Showing posts with label Atal Bihari Vajpeyee. Show all posts
Showing posts with label Atal Bihari Vajpeyee. Show all posts

Monday, December 25, 2023

ಅಜಾತಶತ್ರು ಅಟಲ್‌ ೯೯ ನೇ ಜನ್ಮದಿನ

 ಅಜಾತಶತ್ರು ಅಟಲ್‌: ೯೯ ನೇ ಜನ್ಮದಿನ

ಭಾರತದ ಮಾಜಿ ಪ್ರಧಾನಿ, ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ಅವರ ೯೯ನೇ ಜನ್ಮದಿನದ ಅಂಗವಾಗಿ ೨೦೨೩ ಡಿಸೆಂಬರ್‌ ೨೫ರ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್‌ ಧನ್‌ ಕರ್‌, ಪ್ರಧಾನಿ ನರೇಂದ್ರ ಮೋದಿ ಮತ್ತಿತರ ಗಣ್ಯರು ʼಸದೈವ ಅಟಲ್‌ʼ ಸಮಾಧಿಗೆ ತೆರಳಿ ಪುಷ್ಟ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.

ಈ  ಸಂದರ್ಭದ ಒಂದು ವಿಡಿಯೋ ಇಲ್ಲಿದೆ:

ವಾಜಪೇಯಿ ಅವರ ಜನ್ಮದಿನವನ್ನು ಭಾರತ ಸರ್ಕಾರವು ʼಉತ್ತಮ ಆಡಳಿತದ ದಿನʼವಾಗಿ ಆಚರಿಸಿಕೊಂಡು ಬರುತ್ತಿದೆ. ವಾಜಪೇಯಿ ಅವರ ಕುರಿತು ಪ್ರಧಾನಿ ಮೋದಿ ಅವರು ಟ್ವಟ್ಟರಿನಲ್ಲಿ ಹಂಚಿಕೊಂಡಿರುವ ʼಅಟಲ್‌ ಸ್ಮರಣೆʼ ಕುರಿತ ವಿಡಿಯೋ ಇಲ್ಲಿವೆ:

Sunday, November 21, 2021

ಪ್ರಜಾಪ್ರಭುತ್ವದ ತಾಯಿ ಭಾರತ

 ಪ್ರಜಾಪ್ರಭುತ್ವದ ತಾಯಿ ಭಾರತ


ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ 76ನೇ ಸಮ್ಮೇಳನದಲ್ಲಿ ಮಾತನಾಡುತ್ತಾ ‘ಪ್ರಜಾಪ್ರಭುತ್ವದ ತಾಯಿ’ ಎನಿಸಿರುವ ಭಾರತದ ಪ್ರತಿನಿಧಿಯಾಗಿ ವಿಶ್ವಸಂಸ್ಥೆಯನ್ನು ಪ್ರತಿನಿಧಿಸುತ್ತಿರುವುದಕ್ಕಾಗಿ ತಮಗೆ ಹೆಮ್ಮೆಯಾಗುತ್ತದೆ. ಭಾರತದ ಪ್ರಜಾಪ್ರಭುತ್ವಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ ಎಂಬುದಾಗಿ ಹೇಳಿದರು.

ವಿಶ್ವದ ಪ್ರಜಾಪ್ರಭುತ್ವಕ್ಕೆ ಗ್ರೀಕ್ ದೇಶವೇ ಮೂಲ ಎಂಬುದಾಗಿ ನಂಬಿದ್ದ ಹಲವರಿಗೆ ಇದು ಇರುಸು ಮುರುಸು ಉಂಟು ಮಾಡಿದ್ದು ಸುಳ್ಳಲ್ಲ. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದವು.

ಈ ಸಂದರ್ಭದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಕೇಂದ್ರದ ಸಹವರ್ತಿ ಕಾನ್‌ಸ್ಟಾಂಟಿನೋ ಕ್ಸೇವಿಯರ್  ಮಾಡಿದ ಒಂದು ಟ್ವೀಟ್ ಎಲ್ಲರ ಗಮನ ಸೆಳೆಯಿತು.

