Showing posts with label ರಾಮಮಂದಿರ. Show all posts
Showing posts with label ರಾಮಮಂದಿರ. Show all posts

Monday, January 8, 2024

ಅಯೋಧ್ಯಾ ರಾಮಮಂದಿರ: ಕತ್ತಲ ಬೆಳಕಲ್ಲಿ ಭವ್ಯನೋಟ

ಅಯೋಧ್ಯಾ ರಾಮಮಂದಿರ: ಕತ್ತಲ ಬೆಳಕಲ್ಲಿ ಭವ್ಯನೋಟ

ಬೆಂಗಳೂರು: ಅಯೋಧ್ಯಾ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದ ಹಾಲಿ ಸ್ಥಿತಿಗತಿಯ ಚಿತ್ರ ಹಾಗೂ ವಿಡಿಯೋಗಳನ್ನು ೨೦೨೩ ಜನವರಿ ೮ರ ಸೋಮವಾರ ಬಿಡುಗಡೆ ಮಾಡಿದೆ.

ಈ ಚಿತ್ರಗಳಲ್ಲಿ ಕತ್ತಲೆಯಲ್ಲಿ ದೀಪಗಳ ಬೆಳಕಿನಲ್ಲಿ ಮಿನುಗುತ್ತಿರುವ ದೇವಾಲಯದ ಭವ್ಯ ಚಿತ್ರಗಳು ಹಾಗೂ ವಿಡಿಯೋ ಇದೆ.

ದೇವಾಲಯದ ಕುಬೇರ ಕೋಟೆಯಲ್ಲಿ ಸ್ಥಾಪಿಸಲಾಗಿರುವ ಭವ್ಯ ಜಟಾಯು ಶಿಲ್ಪ, ದೇವಾಲಯದ ಒಳಗಿನ ಸ್ಥಂಭಗಳ ನೋಟ, ಸ್ಥಂಭಗಳಲ್ಲಿನ ಅಲಂಕೃತ ದೇವತೆಗಳು, ದೇವಾಲಯದ ಒಳನೋಟ, ಮೇಲ್ಛಾವಣಿಯ ಕೆತ್ತನೆಯ ಸೊಬಗು ಕಣ್ಸೆಳೆಯುತ್ತಿದೆ.

ಕಳೆದ ತಿಂಗಳು ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವ ಹಿಂದೂ ಪರಿಷದ್‌ ನಾಯಕ ಚಂಪತ್‌ ರಾಯ್‌ ಅವರು ದೇವಾಲಯದ ಗರ್ಭಗುಡಿಯ ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ಗರ್ಭಗುಡಿಯಲ್ಲಿ ಜನವರಿ ೨೨ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ನಡೆಯಲಿದೆ.

ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ.

Image, Music video Courtesy:
 Shree Rama Janmabhoomi Thirtha Kshetra Trust, Ayodhya.

ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:


Thursday, August 20, 2020

ಅಯೋಧ್ಯಾ ರಾಮ ಮಂದಿರ ಕಾಮಗಾರಿ ಆರಂಭ

 ಅಯೋಧ್ಯಾ ರಾಮ ಮಂದಿರ ಕಾಮಗಾರಿ ಆರಂಭ

ಅಯೋಧ್ಯೆ: ಅಯೋಧ್ಯಾ ರಾಮ ಮಂದಿರ ನಿರ್ಮಾಣ ಕಾಮಗಾರಿಯು ಆರಂಭವಾಗಿದ್ದು, ೩೬-೪೦ ತಿಂಗಳಲ್ಲಿ ಮಂದಿರ ಪೂರ್ಣಗೊಳ್ಳಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್2020 ಆಗಸ್ಟ್ 20ರ ಗುರುವಾರ ತಿಳಿಸಿತು.

