Showing posts with label Kartarpur corridar. Show all posts
Showing posts with label Kartarpur corridar. Show all posts

Monday, December 2, 2019

ಕರ್ತಾರಪುರ ಕಾರಿಡಾರ್: ಪಾಕಿಸ್ತಾನದ ’ದುಷ್ಟ ಯೋಜನೆ ಅನಾವರಣ

ಕರ್ತಾರಪುರ ಕಾರಿಡಾರ್: ಪಾಕಿಸ್ತಾನದ
'ದುಷ್ಟ ಯೋಜನೆ' ಅನಾವರಣ
ಪಾಕ್ ರೈಲ್ವೇ ಸಚಿವನ ಹೇಳಿಕೆಗೆ ಸಿಟ್ಟಿಗೆದ್ದ ಪಂಜಾಬ್ ಮುಖ್ಯಮಂತ್ರಿ
ಚಂಡೀಗಢ:ಕರ್ತಾರಪುರ ಕಾರಿಡಾರ್ಯೋಜನೆಯು ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಮೆದುಳಿನ ಕೂಸುಎಂಬ ಮಾಹಿತಿಯನ್ನು ಪಾಕಿಸ್ತಾನಿ ರೈಲ್ವೇ ಸಚಿವ ಶೇಖ್ ರಶೀದ್ ಬಹಿರಂಗ ಪಡಿಸುವುದರೊಂದಿಗೆ ಪಾಕಿಸ್ತಾನದ ಉಪಕ್ರಮದ ಹಿಂದಿನಕ್ರೂರ ಉದ್ದೇಶ ಇದೀಗ ಅನಾವರಣಗೊಂಡಿತು.

ಉಭಯ ದೇಶಗಳ ಮಧ್ಯೆ ಶಾಂತಿಯ ಸೇತುವೆಯಾಗಬಲ್ಲುದು ಎಂಬುದಾಗಿ ಭಾವಿಸಲಾಗಿದ್ದ ಕರ್ತಾರಪುರ ಕಾರಿಡಾರ್ ಯೋಜನೆಯು ಭಾರತವು ತನ್ನ ಮೇಲಾದ ಗಾಯವನ್ನು ಎಂದಿಗೂ ಮರೆಯಂದಂತಹ ಘಾಸಿಯನ್ನು ಮಾಡಲಿದೆ. ಇದು ಜನರಲ್ ಬಜ್ವಾ ರೂಪಿಸಿರುವ ಯೋಜನೆಎಂಬುದಾಗಿ ಪಾಕ್ ಸಚಿವ ಹೇಳಿರುವುದು ಮಾಧ್ಯಮಗಳಲ್ಲಿ  2019 ಡಿಸೆಂಬರ್ 01ರ ಭಾನುವಾರ ವರದಿಯಾಗಿದೆ.

ಕರ್ತಾರಪುರ ಕಾರಿಡಾರ್ ಯೋಜನೆಯು ಪಾಕ್ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಮೆದುಳಿನ ಕೂಸು ಎಂಬುದಾಗಿ ಪಾಕಿಸ್ತಾನಿ ಸಚಿವರು ಹೇಳಿರುವ ಹಿನ್ನೆಲೆಯಲ್ಲಿ ಪಾಕ್ ದುರುದ್ದೇಶದ ಬಗ್ಗೆ ಪಂಜಾಬಿನ ಮುಖ್ಯಮಂತ್ರಿ  ಕ್ಯಾಪ್ಟನ್ ಅಮರೀಂದರ್ ಸಿಂಗ್ ಭಾನುವಾರ ಕೆಂಡಾಮಂಡಲ ಸಿಟ್ಟು ವ್ಯಕ್ತ ಪಡಿಸಿದರು.

ಪಾಕಿಸ್ತಾನದ ದುಷ್ಟ ಯೋಜನೆಸ್ವತಃ ಪಾಕಿಸ್ತಾನದ ಸಚಿವನಿಂದಲೇ ಅನಾವರಣಗೊಂಡಿರುವುದು ಅತ್ಯಂತ ಕಳವಳದ ವಿಷಯ. ಪಾಕ್ ರೈಲ್ವೇ ಸಚಿವನ ಹೇಳಿಕೆಯು ವಿಷಯಕ್ಕೆ ಸಂಬಂಧಿಸಿದಂತೆ ನಾನು ಪ್ರಾರಂಭದಿಂದಲೇ ನೀಡುತ್ತಾ ಬಂದಿರುವ ಅಭಿಪ್ರಾಯವನ್ನು ಸಮರ್ಥಿಸಿದೆಎಂದು ಕ್ಯಾಪ್ಟನ್ ಹೇಳಿದರು.

ಉಭಯ ರಾಷ್ಟ್ರಗಳ ನಡುವಣ ಶಾಂತಿಯ ಸೇತುವಾಗಬಲ್ಲುದು ಎಂಬುದಾಗಿ ಭಾರತವು ಹಾರೈಸಿದ ಕರ್ತಾರಪುರ ಕಾರಿಡಾರ್ ಯೋಜನೆಯು ಪಾಕಿಸ್ತಾನ ಕ್ರೂರವಾದ ದುಷ್ಟ ಯೋಜನೆಯಾಗಿದೆ ಎಂಬುದು ಪಾಕ್ ಸಚಿವ ರಶೀದ್ ಹೇಳಿಕೆಯಿಂದ ಸ್ಪಷ್ಟಗೊಂಡಿದೆ ಎಂದು ಅವರು ನುಡಿದರು.

ಭಾರತವು ತನ್ನ ಮೇಲಾದ ಗಾಯವನ್ನು ಎಂದಿಗೂ ಮರೆಯಲಾಗದಂತಹ ರೀತಿಯ ಘಾಸಿಯನ್ನು ಕಾರಿಡಾರ್ ರಾಷ್ಟ್ರದ ಮೇಲೆ ಮಾಡಲಿದೆ. ಇದು ಕರ್ತಾರಪುರ ಕಾರಿಡಾರ್ಗೆ ಸಂಬಂಧಿಸಿದಂತೆ ಜನರಲ್ ಬಜ್ವಾ ಅವರು ರೂಪಿಸಿರುವ ಯೋಜನೆಎಂಬುದಾಗಿ ರಶೀದ್ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು.

