Showing posts with label ಬ್ಲಾಗು/ಅಂತರ್ಜಾಲ ಪ್ರಪಂಚ / Blog/Internet World. Show all posts
Showing posts with label ಬ್ಲಾಗು/ಅಂತರ್ಜಾಲ ಪ್ರಪಂಚ / Blog/Internet World. Show all posts

Saturday, January 2, 2010

'ವಿಲ್ ಗ್ರೋ' ಪುರಸ್ಕೃತ 'ಶ್ರೀ' ಪಡ್ರೆ


'ವಿಲ್ ಗ್ರೋ' ಪುರಸ್ಕೃತ 'ಶ್ರೀ' ಪಡ್ರೆ

ಪುತ್ತೂರಿನ 'ಅಡಿಕೆ ಪತ್ರಿಕೆ' ಬಳಗದ ನಾ. ಕಾರಂತ ಪೆರಾಜೆ ಸುಂದರ ಬ್ಲೋಗ್ ಒಂದನ್ನು ಬರೆಯುತ್ತಿದ್ದಾರೆ. ಅವರ 'ಹಸಿರು ಮಾತು' ಡೊಡ್ಡ ಪತ್ರಿಕೆಗಳು ಮಾಡಬೇಕಾದ ಕೆ
ಲಸವನ್ನು ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ದುಡಿಯುತ್ತಾ ಕೃಷಿ ಕ್ಷೇತ್ರದಲ್ಲಿ, ಜಲ ಸಂರಕ್ಷಣೆಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಶ್ರೀಪಡ್ರೆಯಂತಹವರಿಗೆ ಪ್ರಶಸ್ತಿ ಬಂದ ವಿಚಾರ ಈ ಬ್ಲೋಗ್ ಮೂಲಕವೇ ನನಗೆ ಗೊತ್ತಾಯಿತು ಎನ್ನುವುದು ಹೆಮ್ಮೆಯ ವಿಚಾರ.

ಈ ಸುದ್ದಿ ಪ್ರಕಟಿಸಿದ ನಾ. ಕಾರಂತ ಪೆರಾಜೆ ಅವರಿಗೆ ವಂದನೆಗಳನ್ನೂ ಹಾಗೆಯೇ 'ವಿಲ್ ಗ್ರೋ' ಪ್ರಶಸ್ತಿ ಪಡೆದ 'ಶ್ರೀಪಡ್ರೆ' ಹಾಗೂ ಅವರಿಗೂ ಅಭಿವೃದ್ಧಿ- ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪಡೆದ ಅನಿತಾ ಪೈಲೂರು, ರಾಧಾಕೃಷ್ಣ ಎಸ್.ಭಡ್ತಿ, ಜಿ.ಕೃಷ್ಣಪ್ರಸಾದ್ ಅವರಿಗೆ ಅಭಿನಂದನೆಗಳನ್ನೂ ಈ ಮೂಲಕ ವ್ಯಕ್ತ ಪಡಿಸಿತ್ತಿದ್ದೇನೆ.

-ನೆತ್ರಕೆರೆ ಉದಯಶಂಕರ

'ಹಸಿರು ಮಾತು' ವರದಿ ಇಲ್ಲಿದೆ ನೋಡಿ:

'ಶ್ರೀ' ಪಡ್ರೆಯವರಿಗೆ 'ವಿಲ್ ಗ್ರೋ' ಪ್ರಶಸ್ತಿ

ಹಿರಿಯ ಪತ್ರಕರ್ತ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಗೆ ಪ್ರತಿಷ್ಠಿತ 'ವಿಲ್ ಗ್ರೋ' ಪ್ರಶಸ್ತಿ ಸಂದಿದೆ. ಚೆನ್ನೈಯ ವಿಲ್ಗ್ರೋ ಸಂಸ್ಥೆ (ಹಿಂದೆ ರೂರಲ್ ಇನೊವೇಶನ್ ನೆಟ್ವರ್ಕ್) ಪತ್ರಕರ್ತ ವಿಭಾಗದಲ್ಲಿ ಪಡ್ರೆಯವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ಮತ್ತು ಫಲಕಗಳನ್ನೊಳಗೊಂಡಿದೆ.