 "ಸ್ಥಳೀಯ ಭಾರತೀಯ ಪ್ರಜಾಪ್ರಭುತ್ವ" ಎಂಬ ಪರಿಕಲ್ಪನೆಯನ್ನು ಭಾರತದ ದಿಗಂಗತ ಪ್ರಧಾನಿಗಳಾಗಿದ್ದ ಮೊರಾರ್ಜಿ ದೇಸಾಯಿ ಮತ್ತು  ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಲವರು ಪ್ರಸ್ತಾಪಿಸಿದ್ದರು ಎಂದು ಅವರು ಟ್ವೀಟ್ ಮಾಡಿದರು.

ಅನೇಕ ವರ್ಷಗಳಿಂದ ವ್ಯಾಪಕವಾಗಿ ಪ್ರಚಾರದಲ್ಲಿರುವ  ಸಂದರ್ಶನ ಒಂದರ ಕಡೆಗೆ ಕ್ಸೇವಿಯರ್ ಗಮನ ಸೆಳೆದಿದ್ದರು.   “ಭಾರತದಲ್ಲಿ ಪ್ರಜಾಪ್ರಭುತ್ವವು ಇತರ ದೇಶಗಳಿಗಿಂತ ಹೆಚ್ಚು ಸಹಜವಾಗಿದೆ ಎಂಬುದನ್ನು ಜನರು ಮರೆಯುತ್ತಾರೆ. ಏಕೆಂದರೆ ಪ್ರಪಂಚದಲ್ಲಿ ಬೇರೆ ಯಾವುದೇ ದೇಶವು ಕನಸು ಕಾಣುವ ಮೊದಲೇ ಭಾರತದಲ್ಲಿ ಪ್ರಜಾಪ್ರಭುತ್ವವಿತ್ತು. ಇದು ವೇದಗಳಲ್ಲಿ ಇದೆ, ಅದನ್ನು ಸಂಪೂರ್ಣವಾಗಿ ಮತ್ತು ದೃಢವಾಗಿ ವಿವರಿಸಲಾಗಿದೆ " ಎಂದು ಮೊರಾರ್ಜಿ ದೇಸಾಯಿ ಹೇಳಿದ್ದರು.

ಬ್ರಿಟನ್‌ನಲ್ಲಿ ಅನೇಕರು ಭಾರತಕ್ಕೆ ತಾವು ನೀಡಿರುವ ಕೊಡುಗೆ  ಪ್ರಜಾಪ್ರಭುತ್ವ ಎಂದು ಭಾವಿಸಿದ್ದಾರಲ್ಲ ಎಂದು ಸಂದರ್ಶಕರು ಕಾಲೆಳೆದಾಗ ಮೊರಾರ್ಜಿ ಹೀಗೆ ಉತ್ತರಿಸಿದ್ದರು:  “ಅದು ಅವರಿಗೆ  ಇಷ್ಟವಾದರೆ, ಅದರ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಆದರೆ ನಾವು 2,500 ವರ್ಷಗಳ ಹಿಂದೆ ಗಣರಾಜ್ಯಗಳನ್ನು ಹೊಂದಿದ್ದೆವು - 2,500 ವರ್ಷಗಳ ಹಿಂದೆ, ಗ್ರೀಸ್ ತನ್ನದೇ ರೀತಿಯ ಪ್ರಜಾಪ್ರಭುತ್ವವನ್ನು ಹೊಂದಿರುವುದಕ್ಕಿಂತ  ಮುಂಚೆಯೇ”.

ನಂತರ, 2003 ರಲ್ಲಿ,ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಭಾರತದ ಸಂಸತ್ತಿನ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಅಂತಾರಾಷ್ಟ್ರೀಯ ಸಂಸತ್ತಿನ ಸಮ್ಮೇಳನದಲ್ಲಿ, "ಭಾರತದ ಪ್ರಜಾಪ್ರಭುತ್ವವು ಆಳವಾದ ಬೇರುಗಳನ್ನು ಹೊಂದಿದೆ ಮತ್ತು ನಮ್ಮ ಪ್ರಾಚೀನ ಸಂಸ್ಕೃತಿಯು ವಿಭಿನ್ನ ಮತ್ತು ಭಿನ್ನಾಭಿಪ್ರಾಯಗಳಿಗೆ ಗೌರವವನ್ನು ಕಲಿಸುತ್ತದೆ” ಎಂದು ಹೇಳಿದ್ದನ್ನೂ ಕ್ಸೇವಿಯರ್ ತಮ್ಮ ಟ್ವೀಟಿನಲ್ಲಿ ಪ್ರಸ್ತಾಪಿಸಿದರು.

