Showing posts with label ಚೆಂಡೆ. Show all posts
Showing posts with label ಚೆಂಡೆ. Show all posts

Sunday, April 26, 2026

ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ

 ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ

ಬೆಂಗಳೂರು ಗಿರಿನಗರದ ಒಡೆಯ ಶ್ರೀ ಮಹಾಗಣಪತಿಯ ರಥೋತ್ಸವವು ೨೦೨೬ ಏಪ್ರಿಲ್‌ ೨೬ರ ಭಾನುವಾರ ಸಡಗರದೊಂದಿಗೆ ನೆರವೇರಿತು.

ಶ್ರೀ ರಾಮಚಂದ್ರಾಪುರ ಮಠದ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಶ್ರೀ ಮಹಾಗಣಪತಿ ಜಾತ್ರೆಯ ಪ್ರಯುಕ್ತ ಏಪ್ರಿಲ್‌ ೨೨ರಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಏಪ್ರಿಲ್‌ ೨೨ರಂದು ನವಗ್ರಹ ಶಾಂತಿ ಹೋಮ, ಅಥರ್ವ ಶೀರ್ಷ ಹೋಮ, ಏಪ್ರಿಲ್‌ ೨೩ರಂದು ಅಥರ್ವ ಶೀರ್ಷ ಹೋಮ, ದುರ್ಗಾ ದೀಪ ನಮಸ್ಕಾರ, ಏಪ್ರಿಲ್‌ ೨೪ರಂದು ಸುಬ್ರಹ್ಮಣ್ಯ ಹೋಮ, ರಂಗಪೂಜೆ, ಏಪ್ರಿಲ್‌ ೨೫ರಂದು ನಾಗಮೂಲಮಂತ್ರ ಹೋಮ, ಆಶ್ಲೇಷಬಲಿ, ಪಲ್ಲಕ್ಕಿ ಉತ್ಸವ ನಡೆದವು.

ಏಪ್ರಿಲ್‌ ೨೬ರಂದು ಅಥರ್ವಶೀರ್ಷ ಹೋಮ, ರಥೋತ್ಸವ, ದೇವನೃತ್ಯ ಕಾರ್ಯಕ್ರಮಗಳು ನಡೆದವು. ಏಪ್ರಿಲ್‌ ೨೭ರಂದು ಸಹಸ್ರಮೋದಕ ಅಥರ್ವಶೀರ್ಷ ಹವನ ಹಾಗೂ ಅವಭೃತದೊಂದಿಗೆ ಜಾತ್ರೆ ಮುಕ್ತಾಯ.

ಭಾನುವಾರ ನಡೆದ ಸಂಭ್ರಮದ ರಥೋತ್ಸವದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.

ಈ ಸಂದರ್ಭದ ಕೆಲವು ವಿಡಿಯೋಗಳು ಹಾಗೂ ಚಿತ್ರಗಳು ಇಲ್ಲಿವೆ.

Saturday, September 6, 2025

ಹೆಗಡೆ ನಗರದಲ್ಲಿ ಗಣಪ ಸಂಭ್ರಮ

 ಹೆಗಡೆ ನಗರದಲ್ಲಿ ಗಣಪ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ೨೦೨೫ ಸೆಪ್ಟೆಂಬರ್‌ ೫ರ ಶುಕ್ರವಾರ ಗಣಪ ಸಂಭ್ರಮ.

ಬಡಾವಣೆಯ ೨೫ನೇ ವರ್ಷ ಹಾಗೂ ದೇವಸ್ಥಾನದ ೨ನೇ ವರ್ಷದ ಮೂರು ದಿನಗಳ ಗಣೇಶೋತ್ಸವ ಶುಕ್ರವಾರ ಆರಂಬವಾಯಿತು.


ಬೆಳಗ್ಗೆ ಗಣಪತಿ ಪ್ರತಿಷ್ಠಾಪನೆ ಮಂಗಳಾರತಿಯ ಬಳಿಕ ಭಕ್ತರಿಗೆ, ದೇವಸ್ಥಾನದಲ್ಲಿ ಇದೇ ಪ್ರಪ್ರಥಮ ಬಾರಿಗೆ ದೇವಾಲಯದಲ್ಲೇ ತಯಾರಿಸಿದ ಪ್ರಸಾದ ಸೇವೆಯ ವ್ಯವಸ್ಥೆ ಮಾಡಲಾಗಿತ್ತು. ಅಡುಗೆಗೆ ಬೇಕಾದ ಸಕಲ ಪರಿಕರಗಳನ್ನು ದೇವಸ್ಥಾನ ಸೇವಾಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ ಅವರು ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದರು. ಅಡುಗೆಗೆ ಬೇಕಾದ ಸುವಸ್ತುಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ಒದಗಿಸಿದ್ದರು.

