Showing posts with label Air India. Show all posts
Showing posts with label Air India. Show all posts

Saturday, August 8, 2020

ಸಹ ಪೈಲಟ್ ಪತ್ನಿಗೆ ಗೊತ್ತೇ ಇಲ್ಲ.. ಪತಿಯ ಸಾವಿನ ಸುದ್ದಿ..!

 ಸಹ ಪೈಲಟ್ ಪತ್ನಿಗೆ ಗೊತ್ತೇ ಇಲ್ಲ.. ಪತಿಯ ಸಾವಿನ ಸುದ್ದಿ..!

ಆಗ್ರಾ: ಕೇರಳದಲ್ಲಿ  2020 ಆಗಸ್ಟ್  08ರ ಶುಕ್ರವಾರ ಸಂಜೆ ಸಂಭವಿಸಿದ ಎರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವ ವಿಮಾನದ ಸಹ ಪೈಲಟ್ ೩೨ ವರ್ಷದ ಅಖಿಲೇಶ್ ಶರ್ಮಾ ಅವರ ಸಾವಿನ ಸುದ್ದಿಯಿಂದ ಇಡೀ ಕುಟುಂಬ ಆಘಾತಗೊಂಡಿದೆ. ಆದರೆ ಹದಿನೈದು ದಿನಗಳಲ್ಲಿ ಮಗುವನ್ನು ನಿರೀಕ್ಷಿಸುತ್ತಿರುವ ಶರ್ಮಾ ಅವರ ಪತ್ನಿ ಮೇಘಾ (೨೯), ಅವರಿಗೆ ತನ್ನ ಗಂಡನ ಸಾವಿನ ಬಗ್ಗೆ ಇನ್ನೂ ತಿಳಿಸಲಾಗಿಲ್ಲ.

ಕುಟುಂಬವು ಉತ್ತರ ಪ್ರದೇಶದ ಮಥುರಾದ ಗೋವಿಂದ್ ನಗರ ಪ್ರದೇಶದಲ್ಲಿ ವಾಸವಾಗಿದೆ.

"ವಿಮಾನ ಅಪಘಾತದ ನಂತರ ಭೈಯಾ (ಅಖಿಲೇಶ್) ಸ್ಥತಿ ಗಂಭೀರವಾಗಿದ್ದು ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಸುದ್ದಿ ನಮಗೆ ಸಿಕ್ಕಿತು. ಆದರೆ ಶುಕ್ರವಾರ ರಾತ್ರಿ ಅವರ ಸಾವಿನ ಬಗ್ಗೆ ನಮಗೆ ತಿಳಿಸಲಾಯಿತು. ನನ್ನ ಸಹೋದರ ಭುವನೇಶ್ ಮತ್ತು ಸೋದರ ಮಾವ ಸಂಜೀವ್ ಶರ್ಮಾ ದೆಹಲಿ ಮೂಲಕ ಕೋಯಿಕ್ಕೋಡಿಗೆ  ತೆರಳಿದ್ದಾರೆ ಎಂದು ಮಥುರಾದಲ್ಲಿ ವಾಸಿಸುವ ಲೋಕೇಶ್ ಶರ್ಮಾ  2020 ಆಗಸ್ಟ್ 08ರ ಶನಿವಾರ (೨೪) ಹೇಳಿದ್ದಾರೆ. ಲೋಕೇಶ್ ಕೂಡ ವಾಣಿಜ್ಯ ಪೈಲಟ್ ಆಗಲು ಬಯಸಿದ್ದಾರೆ.