1990 ರಲ್ಲಿ  ಆಗಿನ ವಿದೇಶಾಂಗ ವ್ಯವಹಾರಗಳ ಸಚಿವ ಪಿ.ವಿ. ನರಸಿಂಹ ರಾವ್ ( ರಾಜೀವ ಗಾಂಧಿಯವರ ಬಳಿಕ  ಪಿವಿ ನರಸಿಂಹ ರಾವ್ ಅವರೂ ಭಾರತದ ಪ್ರಧಾನಿಯಾದರು)  ನೇಪಾಳಕ್ಕೆ ಭೇಟಿ ನೀಡಿದಾಗ, "ಬುದ್ಧನ ಹುಟ್ಟು ಮತ್ತು ಬೋಧನೆಗಳ ಕಾಲದಲ್ಲಿ ಪ್ರಪಂಚದ ಈ ಭಾಗದಲ್ಲಿ ಅಸ್ತಿತ್ವದಲ್ಲಿದ್ದ ಪ್ರಜಾಪ್ರಭುತ್ವ ಗಣರಾಜ್ಯಗಳ ಬಗ್ಗೆ ಮಾತನಾಡಿದ್ದರು” ಎಂದೂ ಕ್ಸೇವಿಯರ್ ಪ್ರಸ್ತಾಪ ಮಾಡಿದ್ದಾರೆ.

ಲಿಚ್ಚಾವಿಗಳ ರಾಜಧಾನಿಯಾದ ವೈಶಾಲಿ ಪ್ರಜಾಪ್ರಭುತ್ವ ಗಣರಾಜ್ಯವಾಗಿದ್ದು, ಚುನಾಯಿತ ಅಧ್ಯಕ್ಷರೊಂದಿಗಿನ ಗಣ್ಯರ ಸಭೆಯಿಂದ ನಿಯಂತ್ರಿಸಲ್ಪಡುತ್ತಿತ್ತು ಎಂದು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಕೂಡಾ ಹೇಳಿದ್ದರು.

ಭಾರತೀಯ ಸಂಸ್ಕೃತಿಯ ಅಡಿಪಾಯವೇ ಆಗಿರುವ ವೇದಗಳಲ್ಲಿ, ರಾಮಾಯಣದಲ್ಲಿ, ಮಹಾಭಾರತದಲ್ಲಿ ಪ್ರಜಾಪ್ರಭುತ್ವದ ಉಲ್ಲೇಖವಿದೆ.

ಹಾಗಾದರೆ ಭಾರತ ಪ್ರಜಾಪ್ರಭುತ್ವದ ಮೂಲ ಬೇರು ಯಾವುದು?  ಗ್ರಾಮ ಪಂಚಾಯತಿಗಳು ಇಲ್ಲವೇ ಗ್ರಾಮ ಸಭೆಗಳು. ವೇದ, ರಾಮಾಯಣ, ಮಹಾಭಾರತಗಳಲ್ಲಿ ಇದರ ಪ್ರಸ್ತಾಪವಿದೆ.

ಸಹಸ್ರಾರು ವರ್ಷಗಳ ಹಿಂದಿನ ಶಿಲಾ ಶಾಸನಗಳಲ್ಲೂ ಬಗ್ಗೆ ಉಲ್ಲೇಖಗಳಿವೆ. ತಮಿಳುನಾಡಿನ  ಉತಿರಾಮೆರೂರು ಎಂಬ ಗ್ರಾಮದ ದೇವಸ್ಥಾನದಲ್ಲಿನ ಶಿಲಾಶಾಸನವೊಂದರಲ್ಲಿ ಗ್ರಾಮ ಸಭೆಯ ಕಾರ್ಯ ನಿರ್ವಹಣೆಯ ಬಗೆಗೆ ಬರಹಗಳಿವೆ.