ಇದು ಭಾರತದ ಭದ್ರತೆ ಮತು ಸಮಗ್ರತೆಯ ಮೇಲಿನ ಬಹಿರಂಗ ನಿರ್ದಯ ಬೆದರಿಕೆಎಂಬುದಾಗಿ ಬಣ್ಣಿಸಿದ ಕ್ಯಾಪ್ಟನ್ ಅಮರೀಂದರ್ ಸಿಂಗ್, ಯಾವುದೇ ದುಸ್ಸಾಹಸದ ಯತ್ನಕ್ಕೆ ಇಳಿಯದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.

ಕಾರಿಡಾರ್ ತೆರೆದುದಕ್ಕಾಗಿ ನಾವು ವ್ಯಕ್ತ ಪಡಿಸಿರುವ ಕೃತಜ್ಞತೆಯನ್ನು ನಮ್ಮ ದೌರ್ಬಲ್ಯ ಎಂಬುದಾಗಿ ಅರ್ಥ ಮಾಡಿಕೊಳ್ಳುವ ತಪ್ಪು ಮಾಡಬೇಡಿ. ತನ್ನ ಗಡಿ ಅಥವಾ ಜನರ ಮೇಲೆ ಪಾಕಿಸ್ತಾನ ನಡೆಸುವ ಯಾವುದೇ ದಾಳಿಯ ಯತ್ನಕ್ಕೆ ಭಾರತ ತಕ್ಕ ಉತ್ತರ ನೀಡುತ್ತದೆಎಂದು ಸಿಂಗ್ ದೃಢವಾಗಿ ಎಚ್ಚರಿಕೆ ನೀಡಿದರು.

ಭಾರತದ ವಿರುದ್ಧ ರೂಪಿಸಲಾಗಿರುವ ಪಾಕಿಸ್ತಾನದ ತುಚ್ಛ ಮಹತ್ವಾಕಾಂಕ್ಷೆಗಳು ಈಡೇರಲು ಭಾರತ ಎಂದಿಗೂ ಅವಕಾಶ ನೀಡುವುದಿಲ್ಲ. ಪಾಕಿಸ್ತಾನದ ಇಂತಹ ಯಾವುದೇ ಯತ್ನಕ್ಕೆ ತನ್ನನ್ನು ಎಂದಿಗೂ ರಕ್ಷಿಸಿಕೊಳ್ಳಲು ಸಾಧ್ಯವಾಗದಂತಹ ರೀತಿಯ ಸೇಡಿನ ಕ್ರಮವನ್ನು ಭಾರತ ಕೈಗೊಳ್ಳುತ್ತದೆಎಂದು ಪಂಜಾಬ್ ಮುಖ್ಯಮಂತ್ರಿ ಘೋಷಿಸಿದರು.

ಭಾರತದ ಭಕ್ತರಿಗೆ ಚಾರಿತ್ರಿಕ ಕರ್ತಾರಪುರ ಗುರುದ್ವಾರಕ್ಕೆ ತಲುಪಲು ಸಾಧ್ಯವಾಗುವಂತೆ ಕಾರಿಡಾರ್ ತೆರೆದುದಕ್ಕೆ ಒಬ್ಬ ಸಿಕ್ಖನಾಗಿ ನಾನು ಅತ್ಯಂತ ಸಂತಸಗೊಂಡಿದ್ದೇನೆ. ಆದರೆ ಅದು ನಮ್ಮ ರಾಷ್ಟ್ರಕ್ಕೆ ನೀಡಿರುವ ಬೆದರಿಕೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬುದಾಗಿ ನಾನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆಎಂದು ಅಮರೀಂದರ್ ಸಿಂಗ್ ನುಡಿದರು.

ವಾಸ್ತವವಾಗಿ ಮುಖ್ಯಮಂತ್ರಿಯವರು ವಿಷಯಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ಇರುವಂತೆ ನಿರಂತರ ಹೇಳುತ್ತಲೇ ಬಂದಿದ್ದರು. ಪಾಕಿಸ್ತಾನವು ಕಾರಿಡಾರ್ ತೆರೆಯುವ ಮೂಲಕ ಸಿಕ್ಖರ ಸಹಾನುಭೂತಿ ಗಳಿಸಲು ಯತ್ನಿಸುತ್ತಿದೆ. ಆದರೆ ಅದರ ಉದ್ದೇಶ ಐಎಸ್ ಬೆಂಬಲದರೆಫರೆಂಡಮ್ ೨೦೨೦ಕಾರ್ಯಸೂಚಿಯ ಅನುಷ್ಠಾನ ಎಂದು ಮುಖ್ಯಮಂತ್ರಿ ಪದೇ ಪದೇ ಎಚ್ಚರಿಕೆ ನೀಡುತ್ತಲೇ ಬಂದಿದ್ದರು.

ವಿವಿಧ ವಾಸ್ತವಾಂಶಗಳಿಂದ ಇದು ಖಚಿತಗೊಂಡಿದೆ. ಅತ್ಯಂತ ಪ್ರಮುಖವಾಗಿ ಜನರಲ್ ಬಜ್ವಾ ಅವರು ಕಾರಿಡಾರ್ ನಿರ್ಮಿಸುವ ಪಾಕಿಸ್ತಾನದ ನಿರ್ಧಾರವನ್ನು ಆಗಿನ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸಮಾರಂಭದ ಸಂದರ್ಭದಲ್ಲೇ ಬಹಿರಂಗ ಪಡಿಸಿದ್ದರು ಎಂದು ಮುಖ್ಯಮಂತ್ರಿ ಹೇಳಿದರು.

ಇಮ್ರಾನ್ ಖಾನ್ ಅವರು ಆಗ ಅಧಿಕಾರ ಸ್ವೀಕಾರವನ್ನೇ ಮಾಡಿರಲಿಲ್ಲ. ಆದರೂ, ಅವರ ಸೇನಾ ಮುಖ್ಯಸ್ಥ ವಿಚಾರದ ಬಗ್ಗೆ ಸಿಧು ಅವರ ಜೊತೆಗೆ ಮಾತನಾಡಿದ್ದರು. ಬಜ್ವಾ ಅವರು ಕಾರಿಡಾರ್ ನಿರ್ಧಾರದ ಹಿಂದಿನ ವ್ಯಕ್ತಿಗಳಲ್ಲಿ ಒಬ್ಬರಲ್ಲವಾದರೆ, ಇದು ಹೇಗೆ ಸಾಧ್ಯವಿತ್ತು?’ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ತಾವು ಬಗ್ಗೆ ಹಿಂದೆಯೇ ಹೇಳಿದ್ದುದನ್ನು ನೆನಪಿಸುತ್ತಾ ನುಡಿದರು.

