Showing posts with label Sri Balaji Krupa Layout. Show all posts
Showing posts with label Sri Balaji Krupa Layout. Show all posts

Saturday, July 19, 2025

ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದ ಸ್ವಾಮಿ..

 ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದ ಸ್ವಾಮಿ..

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಜುಲೈ ೧೯ರ ಶನಿವಾರ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷವಾದ ಬೆಣ್ಣೆ ಅಲಂಕಾರ ಮಾಡಲಾಗಿತ್ತು.


ಬಡಾವಣೆಯ ಹಿರಿಯ ನಿವಾಸಿಗಳಲ್ಲಿ ಒಬ್ಬರಾದ ಶ್ರೀ ಕೃಷ್ಣೋಜಿ ರಾವ್‌ ಅವರ ಜನ್ಮದಿನದ ಪ್ರಯುಕ್ತ ರಾವ್‌ ಕುಟುಂಬ ಸದಸ್ಯರು ದೇವರಿಗೆ ವಿಶೇಷ ಬೆಣ್ಣೆ ಅಲಂಕಾರ, ವಿಶೇಷ ಪೂಜಾ ಸೇವೆಯನ್ನು ಹಮ್ಮಿಕೊಂಡಿದ್ದರು.

ದೇವಾಲಯದಲ್ಲಿಯೇ ರಾವ್‌ ಅವರ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದ ಚಿತ್ರಗಳು ಹಾಗೂ ವಿಡಿಯೋ ಇಲ್ಲಿವೆ.

ಹೆಚ್ಚಿನ ಸುದ್ದಿಗಳಿಗಾಗಿ:

Saturday, March 22, 2025

ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ

 ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ

ಬೆಂಗಳೂರು: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಮತ್ತು ಆಸು ಪಾಸಿನ ಪ್ರದೇಶಗಳಲ್ಲಿ ಈದಿನ (೨೦೨೫ ಮಾರ್ಚ್‌ ೨೨) ಮುಂಗಾರು ಪೂರ್ವ ಮಳೆ ಸುರಿದು ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನ್ನೆರೆಯಿತು.

ಸಂಜೆ ೪.೨೦ಕ್ಕೆ ಗುಡುಗು ಸಹಿತವಾಗಿ ಸುರಿದ ಮಳೆ ಸುಮಾರು ೪೦ ನಿಮಿಷಗಳಿಗೂ ಹೆಚ್ಚು ಕಾಲ ಭೂಮಿಯನ್ನು ತೋಯಿಸಿತು.

ಮಳೆಯ ಎರಡು ವಿಡಿಯೋಗಳು ಇಲ್ಲಿವೆ.


Thursday, November 28, 2024

ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ

 ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ

ಬೆಂಗಳೂರು: ನಸುಕಿನಲ್ಲಿ ಬಂದು ಮುಖ್ಯ ರಸ್ತೆಯಲ್ಲಿ ಕಸ ಬಿಸಾಡಿ ಬಡಾವಣೆಯನ್ನು ಮಲಿನಗೊಳಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ಈದಿನ (೨೮.೧೧.೨೦೨೪ ಗುರುವಾರ) ಮಿಂಚಿನ ಕಾರ್ಯಾಚರಣೆ ನಡೆಸಿದ ಬಡಾವಣೆ ನಿವಾಸಿಗಳು ಹಲವರನ್ನು ಪತ್ತೆ ಹಚ್ಚಿ ಝಾಡಿಸಿದ ಘಟನೆ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ನಡೆದಿದೆ.

ಪ್ರತಿನಿತ್ಯ ಬಡಾವಣೆಯಲ್ಲಿ ಸಂಚರಿಸುವ ಬಿಬಿಎಂಪಿ ಕಸದ ಗಾಡಿಗೆ ಕಸವನ್ನು ಕೊಡದೇ ಬೆಳ್ಳಂ ಬೆಳಗಿನ ಹೊತ್ತಿನಲ್ಲಿ ಇಲ್ಲವೇ ನಡುರಾತ್ರಿಯ ರಾತ್ರಿಯ ವೇಳೆಯಲ್ಲಿ ಬಡಾವಣೆಯ ಮುಖ್ಯ ರಸ್ತೆಯಲ್ಲೇ ಕಸ ಎಸೆಯುತ್ತಿದ್ದ ಇಂತಹ ವ್ಯಕ್ತಿಗಳಿಗೆ ಬಿಬಿಎಂಪಿ ಮಾರ್ಷಲ್‌ ಗಳೂ ಝಾಡಿಸಿ ದಂಡ ವಸೂಲು ಮಾಡಿದ್ದಾರೆ.

ಕೆಲವು ವ್ಯಕ್ತಿಗಳು ಸ್ಕೂಟರಿನಲ್ಲಿ, ರಿಕ್ಷಾದಲ್ಲಿ ಅಕ್ಕ ಪಕ್ಕದ ಬಡಾವಣೆಗಳಿಂದ ಬಂದು ಕಸ ಎಸೆಯುತ್ತಿದ್ದ್ದುದೂ ಪತ್ತೆಯಾಗಿದ್ದು ಅವರನ್ನು ಕೂಡಾ ಬಡಾವಣೆಯ ನಿವಾಸಿಗಳು ಹಿಡಿದು ಝಾಡಿಸಿದರು.

ದಿನದ ಹಿಂದೆ ಕಸ ಎಸೆಯುತ್ತಿದ್ದ ಇಬ್ಬರು ವ್ಯಕ್ತಿಗಳು ತಮ್ಮನ್ನು ಪ್ರಶ್ನಿಸಿದ ಬಡಾವಣೆಯ ಪ್ರಜ್ಞಾವಂತ ನಿವಾಸಿಯೊಬ್ಬರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಬಳಿಕ ಬಡಾವಣೆಯ ನಿವಾಸಿಗಳು, ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಜೊತೆಗೂಡಿ ಮಿಂಚಿನ ಕಾರ್ಯಾಚರಣೆ ನಡೆಸಿದರು.

ತನ್ನನ್ನು ಪ್ರಶ್ನಿಸಿದ ಪ್ರಜ್ಞಾವಂತ ನಿವಾಸಿಯ ಕೈಯಿಂದ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಕೂಡಾ ಗುರುತು ಹಿಡಿದ ಮಾರ್ಷಲ್‌ ಗಳು ಆತನಿಗೂ ದಂಡ ವಿಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ವಿಡಿಯೊ ನೋಡಲು ಮೊದಲ ಚಿತ್ರ ಕ್ಲಿಕ್‌ ಮಾಡಿರಿ.

Advertisement