 "ಇಂದಿನಿಂದ ಕೆಲವೇ ದಿನಗಳಲ್ಲಿ ಮಗುವನ್ನು ನಿರೀಕ್ಷಿಸುತ್ತಿರುವುದರಿಂದ ಪತಿ ಸಾವಿನ ಬಗ್ಗೆ ನಾವು ಭಾಭಿಗೆ (ಮೇಘಾ ಶರ್ಮಾ) ಹೇಳಿಲ್ಲ. ವಿಮಾನ ಅಪಘಾತದ ಬಗ್ಗೆ ಆಕೆಗೆ ತಿಳಿದಿz’ ಎಂದು ಲೋಕೇಶ್ ಶನಿವಾರ ಹೇಳಿದರು.

ಅಖಿಲೇಶ್ ಶರ್ಮಾ  ಅವರು ಭುವನೇಶ್ ಶರ್ಮಾ (೨೮) ಮತ್ತು ಲೋಕೇಶ್ ಶರ್ಮಾ (೨೪) ಅವರ ಹಿರಿಯ ಸಹೋದರರಾಗಿದ್ದರು ಮತ್ತು ಅವರಿಗೆ ಒಬ್ಬ ಅಕ್ಕ ಕೂಡ ಇದ್ದು ಅವರ ಮದುವೆಯಾಗಿದೆ. ಅವರ ತಂದೆ ತುಳಸಿ ರಾಮ್ ಶರ್ಮಾ ಮಥುರಾದಲ್ಲಿ ವ್ಯವಹಾರಸ್ಥರಾಗಿದ್ದು, ಅವರು ಮಥುರಾ ಜಿಲ್ಲೆಯ ತಮ್ಮ ಪಿತೃ ಗ್ರಾಮದಿಂದ ಮಥುರಾ ನಗರದ ಗೋವಿಂದ್ ನಗರಕ್ಕೆ ಬಂದಿದ್ದರು.

"ಅಖಿಲೇಶ್ ಮಥುರಾದ ಅಮರನಾಥ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು ಮತ್ತು ಪೈಲಟ್ ಆಗಿ ತರಬೇತಿ ಪಡೆಯಲು ಗೊಂಡಿಯಾದ (ಮಹಾರಾಷ್ಟ್ರ) ಸಿಎಇ ಆಕ್ಸ್‌ಫರ್ಡ್ ಏವಿಯೇಷನ್ ಅಕಾಡೆಮಿಗೆ ಸೇರಿದರು. ಅವರು ೨೦೧೭ ರಲ್ಲಿ ಏರ್ ಇಂಡಿಯಾಕ್ಕೆ ಸೇರಿದರು. ಅವರು ೨೦೧೮ ರಲ್ಲಿ ಮೇಘಾ ಅವರನ್ನು ವಿವಾಹವಾದರು ಮತ್ತು ದಂಪತಿ ಮಗುವನ್ನು ಪಡೆಯಲಿದ್ದಾರೆ ಆದರೆ ವಿಧಿಯು ಅವರನ್ನು ನಮ್ಮಿಂದ ಕಸಿದುಕೊಂಡಿತು ಎಂದು ಲೋಕೇಶ್ ಹೇಳಿದರು.

ಕೋಯಿಕ್ಕೋಡಿಗೆ ಹೋಗಿರುವ ಭುವನೇಶ್ ಗುರುಗ್ರಾಮದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಖಿಲೇಶ್ ಅವರ ಪಾರ್ಥಿವ ಅವಶೇಷಗಳು ಮಥುರಾವನ್ನು ತಲುಪಲು ಕುಟುಂಬವು ಈಗ ಕಾಯುತ್ತಿದೆ, ಅಲ್ಲಿ ಅಂತ್ಯಕ್ರಿಯೆ ಶೀಘ್ರದಲ್ಲೇ ನಡೆಯಲಿದೆ.