ಪಾಕಿಸ್ತಾನಿ ಸಚಿವ ಅನಾವರಣಗೊಳಿಸಿರುವ ದುಷ್ಟ ಸಂಚಿನ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಸರ್ಕಾರದ ಜೊತೆಗಿನ ತಮ್ಮ ವ್ಯವಹಾರಗಳ ಬಗ್ಗೆ  ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಸಿಧು ಅವರನ್ನು ಆಗ್ರಹಿಸಿದರು.

ಪಾಕಿಸ್ತಾನಿ ಪ್ರಧಾನಿ ಜೊತೆಗಿನ ತಮ್ಮ ವೈಯಕ್ತಿಕ ಗೆಳೆತನವು ಭಾರತದ ಹಿತಾಸಕ್ತಿಗಳಿಗೆ ಹಾನಿ ಉಂಟು ಮಾಡುವಂತಹ ವಿಚಾರಗಳಲ್ಲಿ ತಮ್ಮ ತೀರ್ಮಾನಗಳ ಮೇಲೆ ಪ್ರಭಾವ ಬೀರದಂತೆ ಸಿಧು ಅವರು ನೋಡಿಕೊಳ್ಳಬೇಕು ಎಂದು ಕ್ಯಾಪ್ಟನ್ ಕಿವಿಮಾತು ಹೇಳಿದರು.

Sunday, November 10, 2019

ಕರ್ತಾರಪುರ ಕಾರಿಡಾರ್ ಉದ್ಘಾಟನೆ: ಮೊದಲ ದಿನ ೫೬೨ ಯಾತ್ರಿಗಳ ಭೇಟಿ

ಕರ್ತಾರಪುರ ಕಾರಿಡಾರ್ ಉದ್ಘಾಟನೆ:
ಮೊದಲ
ದಿನ ೫೬೨ ಯಾತ್ರಿಗಳ ಭೇಟಿ
ನವದೆಹಲಿ/ ಇಸ್ಲಾಮಾಬಾದ್:  ಪಂಜಾಬಿನ ಡೇರಾ ಬಾಬಾ ನಾನಕ್ ಗುರುದ್ವಾರ ಮತ್ತು ಪಾಕಿಸ್ತಾನ ಪಂಜಾಬಿನ ನರೋವಲ್ ಜಿಲ್ಲೆಯ ಕರ್ತಾರಪುರದಲ್ಲಿನ ದರ್ಬಾರ್ ಸಾಹಿಬ್ ಗುರುದ್ವಾರವನ್ನು ಸಂಪರ್ಕಿಸುವ  ಕರ್ತಾರಪುರ ಕಾರಿಡಾರನ್ನು2019 ನವೆಂಬರ್ 09ರ ಶನಿವಾರ ಉದ್ಘಾಟಿಸಲಾಗಿದ್ದು ೫೫೦ ಮಂದಿ ಯಾತ್ರಿಕರ ತಂಡ ಮೊದಲ ದಿನ ಭೇಟಿ ನೀಡಿತು.

ಕಾರಿಡಾರನ್ನು ಭಾರತದ ಕಡೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಕಡೆಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಿದರು.

Saturday, November 9, 2019

ಕರ್ತಾರಪುರ: ಭಿಂದ್ರನ್‌ವಾಲೆ ಪೋಸ್ಟರ್ ಆಯಿತು, ಈಗ ’ಭಾರತದ ಬಾಂಬ್’ ಪ್ರದರ್ಶನ

ಕರ್ತಾರಪುರ: ಭಿಂದ್ರನ್ವಾಲೆ ಪೋಸ್ಟರ್ ಆಯಿತು,
ಈಗ 'ಭಾರತದ ಬಾಂಬ್ಪ್ರದರ್ಶನ
ನವದೆಹಲಿ: ಸಿಖ್ ಪಂಥದ ಸ್ಥಾಪಕ ಗುರು ನಾನಕ್ ಅವರು ತಮ್ಮ ಜೀವನದ ಅಂತಿಮ ವರ್ಷಗಳನ್ನು ಕಳೆದಿದ್ದ, ಪ್ರಸ್ತುತ ಪಾಕಿಸ್ತಾನದಲ್ಲಿ ಇರುವ ಕರ್ತಾರಪುರದ ಗುರುದ್ವಾರಕ್ಕೆ ಭಾರತೀಯ ಯಾತ್ರಿಕರಿಗೆ ವೀಸಾಮುಕ್ತ ಪಯಣಕ್ಕೆ ಅವಕಾಶ ಕಲ್ಪಿಸಿರುವ ಕರ್ತಾರಪುರ ಕಾರಿಡಾರಿನ ಉದ್ಘಾಟನೆಗೆ ಒಂದು ದಿನ ಮುಂಚಿತವಾಗಿ 2019 ನವೆಂಬರ್ 08ರ ಶುಕ್ರವಾರ ಪಾಕಿಸ್ತಾನಿ ಅಧಿಕಾರಿಗಳು ಇನ್ನೊಂದು ವಿವಾದವನ್ನು ಹುಟ್ಟು ಹಾಕಿದರು.
ಕರ್ತಾರಪುರದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ಖಾಸಗಿ ಗುಂಪೊಂದರಲ್ಲಿ ಇದ್ದ ಕೆಲವು ಭಾರತೀಯರ ಪ್ರಕಾರ, ಪಾಕಿಸ್ತಾನಿ ಅಧಿಕಾರಿಗಳು ಗುರುದ್ವಾರದಲ್ಲಿ ಸಣ್ಣ ಸ್ಥಂಭವೊಂದರ ಮೇಲೆ ಪುಟ್ಟ ಬಾಂಬ್ ಒಂದನ್ನು ಪ್ರದರ್ಶನಕ್ಕೆ ಇರಿಸಿ ಅದರ ಬಳಿ ಇದು ಗುರುದ್ವಾರದ ಮೇಲೆ ಭಾರತೀಯ ವಾಯುಪಡೆ ೧೯೭೧ರ ಸಮರಕಾಲದಲ್ಲಿ ಎಸೆದ ಬಾಂಬ್ ಎಂಬ ಅಡಿಟಪ್ಪಣಿಯನ್ನು ಬರೆದಿಟ್ಟಿದ್ದಾರೆ.