ಟ್ರಸ್ಟಿನ ಅಧಿಕೃತ ಟ್ವಿಟರ್ ಖಾತೆಯೂ ದೇಗುಲ ನಿರ್ಮಾಣ ಆರಂಭದ ಕುರಿತು ಮಾಹಿತಿ ನೀಡಿತು.

ರಾಮ ಜನ್ಮಭೂಮಿ ಮಂದಿರ ನಿರ್ಮಾಣ ಪ್ರಾರಂಭವಾಗಿದೆ. ಉತ್ತರಾಖಂಡದ ರೂರ್ಕಿಯಲ್ಲಿರುವ ಕೇಂದ್ರ ಕಟ್ಟಡ ಅಧ್ಯಯನ ಸಂಸ್ಥೆ (ಸಿಬಿಆರ್), ಚೆನ್ನೈಯ ಐಐಟಿ ಮತ್ತು ಎಲ್ ಅಂಡ್ ಟಿ (ಲಾರ್ಸೆನ್ ಮತ್ತು ಟೂಬ್ರೊ) ಎಂಜಿನಿಯರುಗಳು ಮಂದಿರದ ಸ್ಥಳದಲ್ಲಿ ಮಣ್ಣು ಪರೀಕ್ಷೆಯಲ್ಲಿ ತೊಡಗಿದ್ದಾರೆ. ನಿರ್ಮಾಣ ಕಾರ್ಯವು ೩೬-೪೦ ತಿಂಗಳಲ್ಲಿ ಮುಗಿಯುವ ನಿರೀಕ್ಷೆಯಿದೆ, ಎಂದು ಟ್ವೀಟ್ ತಿಳಿಸಿತು.

ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ಶೈಲಿಯನ್ನು ಅನುಸರಿಸಿ ಮಂದಿರದ ನಿರ್ಮಾಣ ಮಾಡಲಾಗುವುದು. ಭೂಕಂಪ, ಬಿರುಗಾಳಿ ಮತ್ತು ಇತರ ನೈಸರ್ಗಿಕ ವಿಕೋಪಗಳನ್ನು ತಾಳಿಕೊಳ್ಳುವಂತೆ ದೇಗುಲವನ್ನು ನಿರ್ಮಿಸಲಾಗುತ್ತಿದೆ. ಮಂದಿರ ನಿರ್ಮಾಣದಲ್ಲಿ ಕಬ್ಬಿಣವನ್ನು ಬಳಸದೇ ಇರಲು ನಿರ್ಧರಿಸಲಾಗಿದೆ, ಎಂದು ಟ್ರಸ್ಟ್ ಹೇಳಿತು.

ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಕಾರ್ಯವಾಹಕ ಚಂಪತ್ ರಾಯ್ ಅವರು ಸುದ್ದಿಗಾರರ ಜೊತೆ ಮಾತನಾಡಿ, ಅಯೋಧ್ಯಾ ರಾಮ ಮಂದಿರ ನಿರ್ಮಿಸಲು ಕಲ್ಲುಗಳನ್ನು ಮಾತ್ರ ಬಳಸಲಾಗುತ್ತದೆ. ದೇಗುಲವು ,೦೦೦ ವರ್ಷಗಳಿಗೂ ಹೆಚ್ಚು ಕಾಲ ಅನಿರ್ಭಾಧಿತವಾಗಿ ಉಳಿಯಲಿದೆ, ಎಂದು ಹೇಳಿದರು.

ದೇವಾಲಯದ ನಿರ್ಮಾಣದ ಉಸ್ತುವಾರಿಯನ್ನು ಎಲ್ ಅಂಡ್ ಟಿನೋಡಿಕೊಳ್ಳುತ್ತಿದೆ. ಚೆನ್ನೈಯ ಐಐಟಿಯು ಮಣ್ಣಿನ ಬಲವನ್ನು ಪರೀಕ್ಷಿಸುತ್ತಿದೆ. ಕಟ್ಟಡದ ಭೂಕಂಪ ನಿರೋಧಕಕತೆಯನ್ನು ಖಚಿತಪಡಿಸಿಕೊಳ್ಳಲು ಸಿಬಿಆರ್ ಸೇವೆ ಪಡೆದುಕೊಳ್ಳಲಾಗಿದೆಎಂದು ಅವರು ತಿಳಿಸಿದರು.

