿತು.

ಒಟ್ಟು ೧೫ ಟೆಲಿಕಾಂ ಕಂಪೆನಿಗಳು ಸರ್ಕಾರಕ್ಕೆ ಸುಮಾರು .೪೭ ಲಕ್ಷ ಕೋಟಿ ರೂಪಾಯಿ ಹಣ ಪಾವತಿ ಮಾಡಬೇಕಾಗಿದೆ. ಇದರಲ್ಲಿ ೯೨,೬೪೨ ರೂಪಾಯಿಗಳು ಪಾವತಿ ಮಾಡದ ಪರವಾನಗಿ ಶುಲ್ಕವಾಗಿದ್ದರೆ, ೫೫,೦೫೪ ಕೋಟಿ ರೂಪಾಯಿಗಳು ತರಂಗಾಂತರ ಬಳಕೆ ಶುಲ್ಕವಾಗಿದೆ. ಕಂಪೆನಿಗಳು ಸರ್ಕಾರದ ಆದೇಶದಂತೆ ಶುಕ್ರವಾರ ಮಧ್ಯರಾತ್ರಿಯ ಒಳಗೆ ಹೇಗೆ ಹಣ ಪಾವತಿ ಮಾಡುತ್ತವೆ ಎಂಬುದು ಸ್ಪಷ್ಟವಾಗಿಲ್ಲ.

ಅಂಕಿ ಅಂಶಗಳ ಪ್ರಕಾರ ವೊಡಾಫೋನ್ ಐಡಿಯಾ ೫೩,೦೦೦ ಕೋಟಿ ರೂಪಾಯಿ, ಭಾರ್ತಿ ಏರ್ ಟೆಲ್ ೩೫,೫೦೦ ಕೋಟಿ ರೂಪಾಯಿ, ಈಗ ಸುಸ್ತಿಯಾಗಿರುವ ಟಾಟಾ ಟೆಲಿಸರ್ವೀಸಸ್ ೧೪,೦೦೦ ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಾಗಿದೆ.

ದೂರ ಸಂಪರ್ಕ ಇಲಾಖೆಯು ಬಾಕಿ ಪಾವತಿಗೆ ಆದೇಶ ಹೊರಡಿಸಿದ ತತ್ ಕ್ಷಣವೇ ೧೦,೦೦೦ ಕೋಟಿ ರೂಪಾಯಿಗಳನ್ನು ಫೆಬ್ರುವರಿ ೨೦ರ ಒಳಗೆ ಮತ್ತು ಉಳಿದ ಬಾಕಿಯನ್ನು ಮಾರ್ಚ್ ೧೭ರ ಒಳಗಾಗಿ ಪಾವತಿ ಮಾಡುವುದಾಗಿ ದೂರಸಂಪರ್ಕ ಇಲಾಖೆಗೆ ಎರ್ ಟೆಲ್ ತಿಳಿಸಿದೆ.

ಸುಪ್ರೀಂಕೋರ್ಟಿನಲ್ಲಿ ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ ೧೭ರಂದು ನಡೆಯಲಿದೆ.

Monday, February 8, 2016

TRAI disallows Differential Pricing

TRAI disallows Differential Pricing
New Delhi: Telecom Regulatory Authority of India ‘TRAI’ pm Monday announced that there shall not be any differential pricing by Telecom Service providers.

TRAI Chairman, R.S. Sharma, on Monday, 07th February 2016 told that ‘We have come out with a regulation which are essentially mandate that no service provider shall charge differential pricing.
If a service provider is in contravention of these regulations TRAI may direct them to withdraw tariff, Sharma added.

In the same situation, TRAI may also order the provider to pay Rs.50k for each day of contravention upto Rs.50lakh, He said.

We have made exemptions in case of emergencies where differential pricing could be offered in case of grave emergencies,TRAI Chairman said.

A service provider may reduce tariff for accessing or providing emergency services at times of grave public emergency he said.

The price should not be based on source, destination, type of content or the application TRAI said.

Advertisement