ಸಣ್ಣ ಸ್ಥಂಭವೊಂದರ ತುದಿಯಲ್ಲಿ ಗಾಜಿನ ಪೆಟ್ಟಿಗೆಯೊಳಗೆ ಬಾಂಬನ್ನು ಇರಿಸಲಾಗಿದ್ದು ಸ್ಥಂಭವನ್ನು ಸಿಖ್ ಪಂಥವನ್ನು ಪ್ರತಿನಿಧಿಸುವಖಂಡಲಾಂಛನದಿಂದ ಅಲಂಕರಿಸಲಾಗಿದೆ.
ಸ್ಥಂಭದ ಬಳಿ ಇರಿಸಲಾಗಿರುವ ಟಿಪ್ಪಣಿಯಲ್ಲಿಮಿರಾಕಲ್ ಆಫ್ ವಹೆಗುರುಜಿಎಂಬ ವಾಕ್ಯವನ್ನು ಬರೆಯಲಾಗಿದೆ.

ಭಾರತೀಯ ವಾಯುಪಡೆಯು ಬಾಂಬನ್ನು ೧೯೭೧ರಲ್ಲಿ ಶ್ರೀ ಕರ್ತಾರಪುರ ಸಾಹಿಬ್ ಗುರುದ್ವಾರ ದರ್ಬಾರ್ ಸಾಹಿಬ್ ಮೇಲೆ ಅದನ್ನು ನಾಶ ಪಡಿಸುವ ಉದ್ದೇಶದೊಂದಿಗೆ ಉದುರಿಸಿತ್ತು. ಆದಾಗ್ಯೂ ಕೆಟ್ಟ ಕಾರ್ಯವು ವಹೆಗುರುಜಿ (ಸರ್ವಶಕ್ತ ಅಲ್ಲಾಹ್) ಆಶೀರ್ವಾದದಿಂದ ಫಲಿಸಲಿಲ್ಲ ಮತ್ತು ಸದರಿ ಬಾಂಬ್ ಖೂ ಸಾಹಿಬ್ (ಪವಿತ್ರ ಬಾವಿ) ಒಳಕ್ಕೆ ಬಿತ್ತು ಮತ್ತು ದರ್ಬಾರ್ ಸಾಹಿಬ್ ಹಾನಿರಹಿತವಾಗಿ ಉಳಿಯಿತು. ಬಾಂಬ್ ಬಿದ್ದ ಇದೇ ಪವಿತ್ರ ಬಾವಿಯಿಂದ ಶ್ರೀ ಗುರುನಾನಕ್ ದೇವ್ ಜಿ ಅವರು ತಮ್ಮ ಹೊಲಗಳಿಗೆ ನೀರಾವರಿಗಾಗಿ ನೀರು ತರುತ್ತಿದ್ದರು ಹೇಳುವುದು ಇಲ್ಲಿ ಯಥೋಚಿತವಾಗುತ್ತದೆಎಂದೂ ಟಿಪ್ಪಣಿಯಲ್ಲಿ ಬರೆಯಲಾಗಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಗಳಿಂದ ಈವರೆಗೆ ಯಾವುದೆ ಪ್ರತಿಕ್ರಿಯೆ ಬಂದಿಲ್ಲ.
ಕಾರಿಡಾರ್ ಉದ್ಘಾಟನೆಗೆ ಸಂಬಂಧಿಸಿದ ವ್ಯಕ್ತಿಗಳ ಪ್ರಕಾರ, ಭಾರತದ ಪಂಜಾಬ್ ರಾಜ್ಯದಲ್ಲಿ ಪ್ರತ್ಯೇಕತಾವಾದಿ ಭಾವನೆಗಳನ್ನು ಪ್ರಚೋದಿಸುವ ಸಲುವಾಗಿ ಮತ್ತು ಸಿಕ್ಖರು ಮತ್ತು ಇತರ ಸಮುದಾಯಗಳ ಜೊತೆಗೆ ದೇಶದಲ್ಲಿ (ಪಾಕಿಸ್ತಾನ) ಬಾಂಧವ್ಯ ವೃದ್ಧಿಯ ಸಲುವಾಗಿ ಪ್ರಯತ್ನವನ್ನು ಪಾಕಿಸ್ತಾನಿ ಅಧಿಕಾರಿಗಳು ನಡೆಸಿದ್ದಾರೆ ಎಂದು ಹೇಳಲಾಗಿದೆ.

ವಾರಾರಂಭದಲ್ಲಿ ಪಾಕಿಸ್ತಾನವು ಕಾರಿಡಾರ್ ಉದ್ಘಾಟನೆ ಸಲುವಾಗಿ ಬಿಡುಗಡೆ ಮಾಡಿದ ಹಾಡಿನ ವಿಡಿಯೋದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರ ಭಿತ್ತಿ ಚಿತ್ರಗಳನ್ನು (ಪೋಸ್ಟರ್) ಪ್ರದರ್ಶಿಸುವ ಮೂಲಕ ವಿವಾದ ಹುಟ್ಟು ಹಾಕಿತ್ತು. ಭಾರತವು ಇದಕ್ಕೆ ಪ್ರಬಲ ಪ್ರತಿಭಟನೆಯನ್ನು ವ್ಯಕ್ತ ಪಡಿಸಿತ್ತು.

ಸಿಖ್ ಪಂಥದ ಸ್ಥಾಪಕ ಗುರುನಾನಕ್ ಅವರ ೫೫೦ನೇ ಜನ್ಮದಿನದ ಅಂಗವಾಗಿ ಕರ್ತಾರಪುರ ಕಾರಿಡಾರ್ ತೆರೆಯುವ ಸಂದರ್ಭವನ್ನು ಪಾಕಿಸ್ತಾನದಲ್ಲಿನ ಖಲಿಸ್ತಾನಪರ ಶಕ್ತಿಗಳನ್ನು ಪ್ರಚೋದಿಸುವ ಸಲುವಾಗಿ ಬಳಸಿಕೊಳ್ಳಲು ಪಾಕಿಸ್ತಾನ ಯತ್ನಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ಹಿಂದೆ ಹೇಳಿದ್ದರು.