ಗ್ರಾಮಸಭೆಯ ಸದಸ್ಯರ ಆಯ್ಕೆ, ಅವರ ಕಾರ್ಯ ನಿರ್ವಹಣೆ, ಕರ್ತವ್ಯಗಳ ಬಗ್ಗೆ, ಅವರನ್ನು ಅನರ್ಹಗೊಳಿಸುವ ಬಗ್ಗೆ ವಿವರಗಳಿವೆ.

ಬಗೆಗಿನ ವಿಡಿಯೋವನ್ನು ನೋಡಲು ಮೇಲಿನ/ ಕೆಳಗಿನ ಚಿತ್ರಗಳನ್ನು ಕ್ಲಿಕ್ ಮಾಡಿ.


- ಹೌದು, ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಇತಿಹಾಸ, ಅದರ ಅಡಿಪಾಯವಾದ ಪಂಚಾಯತಿ ವ್ಯವಸ್ಥೆ ಬಗ್ಗೆ ನಾವಿಂದು ಹೆಮ್ಮೆ ಪಡಬೇಕಾಗಿದೆ.

-ನೆತ್ರಕೆರೆ ಉದಯಶಂಕರ

Saturday, October 3, 2020

ಗಡಿ ಮೂಲಸೌಕರ್ಯ: ಹಿಂದಿನ ಸರ್ಕಾರಗಳಿಗೆ ಪ್ರಧಾನಿ ಮೋದಿ ತರಾಟೆ

 ಗಡಿ ಮೂಲಸೌಕರ್ಯ: ಹಿಂದಿನ ಸರ್ಕಾರಗಳಿಗೆ ಪ್ರಧಾನಿ ಮೋದಿ ತರಾಟೆ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ 2020 ಅಕ್ಟೋಬರ್ 03ರ ಶನಿವಾರ . ಕಿ.ಮೀ ಉದ್ದದ ಅಟಲ್ ಸುರಂಗ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತ್ವರಿತ ಗಡಿ ಮೂಲ ಸೌಕರ್ಯಗಳ ನವೀಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರಗಳು ಕಾರ್ಯತಂತ್ರದ ದೃಷ್ಟಿ ಹೊಂದಿರಲಿಲ್ಲ ಮತ್ತು ಅವುಗಳ ನವೀಕರಣಕ್ಕೆ ಮುಂದಾಗಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದರು.

ಪೂರ್ವ ಲಡಾಖ್‌ನಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಡುವಣ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು, ಕಾರಕೋರಂ ಪಾಸ್ ಬಳಿಯ ದೌಲತ್ ಬೇಗ್ ಓಲ್ಡಿ ಪೋಸ್ಟ್‌ನಲ್ಲಿ ೧೬,೮೦೦ ಅಡಿ ಎತ್ತರದ ಏರ್‌ಸ್ಟ್ರಿಪ್‌ನ ಉದಾಹರಣೆಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು.

೧೯೬೫ ರಿಂದ ೨೦೦೮ ರವರೆಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಿರ್ಮಾಣಗೊಂಡಿರದ ಏರ್ ಸ್ಟ್ರಿಪ್‌ನ್ನು ೨೦೦೮ ರಲ್ಲಿ ರಷ್ಯಾದ ಎಎನ್ -೩೨ ವಿಮಾನವನ್ನು ಬಳಸಿಕೊಂಡು ಭಾರತೀಯ ವಾಯುಪಡೆಯು (ಐಎಎಫ್) ಸುಧಾರಿತ ಲ್ಯಾಂಡಿಂಗ್ ಮೈದಾನವನ್ನು ಸಕ್ರಿಯಗೊಳಿಸಿತು ಮತ್ತು ಯೋಜನೆ ಪೂರ್ಣಗೊಂಡ ನಂತರ ಅಂದಿನ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರಕ್ಕೆ ತಿಳಿಸಿತು.