 

Wednesday, August 5, 2020

ಭಾರತೀಯರಿಗೆ ಮರಳಲು ಚೀನಾ ಒಪ್ಪಿಗೆ

ಭಾರತೀಯರಿಗೆ ಮರಳಲು ಚೀನಾ ಒಪ್ಪಿಗೆ

ನವದೆಹಲಿ: ನವದೆಹಲಿಯಿಂದ ಚೀನಾದ ಗುವಾಂಗ್ ಝೊವುಗೆ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ರಾಜತಾಂತ್ರಿಕರ ಕುಟುಂಬಗಳು, ಬಹುರಾಷ್ಟ್ರೀಯ ಬ್ಯಾಂಕುಗಳ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳು ಸೇರಿದಂತೆ ಸುಮಾರು ೧೫೦ ಭಾರತೀಯರು ಚೀನಾಕ್ಕೆ ಮರಳುವ ನಿರೀಕ್ಷೆಯಿದ್ದು, ಅವರ ಯಾನಕ್ಕೆ 2020  ಆಗಸ್ಟ್ 05ರ ಬುಧವಾರ ಒಪ್ಪಿಗೆ ನೀಡಿರುವ ಚೀನಾ ಕಟ್ಟುನಿಟ್ಟಿನ ಕೋವಿಡ್-೧೯ ವೈದ್ಯಕೀಯ ಶಿಷ್ಟಾಚಾರ ಪಾಲನೆಯ ಷರತ್ತು ವಿಧಿಸಿತು.

ಜೂನ್ ೨೯ ರಂದು ನಡೆಸಲಾಗಿದ್ದ ಕೊನೆಯ ವಿಶೇಷ ಹಾರಾಟದಲ್ಲಿ ಬೀಜಿಂಗ್, ಭಾರತೀಯರಿಗೆ  ಚೀನಾ ಪ್ರವೇಶಕ್ಕೆ  ಅನುಮತಿ ನೀಡದ ಹಿನ್ನೆಲೆಯಲ್ಲಿ ಭಾರತೀಯ ಮತ್ತು ಚೀನಾದ ಅಧಿಕಾರಿಗಳ ನಡುವೆ ತೀವ್ರ ಚರ್ಚೆಗಳು ನಡೆದಿದ್ದವು.

ಪ್ರತಿಯೊಬ್ಬ ವ್ಯಕ್ತಿಯು ಐದು ದಿನಗಳಲ್ಲಿ (ಬೋರ್ಡಿಂಗ್ ಮೊದಲು) ಸೀರಮ್ ಆಂಟಿಬಾಡಿ ಪತ್ತೆ ಮತ್ತು ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗಳನ್ನು ಮಾಡಿದ್ದರೆ ಮತ್ತು ಅವರ ವೈಯಕ್ತಿಕ ಆರೋಗ್ಯ ಫಾರಂಗಳನ್ನು ನವದೆಹಲಿಯ ಚೀನೀ ರಾಯಭಾರ ಕಚೇರಿಯಿಂದ ಅನುಮೋದಿಸಿದ್ದರೆ ಮಾತ್ರ ಭಾರತೀಯರಿಗೆ ಗುರುವಾರ ಹಾರಾಟದಲ್ಲಿ ಅವಕಾಶ ನೀಡಲಾಗುವುದು ಎಂದು ಚೀನಾದ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಪ್ರಯಾಣಿಕರು ಗುವಾಂಗ್ ಝೊವುನಲ್ಲಿ ಇಳಿದ ನಂತರ ಹೊಸ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಯನ್ನು  ಎದುರಿಸಬೇಕಾಗುತ್ತದೆ. ಸಕಾರಾತ್ಮಕವಾಗಿದ್ದರೆ, ಪ್ರಯಾಣಿಕರು ಅದೇ ವಿಮಾನದಲ್ಲಿ ನವದೆಹಲಿಗೆ ಮರಳಬೇಕಾಗುತ್ತದೆ.