ದರ್ಬಾರ್ ಸಾಹಿಬ್ ಜೀರ್ಣೋದ್ಧಾರ ಮತ್ತು ವಿಸ್ತರಣಾ ಕಾರ್ಯವನ್ನು ಪಾಕಿಸ್ತಾನಿ ಸೇನೆಯ ಎಂಜಿನಿಯರಿಂಗ್ ಘಟಕವಾದ ಫ್ರಾಂಟಿಯರ್ ವರ್ಕ್ಸ್ ಆರ್ಗನೈಸೇಷನ್ ನಡೆಸಿದೆ. ಮೇಲೆ ತಿಳಿಸಿದ ಪ್ರದರ್ಶನವು ಮಿಲಿಟರಿಯ ಕೃತ್ಯವಾಗಿರಬಹುದು ಎಂದು ವರದಿ ಹೇಳಿದೆ.

Friday, November 8, 2019

ಕರ್ತಾರಪುರ ಉದ್ಘಾಟನೆ: ಸಿಧು ಪಯಣಕ್ಕೆ ಕೇಂದ್ರ ಅಸ್ತು

ಕರ್ತಾರಪುರ ಉದ್ಘಾಟನೆ: ಸಿಧು ಪಯಣಕ್ಕೆ ಕೇಂದ್ರ ಅಸ್ತು
ನವದೆಹಲಿ: 2019 ನವೆಂಬರ್ ೯ರ ಶನಿವಾರ ಪಾಕಿಸ್ತಾನದಲ್ಲಿ ನಡೆಯಲಿರುವ ಕರ್ತಾರಪುರ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಂಜಾಬಿನ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರಿಗೆ ಭಾರತ ಸರ್ಕಾರವು 2019 ನವೆಂಬರ್ 7ರ ಗುರುವಾರ ಒಪ್ಪಿಗೆ ನೀಡಿತು.
ಮಾಜಿ ಕ್ರಿಕೆಟಿಗ ಕೇಂದ್ರ ಸರ್ಕಾರಕ್ಕೆ ಮೂರನೇ ಪತ್ರ ಬರೆದ ಕೆಲವೇ ಗಂಟೆಗಳಲ್ಲಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇಂದ್ರವು ಅವರಿಗೆ ಅನುಮತಿ ನೀಡಿತು.
ಅನುಮತಿ ನೀಡದೇ ಇದ್ದಲ್ಲಿ ಸಾಮಾನ್ಯ ಯಾತ್ರಿಯಂತೆ ಕರ್ತಾರಪುರಕ್ಕೆ ತೆರಳುವೆ ಎಂದು ಸಿಧು ಇದಕ್ಕೆ ಮುನ್ನ ಹೇಳಿದ್ದರು.