ದೇವಾಲಯವನ್ನು ನಿರ್ಮಿಸಲು ಸುಮಾರು ೧೦,೦೦೦ ತಾಮ್ರದ ಸರಳುಗಳು ಬೇಕಾಗುತ್ತವೆ. ಜನರು ನಿರ್ಮಾಣ ಪ್ರಕ್ರಿಯೆಯ ಭಾಗವಾಗಲು ಬಯಸಿದರೆ, ಅವರು ತಾಮ್ರವನ್ನು ದಾನ ಮಾಡುವ ಮೂಲಕ ಪಾಲ್ಗೊಳ್ಳಬಹುದು. ಕೇವಲ ಕಲ್ಲುಗಳನ್ನು ಬಳಸಿ ದೇವಾಲಯವನ್ನು ನಿರ್ಮಿಸುತ್ತಿರುವುದರಿಂದ ಗಾಳಿ, ಬಿಸಿಲು, ನೀರಿನಿಂದ ಯಾವುದೇ ತೊಂದರೆಯಾಗುವುದಿಲ್ಲ. ಹೀಗಾಗಿ ದೇವಾಲಯವು ಕನಿಷ್ಠ ,೦೦೦ ವರ್ಷಗಳವರೆಗೆ ಇರುತ್ತದೆಎಂದು ಚಂಪತ್ ರಾಯ್ ನುಡಿದರು.

ಆಗಸ್ಟ್ ೫ರಂದು ಪ್ರಧಾನಿ ನರೇಂದ್ರ ಮೋದಿ ಭವ್ಯ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

Thursday, August 6, 2020

ರಾಮಮಂದಿರ ಭೂಮಿ ಪೂಜೆ: ವಿಶ್ವದಾದ್ಯಂತ ವ್ಯಾಪಕ ವೀಕ್ಷಣೆ

ರಾಮಮಂದಿರ ಭೂಮಿ ಪೂಜೆ: ವಿಶ್ವದಾದ್ಯಂತ ವ್ಯಾಪಕ ವೀಕ್ಷಣೆ

ನವದೆಹಲಿ: ಆಗಸ್ಟ್ ರಂದು ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದ ನೇರ ಪ್ರಸಾರವನ್ನು ವಿಶ್ವದಾದ್ಯಂತ ವ್ಯಾಪಕವಾಗಿ ವೀಕ್ಷಿಸಲಾಗಿದ್ದು, ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಥೈಲ್ಯಾಂಡ್, ನೇಪಾಳ ಮತ್ತು ಇತರ ಹಲವಾರು ದೇಶಗಳ ದೂರದರ್ಶನ ಕೇಂದ್ರಗಳು ಪ್ರಸಾರ ಮಾಡಿದ್ದವು.

ಅನೇಕ ಕ್ಯಾಮೆರಾಗಳು, ಹೊರಗಿನ ಪ್ರಸಾರ (ಒಬಿ) ಮತ್ತು ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (ಡಿಜಿಟಲ್ ಉಪಗ್ರಹ ಸುದ್ದಿ ಸಂಗ್ರಹ- ಡಿಎಸ್‌ಎನ್‌ಜಿ) ವ್ಯಾನ್‌ಗಳ ಬಳಕೆಯ ಮೂಲಕ ಮುಖ್ಯ ಪ್ರಸಾರವನ್ನು ದೂರದರ್ಶನ ನಿರ್ವಹಿಸಿತ್ತು.