ಆರು ಮಂದಿ ಪತ್ರಕರ್ತರ ಪೈಕಿ ಅಡಿಕೆ ಪತ್ರಿಕೆಯಲ್ಲಿ ಅನುಶೋಧನೆಗಳಿಗೆ ಕೊಟ್ಟ ಆದ್ಯತೆಗಳಿಗಾಗಿ ಶ್ರೀ ಪಡ್ರೆಯವರಿಗೆ ಈ ಪ್ರಶಸ್ತಿ ಕೊಡಲಾಗಿದೆ. ತೀರ್ಪುಗಾರರ ಮಂಡಳಿಯ ತೀರ್ಮಾನ ಮತ್ತು ಎಸ್ಎಂಎಸ್ - ಹೀಗೆ ಎರಡು ವಿಧಾನಗಳ ಮೂಲಕ ಒಟ್ಟಾರೆಯಾಗಿ ಈ ಆಯ್ಕೆ ನಡೆದಿದೆ.

'ಶ್ರೀ' ಪಡ್ರೆ ಕೇರಳದ ಕಾಸರಗೋಡು ಜಿಲ್ಲೆಯ ವಾಣಿನಗರದ ಕೃಷಿಕ. ಪ್ರವೃತ್ತಿಯಲ್ಲಿ ಕೃಷಿ ಪತ್ರಕರ್ತ. ಅಡಿಕೆ ಪತ್ರಿಕೆಯ ಸ್ಥಾಪಕ ಸಂಪಾದಕ. ಜಲಕೂಟ ಮತ್ತು ಅಡಿಕೆ ಪತ್ರಿಕೆಯ ಆಶ್ರಯದಲ್ಲಿ ದಶಕಕ್ಕೂ ಮಿಕ್ಕಿ ಮಳೆಕೊಯ್ಲಿನ ಬಗ್ಗೆ ಆಧ್ಯಯನ, ಬರವಣಿಗೆ, ದೇಶ-ವಿದೇಶಗಳಲ್ಲಿ ಮಳೆಕೊಯ್ಲಿನ ವಿವರಗಳನ್ನು ಸಂಗ್ರಹಿಸಿ, ಜನರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಇಂಗ್ಲಿಷಿನಲ್ಲೂ ಅಭ್ಯುದಯ
ನುಡಿಚಿತ್ರ್ರ ಬರೆಯುತ್ತಾರೆ.

ಕಾಸರಗೋಡಿನ ಎಂಡೋಸಲ್ಫಾನ್ ದುರಂತವನ್ನು ಹೊರಜಗತ್ತಿಗೆ ತಿಳಿಸಿ ಅದನ್ನು ತಡೆಯುವ ಹೋರಾಟದಲ್ಲಿ ಭಾಗಿ. ನೆಲ-ಜಲ ಉಳಿಸಿ, ಹನಿಗೂಡಿಸುವ ಹಾದಿಯಲ್ಲಿ, ಮತ್ತೆ ರೂಪಾರೆಲ್ ಬತ್ತಲಿಲ್ಲ, ಬಾನಿಗೊಂದು ಆಲಿಕೆ, ಗುಜರಾತಿನ ನೀರ ತಿಜೋರಿ ಟಾಂಕಾ, ನೀರ ನೆಮ್ಮದಿಗೆ ನೂರಾರು ದಾರಿ, ನೀರ ಸಮಸ್ಯೆಗೆ ಇಲ್ಲಿವೆ ಪರಿಹಾರ, ಓಡಲು ಬಿಡದಿರಿ ಮಳೆನೀರ, ರೈನ್ ವಾಟರ್ ಹಾರ್ವೆಸ್ಟಿಂಗ್, ಮಣ್ಣು-ನೀರು ಇತ್ಯಾದಿ ಇವರ ಪ್ರಕಟಿತ ಕೃತಿಗಳು.

'ಗುಡ್ ನ್ಯೂಸ್ ಇಂಡಿಯಾ ಡಾಟ್ ಕಾಂ' ಎಂಬ ಜಾಲತಾಣ ಇವರನ್ನು 'ದ ರೈನ್ ಮ್ಯಾನ ಆಫ್ ಕೆನರಾ ಕೋಸ್ಟ್' ಎಂದು ಬಣ್ಣಿಸಿದೆ. ಅಶೋಕ ಫೆಲೋ ಕೂಡಾ ಆಗಿರುವ ಇವರಿಗೆ ಸಿಕ್ಕಿರುವ ಹತ್ತಾರು ಪ್ರಶಸ್ತಿಗಳಲ್ಲಿ ಗ್ರಾಮೀಣ ವರದಿಗಾಗಿ ಇರುವ ಸ್ಟೇಟ್ಸ್ಮೆನ್ ರಾಷ್ಟ್ರೀಯ ಪ್ರಶಸ್ತಿ, ಪಾವನಾ ಪರಿಸರ ಪ್ರಶಸ್ತಿ, ಕರ್ನಾಟಕ ಸರಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಚರಕ ಪತ್ರಿಕೋದ್ಯಮ ಗುರು ಪ್ರಶಸ್ತಿ ಮುಖ್ಯವಾದುವು.