ದರ್ಬಾರ್ ಸಾಹಿಬ್‌ಗೆ ತೆರಳುವ ಸಿಖ್ ಯಾತ್ರಿಕರಿಗೆ ಪಾಸ್‌ಪೋರ್ಟ್ ಕಡ್ಡಾಯ

ದರ್ಬಾರ್ ಸಾಹಿಬ್‌ಗೆ ತೆರಳುವ ಸಿಖ್ ಯಾತ್ರಿಕರಿಗೆ ಪಾಸ್‌ಪೋರ್ಟ್ ಕಡ್ಡಾಯ
ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಮುನ್ನ ಭಾರತದ ಸ್ಪಷ್ಟನೆ
ನವದೆಹಲಿ: ಕರ್ತಾರಪುರಕ್ಕೆ ಭಾರತದಿಂದ ತೆರಳುವ ಸಿಖ್ ಯಾತ್ರಿಕರು ಕಾನೂನುಬದ್ಧ ಗುರುತಿಗಾಗಿ ಪಾಸ್‌ಪೋರ್ಟ್‌ಗಳನ್ನು ತಮ್ಮ ಜೊತೆಗೆ ಒಯ್ಯಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಎರಡು ದಿನಗಳ ಮುಂಚಿತವಾಗಿಯೇ 2019 ನವೆಂಬರ್ 7ರ ಗುರುವಾರ ಸ್ಪಷ್ಟ ಪಡಿಸಿತು.
ನೂತನ ಕಾರಿಡಾರ್ ಬಳಸಿಕೊಂಡು ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ಭಾರತೀಯ ಯಾತ್ರಿಕರಿಗೆ ಪಾಸ್‌ಪೋರ್ಟ್ ಅಗತ್ಯವಿದೆಯೇ ಎಂಬ ಬಗ್ಗೆ ಪಾಕಿಸ್ತಾನದಿಂದ ವಿರೋಧಾಭಾಸದ ವರದಿಗಳು ಬರುತ್ತಿವೆ. ಹೀಗಾಗಿ ಗೊಂದಲ ಮುಂದುವರೆದಿದೆ. ಆದ್ದರಿಂದ ನಾವು ಉಭಯ ರಾಷ್ಟ್ರಗಳು ಸಹಿ ಮಾಡಿರುವ ತಿಳುವಳಿಕೆ ಪತ್ರದಲ್ಲಿ (ಎಂಒಯು) ಒಪ್ಪಿಕೊಳ್ಳಲಾದ ಅಗತ್ಯಗಳನ್ನು ಪಾಲಿಸುತ್ತೇವೆ ಮತ್ತು ಗುರುತಿಗೆ ಸಾಕ್ಷಿಯಾಗಿ ಪಾಸ್ ಪೋರ್ಟ್ ಒಯ್ಯುತ್ತೇವೆ ಎಂದು ಎಂಇಎ ವಕ್ತಾರ ರವೀಶ ಕುಮಾರ್ ತಮ್ಮ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
’ಭಾರತೀಯ ಯಾತ್ರಿಕರ ಭೇಟಿಗೆ ಸಂಬಂಧಿಸಿದಂತೆ ವಿಧಿವಿಧಾನಗಳನ್ನು ಅಂತಿಮಗೊಳಿಸುವ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿದ್ದವು. ನಾವು ಅದಕ್ಕೆ ಬದ್ಧರಾಗಿರುತ್ತೇವೆ’ ಎಂದು ಕುಮಾರ್ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ಸಹಿ ಮಾಡಿರುವ ದ್ವಿಪಕ್ಷೀಯ ದಾಖಲೆ ಇರುವುದು ನಮಗೆ ಗೊತ್ತಿದೆ. ಅದು ಯಾತ್ರಿಕರು ಏನನ್ನು ಒಯ್ಯಬೇಕು ಎಂದು ನಿರ್ದಿಷ್ಟಗೊಳಿಸಿದೆ. ಹಾಲಿ ತಿಳುವಳಿಕೆ ಪತ್ರಕ್ಕೆ (ಎಂಒಯು) ಯಾವುದೇ ತಿದ್ದುಪಡಿಯನ್ನು ಏಕಪಕ್ಷೀಯವಾಗಿ ಮಾಡಲು ಆಗುವುದಿಲ್ಲ. ಹಾಗೆ ತಿದ್ದುಪಡಿ ಮಾಡಲು ಉಭಯ ರಾಷ್ಟ್ರಗಳ ಒಪ್ಪಿಗೆ ಬೇಕಾಗುತ್ತದೆ ಎಂದು ಅವರು ನುಡಿದರು.
ಪಾಕಿಸ್ತಾನದಿಂದ ವಿರುದ್ಧಾಭಿಪ್ರಾಯದ ವರದಿಗಳು ಬರುತ್ತಿವೆ. ಕೆಲವೊಮ್ಮೆ ಅವರು ಪಾಸ್‌ಪೋರ್ಟಿನ ಅಗತ್ಯವಿದೆ ಎನ್ನುತ್ತಾರೆ. ಇನ್ನು ಕೆಲವೊಮ್ಮೆ ಅದರ ಅಗತ್ಯವಿಲ್ಲ ಎನ್ನುತ್ತಾರೆ. ಪ್ರಸ್ತುತ ಅಗತ್ಯ ದಾಖಲೆಗಳನ್ನು ನಿರ್ದಿಷ್ಟ ಪಡಿಸಿ ಸಹಿ ಮಾಡಿರುವ ಒಪ್ಪಂದ ಒಂದು ಇದೆ’ ಎಂದು ಕುಮಾರ್ ಹೇಳಿದರು.
ಭದ್ರತೆ ಮತ್ತು ಶಿಷ್ಟಾಚಾರ ವ್ಯವಸ್ಥೆಗಳ ಬಗ್ಗೆ ಭಾರತವು ಪಾಕಿಸ್ತಾನದ ಗಮನಕ್ಕೆ ತಂದಿದೆ. ಉನ್ನತ ಸ್ಥಾನದ ಗಣ್ಯರು ಭೇಟಿ ನೀಡುವುದಕ್ಕೆ ಮುನ್ನ ತಂಡವೊಂದು ಭೇಟಿ ನೀಡಬೇಕಾದ ಸಹಜ ಅಗತ್ಯವಿದೆ. ಈ ಬಗ್ಗೆ ನಮಗೆ ಪಾಕಿಸ್ತಾನದಿಂದ ಈವರೆಗೂ ಯಾವ ಸೂಚನೆಯೂ ಬಂದಿಲ್ಲ ಎಂದು ರವೀಶ ಕುಮಾರ್ ನುಡಿದರು.
ಗಣ್ಯರಿಗೆ ಭದ್ರತೆ ಮತ್ತು ವೈದ್ಯಕೀಯ ವ್ಯವಸ್ಥೆ ಮಾಡುವಂತೆ ನಾವು ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾನೂನುಬದ್ಧ ಗುರುತಿನ ಸಾಕ್ಷಿಯೊಂದನ್ನು ಯಾತ್ರಿಕರು ಕೊಟ್ಟರೆ ಸಾಕು ಎಂಬುದಾಗಿ ಹೇಳಿರುವುದರ ಹೊರತಾಗಿಯೂ ಕಾರಿಡಾರ್ ಬಳಸುವ ಭಾರತೀಯ ಯಾತ್ರಿಕರು ಪಾಸ್ ಪೋರ್ಟ್ ಹೊಂದಿರಬೇಕು ಎಂದು ಪಾಕಿಸ್ತಾನಿ ಸೇನೆ ಹೇಳಿದ ಬೆನ್ನಲ್ಲೇ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್ ಪೋರ್ಟಿಗೆ ಸಂಬಂಧಪಟ್ಟ ಸ್ಪಷ್ಟನೆಯನ್ನು ಪ್ರಕಟಿಸಿತು.
ಕರ್ತಾರಪುರದಲ್ಲಿನ ಗುರುದ್ವಾರಕ್ಕೆ ಭೇಟಿ ನೀಡುವ ಸಿಖ್ ಯಾತ್ರಿಕರು ಪಾಸ್ ಪೋರ್ಟ್ ಹೊಂದಿರಬೇಕಾದ ಅಗತ್ಯ ಇದೆಯೇ ಎಂಬುದಾಗಿ ಸ್ಪಷ್ಟಪಡಿಸುವಂತೆ ಭಾರತವು ಪಾಕಿಸ್ತಾನಕ್ಕೆ ಸೂಚಿಸಿದ ಬಳಿಕ ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಅಸಿಫ್ ಗಫೂರ್ ಅವರು ಯಾತ್ರಿಕರು ಪಾಸ್‌ಪೋರ್ಟ್ ಹೊಂದಿರಬೇಕು ಎಂದು ಹೇಳಿದ್ದರು.
ಭಾರತದ ಸಿಖ್ ಯಾತ್ರಿಕರಿಗೆ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ವೀಸಾಮುಕ್ತ ಭೇಟಿಗೆ ಅವಕಾಶ ಕಲ್ಪಿಸಿರುವ ಕರ್ತಾರಪುರ ಕಾರಿಡಾರನ್ನು ನವೆಂಬರ್ ೯ರ ಶನಿವಾರ ಸಿಖ್ ಪಂಥದ ಸ್ಥಾಪಕ ಗುರು ನಾನಕ್ ದೇವ್ ಅವರ ೫೫೦ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆ.