ಚೀನಾಕ್ಕೆ ಮರಳಲು ಯೋಜಿಸುತ್ತಿರುವ ಖಾಸಗಿ ಉದ್ಯೋಗದಲ್ಲಿರುವ ಭಾರತೀಯರು ಮತ್ತೊಂದು ಕಡ್ಡಾಯ ಅವಶ್ಯಕತೆಯನ್ನು ಪೂರ್ಣಗೊಳಿಸಬೇಕಾಗಿದೆ. ಅವರು ಕೆಲಸ ಮಾಡುವ ಚೀನಾದ ಸ್ಥಳೀಯ ಕಂಪೆನಿ ಕಳುಹಿಸಿದ ವಿದೇಶಾಂಗ ವ್ಯವಹಾರಗಳ ಕಚೇರಿಯಿಂದ ಸಹಿ ಆಗಿರುವ ಕರೆ ಪತ್ರ ಇರಬೇಕು ಎಂದು ಚೀನಾ ಹೇಳಿದೆ.

ಗುರುವಾರ ಬೆಳಿಗ್ಗೆ ದಕ್ಷಿಣ ಚೀನಾದ ನಗರವಾದ ಗುವಾಂಗ್ ಝೊವುದಿಂದ ನವದೆಹಲಿಗೆ ಹಿಂದಿರುಗುವಾಗ, ಸಾಂಕ್ರಾಮಿಕ ರೋಗದಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ವಂದೇ ಭಾರತ್ ಮಿಷನ್ ಐದನೇ ಹಂತದ ಭಾಗವಾದ ವಿಮಾನವು ೨೦೦ ಕ್ಕೂ ಹೆಚ್ಚು ಭಾರತೀಯರನ್ನು ಹಿಂದಕ್ಕೆ ಕರೆತರುವ  ನಿರೀಕ್ಷೆಯಿದೆ .

ಹಿಂದಿರುಗುತ್ತಿರುವ ಹೆಚ್ಚಿನ ಭಾರತೀಯರು ಚೀನಾದಲ್ಲಿ ವೈದ್ಯಕೀಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಾಗಿದ್ದಾರೆ.

ಜೂನ್ ೨೦ ರಂದು ಶಾಂಘೈಗೆ ತೆರಳುವ ವಿಶೇಷ ವಿಮಾನದಲ್ಲಿ ಹಿಂದಿರುಗಿದ್ದ ಇಬ್ಬರು ಭಾರತೀಯರು ಕೋವಿಡ್ -೧೯ ಸೋಂಕು ಕಂಡುಬಂದದ್ದರಿಂದ ಅವರನ್ನು ವಾಪಸ್ ಕಳುಹಿಸಿದ್ದ ಚೀನಾ ಸರ್ಕಾರ, ಈಗ ಗುರುವಾರದ ವಿಬಿಎಂ ಹಾರಾಟಕ್ಕೆ ಒಂದು ತಿಂಗಳಿಗಿಂತ ಹೆಚ್ಚು ಕಾಲದ ಬಳಿಕ ಅನುಮತಿ ನೀಡಿದೆ.

ಗುರುವಾರ ಚೀನಾಕ್ಕೆ ಮರಳುವವರಲ್ಲಿ ಬಹುರಾಷ್ಟ್ರೀಯ ಬ್ಯಾಂಕುಗಳು, ಹೊಸ ಅಭಿವೃದ್ಧಿ ಬ್ಯಾಂಕ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕಿಗಾಗಿ ಕೆಲಸ ಮಾಡುವ ಭಾರತೀಯರು ಸೇರಿದ್ದಾರೆ.

ಆಗಮಿಸುವ ಭಾರತೀಯರನ್ನು ಗುವಾಂಗ್ ಝೊವುನಲ್ಲಿ ಸ್ಥಳೀಯ ಆರೋಗ್ಯ ಅಧಿಕಾರಿಗಳು ಗೊತ್ತುಪಡಿಸಿದ ಹೋಟೆಲ್ಗಳಲ್ಲಿ ಎರಡು ವಾರಗಳವರೆಗೆ ನಿರ್ಬಂಧದಲ್ಲಿ ಇರಿಸಲಾಗುತ್ತದೆ.

Advertisement