ಅಭಿವೃದ್ಧಿ- ಪರಿಸರ ಪತ್ರಿಕೋದ್ಯಮ ಪ್ರಶಸ್ತಿ

(ಚಿತ್ರದಲ್ಲಿ - ಅನಿತಾ ಪೈಲೂರು, ರಾಧಾಕೃಷ್ಣ ಎಸ್.ಭಡ್ತಿ, ಜಿ.ಕೃಷ್ಣಪ್ರಸಾದ್)

ರಾಜ್ಯ ಸರಕಾರವು ಕಳೆದ ಮೂರು ವರುಷಗಳ 'ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪ್ರಶಸ್ತಿ'ಗಳನ್ನು ಪ್ರಕಟಿಸಿದೆ. ಪ್ರಶಸ್ತಿಯು ತಲಾ ಐವತ್ತು ಸಾವಿರ ರೂಪಾಯಿ ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ.

ಪ್ರಶಸ್ತಿ ಪುರಸ್ಕೃತರು

ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ : ಟೈಮ್ಸ್ ಆಫ್ ಇಂಡಿಯಾ ಕನ್ನಡ ಆವೃತ್ತಿಯ ಸಂಪಾದಕ ಈಶ್ವರ ದೈತೋಟ (2007), ಧಾರವಾಡ ಆಕಾಶವಾಣಿ ಕೇಂದ್ರದ ಸಹಾಯಕ ನಿಲಯ ನಿರ್ದೆಶಕ ಸಿ.ಯು.ಬೆಳ್ಳಕ್ಕಿ (2008), ಧಾರವಾಡ ಕೃಷಿ ಮಾಧ್ಯಮ ಕೇಂದ್ರದ ಅನಿತಾ ಪೈಲೂರು (2009).

ಪರಿಸರ ಪತ್ರಿಕೋದ್ಯಮ ಪ್ರಶಸ್ತಿ : ಸಹಜ ಸಮೃದ್ಧದ ಮುಖ್ಯಸ್ಥ ಜಿ.ಕೃಷ್ಣಪ್ರಸಾದ್ (2007), ಹಿರಿಯ ಪತ್ರಕರ್ತ ಟಿ.ಆರ್. ಅನಂತರಾಮ (2008), ವಿಜಯಕರ್ನಾಟಕದ ಮುಖ್ಯ ಉಪಸಂಪಾದಕ ರಾಧಾಕೃಷ್ಣ ಎಸ್.ಭಡ್ತಿ (2009)

ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅಧ್ಯಕ್ಷರಾಗಿದ್ದ ಆಯ್ಕೆ ಸಮಿತಿಯಲ್ಲಿ - ಡಾ.ಎ.ಎನ್.ಯಲ್ಲಪ್ಪ ರೆಡ್ಡಿ, ಡಾ.ಎಚ್.ಆರ್.ಕೃಷ್ಣಮೂರ್ತಿ, ದು.ಗು.ಲಕ್ಷ್ಮಣ - ಸದಸ್ಯರು.

ಪ್ರಶಸ್ತಿ ಪುರಸ್ಕೃತರಿಗೆ ಹಾರ್ದಿಕ ಅಭಿನಂದನೆಗಳು.

Sunday, March 8, 2009

ಈ ಬ್ಲಾಗು ನೋಡು... ಇದು ಕನ್ನಡಕ್ಕೆ ಕೋಡು..!

ಈ ಬ್ಲಾಗು ನೋಡು...

 ಇದು ಕನ್ನಡಕ್ಕೆ ಕೋಡು..! 





ಪತ್ರಿಕೆಗಳಲ್ಲಿ ಮೊನ್ನೆ ಮೊನ್ನೆ ಸುದ್ದಿ ಬಂತಲ್ಲ, ಮಂಗಳೂರಿನ ಹೊಸ ಮೇಯರ್ ಆಗಿ ಶಂಕರಭಟ್ ಆಯ್ಕೆಯಾದರು ಅಂತ. ಹಾಂ.. ಈ ಶಂಕರ ಭಟ್ ನೀರ್ಚಾಲಿನ ಇದೇ ಮಹಾಜನ ಶಾಲೆಯ ಹಳೇ ವಿದ್ಯಾರ್ಥಿಯಂತೆ. ಈ ವಿಚಾರವನ್ನೂ ಬ್ಲಾಗು ದಾಖಲಿಸಿದೆ.