Thursday, November 7, 2019

’ಪಾಕಿಸ್ತಾನದ ರಹಸ್ಯ ಕಾರ್ಯಸೂಚಿ ಬಗ್ಗೆ ನಾನು ಮೊದಲೇ ಹೇಳಿದ್ದೆ’

’ಪಾಕಿಸ್ತಾನದ ರಹಸ್ಯ ಕಾರ್ಯಸೂಚಿ
ಬಗ್ಗೆ ಮೊದಲೇ ಹೇಳಿದ್ದೆ
ಭಿಂದ್ರನ್‌ವಾಲೆ ಪೋಸ್ಟರ್‌ಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಆಕ್ರೋಶ
ನವದೆಹಲಿ: ’ಪಾಕಿಸ್ತಾನವು ರಹಸ್ಯ ಕಾರ್ಯಸೂಚಿಯನ್ನು ಹೊಂದಿದೆ ಎಂದು ನಾನು ನಿಮಗೆ ಮೊದಲೇ ಹೇಳಿದ್ದೆ ಎಂಬುದಾಗಿ ಹೇಳುವ ಮೂಲಕ ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಕರ್ತಾರಪುರ ಕಾರಿಡಾರ್ ಉದ್ಘಾಟನೆ ಸಂದರ್ಭಕ್ಕಾಗಿ ಪಾಕಿಸ್ತಾನ ಬಿಡುಗಡೆ ಮಾಡಿದ ವಿವಾದಾತ್ಮಕ ವಿಡಿಯೋ ದೃಶ್ಯಾವಳಿಗೆ ಆಕ್ರೋಶ ವ್ಯಕ್ತ ಪಡಿಸಿದರು.

ಕರ್ತಾರಪುರ ಕಾರಿಡಾರ್ ಉದ್ಘಾಟನೆ ಸಂದರ್ಭಕ್ಕಾಗಿ ಬಿಡುಗಡೆ ಮಾಡಲಾಗಿರುವ ಹಾಡಿನ ವಿವಾದಾತ್ಮಕ ವಿಡಿಯೋದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರಾದ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ, ಮೇಜರ್ ಜನರಲ್ ಶಾಬೆಗ್ ಸಿಂಗ್ ಮತ್ತು ಆಮ್ರಿಕ್ ಸಿಂಗ್ ಖಾಲ್ಸಾ ಅವರ ಭಿತ್ತಿಚಿತ್ರಗಳನ್ನು ಹಿನ್ನೆಲೆಯಲ್ಲಿ ಪ್ರದರ್ಶಿಸಿದ್ದಕ್ಕೆ ಪಂಜಾಬ್ ಮುಖ್ಯಮಂತ್ರಿ ಈ ಪ್ರತಿಕ್ರಿಯೆ ನೀಡಿದರು.

ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 2019 ನವೆಂಬರ್ 04ರ ಸೋಮವಾರ ಬಿಡುಗಡೆ ಮಾಡಿದ ಈ ವಿಡಿಯೋದ ಹಾಡಿನ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ೧೯೮೪ರಲ್ಲಿ ಸ್ವರ್ಣದೇಗುಲವನ್ನು ಭಯೋತ್ಪಾದಕರಿಂದ ಮುಕ್ತಗೊಳಿಸಲು ನಡೆಸಿದ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಹತರಾದ  ಮೂವರು ಭಯೋತ್ಪಾದಕರ ಭಿತ್ತಿ ಚಿತ್ರಗಳು ಕಂಡು ಬಂದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

‘ಕಾರಿಡಾರ್ ಮುಕ್ತಗೊಳಿಸುವಿಕೆಯ ಹಿಂದೆ ಪಾಕಿಸ್ತಾನಕ್ಕೆ  ಕೀಳು ಉದ್ದೇಶದ ರಹಸ್ಯ ಕಾರ್ಯಸೂಚಿ ಇದೆ ಎಂದು ಮೊದಲ ದಿನದಿಂದಲೇ ನಾನು ಆಗಾಗ ಎಚ್ಚರಿಕೆ ನೀಡುತ್ತಲೇ ಬಂದಿದ್ದೆ ಎಂದು ಅಮರೀಂದರ್ ಸಿಂಗ್ ಹೇಳಿದರು.

ಪವಿತ್ರವಾದ ಕರ್ತಾರಪುರ ಗುರುದ್ವಾರಕ್ಕೆ ಪ್ರವೇಶಾವಕಾಶ ಕಲ್ಪಿಸಬೇಕು ಎಂದು ಸಿಖ್ ಸಮುದಾಯವು ಕಳೆದ ೭೦ ವರ್ಷಗಳಿಂದ ಆಗ್ರಹಿಸುತ್ತಲೇ ಇದೆ. ಈ ಬೇಡಿಕೆಯನ್ನು ಒಪ್ಪಿಕೊಳ್ಳಲು ಪಾಕಿಸ್ತಾನವು ದಿಢೀರ್ ತೀರ್ಮಾನ ಕೈಗೊಂಡಾಗಲೇ, ಧಾರ್ಮಿಕ ಭಾವನೆಗಳ ದುರ್ಬಳಕೆ ಮಾಡಿಕೊಂಡು ಸಿಖ್ ಸಮುದಾಯದ ಜನರನ್ನು ಸೆಳೆಯುವ ರಹಸ್ಯ ಉದ್ದೇಶವು ಪಾಕಿಸ್ತಾನಕ್ಕೆ ಇತ್ತು ಎಂಬುದು ಈಗ ಬಹಿರಂಗಗೊಂಡಿದೆ ಎಂದು ಕ್ಯಾಪ್ಟನ್ ಸಿಂಗ್ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

‘ಕಾರಿಡಾರಿನ ಮೂಲಕ ಯಾವುದೇ ಕುಕೃತ್ಯ ನಡೆಸುವ ಧೈರ್ಯವನ್ನು ಪಾಕಿಸ್ತಾನ ತೋರೀತು ಎಂದು ನಾವು ನಿರೀಕ್ಷಿಸದೇ ಇದ್ದರೂ, ಗಡಿ ರಾಜ್ಯವಾಗಿ ಪಂಜಾಬ್ ಕಟ್ಟೆಚ್ಚರದಲ್ಲಿ ಇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯವು ಪರಿಸ್ಥಿತಿಯ ಮೇಲೆ ಹೆಚ್ಚಿನ ನಿಗಾ ಹಾಗೂ ಎಚ್ಚರವನ್ನು ಇರಿಸಿದೆ’ ಎಂದು ಅಮರೀಂದರ್ ಸಿಂಗ್ ನುಡಿದರು.