ಡಿಬಿಒ-ಡೆಪ್ಸಾಂಗ್ ಬಲ್ಜ್ ಪ್ರದೇಶದಲ್ಲಿನ ಸೈನಿಕರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಪ್ರಮುಖವಾದ ಏರ್‌ಸ್ಟ್ರಿಪ್ ಅನ್ನು ಈಗ ಸಿ -೧೩೦ ಜೆ ಹರ್ಕ್ಯುಲಸ್ ವಿಮಾನವು ಬಳಸುತ್ತಿರುವುದು ಚೀನೀ ಕಮಾಂಡರ್‌ಗಳ ಕಣ್ಣು ಕೆಂಪಾಗಿಸಿದೆ.

ಹಿಂದಿನ ಸರ್ಕಾರಗಳು ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ರಸ್ತೆಗಳನ್ನು ನಿರ್ಮಾಣ ಮಾಡದೇ ಇರುವ ಮೂಲಕ ಭಾರತೀಯ ಸೇನೆಗೆ ಗಸ್ತು ತಿರುಗಲು ಎಲ್ ಎಸಿ ಉದ್ದಕ್ಕೂ ಅಡಚಣೆಗಳನ್ನು ಹಾಕಲಾಗಿದೆ ಎಂದು ಚೀನಾವನ್ನು ಉಲ್ಲೇಖಿಸದೆಯೇ ಪ್ರಧಾನಿ ಆಪಾದಿಸಿದರು.

ಉಭಯ ದೇಶಗಳ ಗಡಿ ಮೂಲಸೌಕರ್ಯದಲ್ಲಿನ ೩೦ ವರ್ಷಗಳ ವ್ಯತ್ಯಾಸ ಪಿಎಲ್‌ಎಗೆ ಸಾಮರ್ಥ್ಯ ದೃಷ್ಟಿಯಿಂದ ನೆರವಾಗಿದೆ ಎಂದು ಚೀನೀ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಪ್ರಾರಂಭಿಸಿದ ಮೂರು ಯೋಜನೆಗಳಾದ ಅಟಲ್ ಸುರಂಗ (ಹಿಮಾಚಲ ಪ್ರದೇಶ), ಕೋಸಿ ಮಹಾ ಸೇತು (ಬಿಹಾರ) ಮತ್ತು ಬೋಗಿಬೀಲ್ ಸೇತುವೆ (ಅಸ್ಸಾಂ) ಮೂರನ್ನು ರಾಷ್ಟ್ರೀಯ ಗುರಿಗಳನ್ನು ಸಾಧಿಸುವ ಬಗೆಗಿನ ಹಿಂದಿನ ಸರ್ಕಾರಗಳ ಉದಾಸೀನ ಮನೋಭಾವವನ್ನು ಪ್ರದರ್ಶಿಸಲು ಪ್ರಧಾನಿ ಮೋದಿ ಬಳಸಿದರು.

ಅಟಲ್ ಸುರಂಗವನ್ನು ಶನಿವಾರ ಉದ್ಘಾಟಿಸಿದರೆ, ೧೯೩೪ ರಿಂದ ನೆನೆಗುದಿಗೆ ಬಿದ್ದಿದ್ದ ಕೋಸಿ ರೈಲು ಸೇತುವೆಯನ್ನು ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲಾಯಿತು ಮತ್ತು ಬೋಗಿಬೀಲ್ ಸೇತುವೆಗೆ ೨೦೧೮ ರಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಾಣೆ ಮತ್ತು ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಅವರ ಸಮ್ಮುಖದಲ್ಲಿ, ಪ್ರಧಾನಿ ಮೋದಿ ಅವರು ಭಾರತೀಯ ಅಧಿಕಾರಶಾಹಿಗೂ ಚಾಟಿ ಬೀಸಿದರು. ಈಗ ಹಾರಾಟಕ್ಕಷ್ಟೇ ಬಾಕಿ ಉಳಿದಿರುವ ರಫೇಲ್ ಯುದ್ಧ ವಿಮಾನ ಹಲವಾರು ವರ್ಷಗಳ ಕಾಲ ಒಂದು ಮೇಜಿನಿಂದ ಇನ್ನೊಂದು ಮೇಜಿಗೆ ಕಡತಗಳ ಚಲನೆಗಷ್ಟೇ ಸೀಮಿತವಾಗಿದ್ದುದು ಭಾರತ ಭಾರತದ ರಕ್ಷಣೆಗೆ ಧಕ್ಕೆಯುಂಟುಮಾಡುತ್ತದೆ ಎಂದು ಮೋದಿ ಹೇಳಿದರು.