ಮಧ್ಯಾಹ್ನದ ಬಳಿಕ ಮಹಿಳೆಯರಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಸಂಜೆ ಕೇರಳದ ಚೆಂಡೆವಾದಕರಿಂದ ಕೇರಳ, ದಕ್ಷಿಣಕನ್ನಡದ ದೇವಸ್ಥಾನಗಳಲ್ಲಿ ನಡೆಯುವ ಪರಂಪರಾಗತ ಚೆಂಡೆ ವಾದನದ ಕಾರ್ಯಕ್ರಮ, ಬಡಾವಣೆಯ ನಿವಾಸಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಚೆಂಡೆ ವಾದಕರೊಂದಿಗೆ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಘೋಷಯಾತ್ರಾ ಕಾರ್ಯಕ್ರಮ ನಡೆಯಿತು.

ಬಡಾವಣೆಯ ಪುಟಾಣಿ ಸ್ಫೂರ್ತಿ ಹಾಗೂ ಪರಶಿವಮೂರ್ತಿ-ಮಾಧವಿ ದಂಪತಿಯ ಪುತ್ರ ಪ್ರತೀಕ್ಷಾ ಸುಂದರವಾದ ಭರತನಾಟ್ಯ ಪ್ರದರ್ಶನಗಳನ್ನು ನೀಡಿದರು. ಭಕ್ತರಿಂದ ಭಜನೆ ಕೂಡಾ ಜರುಗಿತು.

ಚೆಂಡೆವಾದನದೊಂದಿಗೆ ಮಹಾಪೂಜೆ- ಮಹಾಮಂಗಳಾರತಿಯ ಬಳಿಕ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದ ಕೆಲವು ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ.







Monday, May 1, 2023

ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ..

 ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ..

ಹೌದು. ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ. ಇದು ಬೆಂಗಳೂರಿನ ಗಿರಿನಗರದ ಮೂಲ ದೇವರಾದ ಮಹಾಗಣಪತಿಯ ರಥೋತ್ಸವ.
ಬೆಂಗಳೂರಿನ ಗಿರಿನಗರದಲ್ಲಿ ಮಹಾಗಣಪತಿ ರಥೋತ್ಸವ ಏಪ್ರಿಲ್‌ ೨೬ರಿಂದ ಮೇ ೦೧ರವರೆಗೆ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಿತು.

ಕರ್ನಾಟಕದ ಪಶ್ಚಿಮ ಕರಾವಳಿಯ ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಹಾಗೂ ಕೇರಳದಲ್ಲಿ ನಡೆಯುವ ಮಾದರಿಯಲ್ಲಿ ಜಾತ್ರೆ ಹಾಗೂ ರಥೋತ್ಸವ ಇಲ್ಲಿನ ಆಸುಪಾಸಿನ ಭಕ್ತಾದಿಗಳನ್ನು ವಿಶೇಷವಾಗಿ ಆಕರ್ಷಿಸಿತು.

ಕೇರಳ, ದಕ್ಷಿಣ ಕನ್ನಡ, ಉಡುಪಿ ದೇವಾಲಯಗಳ ಮಾದರಿಯ  ದರ್ಶನಬಲಿ, ದೇವನೃತ್ಯ, ರಂಗಪೂಜೆ, ಮತ್ತು ವಿಶೇಷವಾಗಿ ಚೆಂಡೆ ವಾದನ, ಕೊಂಬು ಕಹಳೆಯೊಂದಿಗೆ ಮಹಾರಥೋತ್ಸವ ಜರುಗಿತು.


ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕೂಡಾ ೨೦೨೨ರಲ್ಲಿ ಕೇರಳ, ಕರ್ನಾಟಕದ ಪಶ್ಚಿಮ ಕರಾವಳಿ ಮಾದರಿಯಲ್ಲೇ ನೆರವೇರಿತ್ತು.


ಏಪ್ರಿಲ್‌ ೩೦ರಂದು ನಡೆದ ಮಹಾಗಣಪತಿ ದೇವರ ರಥೋತ್ಸವ ಸಂಭ್ರಮದ ವಿಡಿಯೋಗಳು ಇಲ್ಲಿವೆ.


Advertisement