ಜನರು ಕಾರ್ಯಕ್ರಮವನ್ನು ಯೂಟ್ಯೂಬ್ ಮೂಲಕವೂ ವೀಕ್ಷಿಸಿದರು. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ನೆದರ್‌ಲ್ಯಾಂಡ್ಸ್, ಜಪಾನ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಇ, ಸೌದಿ ಅರೇಬಿಯಾ, ಒಮಾನ್, ಕುವೈತ್, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾ, ಇಂಡೋನೇಷ್ಯಾ, ಥೈಲ್ಯಾಂಡ್, ಫಿಲಿಪೈನ್ಸ್, ಸಿಂಗಾಪುರ, ಶ್ರೀಲಂಕಾ ಮತ್ತು ಮಾರಿಷಸ್ ದೇಶಗಳಲ್ಲಿ ಅತ್ಯಂತ ಹೆಚ್ಚು ಮಂದಿ ಕಾರ್‍ಯಕ್ರಮ ವೀಕ್ಷಿಸಿದ್ದಾರೆ ಎಂದು ದೂರದರ್ಶನವು 2020 ಆಗಸ್ಟ್ 06ರ ಗುರುವಾರ ತಿಳಿಸಿತು.

ಭಾರತದಲ್ಲಿ, ೨೦೦ ಕ್ಕೂ ಹೆಚ್ಚು ಚಾನೆಲ್‌ಗಳು ಕಾರ್ಯಕ್ರಮವನ್ನು ಪ್ರಸಾರ ಮಾಡಿವೆ ಎಂದು ದೂರದರ್ಶನ ಹೇಳಿತು.

ಕಾರ್‍ಯಕ್ರಮದ ಸಿಗ್ನಲ್‌ಗಳನ್ನು ಸುದ್ದಿ ಸಂಸ್ಥೆ ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್ (ಎಎನ್‌ಐ) ಮೂಲಕ ಸುಮಾರು ೧೨೦೦ ಸ್ಟೇಷನ್‌ಗಳಿಗೆ ಮತ್ತು ಅಸೋಸಿಯೇಟೆಡ್ ಪ್ರೆಸ್ ಟೆಲಿವಿಷನ್ ನ್ಯೂಸ್ (ಎಪಿಟಿಎನ್) ಮೂಲಕ ವಿಶ್ವದ ೪೫೦ ಮಾಧ್ಯಮಗಳಿಗೆ ವಿತರಿಸಲಾಯಿತು. ದೂರದರ್ಶನದ ನ್ಯೂಸ್ ಆರ್ಮ್ ಡಿಡಿ ನ್ಯೂಸ್, ಏಷ್ಯಾ ಪೆಸಿಫಿಕ್ ರಾಷ್ಟ್ರಗಳೊಂದಿಗೆ ಪ್ರತ್ಯೇಕವಾಗಿ ದೃಶ್ಯಗಳನ್ನು ಹಂಚಿಕೊಂಡಿತು.

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಮೂರು ದಶಕಗಳ ಕಾಲ ತನ್ನ ರಾಜಕೀಯವನ್ನು ರೂಪಿಸಿದ್ದ ಬಿಜೆಪಿಯಮಂದಿರ ಆಂದೋಲನವನ್ನು ಫಲಪ್ರದಗೊಳಿಸಿದರು.

ವೇದಘೋಷ, ಶ್ಲೋಕಗಳ ಪಠಣದ ಮಧ್ಯೆ, ಪ್ರಧಾನಿ ಮೋದಿ ಶತಮಾನಗಳಿಂದ ಕಾಯಲಾಗಿರುವ ರಾಮಮಂದಿರಕ್ಕೆ ಮೊತ್ತು ಮೊದಲ ಇಟ್ಟಿಗೆಗಳನ್ನು ಶ್ರೀರಾಮನು ಜನ್ಮತಳೆದ ಸ್ಥಳ ಎಂಬುದಾಗಿ ಭಕ್ತರು ನಂಬುವ ಸ್ಥಳದಲ್ಲಿ ಇರಿಸಿ ಪೂಜೆ ನೆರವೇರಿಸಿದರು.