ಪ್ರಸ್ತುತ ಪಾಕಿಸ್ತಾನದಲ್ಲಿ ಇರುವ ಕರ್ತಾರಪುರದಲ್ಲಿ ಕೊನೆಯ ದಿನಗಳನ್ನು ಕಳೆದಿದ್ದ ಸಿಖ್ ಪಂಥದ ಸ್ಥಾಪಕ ಗುರು ನಾನಕ್ ಅವರು ನಿರ್ಮಿಸಿದ್ದ ಗುರುದ್ವಾರಕ್ಕೆ ಭೇಟಿ ನೀಡಲು ಯಾತ್ರಿಕರಿಗೆ ವೀಸಾಮುಕ್ತ ಪ್ರವೇಶ ಅವಕಾಶ ಕಲ್ಪಿಸಿದ ಪಾಕಿಸ್ತಾನದ ಕೊನೆ ಕ್ಷಣದ ರಿಯಾಯ್ತಿಗಳು ಪಂಜಾಬಿನಲ್ಲಿ ಉಗ್ರವಾದವನ್ನು ಪುನಶ್ಚೇತನಗೊಳಿಸುವ ವಿಸ್ತೃತ ಸಂಚಿನ ಭಾಗವಾಗಿರಬಹುದು ಎಂದು ಭದ್ರತಾ ಸಂಸ್ಥೆಗಳೂ ಶಂಕಿಸಿರುವುದಾಗಿ ಅಧಿಕಾರಿಗಳು ಹೇಳಿದರು.

ಪಾಕಿಸ್ತಾನಿ ಪ್ರದಾನಿ ಇಮ್ರಾನ್ ಖಾನ್ ಅವರು 2019 ನವೆಂಬರ್ 01ರ ಶುಕ್ರವಾರ, ಕರ್ತಾರಪುರ ಕಾರಿಡಾರ್ ಮೂಲಕ ಪಾಕಿಸ್ತಾನಕ್ಕೆ ಬರಲು ಪಾಸ್ ಪೋರ್ಟ್ ಹೊಂದಿರಬೇಕಾದ ಅಗತ್ಯವಿಲ್ಲ. ಕಾನೂನುಬದ್ಧ ಗುರುತಿನ ಕಾರ್ಡ್ ಇದ್ದರೆ ಸಾಕು ಎಂದು ಪ್ರಕಟಿಸಿದ್ದರು.  ಗುರು ನಾನಕ್ ದೇವ್ ಅವರ ೫೫೦ನೇ ಜನ್ಮದಿನದ ಅಂಗವಾಗಿ, ಕಾರಿಡಾರ್ ಉದ್ಘಾಟನೆಯ ದಿನವಾದ ನವೆಂಬರ್ ೯ರಂದು ಮತ್ತು ಬಳಿಕ ಮೂರು ದಿನಗಳ ಯಾತ್ರಾರ್ಥಿಗಳಿಗೆ ೨೦ ಡಾಲರುಗಳ ಸೇವಾ ಶುಲ್ಕವನ್ನೂ ಮನ್ನಾ ಮಾಡಲಾಗಿದೆ ಎಂದೂ ಖಾನ್ ಹೇಳಿದ್ದರು.

ತಮ್ಮ ಯಾತ್ರೆಗಾಗಿ ಯಾತ್ರಿಗಳು ೧೦ ದಿನ ಮುಂಚಿತವಾಗಿಯೇ ಹೆಸರು ನೋಂದಾಯಿಸಬೇಕಾಗಿಯೂ ಇಲ್ಲ ಎಂದು ಅವರು ತಿಳಿಸಿದ್ದರು.

ಈ ದಿಢೀರ್ ಹೃದಯ ಪರಿವರ್ತನೆಯು ಸಿಕ್ಖರ ಬಗೆಗೆ ’ಪೇಮವನ್ನು ತೋರಿಸುವ ಕಪಟ ಯತ್ನದ ಸ್ವಷ್ಟ ಚಿತ್ರ ಎಂದು ಅಧಿಕಾರಿಯೊಬ್ಬರು ಈ ಪ್ರಕಟಣೆಯನ್ನು ಉಲ್ಲೇಖಿಸಿ ಹೇಳಿದರು.

’ನಿರ್ದಿಷ್ಟವಾಗಿ ಅವರು ಯುವಕರನ್ನು ಗುರಿಯಾಗಿಸಲು ಬಯಸಿದ್ದಾರೆ
ಎಂದು ಪರಿಚಯ ಹೇಳಲು ಇಚ್ಛಿಸದ ಅವರು ನುಡಿದರು.

ಗುರುದಾಸಪುರದ ಡೇರಾ ಬಾಬಾ ನಾನಕ್ ಗುರುದ್ವಾರ ಮತ್ತು ಪಾಕಿಸ್ತಾನದ ಕರ್ತಾರಪುರದ ದರ್ಬಾರ ಸಾಹಿಬ್ ಗುರುದ್ವಾರವನ್ನು ಸಂಪರ್ಕಇಸುವ ಕರ್ತಾರಪುರ ಕಾರಿಡಾರ್ ನವೆಂಬರ್ ೯ರಂದು ಉದ್ಘಾಟನೆಗೆ ಸಜ್ಜಾಗಿದೆ.

Thursday, October 24, 2019

India, Pakistan sign agreement to operationalise Kartarpur corridor


India, Pakistan sign agreement to operationalise Kartarpur corridor
New Delhi: India and Pakistan on Thursday, 24t October 2019 operationalised the Kartarpur Corridor to allow Indian pilgrims to visit a gurdwara built at the site where Guru Nanak spent the final years of his life. The agreement was inked by officials of the two sides at the “zero line” on the border.
India had on Monday proposed October 23 as the date for signing the pact but the event had to be put off by a day because of “administrative issues” on the Pakistani side, officials said. The Pakistan delegation was led by foreign office spokesperson Mohammad Faisal.

“Reaching Kartarpur Sahib for the signing of historic Pakistan India Agreement on the opening of the corridor. PM Khan will inaugurate the KartarpurSahib corridor in Narowal, Pakistan on 9 November Insha Allah,” tweeted Faisal before starting for the zero line.

India and Pakistan have held a series of high-level talks for the operationalisation of the corridor ahead of the 550th birth anniversary celebrations of Guru Nanak Dev. The corridor will facilitate visa-free movement of Indian pilgrims, who will have to just obtain a permit to visit Kartarpur Sahib, which was established in 1522 by Sikh faith founder Guru Nanak Dev.

Advertisement