ನೆತ್ರಕೆರೆ ಉದಯಶಂಕರ

ಈ ವಾರ ಮಿಂಚಂಚೆಗಳನ್ನು ತೆರೆದಾಗ ಗಮನ ಸೆಳೆದ ಒಂದು ಪತ್ರ ಹವ್ಯಾಸಿ ಪತ್ರಕರ್ತ ಎಡನಾಡಿನ ರವಿಶಂಕರ ದೊಡ್ಡ ಮಾಣಿ ಅವರದು. ಕೇರಳದ ಪೆ
ರಡಾಲದ ಕನ್ನಡ ಮಾಧ್ಯಮ ಶಾಲೆಯ ಬ್ಲಾಗ್ ಒಂದಿದೆ, ಒಮ್ಮೆ ಸುತ್ತಾಡಿ ಎಂದು ಕೋರಿದ್ದರು ದೊಡ್ಡ ಮಾಣಿ.

ಕುತೂಹಲದಿಂದಲೇ ಈ ಬ್ಲಾಗಿನೊಳಗೆ ಇಣುಕಿದೆ. ನಿಜಕ್ಕೂ ಖುಷಿಯಾಯಿತು. ಕೇರಳ ಸಾಕ್ಷರ ರಾಜ್ಯ. ಅಲ್ಲಿ ಮಲಯಾಳಂ ಪ್ರಭಾವ ಬಹಳ. ಆದರೆ ಕೇರಳದೊಳಗೆ ಇದ್ದರೂ ಕರ್ಮಾಟಕದ ಜೊತೆಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಜಿಲ್ಲೆ ಕಾಸರಗೋಡು. ಈ  ಜಿಲ್ಲೆಯ ನೀರ್ಚಾಲಿನ ಪೆರಡಾಲದ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ
  'ಮಹಾಜನ ಪುಟಾಣಿಗಳ ಇ ಪತ್ರಿಕೆ' ಖಂಡಿತವಾಗಿ ಕನ್ನಡಕ್ಕೆ ಒಂದು ಕೋಡು.


ಇದೇ ಶಾಲೆಯಲ್ಲಿ ಅದ್ಯಾಪಕರೂ ಆಗಿರುವ ರವಿಶಂಕರ ದೊಡ್ಡ ಮಾಣಿ ವಿದ್ಯಾಸಂಸ್ಥೆಯ, ಸಹ ಅದ್ಯಾಪಕರ, ವಿದ್ಯಾರ್ಥಿಗಳ ಬೆಂಬಲದೊಂದಿಗೆ ರೂಪಿಸಿರುವ ಬ್ಲಾಗು ಇದು. ಕನ್ನಡದ ಉದ್ಧಾರದ ಬಗ್ಗೆ ಉದ್ದುದ್ದುದ್ದುದ್ದುದ್ದ ಭಾಷಣ ಮಾಡುವ ಮಂದಿ ಹಲವರಿದ್ದಾರೆ. ಆದರೆ ಕನ್ನಡಕ್ಕಾಗಿ ಕೈ ಎತ್ತುವ ಪ್ರಸಂಗ ಬಂದಾಗಲೆಲ್ಲ ಕೈ ಎತ್ತಿ ಹೋಗಿ ಬಿಡುವವರು 
ಹೆಚ್ಚು. ನಿಜವಾಗಿಯೂ ಟೊಂಕ ಬಿಗಿದು ಕನ್ನಡದ ತೇರನೆಳೆಯುವವರು ಎಲೆಮರೆಯ 
ಕಾಯಿಗಳಂತೆ ತಮ್ಮ ಸೇವೆ ಮಾಡುತ್ತಾ ತಮ್ಮಷ್ಟಕ್ಕೆ ತೃಪ್ತರಾಗಿ ಇದ್ದುಬಿಡುತ್ತಾರೆ. ಅಂತಹವರ ಪೈಕಿ ದೊಡ್ಡ ಮಾಣಿ ಒಬ್ಬರು ಎಂಬುದಾಗಿ ಚಿತ್ರದುರ್ಗದ ಆಕಾಶವಾಣಿ ಕೇಂದ್ರದ ಪ್ರಸಾರ ನಿರ್ವಾಹಕ ಬೇದ್ರೆ ಮಂಜುನಾಥ ಈ ಬ್ಲಾಗಿಗೆ ಕೊಟ್ಟಿರುವ ಪ್ರತಿಕ್ರಿಯೆ ನಿಜಕ್ಕೂ ಅರ್ಥಪೂರ್ಣ ಎನಿಸುತ್ತದೆ.