೧೯೯೨ ರಲ್ಲಿ ಬಾಬರಿ ಮಸೀದಿಯನ್ನು ಕರಸೇವಕರು ನೆಲಸಮಗೊಳಿಸಿದ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲು ಅನುಮತಿ ನೀಡಿ, ಸುಪ್ರೀಂಕೋರ್ಟ್ ಕಳೆದ ವರ್ಷ ತೀರ್ಪಿನಿಂದ ಸಾಧ್ಯವಾದ ಸಮಾರಂಭವು "ಶತಮಾನಗಳ ಕಾಯುವಿಕೆಯನ್ನು ಕೊನೆಗೊಳಿಸಿದೆ ಎಂದು ಪ್ರಧಾನಿ ಹೇಳಿದರು.

ಘಟನೆಯು ಭಾರತದ ಸಾಮಾಜಿಕ ಸಾಮರಸ್ಯ ಮತ್ತು ಜನರ ಉತ್ಸಾಹವನ್ನು ವ್ಯಾಖ್ಯಾನಿಸುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ರಾಮಮಂದಿರ ನಿರ್ಮಾಣವು ಧಾರ್ಮಿಕ ಸಂಬಂಧಕ್ಕಿಂತ ಹೆಚ್ಚಿನದಾಗಿದೆ ಮತ್ತು ನಿರ್ಮಾಣವು ಮಾನವೀಐ ಮೌಲ್ಯಗಳ ಅತ್ಯುತ್ತಮ ಗೌರವಾಗಿ ನಿಲ್ಲುತ್ತದೆ ಎಂದು ನುಡಿದರು.

ಉತ್ತರ ಪ್ರದೇಶದ ಅಯೋಧ್ಯಾ ದೇಗುಲ ನಗರಿಯಲ್ಲಿ ರಾಮಮಂದಿರ ಶಿಲಾನ್ಯಾಸ ಸಮಾರಂಭ ನಡೆಯಿತು. ಹನುಮಾನ್ ಗರ್ಹಿ ದೇವಸ್ಥಾನದಿಂದ ಸಮಾರಂಭದ ಸ್ಥಳಕ್ಕೆ (ರಾಮ ಜನ್ಮಭೂಮಿ) ಹೋಗುವ ರಸ್ತೆ ಸಂಜೆ ಪ್ರಕಾಶಮಾನವಾದ ದೀಪಗಳಿಂದ ಝಗಮಗಿಸಿತು. ಅಂಗಡಿಗಳು, ಮನೆಗಳು ಮತ್ತು ಅತಿಥಿ ಗೃಹಗಳ ಹೊರಗೆ ಹಣತೆಗಲ್ಲಿ ದೀಪಗಳನ್ನು ಬೆಳಗಿಸಲಾಯಿತು.

ಕೆಲವರು ದೇಗುಲ ನಗರಿಯಲ್ಲಿ ಪಟಾಕಿ ಸಿಡಿಸಿ ಸಂಬ್ರಮ ಆಚರಿಸಿದರು.

೧೯೯೦ರಲ್ಲಿ ರಾಮಮಂದಿರ ನಿರ್ಮಾಣಕ್ಕೆ ಜನ ಬೆಂಬಲ ಕ್ರೋಡೀಕರಿಸಲು ಅಂದಿನ ಬಿಜೆಪಿ ಅಧ್ಯಕ್ಷ ಲಾಲ್ ಕೃಷ್ಣ ಅಡ್ವಾಣಿ ಅವರು ಸೋಮನಾಥದಿಂದ ಅಯೋಧ್ಯೆಯವರೆಗೆ ರಾಮರಥ ಯಾತ್ರೆ ಕೈಗೊಂಡಿದ್ದರು.

Advertisement