Showing posts with label ಭರತನಾಟ್ಯ. Show all posts
Showing posts with label ಭರತನಾಟ್ಯ. Show all posts

Sunday, August 31, 2025

ವಿದುಷಿ ವಿ. ದೀಕ್ಷಾ ಭರತನಾಟ್ಯ ವಿಶ್ವದಾಖಲೆ

 ವಿದುಷಿ ವಿ. ದೀಕ್ಷಾ ಭರತನಾಟ್ಯ ವಿಶ್ವದಾಖಲೆ

ಡುಪಿ ಜಿಲ್ಲೆಯ ಭರತನಾಟ್ಯ ಕಲಾವಿದೆ ವಿದುಷಿ ವಿ. ದೀಕ್ಷಾ ಅವರು ಸತತ 216 ಗಂಟೆಗಳ ಕಾಲ ನಿರಂತರವಾಗಿ ನೃತ್ಯ ಮಾಡಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ್ದಾರೆ.
2025 ಆಗಸ್ಟ್
21 ರಂದು ಮಧ್ಯಾಹ್ನ 3:30 ಕ್ಕೆ ಆರಂಭವಾದ ಈ ಮ್ಯಾರಥಾನ್ ನೃತ್ಯ ಪ್ರದರ್ಶನವು ಒಂಬತ್ತು ದಿನಗಳ ಕಾಲ ನಿರಂತರವಾಗಿ ನಡೆದು ಆಗಸ್ಟ್ 30 ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಮೂಲಕ ಅವರು ಈ ಹಿಂದೆ ಮಂಗಳೂರಿನ ರೆಮೋನಾ ಎವೆಟ್ಟೆ ಪಿರೇರಾ ಅವರು 170 ಗಂಟೆಗಳ ಕಾಲ ನಿರಂತರ ನೃತ್ಯ ಮಾಡಿದ ದಾಖಲೆಯನ್ನು ಮುರಿದು ಹೊಸ ವಿಶ್ವದಾಖಲೆ ನಿರ್ಮಿಸಿದರು.
ಬ್ರಹ್ಮಾವರ ತಾಲೂಕಿನ ಮುಂಡಿಂಜಿದ್ದು ಗ್ರಾಮದವರಾದ ದೀಕ್ಷಾ ಅವರಿಗೆ ಭರತನಾಟ್ಯದಲ್ಲಿ ಮಹತ್ತರ ಸಾಧನೆ ಮಾಡುವ ಮಹದಾಸೆಯಿತ್ತು. ಈ ಪ್ರಯತ್ನವು ಒಂಬತ್ತು ದಿನಗಳ ನಿರಂತರ ನೃತ್ಯಕ್ಕೆ ಅವರನ್ನು ಪ್ರೇರೇಪಿಸಿತು. ಅವರ ಈ ಭರ್ಜರಿ ಸಾಧನೆಯು ಭಾರತದ ನೃತ್ಯಲೋಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ ಅಥವಾ ಈ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿರಿ. ಇಲ್ಲವೇ ಮೇಲಿನ ಸಾಧನೆ/ಸಾಧಕರು ಪುಟಕ್ಕೆ ಭೇಟಿ ನೀಡಿ.

Saturday, March 1, 2025

ಸಪ್ತ ಕಲಾವಿದೆಯರ ʼಪ್ರಥಮ ಪ್ರವೇಶʼ

 ಸಪ್ತ ಕಲಾವಿದೆಯರ ʼಪ್ರಥಮ ಪ್ರವೇಶʼ

ಲಾಂಜಲಿ ಆರ್ಟ್ ಅಕಾಡೆಮಿಯ‌ ಖ್ಯಾತ ನೃತ್ಯ ಕಲಾವಿದೆ ಶ್ರೀಮತಿ ಪ್ರತಿಭಾ ಸತ್ಯವಣ್ಣನ್ ಅವರಿಂದ ತರಬೇತಿ ಪಡೆದ ಏಳು ಪ್ರತಿಭಾವಂತ ಭರತನಾಟ್ಯ ಕಲಾವಿದರಿಂದ “ಪ್ರಥಮ ಪ್ರವೇಶ” ಕಾರ್ಯಕ್ರಮ.

ಮುಖ್ಯ ಅತಿಥಿಗಳು:

ಶ್ರೀಮತಿ ಅನುಷಾ ಕೆ ವಿ

ಭೂದೇವಿ ನಾಟ್ಯಶಾಲಾ ಸಂಸ್ಥಾಪಕಿ

ಶ್ರೀ ರಾಮಕೃಷ್ಣ ಉಪಾಧ್ಯ

ಲೇಖಕ, ಹಿರಿಯ ಪತ್ರಕರ್ತ

ಸ್ಥಳ: ಎ ಡಿ ಎ ರಂಗಮಂದಿರ

ಜೆ ಸಿ ರಸ್ತೆ, ರವೀಂದ್ರ ಕಾಲಕ್ಷೇತ್ರ ಎದಿರು

ದಿನಾಂಕ: ಭಾನುವಾರ, ಮಾರ್ಚ್ 2

ಸಮಯ: ಬೆಳಿಗ್ಗೆ 10.15 ಕ್ಕೆ

Wednesday, September 18, 2024

ಗಣೇಶೋತ್ಸವ ೨೦೨೪: ಭರತನಾಟ್ಯ

 ಗಣೇಶೋತ್ಸವ ೨೦೨೪: ಭರತನಾಟ್ಯ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ೨೦೨೪ ಸೆಪ್ಟೆಂಬರ್‌ ೧೩, ೧೪ ಮತ್ತು ೧೫ರಂದು ಗಣೇಶೋತ್ಸವ ಕಾರ್ಯಕ್ರಮ ಸಡಗರದೊಂದಿಗೆ ನಡೆಯಿತು. ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೈಸೂರಿನ ವಿದುಷಿ ಶ್ರೀಮತಿ ಮಧುರಾ ಕಾರಂತ್‌ ಅವರು ತಮ್ಮ ಭರತನಾಟ್ಯದ ಮೂಲಕ ಪ್ರೇಕ್ಷಕರ ಮನ ಗೆದ್ದರು. ಮಧುರಾ ಅವರ ಭರತನಾಟ್ಯದ ಒಂದು ದೃಶ್ಯ ಇಲ್ಲಿದೆ:
Click here to view Video- ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:

ಇವುಗಳನ್ನೂ ಓದಿರಿ:

Advertisement