ಈ ಬ್ಲಾಗಿನಲ್ಲಿ ಎಷ್ಟೊಂದು ವಿಚಾರಗಳಿವೆ. ಪುಟ್ಟ ಪುಟ್ಟ ಕವನಗಳಿವೆ. ಕಥೆಗಳಿವೆ. ಪುಟಾಣಿ ಮಕ್ಕಳ ಮೆದುಳಿನಲ್ಲಿ ಮೂಡಿ ಮರೆಯಾಗುವ ಎಷ್ಟೊಂದು ಚಿತ್ರಗಳು ಈ ಬ್ಲಾಗಿನಲ್ಲಿ ಮಿಂಚಿವೆ. ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ನ ಕ್ಯಾಂಬೂರಿಯಲ್ಲಿ ಗೆದ್ದ ಸುದ್ದಿ ಇದೆ! ಮಕ್ಕಳು ತಾವು ಓದಿದ, ಕೇಳಿದ ಅ
ನುಭವಗಳನ್ನು ಇಲ್ಲಿ ಪುಟ್ಟ ಪುಟ್ಟ ಜ್ಞಾನದ ತುಣುಕುಗಳ ರೂಪದಲ್ಲೂ ಇಳಿಸಿದ್ದಾರೆ.
ಅಜೇಯ ಕೃಷ್ಣ ಬರೆದ ಗೊರಿಲ್ಲಾ, ನಮ್ರತಾಳ ಚಿತ್ರಗಳು, ನಿಶಾಂತನ ಪುಟ್ಟ ಪದ್ಯ, ಗಮ್ಯಾಳ ಪಾರ್ತಿ ಸುಬ್ಬನ ಕುರಿತ ಮಾಹಿತಿ, ಅನು ತೇಜನ 'ಕಾರು', ಸ್ವಾತಿಯ ವಿದ್ಯಾರ್ಥಿ ಜೀವನದ ಲಕ್ಷಣಗಳ ಕುರಿತ ಪ್ರಬಂಧ, ಚಂದ್ರಶೇಖರನ ಕಾರ್ಟೂನು.... ಮಕ್ಕಳ ಪ್ರತಿಭೆಯ ಪರಿಚಯದ ಜೊತೆಗೆ ವಿದ್ಯಾದಾನದ ಜೊತೆಗೇ ಪ್ರತಿಭಾ ವಿಕಾಸಕ್ಕೂ ನೀರೆರೆಯುವ ಕೆಲಸ ಇಲ್ಲಿ ನಡೆದಿದೆ ಎಂದರೆ ತಪ್ಪಲ್ಲ, ಉತ್ಪ್ರೇಕ್ಷೆಯೂ ಅಲ್ಲ.

ಪತ್ರಿಕೆಗಳಲ್ಲಿ ಮೊನ್ನೆ ಮೊನ್ನೆ ಸುದ್ದಿ ಬಂತಲ್ಲ, ಮಂಗಳೂರಿನ ಹೊಸ ಮೇಯರ್ ಆಗಿ ಶಂಕರಭಟ್ ಆಯ್ಕೆಯಾದರು ಅಂತ. ಹಾಂ.. ಈ ಶಂಕರ ಭಟ್ ನೀರ್ಚಾಲಿನ ಇದೇ ಮಹಾಜನ ಶಾಲೆಯ ಹಳೇ ವಿದ್ಯಾರ್ಥಿಯಂತೆ. ಈ ವಿಚಾರವನ್ನೂ ಬ್ಲಾಗು ದಾಖಲಿಸಿದೆ.

ರವಿಶಂಕರ ದೊಡ್ಡ ಮಾಣಿಯವರೇ ಅಭಿನಂದನೆಗಳು. ನಿಮ್ಮ ಸೇವೆ ನಿರಂತರವಾಗಲಿ. ನೂರಾರು... ಸಹಸ್ರಾರು ಪ್ರತಿಭೆಗಳು ನಿಮ್ಮ ಯತ್ನದಿಂದ ಬೆಳಗುವಂತಾಗಲಿ. 'ಮಹಾಜನ ಶಾಲೆ ಮಹಾನ್' ಆಗಿ ಪ್ರಪಂಚದ ಭೂಪಟದಲ್ಲಿ ಕಂಗೊಳಿಸಲಿ. 

ಬ್ಲಾಗಿನೊಳಗೊಮ್ಮೆ ಸುತ್ತಾಡಿ ಬರಲು ಈ ಲಿಂಕ್ ಕ್ಲಿಕ್ ಮಾಡಿ: www.mschsnirchal.blogspot.com



Advertisement