ಆರ್ಡನೆನ್ಸ್ ಕಾರ್ಖಾನೆಗಳ ಉದಾಹರಣೆಯನ್ನು ಉಲ್ಲೇಖಿಸಿದ, ಪ್ರಧಾನಿ ಭಾರತೀಯ ಅಧಿಕಾರಶಾಹಿಗೆ "ಆತ್ಮನಿರ್ಭರ್" ಭಾರತಕ್ಕೆ ಅಡ್ಡಿಯಾಗಿ ನಿಲ್ಲದಂತೆ ನಿಲ್ಲದಂತೆ ಎಚ್ಚರಿಕೆ ನೀಡಿದರು.

ಅಟಲ್ ಸುರಂಗದ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲವಾದರೂ, ರೋಹ್ಟಾಂಗ್ ಲಾ ಅಡಿಯಲ್ಲಿರುವ ಸುರಂಗವು ದಾರ್ಚಾ-ಉಪಶಿ-ಲೇಹ್ ಮಾರ್ಗಕ್ಕಿಂತ ಹೆಚ್ಚಾಗಿ ದಾರ್ಚಾ-ಪದಮ್-ನಿಮು ಮಾರ್ಗದ ಮೂಲಕ ಲಡಾಖ್‌ಗೆ ಹೊಸ ರಸ್ತೆಯನ್ನು ತೆರೆಯುತ್ತದೆ, ಇದು ಭಾರೀ ಹಿಮಪಾತದ ಕಾರಣದಿಂದ ವರ್ಷಕ್ಕೆ ಆರು ತಿಂಗಳು ನಿರ್ಬಂಧಿಸಲ್ಪಡುತ್ತದೆ.

ಡಾರ್ಚಾ-ಪದಮ್-ನಿಮು ಮಾರ್ಗವು ದಾರ್ಚಾ-ಪದಮ್ ಅಕ್ಷದಲ್ಲಿ ಶಿಂಕು ಲಾ ಅಡಿಯಲ್ಲಿ . ಕಿಲೋಮೀಟರ್ ಸುರಂಗವನ್ನು ನಿರ್ಮಿಸಿದ ನಂತರ ವರ್ಷಪೂರ್ತಿ ತೆರೆದಿರುತ್ತದೆ.

ದೇಶದ ದೂರದ ಪ್ರದೇಶಗಳನ್ನು ಸಂಪರ್ಕಿಸಲು ಲಡಾಖ್ ವಲಯದಲ್ಲಿ ರಸ್ತೆಗಳನ್ನು ನಿರ್ಮಿಸುತ್ತಿರುವಂತೆಯೇ, ಅರುಣಾಚಲ ಪ್ರದೇಶದ ಕಾರ್ಯತಂತ್ರದ ರಸ್ತೆಗಳನ್ನು ಪೂರ್ಣಗೊಳಿಸಲು ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಹೆಚ್ಚು ವೇಗವಾಗಿ ಚಲಿಸುತ್ತಿದೆ. ಇದರಿಂದ ತವಾಂಗ್, ವಾಲಾಂಗ್ ಮತ್ತು ಕಿಬುಥೂ ಮುಂತಾದ ಸ್ಥಳಗಳು ಸರ್ವ ಋತು ಹವಾಮಾನ ರಸ್ತೆಗಳ ಮೂಲಕ ಭಾರತದ ಇತರ ಭಾಗಗಳಿಗೆ ಸಂಪರ್ಕ ಹೊಂದಲಿವೆ.

ಚೀನಾವು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ್ನು ಮಾನ್ಯ ಮಾಡಲು ನಿರಾಕರಿಸಿರುವುದು ಮತ್ತು ಪ್ರದೇಶಗಳಲ್ಲಿನ ಗಡಿ ಮೂಲ ಸೌಕರ್ಯ ನವೀಕರಣವನ್ನು ಭಾರತದ ಅತಿಕ್ರಮಣ ಎಂಬುದಾಗಿ ಕರೆಯುವುದರಲ್ಲಿ ಅಚ್ಚರಿಯೇನೂ ಇಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Advertisement